AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಷೇಕ್ ಅಭ್ಯಾಸ ವಿಚಿತ್ರ; ಮಗನ ರಹಸ್ಯ ಬಿಚ್ಚಿಟ್ಟ ಅಮಿತಾಭ್ ಬಚ್ಚನ್

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೌನ್ ಬನೇಗಾ ಕರೋಡ್‌ಪತಿ ವೇದಿಕೆಯಲ್ಲಿ ಮಗ ಅಭಿಷೇಕ್ ಬಚ್ಚನ್ ಅವರ ವಿಚಿತ್ರ ಅಭ್ಯಾಸವೊಂದನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ತಂದೆ ಹರಿವಂಶ್ ರಾಯ್ ಕವಿತೆ ನೆನೆದು ಭಾವುಕರಾದ ಅಮಿತಾಬ್, ತಮ್ಮ ಐಎಫ್‌ಎಸ್ ಅಧಿಕಾರಿಯಾಗುವ ಹಳೆಯ ಕನಸಿನ ಬಗ್ಗೆಯೂ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಅಭಿಷೇಕ್ ಅಭ್ಯಾಸ ವಿಚಿತ್ರ; ಮಗನ ರಹಸ್ಯ ಬಿಚ್ಚಿಟ್ಟ ಅಮಿತಾಭ್ ಬಚ್ಚನ್
ಅಭಿಷೇಕ್-ಅಮಿತಾಭ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 01, 2026 | 8:20 AM

Share

ಮುಖ್ಯಾಂಶಗಳು

  • ಅಭಿಷೇಕ್ ಬಚ್ಚನ್ ವಿಚಿತ್ರ ಅಭ್ಯಾಸ
  • ತಂದೆಯ ಕವಿತೆಗೆ ಭಾವುಕರಾದ ಬಿಗ್ ಬಿ
  • ಅಮಿತಾಭ್ ಬಚ್ಚನ್ ಐಎಫ್‌ಎಸ್ ಕನಸು

ಬಾಲಿವುಡ್‌ನ ‘ಶಹೆನ್‌ಶಾ’ ಅಮಿತಾಭ್ ಬಚ್ಚನ್‌ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ನಟನೆ ಮಾತ್ರವಲ್ಲದೆ, ಖಾಸಗಿ ಜೀವನ, ಅಭ್ಯಾಸಗಳು ಮತ್ತು ಕುಟುಂಬದ ಕುತೂಹಲಕಾರಿ ಕಥೆಗಳನ್ನು ತಿಳಿಯಲು ಜನ ಸದಾ ಕಾತುರರಾಗಿರುತ್ತಾರೆ. ಬಿಗ್ ಬಿ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ತಂದೆ-ಮಗನಿಗಿಂತ ಹೆಚ್ಚಾಗಿ ಉತ್ತಮ ಸ್ನೇಹಿತರಂತೆ ಇರುತ್ತಾರೆ. ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್‌ಪತಿ’ (KBC) ಕಾರ್ಯಕ್ರಮದಲ್ಲಿ ಅಮಿತಾಬ್, ಅಭಿಷೇಕ್ ಕುರಿತಾದ ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕೆಬಿಸಿ ಶೋನಲ್ಲಿ ಸ್ಪರ್ಧಿಯೊಬ್ಬರು ತಂದೆ-ಮಗನ ಆತ್ಮೀಯ ಸಂಬಂಧದ ಬಗ್ಗೆ ಮಾತನಾಡಿದರು. ಇದಕ್ಕೆ ಸ್ಪಂದಿಸಿದ ಅಮಿತಾಭ್, ಅಭಿಷೇಕ್ ನನ್ನ ಒಳ್ಳೆಯ ಸ್ನೇಹಿತ ಎಂದರು. ಇದೇ ವೇಳೆ ಮಗನ ವಿಚಿತ್ರ ಅಭ್ಯಾಸವೊಂದನ್ನು ತಮಾಷೆಯಾಗಿ ಬಹಿರಂಗಪಡಿಸಿದರು. ಮನೆಯಲ್ಲಿ ಎಲ್ಲರೂ ಹಣ್ಣುಗಳನ್ನು ತಿನ್ನುತ್ತಾರೆ, ಆದರೆ ಅಭಿಷೇಕ್ ಮಾತ್ರ ಎಂದಿಗೂ ಹಣ್ಣುಗಳನ್ನು ತಿನ್ನುವುದಿಲ್ಲ ಎಂದು ಬಿಗ್ ಬಿ ದೂರಿಕೊಂಡರು.

ಇನ್ನು ಹಾಲಿನ ಉತ್ಪನ್ನಗಳ ವಿಷಯ ಬಂದಾಗಲೂ ಅಭಿಷೇಕ್ ಅಷ್ಟಾಗಿ ಆಸಕ್ತಿ ತೋರಿಸುವುದಿಲ್ಲ. ಆದರೆ ಹಣ್ಣುಗಳ ವಿಷಯದಲ್ಲಂತೂ ಅವರು ಸಂಪೂರ್ಣ ದೂರ ಉಳಿಯುತ್ತಾರೆ ಎಂದು ಅಮಿತಾಭ್ ಹೇಳಿದರು. ತಂದೆಯ ಈ ತಮಾಷೆಯ ಮಾತನ್ನು ಕೇಳಿ ಶೋನಲ್ಲಿದ್ದ ಪ್ರೇಕ್ಷಕರು ನಕ್ಕು ನಲಿದರು.

ಕಾರ್ಯಕ್ರಮದಲ್ಲಿ ಮೋಜಿನ ಸಂಭಾಷಣೆಯ ಜೊತೆಗೆ ಕೊಂಚ ಭಾವನಾತ್ಮಕ ಕ್ಷಣಗಳೂ ಎದುರಾದವು. ಅಮಿತಾಬ್ ತಮ್ಮ ತಂದೆ, ಹಿರಿಯ ಕವಿ ಹರಿವಂಶ್ ರಾಯ್ ಬಚ್ಚನ್ ಅವರ ಕವಿತೆಯನ್ನು ನೆನಪಿಸಿಕೊಂಡರು. ತಂದೆ-ಮಗನ ಬಾಂಧವ್ಯ ಮತ್ತು ಪೀಳಿಗೆಯಿಂದ ಪೀಳಿಗೆಗೆ ಸಾಗುವ ಚಿಂತನೆಗಳ ಕುರಿತಾದ ಈ ಕವಿತೆ ಪ್ರೇಕ್ಷಕರ ಮನ ಮುಟ್ಟಿತು.

ಇದನ್ನೂ ಓದಿ: ಧರ್ಮೇಂದ್ರ ಮನೆಗೆ ಯಾರು ಬೇಕಾದರೂ ಬರಬಹುದಿತ್ತು; ಅಮಿತಾಭ್ ನೆನಪು

ಇದೇ ವೇಳೆ ಅಮಿತಾಭ್ ತಮ್ಮ ಹಳೆಯ ಕನಸೊಂದನ್ನು ಬಿಚ್ಚಿಟ್ಟರು. ತಮಗೆ ‘ಐಎಫ್‌ಎಸ್’ ಸೇರಿ ಭಾರತೀಯ ವಿದೇಶಾಂಗ ಸೇವೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವ ಆಸೆಯಿತ್ತು ಎಂದರು. ಆದರೆ ಆ ಸಮಯದಲ್ಲಿ ಅದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಆ ಆಲೋಚನೆಯನ್ನು ಬಿಟ್ಟುಕೊಟ್ಟಿದ್ದಾಗಿ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ