AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಿಮಲ್’ ನಿರ್ದೇಶಕ ಅನುಭವಿಸಿದ್ದು ಒಂದೆರಡಲ್ಲ; ಬಾಲಿವುಡ್​ ಅವರನ್ನು ಹೀಗೆಲ್ಲ ಟ್ರೀಟ್ ಮಾಡಿದೆ..

ಸಂದೀಪ್ ರೆಡ್ಡಿ ವಂಗ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ‘ನಾನು ಹೆಚ್ಚು ದೂರುತ್ತೇನೆ ಎಂದು ಎಲ್ಲರಿಗೂ ಅನಿಸಬಾರದು. ಹೀಗಾಗಿ, ನಾನು ಅನುಭವಿಸಿದ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳಲು ಬಯಸೊಲ್ಲ’ ಎಂದಿದ್ದಾರೆ ಅವರು.

‘ಅನಿಮಲ್’ ನಿರ್ದೇಶಕ ಅನುಭವಿಸಿದ್ದು ಒಂದೆರಡಲ್ಲ; ಬಾಲಿವುಡ್​ ಅವರನ್ನು ಹೀಗೆಲ್ಲ ಟ್ರೀಟ್ ಮಾಡಿದೆ..
ಸಂದೀಪ್ ರೆಡ್ಡಿ ವಂಗ
ರಾಜೇಶ್ ದುಗ್ಗುಮನೆ
|

Updated on: Jan 17, 2024 | 11:44 AM

Share

ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ‘ಅನಿಮಲ್’ ಸಿನಿಮಾದಿಂದ (Animal Movie) ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಚಿತ್ರ ಸಾಕಷ್ಟು ವಿವಾದಗಳನ್ನು ಕೂಡ ಮಾಡಿದೆ. ಈ ಸಿನಿಮಾ ಫಿಲ್ಮ್​ಫೇರ್​ ಅವಾರ್ಡ್​ನಲ್ಲಿ 19 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಈ ಬಗ್ಗೆ ಅವರಿಗೆ ಖುಷಿ ಇದೆ. ಇದರ ಜೊತೆಗೆ ಚಿತ್ರರಂಗ ಹೊರಗಿನಿಂದ ಬಂದವರನ್ನು ಯಾವ ರೀತಿಯಲ್ಲಿ ನೋಡುತ್ತದೆ ಎಂಬುದನ್ನು ಅವರು ಹೇಳಿದ್ದಾರೆ. ‘ಚಿತ್ರರಂಗದಲ್ಲಿ ಇರುವವರು ತಮ್ಮ ಸುತ್ತ ಮುತ್ತಲಿನವರನ್ನು ಪ್ರಮೋಟ್ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಹೊರಗಿನಿಂದ ಬಂದವರನ್ನು ಅವರು ಪ್ರಮೋಟ್ ಮಾಡುವುದಿಲ್ಲ’ ಎಂದಿದ್ದಾರೆ  ಸಂದೀಪ್ ರೆಡ್ಡಿ ವಂಗ.

ಸಂದರ್ಶನ ಒಂದರಲ್ಲಿ ಸಂದೀಪ್ ರೆಡ್ಡಿ ವಂಗ ಮಾತನಾಡಿದ್ದಾರೆ. ‘ನಾನು ಹೆಚ್ಚು ದೂರುತ್ತೇನೆ ಎಂದು ಎಲ್ಲರಿಗೂ ಅನಿಸಬಾರದು. ಹೀಗಾಗಿ, ನಾನು ಅನುಭವಿಸಿದ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳಲು ಬಯಸುವುದಿಲ್ಲ. ಇದು ನಿಜಕ್ಕೂ ಪ್ರಾಣಿಗಳ ರೀತಿಯ ವರ್ತನೆ. ಪ್ರಾಣಿಗಳು ತಮ್ಮ ಜಾಗವನ್ನು ಆಗ್ರಮಿಸಿಕೊಳ್ಳಲು ಬರುತ್ತಿದ್ದಾರೆ ಎಂದು ತಿಳಿದಾಗ ಎದುರಾಳಿಗಳ ವಿರುದ್ಧ ಅವು ತಿರುಗಿ ಬೀಳುತ್ತವೆ’ ಎಂದಿದ್ದಾರೆ ಸಂದೀಪ್ ರೆಡ್ಡಿ ವಂಗ.

‘ಅವಾರ್ಡ್ ​ಶೋಗಳನ್ನೇ ನೋಡಿ. ಎಲ್ಲರೂ ಅವರವರ ಗೆಳೆಯರನ್ನೇ ಪ್ರಮೋಟ್ ಮಾಡುತ್ತಾರೆ. ಅವಾರ್ಡ್ ಫಂಕ್ಷನ್ ಏನು ಅನ್ನೋದು ಎಲ್ಲರಿಗೂ ಗೊತ್ತು. ಬಾಲಿವುಡ್​ಗೆ ಬಂದ ಬಳಿಕ ನಾನು ಏನೆಲ್ಲ ಎದುರಿಸಿದ್ದೀನಿ ಅನ್ನೋದನ್ನು ರಾತ್ರಿ ಬೆಳಗ್ಗಿನವರೆಗೆ ನಾನು ಹೇಳಬಹುದು. ಅಷ್ಟು ನನ್ನ ಜೀವನದಲ್ಲಿ ಘಟಿಸಿದೆ. ಆದರೆ, ನನಗೆ ಮಗುವಿನಂತೆ ಅಳೋಕೆ ಇಷ್ಟ ಇಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಒಟಿಟಿಯಲ್ಲಿ ಸದ್ಯಕ್ಕೆ ರಿಲೀಸ್ ಆಗಲ್ಲ ‘ಅನಿಮಲ್’? ನಿರ್ಮಾಣ ಸಂಸ್ಥೆಯಿಂದಲೇ ಚಿತ್ರದ ಮೇಲೆ ಬಿತ್ತು ಕೇಸ್

‘ಅನಿಮಲ್’ ಸಿನಿಮಾ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ರೀತಿಯ ವಿಮರ್ಶೆ ಪಡೆದಿದೆ. ಅನೇಕರು ಈ ಚಿತ್ರವನ್ನು ಸಾಕಷ್ಟು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಹೆಣ್ಣುಮಕ್ಕಳ ಗೌರವ ಕಳೆಯುವಂಥ ದೃಶ್ಯಗಳು ಇವೆ ಎಂದು ಅನೇಕರು ಆರೋಪಿಸಿದ್ದರು. ಈ ಸಿನಿಮಾ ಫಿಲ್ಮ್​ಫೇರ್​ನಲ್ಲಿ ಬರೋಬ್ಬರಿ 19 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ