Jacqueline Fernandez: 200 ಕೋಟಿ ರೂ. ವಂಚನೆ ಕೇಸ್​ನ ಚಿಂತೆ ಬಿಟ್ಟು ವಿದೇಶಕ್ಕೆ ಹಾರಲಿರುವ ಜಾಕ್ವೆಲಿನ್​ ಫರ್ನಾಂಡಿಸ್​

|

Updated on: May 24, 2023 | 6:20 PM

ಅಬುಧಾಬಿಯಲ್ಲಿ ‘ಐಫಾ ಅವಾರ್ಡ್ಸ್​’ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ಪಾಲ್ಗೊಳ್ಳಲಿದ್ದಾರೆ. ಆ ಬಳಿಕ ಅವರು ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ.

Jacqueline Fernandez: 200 ಕೋಟಿ ರೂ. ವಂಚನೆ ಕೇಸ್​ನ ಚಿಂತೆ ಬಿಟ್ಟು ವಿದೇಶಕ್ಕೆ ಹಾರಲಿರುವ ಜಾಕ್ವೆಲಿನ್​ ಫರ್ನಾಂಡಿಸ್​
ಜಾಕ್ವೆಲಿನ್ ಫರ್ನಾಂಡಿಸ್
Follow us on

ನಟಿ ಜಾಕ್ವೆಲಿನ್​ ಫರ್ನಾಂಡಿಸ್​ (Jacqueline Fernandez) ಅವರಿಗೆ ಕೋರ್ಟ್​ನಿಂದ ವಿಶೇಷ ಅನುಮತಿ ಸಿಕ್ಕಿದೆ. ವಿದೇಶಕ್ಕೆ ತೆರಳಲು ಅವರಿಗೆ ಅವಕಾಶ ನೀಡಲಾಗಿದೆ. ಅಬುಧಾಬಿಯಲ್ಲಿ ನಡೆಯಲಿರುವ ಐಫಾ (IIFA) ಅವಾರ್ಡ್​ನಲ್ಲಿ ಭಾಗವಹಿಸಲು ಅವರು ದೇಶ ಬಿಟ್ಟು ತೆರಳಿದ್ದಾರೆ. 200 ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಸುಕೇಶ್​ ಚಂದ್ರಶೇಖರ್​ (Sukesh Chandrashekhar) ಜೊತೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಒಡನಾಟ ಹೊಂದಿದ್ದರು. ಆ ಕಾರಣದಿಂದ ಅವರು ಜಾರಿ ನಿರ್ದೇಶನಾಲಯದ ತನಿಖೆಗೆ ಒಳಗಾಗಬೇಕಾಯಿತು. ಅವರು ದೇಶಬಿಟ್ಟು ತೆರಳದಂತೆ ಈ ಹಿಂದೆ ಆದೇಶ ಹೊರಡಿಸಲಾಗಿತ್ತು. ಆದರೆ ಅದನ್ನು ಪ್ರಶ್ನಿಸಿ ಜಾಕ್ವೆಲಿನ್ ಫರ್ನಾಂಡಿಸ್​ ಅವರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಆ ಬಳಿಕ ಒಂದೆರಡು ಬಾರಿ ಅವರಿಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಲಾಗಿತ್ತು. ಈಗ ಅವರು ಮತ್ತೆ ಕೆಲಸಗಳ ನಿಮಿತ್ತ ವಿದೇಶಕ್ಕೆ ಹಾರಲಿದ್ದಾರೆ.

ಅಬುಧಾಬಿಯಲ್ಲಿ ಮೇ 25ರಿಂದ 27ರ ತನಕ ‘ಐಫಾ ಅವಾರ್ಡ್ಸ್​’ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ಜಾಕ್ವೆಲಿನ್​ ಫಾರ್ನಾಂಡಿಸ್​ ಪಾಲ್ಗೊಳ್ಳಲಿದ್ದಾರೆ. ಆ ಬಳಿಕ ಅವರು ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಅವರು ತಮ್ಮ ಹೊಸ ಚಿತ್ರದ ಶೂಟಿಂಗ್​ನಲ್ಲಿ ಭಾಗಿ ಆಗಲಿದ್ದಾರೆ. ಮೇ 28ರಿಂದ ಜೂನ್​ 12ರವರೆಗೆ ಚಿತ್ರೀಕರಣ ನಡೆಯಲಿದೆ. ಅದರ ಸಲುವಾಗಿ ವಿದೇಶಕ್ಕೆ ತೆರಳಲು ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೆ ಅನುಮತಿ ಸಿಕ್ಕಿದೆ.

ಇದನ್ನೂ ಓದಿ: ಕೇಸ್​ಗಳ ಮಧ್ಯೆ ಸಿಕ್ಕಿ ಬಿದ್ದು ಹೊಸ ನಿಯಮ ಹಾಕಿಕೊಂಡು ಜಾಕ್ವೆಲಿನ್ ಫರ್ನಾಂಡಿಸ್

ಇದನ್ನೂ ಓದಿ
ಸುಕೇಶ್ ಚಂದ್ರಶೇಖರ್ ಬಹು ಕೋಟಿ​ ವಂಚನೆ ಪ್ರಕರಣ: ಜಾಕ್ವೆಲಿನ್ ಬಳಿಕ ನೋರಾಗೆ ಹೆಚ್ಚಿತು ಸಂಕಷ್ಟ
ಸುಕೇಶ್ ಕಳ್ಳಾಟ ಜಾಕ್ವೆಲಿನ್​ಗೆ ಗೊತ್ತಿತ್ತು, ಆದರೂ ರಿಲೇಶನ್​ಶಿಪ್​ನಲ್ಲಿದ್ದರು; ಚಾರ್ಜ್​ಶೀಟ್​​ನಲ್ಲಿ ಅಚ್ಚರಿಯ ಉಲ್ಲೇಖ
‘ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರದ ಮಧ್ಯೆ ಇಡಿ ವಿಚಾರಣೆ ಎದುರಿಸಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್​
‘ದುಬೈಗೆ ಹೋಗಿ ಬರುತ್ತೇನೆ, ಅವಕಾಶ ನೀಡಿ’; ಕೋರ್ಟ್ ಮುಂದೆ ಅಲವತ್ತುಕೊಂಡ ಜಾಕ್ವೆಲಿನ್ ಫರ್ನಾಂಡಿಸ್

ವಂಚನೆ ಆರೋಪಿ ಸುಕೇಶ್ ಚಂದ್ರಶೇಖರ್ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾನೆ. ಅವನ 200 ಕೋಟಿ ಸುಲಿಗೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಆರೋಪಿಯಾಗಿದ್ದು ಸಿಬಿಐ, ಇಡಿಗಳಿಂದ ಸತತ ವಿಚಾರಣೆಗೆ ಒಳಗಾಗುತ್ತಲೇ ಇದ್ದಾರೆ. ಸುಕೇಶ್ ಮಾತ್ರ ಜಾಕ್ವೆಲಿನ್ ತನ್ನ ಗರ್ಲ್​ಫ್ರೆಂಡ್ ಎಂದಿದ್ದಲ್ಲೇ  ಆಗಾಗ ಜೈಲಿನಿಂದ ಜಾಕ್ವೆಲಿನ್ ಫರ್ನಾಂಡಿಸ್​ಗೆ ಪ್ರೇಮಪತ್ರಗಳನ್ನು ಬರೆಯುತ್ತಿರುತ್ತಾನೆ.

ಇದನ್ನೂ ಓದಿ: ಮನಶಾಂತಿ ಹುಡುಕಿ ವೈಷ್ಣೋ ದೇವಿಗೆ ತೆರಳಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಸುಕೇಶ್​ ಚಂದ್ರಶೇಖರ್​ ಜೀವನವೇ ಕೌತುಕಮಯವಾಗಿದೆ. ಅವನ ಜೀವನದ ಕುರಿತು ಸಿನಿಮಾ ಅಥವಾ ವೆಬ್​ ಸಿರೀಸ್​ ಮಾಡಲು ನಿರ್ದೇಶಕ ಆನಂದ್​ ಕುಮಾರ್​ ನಿರ್ಧರಿಸಿದ್ದಾರೆ. ಆದರೆ ಇದನ್ನು ಬಯೋಪಿಕ್​ ಎಂದು ಕರೆಯಲು ಅವರು ಸಿದ್ಧರಿಲ್ಲ. ಸುಕೇಶ್​ ಚಂದ್ರಶೇಖರ್​ ಬದುಕಿನ ವಿವರಗಳನ್ನು ತೆರೆಗೆ ತರುವ ಪ್ರಯತ್ನದಲ್ಲಿ ಆನಂದ್​ ಕುಮಾರ್​ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಈ ಕುರಿತಾಗಿ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದರು. ‘ಬಯೋಪಿಕ್​ ಮಾಡೋದು ಮಹಾನ್​ ವ್ಯಕ್ತಿಗಳ ಜೀವನದ ಕುರಿತು. ಆದರೆ ಈತ ವಂಚಕ. ಇವನನ್ನು ಅಮರವಾಗಿಸುವ ಉದ್ದೇಶ ನನಗಿಲ್ಲ’ ಎಂದು ಆನಂದ್​ ಕುಮಾರ್​ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.