Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivek Oberoi: ‘ನೀವೆಲ್ಲ ಭಾರತದವರೇ ತಾನೆ?’: ಬಾಲಿವುಡ್​ ಮಂದಿಗೆ ವಿವೇಕ್​ ಒಬೆರಾಯ್​ ಖಡಕ್​ ಪ್ರಶ್ನೆ

Dharavi Bank | Vivek Oberoi: ‘ಕೆಲವರ ಸ್ಕ್ರಿಪ್ಟ್​ ನೋಡಿ ನನಗೆ ಆಶ್ಚರ್ಯ ಆಗುತ್ತದೆ. ನೀವೆಲ್ಲ ಭಾರತದವರು ಹೌದಲ್ಲವೇ ಅಂತ ಕೇಳಬೇಕು ಎನಿಸುತ್ತದೆ’ ಎಂದು ವಿವೇಕ್​ ಒಬೆರಾ​ಯ್​ ಹೇಳಿದ್ದಾರೆ.

Vivek Oberoi: ‘ನೀವೆಲ್ಲ ಭಾರತದವರೇ ತಾನೆ?’: ಬಾಲಿವುಡ್​ ಮಂದಿಗೆ ವಿವೇಕ್​ ಒಬೆರಾಯ್​ ಖಡಕ್​ ಪ್ರಶ್ನೆ
ವಿವೇಕ್ ಒಬೆರಾಯ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 28, 2022 | 1:11 PM

ನಟ ವಿವೇಕ್​ ಒಬೆರಾಯ್​ (Vivek Oberoi) ಅವರು ಹಲವು ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀರೋ-ವಿಲನ್​ ಎಂಬ ಭೇದ ಇಲ್ಲದೇ ಎಲ್ಲ ರೀತಿಯಲ್ಲೂ ಅವರು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅವರಿಗೆ ಸಖತ್​ ಬೇಡಿಕೆ ಇದೆ. ಸದ್ಯ ಅವರು ನಟಿಸಿರುವ ‘ಧಾರಾವಿ ಬ್ಯಾಂಕ್​’ (Dharavi Bank) ವೆಬ್​ ಸಿರೀಸ್​ ಬಿಡುಗಡೆ ಆಗಿದೆ. ಎಂಎಕ್ಸ್​ ಪ್ಲೇಯರ್​ ಒಟಿಟಿಯಲ್ಲಿ ಇದು ಪ್ರಸಾರವಾಗುತ್ತಿದೆ. ಇತ್ತೀಚೆಗೆ ಈ ವೆಬ್​ ಸರಣಿಯ ಪ್ರಚಾರದ ವೇಳೆ ಅವರು ಬಾಲಿವುಡ್​ (Bollywood) ಸಿನಿಮಾಗಳ ಸೋಲಿನ ಕುರಿತು ಮಾತನಾಡಿದರು. ಹಿಂದಿ ಸಿನಿಮಾ ಮಂದಿ ಹಾಲಿವುಡ್​ ಚಿತ್ರಗಳನ್ನು ಅನುಕರಿಸುವ ಬಗ್ಗೆ ವಿವೇಕ್​ ಒಬೆರಾಯ್​ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹಿಂದಿ ಚಿತ್ರರಂಗಕ್ಕೆ 2022ರ ವರ್ಷ ನಿರಾಶಾದಾಯಕ ಆಗಿದೆ. ಬಾಲಿವುಡ್​ನಲ್ಲಿ ಬೆರಳೆಣಿಕೆಯ ಸಿನಿಮಾಗಳು ಗೆದ್ದಿದ್ದು ಬಿಟ್ಟರೆ ಹೆಚ್ಚಿನ ಸಿನಿಮಾಗಳು ಹೀನಾಯವಾಗಿ ಸೋತವು. ಸ್ಟಾರ್​ ನಟರ ಚಿತ್ರಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ಸಾಧ್ಯವಾಗದೇ ಕಾಲ್ಕಿತ್ತವು. ಈ ಬೆಳವಣಿಗೆ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಈ ಕುರಿತು ವಿವೇಕ್​ ಒಬೆರಾಯ್​ ಕೂಡ ಮಾತನಾಡಿದ್ದಾರೆ.

‘ಇನ್​ಸೈಡ್​ ಎಡ್ಜ್​ ಗೆಲುವಿನ ಬಳಿಕ ನನಗೆ ಪ್ರತಿ 10 ದಿನಕ್ಕೊಮ್ಮೆ ಹೊಸ ಆಫರ್​ ಬರಲು ಶುರುವಾಯಿತು. ಇಷ್ಟು ಪ್ಯಾಕೇಜ್​ ಇದೆ, ಈ ಶೋ ಅನ್ನು ನಾವು ಹೀಗೆ ಮಾಡುತ್ತೇವೆ ಎಂದೆಲ್ಲ ಹೇಳುತ್ತಾರೆ. ಆದರೆ ನಾನು ಅವುಗಳ ಬೆನ್ನು ಹತ್ತಿ ಹೋಗಿಲ್ಲ. ಈ ಮಾಧ್ಯಮದ ಬಗ್ಗೆ ನನಗೆ ಸಾಕಷ್ಟು ಗೌರವ ಇದೆ. ಪ್ರತಿಭೆ ಇದ್ದವರು ಮಾತ್ರ ಇಲ್ಲಿ ಮಿಂಚುತ್ತಾರೆ’ ಎಂದು ವಿವೇಕ್​ ಒಬೆರಾಯ್​ ಹೇಳಿದ್ದಾರೆ.

ಇದನ್ನೂ ಓದಿ
Image
ಬಾಲಿವುಡ್​ನವರೂ ಕೆಟ್ಟ ಸಿನಿಮಾ ಮಾಡ್ತಾರೆ, ನಾವ್ಯಾಕೆ ಅವರಿಗೆ ರೇಂಜ್​ ಕೊಡಬೇಕು? ಸುದೀಪ್ ನೇರ ಪ್ರಶ್ನೆ
Image
ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
Image
ಬಾಲಿವುಡ್​ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
Image
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

‘ಕಂಟೆಂಟ್​ ಚೆನ್ನಾಗಿ ಇಲ್ಲ ಅಂದರೆ ದೊಡ್ಡ ಸ್ಟಾರ್​ ನಟರ ಸಿನಿಮಾವನ್ನೂ ಜನರು ತಿರಸ್ಕರಿಸುತ್ತಾರೆ. ಒಳ್ಳೆಯ ಕೆಲಸ ಮಾಡಿದ್ದಕ್ಕೆ ಹೊಸ ನಟರು ಕೂಡ ಭಾರಿ ಗೆಲುವು ಪಡೆಯಬಹುದು. ‘ಇನ್​ಸೈಡ್​ ಎಡ್ಜ್​’ ಬಳಿಕ ನಾನು ಸಹಿ ಮಾಡಿದ್ದು ‘ಧಾರಾವಿ ಬ್ಯಾಂಕ್​’ ಮತ್ತು ‘ಇಂಡಿಯನ್​ ಪೊಲೀಸ್​ ಫೋರ್ಸ್​’ಗೆ ಮಾತ್ರ. ಇವುಗಳ ಸ್ಕ್ರಿಪ್ಟ್​ ಚೆನ್ನಾಗಿತ್ತು ಎಂಬುದೇ ಅದಕ್ಕೆ ಕಾರಣ. ಕೆಲವರ ಸ್ಕ್ರಿಪ್ಟ್​ ನೋಡಿ ನನಗೆ ಆಶ್ಚರ್ಯ ಆಗುತ್ತದೆ. ನೀವೆಲ್ಲ ಭಾರತದವರು ಹೌದಲ್ಲವೇ ಅಂತ ಕೇಳಬೇಕು ಎನಿಸುತ್ತದೆ. ಅಮೆರಿಕಾ ಅಥವಾ ಕೊರಿಯಾದಿಂದ ಸ್ಫೂರ್ತಿ ಪಡೆದು ಕಥೆ ಬರೆಯುತ್ತಾರೆ’ ಎಂದಿದ್ದಾರೆ ವಿವೇಕ್​ ಒಬೆರಾಯ್​.

ಇತ್ತೀಚೆಗೆ ನಟ ರಿಷಬ್​ ಶೆಟ್ಟಿ ಅವರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದುಂಟು. ನಮ್ಮ ನೆಲೆದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತದೆ ಎಂಬುದು ರಿಷಬ್​ ಶೆಟ್ಟಿ ಅಭಿಪ್ರಾಯ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಡಾಕ್ಟ್ರಮ್ಮ ತಂಗಿಯಾಗಿ ಸಿಕ್ಕಿರೋದು ಬಹಳ ಖುಷಿಯಾಗ್ತಿದೆ: ಧನಂಜಯ ಅತ್ತಿಗೆ
ಡಾಕ್ಟ್ರಮ್ಮ ತಂಗಿಯಾಗಿ ಸಿಕ್ಕಿರೋದು ಬಹಳ ಖುಷಿಯಾಗ್ತಿದೆ: ಧನಂಜಯ ಅತ್ತಿಗೆ
ಪಾಕಿಸ್ತಾನದಲ್ಲಿ ಕಿಂಗ್ ಕೊಹ್ಲಿ ಕ್ರೇಝ್: ಕರಾಚಿಯಲ್ಲಿ ಮೊಳಗಿದ RCB ಹರ್ಷೋದ್
ಪಾಕಿಸ್ತಾನದಲ್ಲಿ ಕಿಂಗ್ ಕೊಹ್ಲಿ ಕ್ರೇಝ್: ಕರಾಚಿಯಲ್ಲಿ ಮೊಳಗಿದ RCB ಹರ್ಷೋದ್