AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivek Oberoi: ‘ನೀವೆಲ್ಲ ಭಾರತದವರೇ ತಾನೆ?’: ಬಾಲಿವುಡ್​ ಮಂದಿಗೆ ವಿವೇಕ್​ ಒಬೆರಾಯ್​ ಖಡಕ್​ ಪ್ರಶ್ನೆ

Dharavi Bank | Vivek Oberoi: ‘ಕೆಲವರ ಸ್ಕ್ರಿಪ್ಟ್​ ನೋಡಿ ನನಗೆ ಆಶ್ಚರ್ಯ ಆಗುತ್ತದೆ. ನೀವೆಲ್ಲ ಭಾರತದವರು ಹೌದಲ್ಲವೇ ಅಂತ ಕೇಳಬೇಕು ಎನಿಸುತ್ತದೆ’ ಎಂದು ವಿವೇಕ್​ ಒಬೆರಾ​ಯ್​ ಹೇಳಿದ್ದಾರೆ.

Vivek Oberoi: ‘ನೀವೆಲ್ಲ ಭಾರತದವರೇ ತಾನೆ?’: ಬಾಲಿವುಡ್​ ಮಂದಿಗೆ ವಿವೇಕ್​ ಒಬೆರಾಯ್​ ಖಡಕ್​ ಪ್ರಶ್ನೆ
ವಿವೇಕ್ ಒಬೆರಾಯ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 28, 2022 | 1:11 PM

ನಟ ವಿವೇಕ್​ ಒಬೆರಾಯ್​ (Vivek Oberoi) ಅವರು ಹಲವು ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀರೋ-ವಿಲನ್​ ಎಂಬ ಭೇದ ಇಲ್ಲದೇ ಎಲ್ಲ ರೀತಿಯಲ್ಲೂ ಅವರು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅವರಿಗೆ ಸಖತ್​ ಬೇಡಿಕೆ ಇದೆ. ಸದ್ಯ ಅವರು ನಟಿಸಿರುವ ‘ಧಾರಾವಿ ಬ್ಯಾಂಕ್​’ (Dharavi Bank) ವೆಬ್​ ಸಿರೀಸ್​ ಬಿಡುಗಡೆ ಆಗಿದೆ. ಎಂಎಕ್ಸ್​ ಪ್ಲೇಯರ್​ ಒಟಿಟಿಯಲ್ಲಿ ಇದು ಪ್ರಸಾರವಾಗುತ್ತಿದೆ. ಇತ್ತೀಚೆಗೆ ಈ ವೆಬ್​ ಸರಣಿಯ ಪ್ರಚಾರದ ವೇಳೆ ಅವರು ಬಾಲಿವುಡ್​ (Bollywood) ಸಿನಿಮಾಗಳ ಸೋಲಿನ ಕುರಿತು ಮಾತನಾಡಿದರು. ಹಿಂದಿ ಸಿನಿಮಾ ಮಂದಿ ಹಾಲಿವುಡ್​ ಚಿತ್ರಗಳನ್ನು ಅನುಕರಿಸುವ ಬಗ್ಗೆ ವಿವೇಕ್​ ಒಬೆರಾಯ್​ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹಿಂದಿ ಚಿತ್ರರಂಗಕ್ಕೆ 2022ರ ವರ್ಷ ನಿರಾಶಾದಾಯಕ ಆಗಿದೆ. ಬಾಲಿವುಡ್​ನಲ್ಲಿ ಬೆರಳೆಣಿಕೆಯ ಸಿನಿಮಾಗಳು ಗೆದ್ದಿದ್ದು ಬಿಟ್ಟರೆ ಹೆಚ್ಚಿನ ಸಿನಿಮಾಗಳು ಹೀನಾಯವಾಗಿ ಸೋತವು. ಸ್ಟಾರ್​ ನಟರ ಚಿತ್ರಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ಸಾಧ್ಯವಾಗದೇ ಕಾಲ್ಕಿತ್ತವು. ಈ ಬೆಳವಣಿಗೆ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಈ ಕುರಿತು ವಿವೇಕ್​ ಒಬೆರಾಯ್​ ಕೂಡ ಮಾತನಾಡಿದ್ದಾರೆ.

‘ಇನ್​ಸೈಡ್​ ಎಡ್ಜ್​ ಗೆಲುವಿನ ಬಳಿಕ ನನಗೆ ಪ್ರತಿ 10 ದಿನಕ್ಕೊಮ್ಮೆ ಹೊಸ ಆಫರ್​ ಬರಲು ಶುರುವಾಯಿತು. ಇಷ್ಟು ಪ್ಯಾಕೇಜ್​ ಇದೆ, ಈ ಶೋ ಅನ್ನು ನಾವು ಹೀಗೆ ಮಾಡುತ್ತೇವೆ ಎಂದೆಲ್ಲ ಹೇಳುತ್ತಾರೆ. ಆದರೆ ನಾನು ಅವುಗಳ ಬೆನ್ನು ಹತ್ತಿ ಹೋಗಿಲ್ಲ. ಈ ಮಾಧ್ಯಮದ ಬಗ್ಗೆ ನನಗೆ ಸಾಕಷ್ಟು ಗೌರವ ಇದೆ. ಪ್ರತಿಭೆ ಇದ್ದವರು ಮಾತ್ರ ಇಲ್ಲಿ ಮಿಂಚುತ್ತಾರೆ’ ಎಂದು ವಿವೇಕ್​ ಒಬೆರಾಯ್​ ಹೇಳಿದ್ದಾರೆ.

ಇದನ್ನೂ ಓದಿ
Image
ಬಾಲಿವುಡ್​ನವರೂ ಕೆಟ್ಟ ಸಿನಿಮಾ ಮಾಡ್ತಾರೆ, ನಾವ್ಯಾಕೆ ಅವರಿಗೆ ರೇಂಜ್​ ಕೊಡಬೇಕು? ಸುದೀಪ್ ನೇರ ಪ್ರಶ್ನೆ
Image
ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
Image
ಬಾಲಿವುಡ್​ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
Image
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

‘ಕಂಟೆಂಟ್​ ಚೆನ್ನಾಗಿ ಇಲ್ಲ ಅಂದರೆ ದೊಡ್ಡ ಸ್ಟಾರ್​ ನಟರ ಸಿನಿಮಾವನ್ನೂ ಜನರು ತಿರಸ್ಕರಿಸುತ್ತಾರೆ. ಒಳ್ಳೆಯ ಕೆಲಸ ಮಾಡಿದ್ದಕ್ಕೆ ಹೊಸ ನಟರು ಕೂಡ ಭಾರಿ ಗೆಲುವು ಪಡೆಯಬಹುದು. ‘ಇನ್​ಸೈಡ್​ ಎಡ್ಜ್​’ ಬಳಿಕ ನಾನು ಸಹಿ ಮಾಡಿದ್ದು ‘ಧಾರಾವಿ ಬ್ಯಾಂಕ್​’ ಮತ್ತು ‘ಇಂಡಿಯನ್​ ಪೊಲೀಸ್​ ಫೋರ್ಸ್​’ಗೆ ಮಾತ್ರ. ಇವುಗಳ ಸ್ಕ್ರಿಪ್ಟ್​ ಚೆನ್ನಾಗಿತ್ತು ಎಂಬುದೇ ಅದಕ್ಕೆ ಕಾರಣ. ಕೆಲವರ ಸ್ಕ್ರಿಪ್ಟ್​ ನೋಡಿ ನನಗೆ ಆಶ್ಚರ್ಯ ಆಗುತ್ತದೆ. ನೀವೆಲ್ಲ ಭಾರತದವರು ಹೌದಲ್ಲವೇ ಅಂತ ಕೇಳಬೇಕು ಎನಿಸುತ್ತದೆ. ಅಮೆರಿಕಾ ಅಥವಾ ಕೊರಿಯಾದಿಂದ ಸ್ಫೂರ್ತಿ ಪಡೆದು ಕಥೆ ಬರೆಯುತ್ತಾರೆ’ ಎಂದಿದ್ದಾರೆ ವಿವೇಕ್​ ಒಬೆರಾಯ್​.

ಇತ್ತೀಚೆಗೆ ನಟ ರಿಷಬ್​ ಶೆಟ್ಟಿ ಅವರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದುಂಟು. ನಮ್ಮ ನೆಲೆದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತದೆ ಎಂಬುದು ರಿಷಬ್​ ಶೆಟ್ಟಿ ಅಭಿಪ್ರಾಯ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ