AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhool Bhulaiyaa 2 BO Collections: 6ನೇ ದಿನವೂ ಕಡಿಮೆಯಾಗಿಲ್ಲ ‘ಭೂಲ್ ಭುಲಯ್ಯ 2’ ಹವಾ; ಇದೇ ದಿನ ‘ಕೆಜಿಎಫ್ ಚಾಪ್ಟರ್ 2’ ಎಷ್ಟು ಗಳಿಸಿತ್ತು?

Kartik Aaryan | Kiara Advani: ವಾರದ ದಿನಗಳಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ ‘ಭೂಲ್ ಭುಲಯ್ಯ 2’. ಮೊದಲ ವಾರದಲ್ಲಿ ಸುಮಾರು 92 ಕೋಟಿ ರೂಗಳನ್ನು ಈ ಚಿತ್ರ ಗಳಿಸುವ ನಿರೀಕ್ಷೆ ಇದೆ. ತೆರೆಕಂಡ ನಂತರದ ಮೊದಲ ಬುಧವಾರದಲ್ಲಿ ‘ಭೂಲ್ ಭುಲಯ್ಯ 2’, ‘ಆರ್​ಆರ್​ಆರ್​’, ‘ಕೆಜಿಎಫ್ ಚಾಪ್ಟರ್ 2’ ಎಷ್ಟು ಗಳಿಸಿದ್ದವು ಎಂಬ ವಿವರ ಇಲ್ಲಿದೆ.

Bhool Bhulaiyaa 2 BO Collections: 6ನೇ ದಿನವೂ ಕಡಿಮೆಯಾಗಿಲ್ಲ ‘ಭೂಲ್ ಭುಲಯ್ಯ 2’ ಹವಾ; ಇದೇ ದಿನ ‘ಕೆಜಿಎಫ್ ಚಾಪ್ಟರ್ 2’ ಎಷ್ಟು ಗಳಿಸಿತ್ತು?
‘ಭೂಲ್ ಭುಲಯ್ಯ 2’ ಪೋಸ್ಟರ್​
Follow us
TV9 Web
| Updated By: shivaprasad.hs

Updated on:May 26, 2022 | 11:31 AM

‘ಭೂಲ್ ಭುಲಯ್ಯ 2’ (Bhool Bhulaiyaa 2) ಚಿತ್ರವು ಈ ವರ್ಷದ ಬಾಲಿವುಡ್​ನ ಹಿಟ್ ಚಿತ್ರಗಳಲ್ಲೊಂದಾಗಿದೆ. 2022ರಲ್ಲಿ ಬಾಲಿವುಡ್​ನಲ್ಲಿ ಗೆಲುವು ಕಂಡ ಚಿತ್ರಗಳ ಸಂಖ್ಯೆ ತೀರಾ ಬೆರಳಣಿಕೆಯಷ್ಟು. ಅದರಲ್ಲಿ ಕಾರ್ತಿಕ್ ಆರ್ಯನ್ (Kartik Aaryan), ಕಿಯಾರಾ ಅಡ್ವಾನಿ (Kiara Advani), ಟಬು ಮೊದಲಾದವರು ನಟಿಸಿರುವ ‘ಭೂಲ್ ಭುಲಯ್ಯ 2’ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಹಾರರ್ ಕಾಮಿಡಿ ಜಾನರ್​ನ ಈ ಚಿತ್ರ ಮೇ 20ರಂದು ತೆರೆಕಂಡಿತ್ತು. ಬಿಡುಗಡೆಯಾದ ಐದು ದಿನಗಳ ನಂತರವೂ ಚಿತ್ರದ ಗಳಿಕೆ ಕಡಿಮೆಯಾಗಿಲ್ಲ. ವಿಶೇಷವೆಂದರೆ ವಾರದ ದಿನಗಳಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿರುವ ಈ ಚಿತ್ರ ಮೊದಲ ವಾರದಲ್ಲಿ ಸುಮಾರು 92 ಕೋಟಿ ರೂಗಳನ್ನು ಗಳಿಸುವ ನಿರೀಕ್ಷೆ ಇದೆ. ಹಾಗಾದರೆ ಈ ಸಿನಿಮಾದ ಇದುವರೆಗಿನ ಕಲೆಕ್ಷನ್ ಎಷ್ಟು? ಉತ್ತರ ಇಲ್ಲಿದೆ.

ಬಾಕ್ಸಾಫೀಸ್​ ವಿಶ್ಲೇಶಕ ತರಣ್ ಆದರ್ಶ್​ ಚಿತ್ರದ ಗಳಿಕೆಯ ರಿಪೋರ್ಟ್ ಹಂಚಿಕೊಂಡಿದ್ದಾರೆ. ಮೊದಲ ವಾರಾಂತ್ಯದ ವೇಳೆಗೆ ಚಿತ್ರವು 56 ಕೋಟಿ ರೂ ಗಳಿಸಿತ್ತು. ನಂತರದಲ್ಲಿ ಸೋಮವಾರ 10.75 ಕೋಟಿ ರೂ, ಮಂಗಳವಾರ 9.56 ಕೋಟಿ ರೂ ಹಾಗೂ ಬುಧವಾರ 8.51 ಕೋಟಿ ರೂಗಳನ್ನು ಚಿತ್ರ ಬಾಚಿಕೊಂಡಿದ್ದು ಒಟ್ಟಾರೆ 84.78 ಕೋಟಿ ರೂ ಗಳಿಸಿದೆ.

ಇದನ್ನೂ ಓದಿ
Image
Karan Johar: ರಶ್ಮಿಕಾ, ವಿಜಯ್ ದೇವರಕೊಂಡ, ಸಲ್ಮಾನ್..; ಕರಣ್ ಜೋಹರ್​​ ಬರ್ತ್​ಡೇ ಪಾರ್ಟಿಯಲ್ಲಿ ಭಾಗವಹಿಸಿದ ತಾರೆಯರು ಯಾರೆಲ್ಲಾ?
Image
Madhuri Dixit: ಟ್ರೆಂಡಿಂಗ್​ ಹಾಡಿಗೆ ಹೆಜ್ಜೆ ಹಾಕಿದ ಮಾಧುರಿ; ವೈರಲ್ ಆಯ್ತು ವಿಡಿಯೋ​
Image
Nayanthara: ಮತ್ತಷ್ಟು ಜೋರಾಯ್ತು ನಯನತಾರಾ ಮದುವೆಯ ವಿಚಾರ; ಎಲ್ಲಕ್ಕೂ ಕಾರಣ ಆ ಒಂದು ಭೇಟಿ!
Image
ಒಟಿಟಿಗೆ ಲಗ್ಗೆ ಇಡುತ್ತಿದೆ ‘ಹೀರೋಪಂತಿ 2’; ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿಕೊಂಡ ಟೈಗರ್

ಈ ಮೂಲಕ 2022ರಲ್ಲಿ ತೆರೆ ಕಂಡ ಚಿತ್ರಗಳಲ್ಲಿ ಆರನೇ ದಿನದಲ್ಲಿ ಅತ್ಯಂತ ಹೆಚ್ಚು ಗಳಿಸಿದ ಸಿನಿಮಾದ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ ‘ಭೂಲ್ ಭುಲಯ್ಯ 2’. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ 5ನೇ ದಿನ 19.05 ಕೋಟಿ ರೂ ಬಾಚಿಕೊಂಡಿತ್ತು. ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ 6.21 ಕೋಟಿ ರೂ ಗಳಿಸಿತ್ತು.

ರಿಲೀಸ್ ಆದ ನಂತರದ ಮೊದಲ ಬುಧವಾರದಲ್ಲಿ ಕೆಜಿಎಫ್ ಚಾಪ್ಟರ್ 2 ಎಷ್ಟು ಗಳಿಸಿತ್ತು?

ಈ ವರ್ಷ ಬಾಲಿವುಡ್ ಚಿತ್ರಗಳು ಹೆಚ್ಚು ಸದ್ದು ಮಾಡಿಲ್ಲ. ಇದುವರೆಗಿನ ಚಿತ್ರಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್’, ‘ಭೂಲ್ ಭುಲಯ್ಯ 2’ ಹಾಗೂ ‘ಗಂಗೂಬಾಯಿ ಕಾಠಿಯಾವಾಡಿ’ ಮಾತ್ರ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿವೆ. ಹಿಂದಿ ಪ್ರೇಕ್ಷಕರು ಬಾಲಿವುಡ್ ಚಿತ್ರಗಳಿಗಿಂತ ದಕ್ಷಿಣದ ಚಿತ್ರಗಳನ್ನು ಇಷ್ಟಪಟ್ಟು ನೋಡುತ್ತಿದ್ದಾರೆ. ಇದರಿಂದಾಗಿಯೇ ‘ಕೆಜಿಎಫ್ ಚಾಪ್ಟರ್ 2’, ‘ಆರ್​ಆರ್​ಆರ್​’, ‘ಪುಷ್ಪ: ದಿ ರೈಸ್’ ಮೊದಲಾದ ಚಿತ್ರಗಳು ದಾಖಲೆಯ ಮೊತ್ತವನ್ನು ಗಳಿಸಿವೆ.

ಬಿಡುಗಡೆಯಾದ ನಂತರದ ಮೊದಲ ಬುಧವಾರದಲ್ಲಿ ‘ಭೂಲ್ ಭುಲಯ್ಯ 2’ 8.51 ಕೋಟಿ ರೂ ಗಳಿಸಿದ್ದರೆ, ‘ಕೆಜಿಎಫ್ ಚಾಪ್ಟರ್ 2’ ಹಿಂದಿ ಅವತರಣಿಕೆ 16.35 ಕೋಟಿ ರೂ ಬಾಚಿಕೊಂಡಿತ್ತು. (‘ಕೆಜಿಎಫ್ 2’ ಗುರುವಾರ ತೆರೆಕಂಡಿದ್ದರೆ, ‘ಭೂಲ್​ ಭುಲಯ್ಯ 2’ ಶುಕ್ರವಾರ ತೆರೆಕಂಡಿತ್ತು). ಹಿಂದಿಯ ‘ಆರ್​ಆರ್​ಆರ್​’​ ಮೊದಲ ಬುಧವಾರದಂದು 13 ಕೋಟಿ ರೂ ಗಳಿಸಿತ್ತು.

ಅನೀಸ್ ಬಜ್ಮಿ ನಿರ್ದೇಶನದ ಈ ಚಿತ್ರ 2007ರಲ್ಲಿ ತೆರೆಕಂಡಿದ್ದ ‘ಭೂಲ್ ಭುಲಯ್ಯ’ ಚಿತ್ರದ ಸೀಕ್ವೆಲ್ ಆಗಿದೆ. ಪ್ರಿಯದರ್ಶನ್ ನಿರ್ದೇಶಿಸಿದ್ದ ಆ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದರು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:29 am, Thu, 26 May 22

ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ಮರದ ಕೊಂಬೆ ಬಿದ್ದು ಅಕ್ಷಯ್​ ಬ್ರೈನ್ ಡೆಡ್:ಮೊಮ್ಮಗನಿಗಾಗಿ ಅಜ್ಜ-ಅಜ್ಜಿ ಪೂಜೆ
ಮರದ ಕೊಂಬೆ ಬಿದ್ದು ಅಕ್ಷಯ್​ ಬ್ರೈನ್ ಡೆಡ್:ಮೊಮ್ಮಗನಿಗಾಗಿ ಅಜ್ಜ-ಅಜ್ಜಿ ಪೂಜೆ