AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಇನ್ನೂ ಮುಗಿದಿಲ್ಲ ಬಿಗ್​ ಬಾಸ್ ಮನರಂಜನೆ; ವೀಕೆಂಡ್​ನಲ್ಲಿ ಪ್ರೇಕ್ಷಕರಿಗಾಗಿ ಕಾದಿದೆ ಸ್ಪೆಷಲ್​ ಎಪಿಸೋಡ್​

BBK8: ಸ್ಪರ್ಧಿಗಳ ವಿಶೇಷ ಸಂದರ್ಶನವನ್ನು ಈ ವಾರಾಂತ್ಯದ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗುವುದು. ಮೇ 15 ಮತ್ತು 16ರಂದು ರಾತ್ರಿ 8 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಬಿಗ್​ ಬಾಸ್​ ಆಟೋಗ್ರಾಫ್​’ ಎಂಬ ವಿಶೇಷ ಎಪಿಸೋಡ್​ ಬಿತ್ತರ ಆಗಲಿದೆ.

Bigg Boss Kannada: ಇನ್ನೂ ಮುಗಿದಿಲ್ಲ ಬಿಗ್​ ಬಾಸ್ ಮನರಂಜನೆ; ವೀಕೆಂಡ್​ನಲ್ಲಿ ಪ್ರೇಕ್ಷಕರಿಗಾಗಿ ಕಾದಿದೆ ಸ್ಪೆಷಲ್​ ಎಪಿಸೋಡ್​
ನಿಧಿ ಸುಬ್ಬಯ್ಯ - ದಿವ್ಯಾ ಸುರೇಶ್​ - ಮಂಜು ಪಾವಗಡ
ಮದನ್​ ಕುಮಾರ್​
| Edited By: |

Updated on:May 14, 2021 | 5:33 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8 ಅನಿರೀಕ್ಷಿತವಾಗಿ ಅಂತ್ಯ ಕಂಡಿತು. ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿರುವುದರಿಂದ ಶೋ ಅರ್ಧಕ್ಕೆ ನಿಲ್ಲಿಸುವುದು ಅನಿವಾರ್ಯ ಆಯಿತು. ಹಾಗಾಗಿ ಕಳೆದ ಸೀಸನ್​ಗಳ ರೀತಿ ಫಿನಾಲೆ ಎಪಿಸೋಡ್​ಗಳನ್ನು ಎಂಜಾಯ್​ ಮಾಡಲು ಪ್ರೇಕ್ಷಕರಿಗೆ ಸಾಧ್ಯವಾಗಲೇ ಇಲ್ಲ. ಅಲ್ಲದೆ, ಕೊನೆ ಕ್ಷಣದಲ್ಲಿ ಮನೆಯಿಂದ ಹೊರಬಂದ ಸ್ಪರ್ಧಿಗಳು ವೇದಿಕೆಗೆ ಬಂದು ಸುದೀಪ್​ ಜೊತೆ ಮಾತನಾಡುವ ಅವಕಾಶದಿಂದಲೂ ವಂಚಿತರಾದರು. ಅದರ ಬದಲು ಕಲರ್ಸ್​ ಕನ್ನಡ ವಾಹಿನಿ ಇನ್ನೊಂದು ರೀತಿಯಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಜ್ಜಾಗಿದೆ.

ಮೇ 9ರಂದು ಅಚಾನಕ್​ ಆಗಿ ದೊಡ್ಮನೆಯಿಂದ ಹೊರಬಂದ 11 ಮಂದಿ ಸ್ಪರ್ಧಿಗಳ ವಿಶೇಷ ಸಂದರ್ಶನ ಮಾಡಲಾಗಿದೆ. 71 ದಿನಗಳ ಬಿಗ್​ ಬಾಸ್​ ಜರ್ನಿ ಹೇಗಿತ್ತು ಎಂದು ಎಲ್ಲರೂ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ನಕ್ಕಿದ್ದು, ಜಗಳ ಆಡಿದ್ದು, ಆಕ್ರಮಣಕಾರಿಯಾಗಿ ಆಟ ಆಡಿದ್ದು, ಪ್ರೀತಿಸಿದ್ದು, ಸ್ನೇಹ ಬೆಳೆಸಿದ್ದು ಸೇರಿ ಅನೇಕ ವಿಚಾರಗಳ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಈ ಮೂಲಕ ತಮ್ಮ ಈ ವಿಶೇಷ ಪಯಣದ ಅನುಭಗಳ ಬಗ್ಗೆ ಪ್ರೇಕ್ಷಕರಿಗೆ ತಿಳಿಸಿದ್ದಾರೆ.

ಬಿಗ್​ ಬಾಸ್​ ಕೊನೆ ಕ್ಷಣಗಳು ಹೇಗಿತ್ತು ಎಂಬುದನ್ನು ಮೇ 11 ಮತ್ತು 12ರ ಸಂಚಿಕೆಯಲ್ಲಿ ತೋರಿಸಲಾಯಿತು. ಬಳಿಕ ನಡೆಸಿದ ವಿಶೇಷ ಸಂದರ್ಶನವನ್ನು ಈ ವಾರದ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗುವುದು. ಮೇ 15 ಮತ್ತು 16ರಂದು ರಾತ್ರಿ 8 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಬಿಗ್​ ಬಾಸ್​ ಆಟೋಗ್ರಾಫ್​’ ಎಂಬ ವಿಶೇಷ ಎಪಿಸೋಡ್​ ಬಿತ್ತರ ಆಗಲಿದೆ.

ಕೊನೇ ಕ್ಷಣದಲ್ಲಿ ಬಿಗ್​ ಬಾಸ್​ನಿಂದ ಹೊರಬಂದ ಎಲ್ಲ 11 ಸ್ಪರ್ಧಿಗಳು ಕಲರ್ಸ್​ ಕನ್ನಡದ ಫೇಸ್​ಬುಕ್​ ಪೇಜ್​ ಮೂಲಕ ಲೈವ್​ ಬಂದಿದ್ದರು. ಕಮೆಂಟ್​ಗಳ ಮೂಲಕ ಅವರಿಗೆ ವೀಕ್ಷಕರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲಿಯೂ ಕೂಡ ತಮ್ಮ ಅನಿಸಿಕೆಗಳನ್ನು ಎಲ್ಲರೂ ಹಂಚಿಕೊಂಡಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಮನರಂಜನೆ ನೀಡುತ್ತಿದ್ದ ಈ ರಿಯಾಲಿಟಿ ಶೋ ಅಂತ್ಯ ಆಗಿರುವುದಕ್ಕೆ ವೀಕ್ಷಕರೆಲ್ಲ ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಸ್ಪರ್ಧಿಗಳ ಮತ್ತು ತಂತ್ರಜ್ಞರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಸೂಕ್ತವಾದದ್ದು ಎಂದು ಅನೇಕರು ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂ ಓದಿ:

ಬಿಗ್​ ಬಾಸ್​ನಿಂದ ಹೊರ ಬಂದ ವೈಷ್ಣವಿಗೆ ಮ್ಯಾರೇಜ್​ ಪ್ರಪೋಸಲ್​; ನಾಚುತ್ತಲೇ ವಿಚಾರ ಬಿಚ್ಚಿಟ್ಟ ಸನ್ನಿಧಿ

Divya Uruduga: ಬಿಗ್​ ಬಾಸ್ ಟ್ರೋಫಿ ಅಥವಾ ದಿವ್ಯಾ ಉರುಡುಗ; ಇದರಲ್ಲಿ ಅರವಿಂದ್​ ಆಯ್ಕೆ ಯಾವುದು? ಹೊರಬಿತ್ತು ಅಚ್ಚರಿಯ ಉತ್ತರ 

Published On - 5:14 pm, Fri, 14 May 21

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್