AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರ್ತಿದೆ ‘ಜೆಎನ್​ಯು’ ಸಿನಿಮಾ; ಶಿಕ್ಷಣ ಸಂಸ್ಥೆ ಬಗ್ಗೆ ಇರಲಿದೆಯೇ ಕಥೆ?

ಭಾರತದ ನಕಾಶೆ ಒಳಗೆ ‘ಒಂದು ಶೈಕ್ಷಣಿಕ ವಿಶ್ವವಿದ್ಯಾಲಯವು ರಾಷ್ಟ್ರವನ್ನು ಒಡೆಯಬಹುದೇ?’ ಎಂದು ಬರೆಯಲಾಗಿದೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಬಲಪಂಥೀಯರು ‘ಜೆಎನ್​ಯು’ ಶಿಕ್ಷಣ ಸಂಸ್ಥೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಈಗ ‘ಜೆಎನ್​ಯು’ ಹೆಸರಲ್ಲಿ ಸಿನಿಮಾ ಬರ್ತಿದೆ.

ಬರ್ತಿದೆ ‘ಜೆಎನ್​ಯು’ ಸಿನಿಮಾ; ಶಿಕ್ಷಣ ಸಂಸ್ಥೆ ಬಗ್ಗೆ ಇರಲಿದೆಯೇ ಕಥೆ?
ಊರ್ವಶಿ
ರಾಜೇಶ್ ದುಗ್ಗುಮನೆ
|

Updated on: Mar 14, 2024 | 8:47 AM

Share

ಕೆಲವು ಸಿನಿಮಾಗಳ ಟೈಟಲ್​ಗಳು ಸಖತ್ ಸದ್ದು ಮಾಡುತ್ತವೆ. ಈಗ ‘ಜೆಎನ್​ಯು’ ಸಿನಿಮಾ ಶೀರ್ಷಿಕೆ ಸದ್ದು ಮಾಡುತ್ತಿದೆ. ‘ಜೆಎನ್​ಯು’ (JNU Movie) ಎಂದರೆ ‘ಜವಾಹರ್​ಲಾಲ್ ನೆಹರು ಯೂನಿವರ್ಸಟಿ’ ಅಲ್ಲ. ಈ ಸಿನಿಮಾದಲ್ಲಿ ಜೆಎನ್​ಯು’ ಎಂದರೆ ‘ಜಹಾಂಗೀರ್ ನ್ಯಾಷನಲ್ ಯೂನಿವರ್ಸಿಟಿ’ ಎಂದು. ಈ ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್​ನಲ್ಲಿ ಕೈ ಒಳಗೆ ಭಾರತದ ಮ್ಯಾಪ್ ಇದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅನೇಕರು ಇದನ್ನು ಪ್ರೊಪೊಗಾಂಡ ಸಿನಿಮಾ ಎಂದು ಕರೆದಿದ್ದಾರೆ.

ಭಾರತದ ನಕಾಶೆ ಒಳಗೆ ‘ಒಂದು ಶೈಕ್ಷಣಿಕ ವಿಶ್ವವಿದ್ಯಾಲಯವು ರಾಷ್ಟ್ರವನ್ನು ಒಡೆಯಬಹುದೇ?’ ಎಂದು ಬರೆಯಲಾಗಿದೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಬಲಪಂಥೀಯರು ‘ಜೆಎನ್​ಯು’ ಶಿಕ್ಷಣ ಸಂಸ್ಥೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇದು ಭಯೋತ್ಪಾದಕರನ್ನು ಉತ್ಪಾದಿಸುವ ಶಿಕ್ಷಣ ಸಂಸ್ಥೆ ಎಂದು ಅನೇಕರು ಆರೋಪಿಸಿದ್ದು ಇದೆ. ಈಗ ‘ಜೆಎನ್​ಯು’ ಸಿನಿಮಾ ಬರುತ್ತಿರುವುದು ಚರ್ಚೆ ಹುಟ್ಟುಹಾಕಿದೆ. ಇದನ್ನೂ ಓದಿ: ಪಾಕಿಸ್ತಾನದ ಈ ಬೌಲರ್ ಮೇಲೆ ಊರ್ವಶಿ ರೌಟೇಲಾಗೆ ಹೆಚ್ಚಿತು ಒಲವು? ಟ್ರೋಲ್​ಗೆ ಒಳಗಾದ ನಟಿ

ಊರ್ವಶಿ ರೌಟೇಲಾ ಅವರು ‘ಜೆಎನ್​ಯು’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ. ಈ ಪೋಸ್ಟರ್​ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ‘ನೀವು ನಿಮ್ಮನ್ನು ಸೆಲೆಬ್ರಿಟಿ ಎಂದು ಕರೆದುಕೊಳ್ಳಬೇಡಿ. ನೀವು ಭಾರತದಲ್ಲಿ ದ್ವೇಷವನ್ನು ಹರಡುತ್ತಿದ್ದೀರಿ’ ಎಂದು ಬರೆಯಲಾಗಿದೆ. ಇನ್ನೂ ಕೆಲವರು ‘ಈ ರೀತಿಯ ಟ್ರ್ಯಾಪ್​ಗಳಿಗೆ ಜನರು ಬಲಿಯಾಗುವುದಿಲ್ಲ. ಇದೊಂದು ಪ್ರೊಪೊಗಾಂಡ ಸಿನಿಮಾ’ ಎಂದು ಕರೆದಿದ್ದಾರೆ.

ಜೆಎನ್​ಯು ಸಿನಿಮಾ ಪೋಸ್ಟರ್​

ವಿನಯ್ ಶರ್ಮಾ ಅವರು ‘ಜೆಎನ್​ಯು’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಊರ್ವಶಿ ರೌಟೇಲಾ ಜೊತೆಗೆ ಸಿದ್ದಾರ್ಥ್ ಬೋಡ್ಕೆ, ಪಿಯುಷ್ ಮಿಶ್ರಾ, ರವಿ ಕಿಶನ್, ರಶ್ಮಿ ದೇಸಾಯಿ ಮೊದಲಾದವರು ನಟಿಸಿದ್ದಾರೆ.  ಈ ಚಿತ್ರ ರಿಲೀಸ್​ಗೂ ಮೊದಲೇ ವಿವಾದ ಸೃಷ್ಟಿ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ