ಕಾರ್ತಿಕ್​ ಆರ್ಯನ್​ಗೆ ಬರುತ್ತಿಲ್ಲ ಸಿನಿಮಾ ಆಫರ್​; ಕರಣ್​ ಜೋಹರ್​ ಜತೆಗಿನ ವೈಷಮ್ಯವೇ ಮುಳುವಾಯ್ತಾ?

ಕರಣ್​ ಜೋಹರ್​ ನಿರ್ಮಾಣದ ‘ದೋಸ್ತಾನಾ 2’ ಸಿನಿಮಾದಲ್ಲಿ ಕಾರ್ತಿಕ್​ ನಟಿಸಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಕರಣ್​ ಹಾಗೂ ಕಾರ್ತಿಕ್​ ನಡುವೆ ಉಂಟಾದ ಸಣ್ಣ ಕಿರಿಕ್​ನಿಂದ ಕಾರ್ತಿಕ್​ ಹೊರ ನಡೆದಿದ್ದರು.

ಕಾರ್ತಿಕ್​ ಆರ್ಯನ್​ಗೆ ಬರುತ್ತಿಲ್ಲ ಸಿನಿಮಾ ಆಫರ್​; ಕರಣ್​ ಜೋಹರ್​ ಜತೆಗಿನ ವೈಷಮ್ಯವೇ ಮುಳುವಾಯ್ತಾ?
ಕಾರ್ತಿಕ್​ ಆರ್ಯನ್​
Follow us
| Updated By: ಮದನ್​ ಕುಮಾರ್​

Updated on: Jun 21, 2021 | 3:26 PM

ಬಾಲಿವುಡ್​ ಇಂಡಸ್ಟ್ರಿ ಉಳಿದ ಸಿನಿಮಾ ಇಂಡಸ್ಟ್ರಿಗಿಂತ ಕೊಂಚ ಭಿನ್ನವೇ. ಕನ್ನಡ ಸೇರಿದಂತೆ ದಕ್ಷಿಣದ ಬಹುತೇಕ ಸಿನಿಮಾ ಇಂಡಸ್ಟ್ರಿಗಳಲ್ಲಿ ಯಾವುದೇ ಹಿನ್ನೆಲೆ ಇಲ್ಲದೆ ಬಂದು ಸ್ಟಾರ್​ ಆಗಿ ಮೆರೆದ ಸಾಕಷ್ಟು ನಟರಿದ್ದಾರೆ. ಬಾಲಿವುಡ್​ನಲ್ಲೂ ಈ ರೀತಿ ಇಲ್ಲವೆಂದಲ್ಲ. ಆದರೆ, ಉಳಿದುಕೊಂಡವರು ಬೆರಳೆಣಿಕೆ ಮಂದಿ ಮಾತ್ರ. ಬಾಲಿವುಡ್​ನ ದೊಡ್ಡ ತಲೆಗಳಿಂದಾಗಿ ಸುಶಾಂತ್ ಸಿಂಗ್​ ರಜಪೂತ್​​ ಮೃತಪಟ್ಟರು ಎನ್ನುವ ಮಾತಿದೆ. ಈಗ ಕಾರ್ತಿಕ್​ ಆರ್ಯನ್​ಗೂ ಸೈಡ್​ಲೈನ್​ ಆಗುವ ಭಯ ಕಾಡುತ್ತಿದೆ.

ಕಾರ್ತಿಕ್​ ಆರ್ಯನ್​ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಆದಾಗ್ಯೂ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗಿದೆ. ಕರಣ್​ ಜೋಹರ್​ ನಿರ್ಮಾಣದ ‘ದೋಸ್ತಾನಾ 2’ ಸಿನಿಮಾದಲ್ಲಿ ಕಾರ್ತಿಕ್​ ನಟಿಸಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಕರಣ್​ ಹಾಗೂ ಕಾರ್ತಿಕ್​ ನಡುವೆ ಉಂಟಾದ ಸಣ್ಣ ಕಿರಿಕ್​ನಿಂದ ಕಾರ್ತಿಕ್​ ಹೊರ ನಡೆದಿದ್ದರು. ಇದಾದ ನಂತರದಲ್ಲಿ ಕಾರ್ತಿಕ್​ಗೆ ಅದೃಷ್ಟ ಕೈ ಕೊಟ್ಟಿದೆ.

ಶಾರುಖ್​ ಖಾನ್​ ನಿರ್ಮಾಣ ಸಂಸ್ಥೆ ರೆಡ್​ ಚಿಲ್ಲೀಸ್​ ಅಡಿಯಲ್ಲಿ ಸಿದ್ಧವಾಗುತ್ತಿದ್ದ ಸಿನಿಮಾದಲ್ಲಿ ಕಾರ್ತಿಕ್​ ನಟಿಸಬೇಕಿತ್ತು. ಆದರೆ, ಅಲ್ಲಿಂದ ಅವರಿಗೆ ಗೇಟ್​ ಪಾಸ್​ ನೀಡಲಾಯಿತು. ಈಗ ಅವರ ಕೈನಲ್ಲಿ ‘ಧಮಾಕಾ’ ಹಾಗೂ ‘ಭೂಲ್​ ಭುಲಯ್ಯಾ 2’ ಸಿನಿಮಾ ಬಿಟ್ಟು ಮತ್ತಾವುದೇ ಚಿತ್ರಗಳಿಲ್ಲ. ಮೂಲಗಳ ಪ್ರಕಾರ ಕಾರ್ತಿಕ್​ಗೆ ಯಾವುದೇ ದೊಡ್ಡ ಮಟ್ಟದ ಆಫರ್​ಗಳು ಕೂಡ ಬರುತ್ತಿಲ್ಲವಂತೆ.

ಸುಶಾಂತ್​ ಸಿಂಗ್​ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಆದಾಗ್ಯೂ ಸ್ಟಾರ್​ ಆಗಿ ಮೆರೆದರು. ಆದರೆ, ಅವರನ್ನು ಎಲ್ಲರೂ ಸೈಡ್​ಲೈನ್​ ಮಾಡಿದರು ಎನ್ನುವ ಆರೋಪ ಇದೆ. ಈಗ ಕಾರ್ತಿಕ್​ ಆರ್ಯನ್​ಗೂ ಇದೇ ರೀತಿ ಆದರೂ ಅಚ್ಚರಿ ಇಲ್ಲ ಎಂದು ಅಭಿಮಾನಿಗಳು ಆತಂಕ ಹೊರ ಹಾಕುತ್ತಿದ್ದಾರೆ. ಇನ್ನು, ಈ ಪರಿಸ್ಥಿತಿಯನ್ನು ಕಾರ್ತಿಕ್​ ಸಮರ್ಥವಾಗಿ ನಿಭಾಯಿಸುತ್ತಾರಾ ಎನ್ನುವುದು ಸದ್ಯದ ಪ್ರಶ್ನೆ.

ಇದನ್ನೂ ಓದಿ:

ಕಾರ್ತಿಕ್​ ಆರ್ಯನ್​ಗೆ ಗೇಟ್​ ಪಾಸ್​ ಕೊಟ್ಟ ಬೆನ್ನಲ್ಲೇ ಕರಣ್​​ ಜೋಹರ್​ಗೆ ಬಿಗ್​ ಶಾಕ್​

ಸುಶಾಂತ್​ ಸಿಂಗ್​ ರಜಪೂತ್ ರೀತಿಯೇ ಕಾರ್ತಿಕ್​ ಆರ್ಯನ್​ಗೆ ಅನ್ಯಾಯ ಆಗಲು ಕತ್ರಿನಾ ಕಾರಣವೇ?