AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಭಿಮಾನಿ ಜತೆ ಸ್ಟಾರ್​ ನಟನ ಮದುವೆ’ ಅಂತ ಹಬ್ಬಿತ್ತು ಸುದ್ದಿ; ಆದ್ರೆ ಅಲ್ಲಿ ನಡೆದಿದ್ದೇ ಬೇರೆ

ಆ ರೀತಿ ಫೇಕ್​ ಮದುವೆ ಸುದ್ದಿ ಪ್ರಕಟವಾಗಲು ಕಾರಣ ಏನು ಎಂಬುದನ್ನು ಕಾರ್ತಿಕ್​ ಆರ್ಯನ್​ ವಿವರಿಸಿದ್ದಾರೆ. ಅಂದು ಆ ಸುದ್ದಿ ನೋಡಿ ಅವರು ಜೋರಾಗಿ ನಕ್ಕಿದ್ದರು.

‘ಅಭಿಮಾನಿ ಜತೆ ಸ್ಟಾರ್​ ನಟನ ಮದುವೆ’ ಅಂತ ಹಬ್ಬಿತ್ತು ಸುದ್ದಿ; ಆದ್ರೆ ಅಲ್ಲಿ ನಡೆದಿದ್ದೇ ಬೇರೆ
ಅಭಿಮಾನಿಗಳ ಜೊತೆ ಕಾರ್ತಿಕ್​ ಆರ್ಯನ್
TV9 Web
| Edited By: |

Updated on: Jan 16, 2022 | 9:26 AM

Share

ಸೆಲೆಬ್ರಿಟಿಗಳ ಲೈಫ್​ ಅಷ್ಟು ಸುಲಭವಲ್ಲ. ಅವರು ಏನೇ ಮಾಡಿದ್ರೂ ಸುದ್ದಿ ಆಗುತ್ತದೆ. ಅದರಲ್ಲೂ ಖಾಸಗಿ ಜೀವನದ ಬಗ್ಗೆ ಅವರು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಲವ್​, ಡೇಟಿಂಗ್​, ಬ್ರೇಕಪ್​, ಮದುವೆ, ಮಕ್ಕಳು, ಡಿವೋರ್ಸ್​ ಮುಂತಾದ ವಿಚಾರಗಳಲ್ಲಿ ನಟ-ನಟಿಯರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಆದರೆ ಕೆಲವೊಮ್ಮೆ ಅವರು ಸುಳ್ಳು ಸುದ್ದಿಯ (Fake News) ಕಾಟಕ್ಕೆ ಒಳಗಾಗಬೇಕಾದ ಪರಿಸ್ಥಿತಿಯೂ ಎದುರಾಗುತ್ತದೆ. ಖ್ಯಾತ ನಟ ಕಾರ್ತಿಕ್​ ಆರ್ಯನ್​ (Kartik Aaryan) ಅವರ ವಿಚಾರದಲ್ಲಿಯೂ ಒಮ್ಮೆ ಹಾಗಾಗಿತ್ತು. ಅದನ್ನು ಈಗ ಅವರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಅಭಿಮಾನಿಯ ಜೊತೆ ಕಾರ್ತಿಕ್​ ಆರ್ಯನ್​ ಮದುವೆ (Marriage) ನಡೆದಿದೆ ಎಂದು ಸುದ್ದಿ ಪ್ರಕಟಿಸಲಾಗಿತ್ತು. ಆ ಸುದ್ದಿ ನೋಡಿ ಕಾರ್ತಿಕ್​ ಆರ್ಯನ್ ಅವರು ಜೋರಾಗಿ ನಕ್ಕಿದ್ದರು. ಅಭಿಮಾನಿಯನ್ನು ಮದುವೆ ಆಗುವ ಯಾವ ಉದ್ದೇಶವೂ ಅವರಿಗೆ ಇರಲಿಲ್ಲ. ಆ ಬಗ್ಗೆ ಅವರು ಯಾವ ಪತ್ರಿಕೆಯ ಜೊತೆಗೂ ಮಾತನಾಡಿರಲಿಲ್ಲ. ಆದರೂ ಸಹ ಅಂಥದ್ದೊಂದು ಸುದ್ದಿ ಪ್ರಕಟ ಆಗಿದ್ದು ವಿಪರ್ಯಾಸ. ಬಾಲಿವುಡ್​ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಕಾರ್ತಿಕ್​ ಆರ್ಯನ್​ ಅವರು ಈ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಆ ರೀತಿ ಫೇಕ್​ ಮದುವೆ ಸುದ್ದಿ ಪ್ರಕಟವಾಗಲು ಕಾರಣ ಏನು ಎಂಬುದನ್ನು ಕಾರ್ತಿಕ್​ ಆರ್ಯನ್​ ವಿವರಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಸಿನಿಮಾವೊಂದರ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಆ ಕಾರ್ಯಕ್ರಮಕ್ಕೆ ಬಂದಿದ್ದ ಯುವತಿಯೊಬ್ಬಳು ಕಾರ್ತಿಕ್​ ಆರ್ಯನ್​ ಅವರನ್ನು ಮದುವೆ ಆಗುವ ಹಂಬಲ ವ್ಯಕ್ತಪಡಿಸಿದ್ದಳು. ಅಷ್ಟನ್ನು ಮಾತ್ರ ಕೇಳಿಸಿಕೊಂಡ ಪತ್ರಕರ್ತರೊಬ್ಬರು ಮರುದಿನ ಸುದ್ದಿ ಪ್ರಕಟಿಸಿಬಿಟ್ಟಿದ್ದರು.

‘ಅಭಿಮಾನಿಯ ಜೊತೆ ಕಾರ್ತಿಕ್​ ಆರ್ಯನ್​ ಮದುವೆ’ ಎಂದು ಪ್ರಕಟವಾದ ಸುದ್ದಿ ನೋಡಿ ಕಾರ್ತಿಕ್​ ಆರ್ಯನ್​ ಅವರು ಬಿದ್ದು ಬಿದ್ದು ನಕ್ಕಿದ್ದರಂತೆ. ಆ ಘಟನೆಯನ್ನು ಈಗ ಅವರು ಮತ್ತೆ ನೆನಪಿಸಿಕೊಂಡಿದ್ದಾರೆ. ಕಾರ್ತಿಕ್​ ಆರ್ಯನ್​ ಕುರಿತಂತೆ ಅನೇಕ ಅಂತೆ-ಕಂತೆಗಳು ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿವೆ.

ಕಾರ್ತಿಕ್​ ಆರ್ಯನ್​ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಆದಾಗ್ಯೂ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗಿದೆ. ಕರಣ್​ ಜೋಹರ್​ ನಿರ್ಮಾಣದ ‘ದೋಸ್ತಾನಾ 2’ ಸಿನಿಮಾದಲ್ಲಿ ಕಾರ್ತಿಕ್​ ನಟಿಸಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಕರಣ್​ ಹಾಗೂ ಕಾರ್ತಿಕ್​ ನಡುವೆ ಉಂಟಾದ ಸಣ್ಣ ಕಿರಿಕ್​ನಿಂದ ಕಾರ್ತಿಕ್​ ಹೊರ ನಡೆದಿದ್ದರು. ಇದಾದ ನಂತರದಲ್ಲಿ ಕಾರ್ತಿಕ್​ಗೆ ಅದೃಷ್ಟ ಕೈ ಕೊಟ್ಟಿತು. ಶಾರುಖ್​ ಖಾನ್​ ನಿರ್ಮಾಣ ಸಂಸ್ಥೆ ರೆಡ್​ ಚಿಲ್ಲೀಸ್​ ಅಡಿಯಲ್ಲಿ ಸಿದ್ಧವಾಗುತ್ತಿದ್ದ ಸಿನಿಮಾದಲ್ಲಿ ಕಾರ್ತಿಕ್​ ನಟಿಸಬೇಕಿತ್ತು. ಆದರೆ, ಅಲ್ಲಿಂದ ಅವರಿಗೆ ಗೇಟ್​ ಪಾಸ್​ ನೀಡಲಾಯಿತು.

ಇದನ್ನೂ ಓದಿ:

‘ಮದುವೆ ಅಂತಿದ್ದಂಗೆ ನಿಮಗೆ ಏನಾಗಿಬಿಡುತ್ತೆ’? ನಕಲಿ ಅಮಿತಾಭ್​ ಕೇಳಿದ ಪ್ರಶ್ನೆಗೆ ನಾಚಿ ನೀರಾದ ಸಲ್ಲು

ಗಂಡನ ಮನೆಯಲ್ಲಿ ಅಡುಗೆ ಕಲಿಯುತ್ತಿರುವ ಕತ್ರಿನಾ! ​ಮದುವೆ ಬಳಿಕ ವಿಕ್ಕಿ-ಕತ್ರಿನಾಗೆ ಮೊದಲ ಸಂಕ್ರಾಂತಿ

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ