AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಿಮಲ್’ ನಿರ್ದೇಶಕ ಅನುಭವಿಸಿದ್ದು ಒಂದೆರಡಲ್ಲ; ಬಾಲಿವುಡ್​ ಅವರನ್ನು ಹೀಗೆಲ್ಲ ಟ್ರೀಟ್ ಮಾಡಿದೆ..

ಸಂದೀಪ್ ರೆಡ್ಡಿ ವಂಗ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ‘ನಾನು ಹೆಚ್ಚು ದೂರುತ್ತೇನೆ ಎಂದು ಎಲ್ಲರಿಗೂ ಅನಿಸಬಾರದು. ಹೀಗಾಗಿ, ನಾನು ಅನುಭವಿಸಿದ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳಲು ಬಯಸೊಲ್ಲ’ ಎಂದಿದ್ದಾರೆ ಅವರು.

‘ಅನಿಮಲ್’ ನಿರ್ದೇಶಕ ಅನುಭವಿಸಿದ್ದು ಒಂದೆರಡಲ್ಲ; ಬಾಲಿವುಡ್​ ಅವರನ್ನು ಹೀಗೆಲ್ಲ ಟ್ರೀಟ್ ಮಾಡಿದೆ..
ಸಂದೀಪ್ ರೆಡ್ಡಿ ವಂಗ
Follow us
ರಾಜೇಶ್ ದುಗ್ಗುಮನೆ
|

Updated on: Jan 17, 2024 | 11:44 AM

ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ‘ಅನಿಮಲ್’ ಸಿನಿಮಾದಿಂದ (Animal Movie) ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಚಿತ್ರ ಸಾಕಷ್ಟು ವಿವಾದಗಳನ್ನು ಕೂಡ ಮಾಡಿದೆ. ಈ ಸಿನಿಮಾ ಫಿಲ್ಮ್​ಫೇರ್​ ಅವಾರ್ಡ್​ನಲ್ಲಿ 19 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಈ ಬಗ್ಗೆ ಅವರಿಗೆ ಖುಷಿ ಇದೆ. ಇದರ ಜೊತೆಗೆ ಚಿತ್ರರಂಗ ಹೊರಗಿನಿಂದ ಬಂದವರನ್ನು ಯಾವ ರೀತಿಯಲ್ಲಿ ನೋಡುತ್ತದೆ ಎಂಬುದನ್ನು ಅವರು ಹೇಳಿದ್ದಾರೆ. ‘ಚಿತ್ರರಂಗದಲ್ಲಿ ಇರುವವರು ತಮ್ಮ ಸುತ್ತ ಮುತ್ತಲಿನವರನ್ನು ಪ್ರಮೋಟ್ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಹೊರಗಿನಿಂದ ಬಂದವರನ್ನು ಅವರು ಪ್ರಮೋಟ್ ಮಾಡುವುದಿಲ್ಲ’ ಎಂದಿದ್ದಾರೆ  ಸಂದೀಪ್ ರೆಡ್ಡಿ ವಂಗ.

ಸಂದರ್ಶನ ಒಂದರಲ್ಲಿ ಸಂದೀಪ್ ರೆಡ್ಡಿ ವಂಗ ಮಾತನಾಡಿದ್ದಾರೆ. ‘ನಾನು ಹೆಚ್ಚು ದೂರುತ್ತೇನೆ ಎಂದು ಎಲ್ಲರಿಗೂ ಅನಿಸಬಾರದು. ಹೀಗಾಗಿ, ನಾನು ಅನುಭವಿಸಿದ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳಲು ಬಯಸುವುದಿಲ್ಲ. ಇದು ನಿಜಕ್ಕೂ ಪ್ರಾಣಿಗಳ ರೀತಿಯ ವರ್ತನೆ. ಪ್ರಾಣಿಗಳು ತಮ್ಮ ಜಾಗವನ್ನು ಆಗ್ರಮಿಸಿಕೊಳ್ಳಲು ಬರುತ್ತಿದ್ದಾರೆ ಎಂದು ತಿಳಿದಾಗ ಎದುರಾಳಿಗಳ ವಿರುದ್ಧ ಅವು ತಿರುಗಿ ಬೀಳುತ್ತವೆ’ ಎಂದಿದ್ದಾರೆ ಸಂದೀಪ್ ರೆಡ್ಡಿ ವಂಗ.

‘ಅವಾರ್ಡ್ ​ಶೋಗಳನ್ನೇ ನೋಡಿ. ಎಲ್ಲರೂ ಅವರವರ ಗೆಳೆಯರನ್ನೇ ಪ್ರಮೋಟ್ ಮಾಡುತ್ತಾರೆ. ಅವಾರ್ಡ್ ಫಂಕ್ಷನ್ ಏನು ಅನ್ನೋದು ಎಲ್ಲರಿಗೂ ಗೊತ್ತು. ಬಾಲಿವುಡ್​ಗೆ ಬಂದ ಬಳಿಕ ನಾನು ಏನೆಲ್ಲ ಎದುರಿಸಿದ್ದೀನಿ ಅನ್ನೋದನ್ನು ರಾತ್ರಿ ಬೆಳಗ್ಗಿನವರೆಗೆ ನಾನು ಹೇಳಬಹುದು. ಅಷ್ಟು ನನ್ನ ಜೀವನದಲ್ಲಿ ಘಟಿಸಿದೆ. ಆದರೆ, ನನಗೆ ಮಗುವಿನಂತೆ ಅಳೋಕೆ ಇಷ್ಟ ಇಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಒಟಿಟಿಯಲ್ಲಿ ಸದ್ಯಕ್ಕೆ ರಿಲೀಸ್ ಆಗಲ್ಲ ‘ಅನಿಮಲ್’? ನಿರ್ಮಾಣ ಸಂಸ್ಥೆಯಿಂದಲೇ ಚಿತ್ರದ ಮೇಲೆ ಬಿತ್ತು ಕೇಸ್

‘ಅನಿಮಲ್’ ಸಿನಿಮಾ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ರೀತಿಯ ವಿಮರ್ಶೆ ಪಡೆದಿದೆ. ಅನೇಕರು ಈ ಚಿತ್ರವನ್ನು ಸಾಕಷ್ಟು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಹೆಣ್ಣುಮಕ್ಕಳ ಗೌರವ ಕಳೆಯುವಂಥ ದೃಶ್ಯಗಳು ಇವೆ ಎಂದು ಅನೇಕರು ಆರೋಪಿಸಿದ್ದರು. ಈ ಸಿನಿಮಾ ಫಿಲ್ಮ್​ಫೇರ್​ನಲ್ಲಿ ಬರೋಬ್ಬರಿ 19 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್