ಮಾಧುರಿ ದೀಕ್ಷಿತ್​ಗೂ ಹತ್ತಿದೆ ‘ಕಚ್ಚಾ ಬಾದಾಮ್​’ ಗುಂಗು; ರಿತೇಶ್​​ ಜತೆ ಮಸ್ತ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ

Madhuri Dixit | Kacha Badam: ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ‘ಕಚ್ಚಾ ಬಾದಾಮ್’ ಹಾಡಿನ ಗುಂಗು ಹತ್ತಿಸಿಕೊಂಡಿದ್ದಾರೆ. ಮಾಧುರಿ ದೀಕ್ಷಿತ್​ ಸಹ ಇದಕ್ಕೆ ಹೊರತಾಗಿಲ್ಲ.

ಮಾಧುರಿ ದೀಕ್ಷಿತ್​ಗೂ ಹತ್ತಿದೆ ‘ಕಚ್ಚಾ ಬಾದಾಮ್​’ ಗುಂಗು; ರಿತೇಶ್​​ ಜತೆ ಮಸ್ತ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ
ಮಾಧುರಿ ದೀಕ್ಷಿತ್, ರಿತೇಶ್ ದೇಶಮುಖ್
Follow us
| Updated By: ಮದನ್​ ಕುಮಾರ್​

Updated on: Apr 06, 2022 | 12:22 PM

ಮಾಧುರಿ ದೀಕ್ಷಿತ್ (Madhuri Dixit) ಅವರ ಡ್ಯಾನ್ಸ್​ ನೋಡಲು ಅಭಿಮಾನಿಗಳು ತುಂಬ ಇಷ್ಟಪಡುತ್ತಾರೆ. ಮಾಧುರಿ ದೀಕ್ಷಿತ್​ ಎಂದರೆ ಡ್ಯಾನ್ಸ್​, ಡ್ಯಾನ್ಸ್​ ಎಂದರೆ ಮಾಧುರಿ ದೀಕ್ಷಿತ್​ ಎಂಬಷ್ಟರ ಮಟ್ಟಿಗೆ ಡ್ಯಾನ್ಸ್​ ಮೂಲಕ ಫೇಮಸ್​ ಆದ ನಟಿ ಅವರು. ದಶಕಗಳ ಹಿಂದೆ ಬಾಲಿವುಡ್​ ಸಿನಿಮಾಗಳಲ್ಲಿ ಅವರು ಸ್ಟೆಪ್​ ಹಾಕಿದ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಈಗಲೂ ಮಾಧುರಿ ದೀಕ್ಷಿತ್​ ಅವರು ಅದೇ ಚಾರ್ಮ್​ ಉಳಿಸಿಕೊಂಡಿದ್ದಾರೆ. ರಿಯಾಲಿಟಿ ಶೋಗಳಿಗೆ ಜಡ್ಜ್​ ಆಗಿ ಕಾಣಿಸಿಕೊಳ್ಳುವ ಮೂಲಕ ಅವರು ಬ್ಯುಸಿ ಆಗಿದ್ದಾರೆ. ಅದರ ಜೊತೆಗೆ ಸೋಶಿಯಲ್​ ಮೀಡಿಯಾದಲ್ಲಿ ಆಗಾಗ ಪೋಸ್ಟ್​ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರಲು ಅವರು ಬಯಸುತ್ತಾರೆ. ಮಾಧುರಿ ದೀಕ್ಷಿತ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚಾಗಿ ಡ್ಯಾನ್ಸ್​ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಾರೆ. ಇತ್ತೀಚೆಗೆ ಅವರು ‘ಕಚ್ಚಾ ಬಾದಾಮ್​..’ (Kacha Badam) ಹಾಡಿಗೆ ಬಿಂದಾಸ್​ ಆಗಿ ಸ್ಟೆಪ್​ ಹಾಕಿದ್ದಾರೆ. ಆ ವಿಡಿಯೋ ಕಂಡು ಫ್ಯಾನ್ಸ್​ ಖುಷಿ ಪಟ್ಟಿದ್ದಾರೆ. ನಟ ರಿತೇಶ್​ ದೇಶಮುಖ್​ (Riteish Deshmukh) ಅವರು ಕೂಡ ಮಾಧುರಿ ದೀಕ್ಷಿತ್​ಗೆ ಸಾಥ್​ ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ.

ಈ ಸೋಶಿಯಲ್​ ಮೀಡಿಯಾ ಯುಗದಲ್ಲಿ ಯಾರು ಬೇಕಾದರೂ ಸೆಲೆಬ್ರಿಟಿ ಆಗಬಹುದು. ರಾತ್ರೋರಾತ್ರಿ ಫೇಮಸ್​ ಆಗಿ ಬಿಡಬಹುದು. ‘ಕಚ್ಚಾ ಬಾದಾಮ್​..’ ಹಾಡು ಕೂಡ ಅದೇ ರೀತಿ ವೈರಲ್​ ಆಗಿದೆ. ಅದಕ್ಕೆ ಕೋಟ್ಯಂತರ ಮಂದಿ ರೀಲ್ಸ್​ ಮಾಡಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಹಾಡಿನ ಗುಂಗು ಹತ್ತಿಸಿಕೊಂಡಿದ್ದಾರೆ. ಮಾಧುರಿ ದೀಕ್ಷಿತ್​ ಸಹ ಇದಕ್ಕೆ ಹೊರತಾಗಿಲ್ಲ.

‘ಇದು ತುಂಬ ಮಜವಾಗಿತ್ತು ಅಲ್ಲವೇ? ಇದರಲ್ಲಿ ನನ್ನ ಜೊತೆ ಪಾಲ್ಗೊಂಡಿದ್ದಕ್ಕೆ ರಿತೇಶ್​ ಅವರಿಗೆ ಧನ್ಯವಾದಗಳು’ ಎಂದು ಮಾಧುರಿ ದೀಕ್ಷಿತ್ ಅವರು ಕ್ಯಾಪ್ಷನ್​ ನೀಡಿದ್ದಾರೆ. 12 ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋವನ್ನು ಲೈಕ್​ ಮಾಡಿದ್ದಾರೆ. ನಾಲ್ಕು ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿವೆ. ಸೋಶಿಯಲ್​ ಮೀಡಿಯಾದಲ್ಲಿ ಈ ಹಾಡಿಗೆ ಮತ್ತು ಮಾಧುರಿ ದೀಕ್ಷಿತ್​ ಅವರಿಗೆ ಯಾವ ಪರಿ ಫ್ಯಾನ್​ ಫಾಲೋಯಿಂಗ್​ ಇದೆ ಎಂಬುದಕ್ಕೆ ಈ ಸಂಖ್ಯೆಗಳೇ ಸಾಕ್ಷಿ.

‘ಕಚ್ಚಾ ಬಾದಾಮ್​..’ ಹಾಡು ಸಿಕ್ಕಾಪಟ್ಟೆ ಜನಪ್ರಿಯ ಆಗಿದೆ. ರೀಲ್ಸ್​ ಓಪನ್​ ಮಾಡಿದರೆ ಪದೇ ಪದೇ ಈ ಹಾಡು ಕೇಳಿಸುತ್ತದೆ. ರಿತೇಶ್​ ದೇಶಮುಖ್​ ಅವರು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟೀವ್​ ಆಗಿರುತ್ತಾರೆ. ಪತ್ನಿ ಜೆನಿಲಿಯಾ ಜೊತೆ ಸೇರಿಕೊಂಡು ಅವರು ಹಲವು ಬಗೆಯ ರೀಲ್ಸ್​ ಮಾಡುತ್ತಾರೆ. ಇತರೆ ಸೆಲೆಬ್ರಿಟಿಗಳ ಜೊತೆಯಲ್ಲೂ ಅವರು ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳುತ್ತಾರೆ. ‘ಕಚ್ಚಾ ಬಾದಾಮ್​..’ ಹಾಡಿನ ರೀಲ್ಸ್​ಗಾಗಿ ಅವರು ಮಾಧುರಿ ದೀಕ್ಷಿತ್​ ಜೊತೆ ಕೈ ಜೋಡಿಸಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಹೀರೋಯಿನ್​ ಆಗಿ ಬ್ಯುಸಿ ಆಗಿದ್ದ ಮಾಧುರಿ ದೀಕ್ಷಿತ್​ ಅವರು ಇತ್ತೀಚೆಗೆ ಒಟಿಟಿ ವೇದಿಕೆಗೂ ಕಾಲಿಟ್ಟರು. ಅವರು ನಟಿಸಿದ ಮೊದಲ ವೆಬ್​ ಸಿರೀಸ್​ ‘ದಿ ಫೇಮ್​ ಗೇಮ್​’ ಇತ್ತೀಚೆಗೆ ರಿಲೀಸ್​ ಆಯಿತು. ಅದರಲ್ಲಿಯೂ ಕೂಡ ಅವರ ಸ್ಟಾರ್​ ನಟಿಯ ಪಾತ್ರ ಮಾಡಿದ್ದಾರೆ.

‘ಸಿನಿಮಾವನ್ನು ನಾನು ವೃತ್ತಿಯಾಗಿ ನೋಡುತ್ತೇನೆ, ಕ್ಯಾಮೆರಾ ಮುಂದೆ ನಿಂತಿದ್ದಾಗ ನಾನು ವೃತ್ತಿಪರ ನಟಿ. ನಾನೇನು ಮಾಡುತ್ತೇನೆ ಎಂಬುದು ತಿಳಿದಿರುತ್ತದೆ. ಸ್ಕ್ರಿಪ್ಟ್​ ಓದಿಕೊಂಡು ನಟಿಸುತ್ತೇನೆ. ಕ್ಯಾಮೆರಾ ಸಲುವಾಗಿ ನಾನು ಆ ಪಾತ್ರವೇ ಆಗಿ ಬದಲಾಗುತ್ತೇನೆ. ಆದರೆ ಶೂಟಿಂಗ್​ ಮುಗಿಸಿ ಮನೆಗೆ ಹೋದರೆ ನಾನು ಸಾಮಾನ್ಯ ವ್ಯಕ್ತಿಯಾಗಿ ಇರುತ್ತೇನೆ. ಯಾಕೆಂದರೆ ನಮ್ಮ ಮನೆಯಲ್ಲಿ ನನ್ನನ್ನು ಬೆಳೆಸಿದ್ದೇ ಈ ರೀತಿಯಲ್ಲಿ’ ಎಂದು ಮಾಧುರಿ ದೀಕ್ಷಿತ್​ ಇತ್ತೀಚೆಗೆ ಹೇಳಿದ್ದರು.

ಇದನ್ನೂ ಓದಿ:

Viral Video: ಮಾಧುರಿ ದೀಕ್ಷಿತ್​ ಜತೆ ಹೆಜ್ಜೆ ಹಾಕಿದ ಧನುಶ್ರೀ ವರ್ಮ; ಡ್ಯಾನ್ಸ್​ ನೋಡಿ ವಾವ್​ ಎಂದ ನೆಟ್ಟಿಗರು

ಸ್ಟಾರ್​ ನಟಿ ಆದ್ರೂ ಮಾಧುರಿ ದೀಕ್ಷಿತ್​ಗೆ ತಪ್ಪಲಿಲ್ಲ ಅಮ್ಮನ ಬೈಗುಳು; ಕಾರಣ ತಿಳಿಸಿದ ಧಕ್​ ಧಕ್​ ಸುಂದರಿ

ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ