AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವತಾರ್’ ಹೀರೋ ಆಫರ್ ನನಗೆ ಬಂದಿತ್ತು, ಶೀರ್ಷಿಕೆ ಕೊಟ್ಟಿದ್ದು ನಾನೇ: ಗೋವಿಂದ

ನಟ ಗೋವಿಂದ ಅವರು ಸಂದರ್ಶನದಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ. ಹಾಲಿವುಡ್​ನ ‘ಅವತಾರ್’ ಸಿನಿಮಾದ ಅವಕಾಶವನ್ನು ಅವರು ಕೈಚಲ್ಲಿದ್ದಾಗಿ ಹೇಳಿದ್ದಾರೆ. ಈ ಪಾತ್ರಕ್ಕಾಗಿ 18 ಕೋಟಿ ರೂಪಾಯಿ ಆಫರ್ ಬಂದಿತ್ತಂತೆ. ಅಲ್ಲದೇ ‘ಆ ಚಿತ್ರಕ್ಕೆ ಶೀರ್ಷಿಕೆ ಸೂಚಿಸಿದ್ದು ಕೂಡ ನಾವೇ’ ಎಂದು ಗೋವಿಂದ ಹೇಳಿದ್ದಾರೆ.

‘ಅವತಾರ್’ ಹೀರೋ ಆಫರ್ ನನಗೆ ಬಂದಿತ್ತು, ಶೀರ್ಷಿಕೆ ಕೊಟ್ಟಿದ್ದು ನಾನೇ: ಗೋವಿಂದ
Govinda
ಮದನ್​ ಕುಮಾರ್​
|

Updated on: Mar 10, 2025 | 7:51 PM

Share

ನಟ ಗೋವಿಂದ (Govinda) ಅವರು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ಈ ಮೊದಲು ಗನ್ ಮಿಸ್​ ಫೈರ್ ಆಗಿದ್ದಕ್ಕೆ ಗೋವಿಂದ ಸದ್ದಿ ಆಗಿದ್ದರು. ಬಳಿಕ ವಿಚ್ಛೇದನದ ಗಾಸಿಪ್ ಹಬ್ಬಿತು. ಈಗ ಹಾಲಿವುಡ್​ನ ‘ಅವತಾರ್’ ಸಿನಿಮಾ ಬಗ್ಗೆ ಗೋವಿಂದ ಮಾತನಾಡಿದ್ದಾರೆ. ‘ಅವತಾರ್’ (Avatar) ಸಿನಿಮಾಗೆ ತಾವೇ ಹೀರೋ ಆಗಬೇಕಿತ್ತು. ಆದರೆ ತಾವು ಆಫರ್​ ಒಪ್ಪಿಕೊಳ್ಳಲಿಲ್ಲ ಎಂದು ಗೋವಿಂದ ಹೇಳಿದ್ದಾರೆ. ಅಷ್ಟೇ ಅಲ್ಲದೇ, ನಿರ್ದೇಶಕ ಜೇಮ್ಸ್​ ಕ್ಯಾಮರನ್ (James Cameron) ಅವರಿಗೆ ‘ಅವತಾರ್’ ಎಂಬ ಶೀರ್ಷಿಕೆ ಸೂಚಿಸಿದ್ದು ಕೂಡ ತಾವೇ ಎಂದು ಗೋವಿಂದ ಹೇಳಿದ್ದಾರೆ.

ಹಿರಿಯ ನಟ ಮುಖೇಶ್ ಖನ್ನಾ ಅವರ ಯೂಟ್ಯೂಬ್ ಚಾನೆಲ್​​ಗಾಗಿ ಗೋವಿಂದ ಸಂದರ್ಶನ ನೀಡಿದ್ದಾರೆ. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ಅಮೆರಿಕದಲ್ಲಿ ಸರ್ದಾರ್ಜಿ ಒಬ್ಬರಿಗೆ ಬಿಸ್ನೆಸ್ ಐಡಿಯಾ ಕೊಟ್ಟಿದ್ದೆ. ಅದು ಯಶಸ್ವಿ ಆಗಿತ್ತು. ಹಲವು ವರ್ಷಗಳ ಬಳಿಕ ಅವರು ನನ್ನನ್ನು ಜೇಮ್ಸ್ ಕ್ಯಾಮರನ್​ಗೆ ಭೇಟಿ ಮಾಡಿಸಿದರು. ಕ್ಯಾಮರನ್ ಜೊತೆ ಸಿನಿಮಾ ಮಾಡಬೇಕು ಅಂತ ಸಲಹೆ ನೀಡಿದರು’ ಎಂದು ಗೋವಿಂದ ಹೇಳಿದ್ದಾರೆ.

‘ಅವರಿಬ್ಬರನ್ನು ನಾನು ಊಟಕ್ಕೆ ಆಹ್ವಾನಿಸಿ, ಚರ್ಚೆ ಮಾಡಿದೆ. ಅವತಾರ್ ಎಂಬ ಶೀರ್ಷಿಕೆ ಸೂಚಿಸಿದ್ದು ಕೂಡ ನಾನೇ. ಈ ಸಿನಿಮಾದ ಹೀರೋ ಅಂಗವಿಕಲ ಅಂತ ಕ್ಯಾಮರನ್ ಹೇಳಿದರು. ಹಾಗಾಗಿ ನಾನು ಸಿನಿಮಾ ಮಾಡಲ್ಲ ಎಂದೆ. ಈ ಪಾತ್ರಕ್ಕಾಗಿ ಅವರು ನನಗೆ 18 ಕೋಟಿ ರೂಪಾಯಿ ಆಫರ್ ಮಾಡಿದರು. 410 ದಿನ ಶೂಟಿಂಗ್ ಮಾಡಬೇಕು ಎಂದರು. ಹಾಗೆ ದೇಹಕ್ಕೆ ಬಣ್ಣ ಬಳಿದುಕೊಂಡರೆ ನಾನು ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ’ ಎಂದಿದ್ದಾರೆ ಗೋವಿಂದ.

ಇದನ್ನೂ ಓದಿ
Image
ಗೋವಿಂದ ಜಾತಕದಲ್ಲಿ ಬರೆದಿದೆ ಎರಡನೇ ಮದುವೆ; ಆ ದಿನ ಹತ್ತಿರ ಬಂದೇ ಬಿಡ್ತಾ?
Image
37 ವರ್ಷ ಸಂಸಾರ ಮಾಡಿ ಈಗ ವಿಚ್ಛೇದನ ಪಡೆಯಲು ಮುಂದಾದ ನಟ ಗೋವಿಂದ?
Image
ಮೂಢನಂಬಿಕೆಯಿಂದ ಬಾಲಿವುಡ್​ನಲ್ಲಿ ಬೇಡಿಕೆ ಕಳೆದುಕೊಂಡ ನಟ ಗೋವಿಂದ?
Image
10 ಹೊಲಿಗೆ ಹಾಕಲಾಗಿದೆ: ಗೋವಿಂದ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವೈದ್ಯರು

ಇದನ್ನೂ ಓದಿ: 37 ವರ್ಷ ಸಂಸಾರ ಮಾಡಿ ಈಗ ವಿಚ್ಛೇದನ ಪಡೆಯಲು ಮುಂದಾದ ನಟ ಗೋವಿಂದ?

ಗೋವಿಂದ ಅವರು ಒಂದು ಕಾಲದಲ್ಲಿ ಬ್ಯುಸಿ ನಟನಾಗಿದ್ದರು. ಬಾಲಿವುಡ್​ನಲ್ಲಿ ಅವರಿಗೆ ಸಖತ್ ಬೇಡಿಕೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಕಡಿಮೆ ಆಗಿದೆ. ಭರ್ಜರಿಯಾಗಿ ಕಮ್​ಬ್ಯಾಕ್ ಮಾಡಲು ಅವರು ಸಜ್ಜಾಗುತ್ತಿದ್ದಾರೆ. ಇನ್ನು, ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಪತ್ನಿ ಸುನೀತಾ ಅವರು ಗೋವಿಂದಗೆ ಡಿವೋರ್ಸ್ ನೋಟಿಸ್ ಕಳಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಗೋವಿಂದ ಮತ್ತು ಸುನೀತಾ ಅಹುಜಾ ಅವರು ಬಹಿರಂಗವಾಗಿ ಹೇಳಿಕೆ ನೀಡುವುದು ಬಾಕಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.