AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ರಿಶ್ 4’ ಸಿನಿಮಾ ವಿಳಂಬ, ಬಜೆಟ್ ಸೇರಿದಂತೆ ಹಲವು ಸಮಸ್ಯೆ

Krrish 4: ಹೃತಿಕ್ ರೋಷನ್ ನಟನೆಯ ‘ಕ್ರಿಶ್’ ಸಿನಿಮಾ ಭಾರತ ಚಿತ್ರರಂಗದ ಯಶಸ್ವಿ ಸೂಪರ್ ಹೀರೋ ಸಿನಿಮಾ. ‘ಕ್ರಿಶ್’ ಬಳಿಕ ಕೆಲವು ಸೂಪರ್ ಹೀರೋ ಸಿನಿಮಾಗಳು ಬಂದವಾದರೂ ‘ಕ್ರಿಶ್’ನಷ್ಟು ಯಾವುದೂ ಯಶಸ್ಸು ಗಳಿಸಲಿಲ್ಲ. ‘ಕ್ರಿಶ್ 4’ ನಿರ್ಮಾಣ ಆಗುತ್ತದೆ ಎಂದು ಕೆಲ ವರ್ಷಗಳಿಂದಲೂ ಹೇಳಲಾಗುತ್ತಿದೆ. ಆದರೆ ಈಗ ಬರುತ್ತಿರುವ ಸುದ್ದಿಯಂತೆ ‘ಕ್ರಿಶ್ 4’ ಸಿನಿಮಾಕ್ಕೆ ಹಲವು ಅಡೆ-ತಡೆಗಳು ಎದುರಾಗಿವೆ.

‘ಕ್ರಿಶ್ 4’ ಸಿನಿಮಾ ವಿಳಂಬ, ಬಜೆಟ್ ಸೇರಿದಂತೆ ಹಲವು ಸಮಸ್ಯೆ
Krrish
ಮಂಜುನಾಥ ಸಿ.
|

Updated on: Mar 16, 2025 | 7:48 AM

Share

ಹೃತಿಕ್ ರೋಷನ್ ನಟನೆಯ ‘ಕ್ರಿಶ್’ ಸಿನಿಮಾ ಭಾರತ ಸಿನಿಮಾದ ಮೊದಲ ಮತ್ತು ಯಶಸ್ವಿ ಸೂಪರ್ ಹೀರೋ. ಅಸಲಿಗೆ ಶಕ್ತಿಮಾನ್ ಪಾತ್ರ ಭಾರತದ ಮೊದಲ ಸೂಪರ್ ಹೀರೋ ಆಗಿದ್ದರೂ ಅದು ಟಿವಿಗೆ ಮಾತ್ರವೇ ಸೀಮಿತವಾಗಿತ್ತು. ‘ಕ್ರಿಶ್’ ಸಿನಿಮಾ ‘ಕೋಯಿ ಮಿಲ್ ಗಯಾ’ ಸಿನಿಮಾದ ಮುಂದುವರೆದ ಭಾಗವಾಗಿ ಭಾರಿ ಜನಪ್ರಿಯತೆ ಗಳಿಸಿತು. ಈ ವರೆಗೆ ಮೂರು ಕ್ರಿಶ್ ಸಿನಿಮಾಗಳು ಬಿಡುಗಡೆ ಆಗಿವೆ. ‘ಕ್ರಿಶ್ 4’ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಕಳೆದ ಒಂದೆರಡು ವರ್ಷಗಳಿಂದಲೂ ಚರ್ಚೆ ನಡೆಯುತ್ತಿದೆ. ಆದರೆ ಈ ವರೆಗೆ ‘ಕ್ರಿಶ್ 4’ ಸಿನಿಮಾ ಪ್ರಾರಂಭವಾಗಿಲ್ಲ. ‘ಕ್ರಿಶ್ 4’ ಸಿನಿಮಾಕ್ಕೆ ಹಲವು ಅಡ್ಡಿ ಆತಂಕಗಳು ಎದುರಾಗಿವೆ.

ಈ ಹಿಂದಿನ ಕ್ರಿಶ್ ಸಿನಿಮಾಗಳು ಸುಮಾರು 100 ಕೋಟಿಗೂ ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡಿವೆ. ಆದರೆ ‘ಕ್ರಿಶ್ 3’ ಸಿನಿಮಾ ಬಿಡುಗಡೆ ಆಗಿ 12 ವರ್ಷಗಳಾಗಿದ್ದು, ಈಗ ಪ್ರೊಡಕ್ಷನ್ ಕಾಸ್ಟ್ ಬಹಳ ಹೆಚ್ಚಾಗಿದೆ. ಅಲ್ಲದೆ ಈ ಹತ್ತು ವರ್ಷಗಳಲ್ಲಿ ಮಾರ್ವೆಲ್, ಡಿಸಿ ಅವರುಗಳು ವಿಎಫ್​ಎಕ್ಸ್​ ಅನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ವಿಎಫ್​ಎಕ್ಸ್ ಮೂಲಕ ಅಸಾಧ್ಯವನ್ನೆಲ್ಲ ಸಾಧ್ಯವಾಗಿಸಿಬಿಟ್ಟಿದ್ದಾರೆ. ಹೀಗಿರುವಾಗ ಈಗ ‘ಕ್ರಿಶ್ 4’ ಸಿನಿಮಾ ನಿರ್ಮಾಣ ಮಾಡಿದರೆ ಜನ ಅದನ್ನು ಮಾರ್ವೆಲ್​ನ ಸೂಪರ್ ಹೀರೋ ಸಿನಿಮಾಗಳೊಟ್ಟಿಗೆ ಹೋಲಿಸಿ ನೋಡುತ್ತಾರೆ. ಹಾಗಾಗಿ ‘ಕ್ರಿಶ್ 4’ ಅನ್ನು ಭಾರಿ ಅದ್ಧೂರಿಯಾಗಿಯೇ ನಿರ್ಮಿಸಬೇಕಿದೆ.

ಸಿನಿಮಾದ ಈಗಿನ ಬಜೆಟ್ ಸುಮಾರು 700 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದ್ದು, ಇಷ್ಟು ದೊಡ್ಡ ಬಜೆಟ್ ಹಾಕಲು ನಿರ್ಮಾಣ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಅಲ್ಲದೆ ಈ ಮೊದಲಿನ ‘ಕ್ರಿಶ್’ ಸಿನಿಮಾಗಳನ್ನು ಹೃತಿಕ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು. ಆದರೆ ‘ಕ್ರಿಶ್ 4’ ಸಿನಿಮಾದ ಜವಾಬ್ದಾರಿಯನ್ನು ನಿರ್ದೇಶಕ ಸಿದ್ಧಾರ್ಥ್​ ಆನಂದ್​ಗೆ ಹೃತಿಕ್ ರೋಷನ್ ನೀಡಿದ್ದಾರಂತೆ. ನಿರ್ಮಾಪಕರು ಸಹ ಬೇರೆಯವರೇ ಇರಲಿದ್ದು, ಇದು ಸಹ ನಿರ್ಮಾಪಕರ ಪಾಲಿಗೆ ಒಂದು ಚಿಂತೆಯ ವಿಷಯವಾಗಿದೆ.

ಇದನ್ನೂ ಓದಿ:Jr.ಎನ್​ಟಿಆರ್​ ಜೊತೆ ಡ್ಯಾನ್ಸ್ ಮಾಡುವಾಗ ಎಡವಿದ ಹೃತಿಕ್ ರೋಷನ್; ಸಂಭವಿಸಿತು ಅವಘಡ

ಕೆಲ ವಾರಗಳ ಹಿಂದೆ ಬಾಲಿವುಡ್​ನ ಮ್ಯಾಗಜೀನ್​ಗೆ ಸಂದರ್ಶನ ನೀಡಿದ್ದ ರಾಕೇಶ್ ರೋಷನ್, ತಾವು ‘ಕ್ರಿಶ್ 4’ ಸಿನಿಮಾ ನಿರ್ದೇಶನ ಮಾಡುವುದಿಲ್ಲ ಎಂದು ಖಾತ್ರಿ ಪಡಿಸಿದ್ದಾರೆ. ‘ಕ್ರಿಶ್ 4’ ಮಾತ್ರವೇ ಅಲ್ಲ, ತಾವು ಇನ್ನುಮುಂದೆ ಯಾವ ಸಿನಿಮಾವನ್ನೂ ಸಹ ನಿರ್ಮಾಣ ಮಾಡುವುದಿಲ್ಲ ಎಂದಿದ್ದಾರೆ. ಜೊತೆಗೆ ‘ಕ್ರಿಶ್ 4’ ಸಿನಿಮಾದ ಕೆಲಸಗಳು ಚಾಲ್ತಿಯಲ್ಲಿವೆ ಎಂದು ಸಹ ಹೇಳಿದ್ದಾರೆ.

ಸಿದ್ಧಾರ್ಥ್ ಆನಂದ್ ಪ್ರಸ್ತುತ ‘ವಾರ್ 2’ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರ ಬಳಿಕ ಶಾರುಖ್ ಖಾನ್ ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾಗಳ ಬಳಿಕವಷ್ಟೆ ಅವರು ‘ಕ್ರಿಶ್ 4’ ಸಿನಿಮಾದ ಕಡೆಗೆ ಗಮನ ಹರಿಸಬೇಕಾಗಿದೆ. ಹಾಗಾಗಿ ‘ಕ್ರಿಶ್ 4’ ಇನ್ನೂ ಕನಿಷ್ಟ ಎರಡು ವರ್ಷ ತಡವಾಗುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ