AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರಿಗೂ ಗೊತ್ತಾಗದಂತೆ ಕ್ಲಿನಿಕ್​ ಒಳಗೆ ಹೋದ ಶಾರುಖ್ ಖಾನ್; ಬರುವಾಗ ಆಗಿದ್ದೇನು?

ಶಾರುಖ್ ಖಾನ್​ನ ಇತ್ತೀಚೆಗೆ ಮುಂಬೈ ಕ್ಲಿನಿಕ್ ಒಂದಕ್ಕೆ ತೆರಳಿದ್ದಾರೆ. ಒಮ್ಮೆ ಕಣ್ತುಂಬಿಕೊಂಡರೆ ಸಾಕು ಎಂದು ಅನೇಕರು ಅಲ್ಲಿಯೇ ಸಾಕಷ್ಟು ಹೊತ್ತು ಕಾದರು. ಆದರೆ ಶಾರುಖ್ ಖಾನ್ ಯಾರ ಕೈಗೂ ಸಿಗಲಿಲ್ಲ.

ಯಾರಿಗೂ ಗೊತ್ತಾಗದಂತೆ ಕ್ಲಿನಿಕ್​ ಒಳಗೆ ಹೋದ ಶಾರುಖ್ ಖಾನ್; ಬರುವಾಗ ಆಗಿದ್ದೇನು?
ಶಾರುಖ್ ಖಾನ್
ರಾಜೇಶ್ ದುಗ್ಗುಮನೆ
|

Updated on: Jan 17, 2024 | 10:30 AM

Share

ಶಾರುಖ್ ಖಾನ್ (Shah Rukh Khan) ಅವರು ಹೋದಲ್ಲೆಲ್ಲ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಅಭಿಮಾನಿಗಳಿಗೆ ಗೊತ್ತಾಗದಂತೆ ತಲೆಮರಿಸಿಕೊಂಡು ಹೋಗುವುದು ಎಂದರೆ ಅದು ಸುಲಭದಮಾತಲ್ಲ. ಇತ್ತೀಚೆಗೆ ಶಾರುಖ್ ಖಾನ್ ಅವರು ಮುಂಬೈ ಕ್ಲಿನಿಕ್ ಒಂದಕ್ಕೆ ತೆರಳಿದ್ದರು. ಯಾರಿಗೂ ತಿಳಿಯಬಾರದು ಎನ್ನುವ ಕಾರಣಕ್ಕೆ ಹೂಡಿಯನ್ನು ಮುಖಕ್ಕೆ ಮುಚ್ಚಿಕೊಂಡಿದ್ದರು. ಆದರೆ, ಈ ಪ್ರಯತ್ನ ವ್ಯರ್ಥವಾಗಿದೆ. ಶಾರುಖ್ ಖಾನ್ ಅವರನ್ನು ಎಲ್ಲರೂ ಪತ್ತೆ ಹಚ್ಚಿದ್ದಾರೆ. ಅವರನ್ನು ನೋಡಲು ಜನಸಾಗರವೇ ನೆರದಿತ್ತು.

ಶಾರುಖ್ ಖಾನ್ ಅವರು ಮುಂಬೈನಲ್ಲಿ ಕ್ಲಿನಿಕ್ ಒಂದಕ್ಕೆ ತೆರಳಿದ್ದರು. ವಿಚಾರ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ನೆರೆಯೋಕೆ ಆರಂಭಿಸಿದರು. ಶಾರುಖ್ ಖಾನ್ ಅವರನ್ನು ಒಮ್ಮೆ ಕಣ್ತುಂಬಿಕೊಂಡರೆ ಸಾಕು ಎಂದು ಅನೇಕರು ಅಲ್ಲಿಯೇ ಸಾಕಷ್ಟು ಹೊತ್ತು ಕಾದರು. ಆದರೆ ಶಾರುಖ್ ಖಾನ್ ಯಾರ ಕೈಗೂ ಸಿಗಲಿಲ್ಲ. ಶಾರುಖ್ ಖಾನ್ ಪಕ್ಕದಲ್ಲಿ ಅವರ ಮ್ಯಾನೇಜರ್ ಇದ್ದರು. ವೈ + ಕೆಟೆಗರಿ ರಕ್ಷಣೆ ಇದ್ದಿದ್ದರಿಂದ ಯಾರಿಗೂ ಅವರ ಬಳಿ ಸುಳಿಯೋಕೆ ಆಗಲಿಲ್ಲ. ಇದರಿಂದ ಫ್ಯಾನ್ಸ್ ಬೇಸರಗೊಂಡರು.

ಇದನ್ನೂ ಓದಿ: ‘ಧೂಮ್ 4’ನಲ್ಲಿ ಶಾರುಖ್ ಖಾನ್ ನಾಯಕ? ಜೊತೆಯಾಗಲಿದ್ದಾರೆ ದಕ್ಷಿಣದ ನಟ?

ಶಾರುಖ್ ಖಾನ್ ಅವರಿಗೆ 2023 ಆಶಾದಾಯಕವಾಗಿತ್ತು. ಅವರ ನಟನೆಯ ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಚಿತ್ರಗಳು ಗೆದ್ದು ಬೀಗಿದವು. ಈಗ ಅವರ ಮುಂದಿನ ಸಿನಿಮಾ ಆಯ್ಕೆಯ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡಿದೆ. ಅವರು ಸಾಕಷ್ಟು ಅಳೆದು ತೂಗಿ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಅವರ ಸಿನಿಮಾ ಬೇಗ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

View this post on Instagram

A post shared by Voompla (@voompla)

ಇದನ್ನೂ ಓದಿ: ಹೊಸ ಚಿತ್ರಕ್ಕೆ ಸಹಿ ಹಾಕಿದ ಶಾರುಖ್ ಖಾನ್? ಈ ಬಾರಿ ಮತ್ತೊಂದು ಪ್ರಯೋಗ

ಜನವರಿ 28ರಂದು ಫಿಲ್ಮ್​ಫೇರ್ ಅವಾರ್ಡ್ ನಡೆಯಲಿದೆ. ಅದಕ್ಕೆ ಶಾರುಖ್ ಖಾನ್ ಹೆಸರು ‘ಅತ್ಯುತ್ತಮ ನಟ’ ನಾಮಿನೇಷನ್​ನಲ್ಲಿ ಎರಡು ಬಾರಿ ನಾಮಿನೇಟ್ ಆಗಿದೆ. ಅವರ ಮೂರು ಸಿನಿಮಾಗಳು ಕೂಡ ಹಲವು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ. ಹೀಗಾಗಿ, ಅವರು ಈ ಬಾರಿ ಒಂದಷ್ಟು ಅವಾರ್ಡ್ ಬಾಚಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ