AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿನಿಮಾ ಮಾಡುತ್ತೇನೆ ಆದರೆ..’; ಶಾರುಖ್​ ಖಾನ್​ಗೆ ದೊಡ್ಡ ಷರತ್ತು ಹಾಕಿದ ನಿರ್ದೇಶಕ ಮಣಿರತ್ನಂ

ಶಾರುಖ್ ಖಾನ್ ಮತ್ತು. ಮಣಿರತ್ನಂ ಮತ್ತೆ ಒಟ್ಟಿಗೆ ಕೆಲಸ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಶಾರುಖ್ ಖಾನ್ ಜೊತೆ ಕೆಲಸ ಮಾಡಲು ರೆಡಿ ಇದ್ದಾರೆ. ಆದರೆ, ಒಂದು ಷರತ್ತನ್ನು ಮಣಿರತ್ನಂ ಇಟ್ಟಿದ್ದಾರೆ.

‘ಸಿನಿಮಾ ಮಾಡುತ್ತೇನೆ ಆದರೆ..’; ಶಾರುಖ್​ ಖಾನ್​ಗೆ ದೊಡ್ಡ ಷರತ್ತು ಹಾಕಿದ ನಿರ್ದೇಶಕ ಮಣಿರತ್ನಂ
ಮಣಿರತ್ನಂ-ಶಾರುಖ್ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 11, 2024 | 11:44 AM

Share

ಮಣಿರತ್ನಂ ಸಿನಿಮಾಗಳಲ್ಲಿನ ಜೀವಂತಿಕೆಯನ್ನು ಅಭಿಮಾನಿಗಳು ಸಾಕಷ್ಟು ಇಷ್ಟಪಡುತ್ತಾರೆ. ಅವರು ಆಯ್ದುಕೊಳ್ಳುವ ಕಥೆ ಮತ್ತು ಅದನ್ನು ಕಟ್ಟಿಕೊಡುವ ರೀತಿ ಸಿನಿಪ್ರಿಯರಿಗೆ ಇಷ್ಟ ಆಗುತ್ತದೆ. ಅವರ ಜೊತೆ ಕೆಲಸ ಮಾಡಬೇಕು ಎಂಬುದು ಅನೇಕ ಸ್ಟಾರ್​ ಹೀರೋಗಳ ಕನಸು. ಆ ಕನಸು ಅಷ್ಟು ಸುಲಭದಲ್ಲಿ ಈಡೇರುವುದಿಲ್ಲ. ವಿಶೇಷ ಎಂದರೆ ಶಾರುಖ್ ಖಾನ್ (Shah rukh Khan) ಅವರಿಗೂ ಈ ಆಸೆ ಇದೆ. ಈ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ ಮಣಿರತ್ನಂ ಅವರು ದೊಡ್ಡ ಷರತ್ತನ್ನು ಹಾಕಿದ್ದಾರೆ.

ಶಾರುಖ್ ಖಾನ್ ಹಾಗೂ ಮಣಿ ರತ್ನಂ ಅವರು ‘ದಿಲ್​ ಸೇ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಚಿತ್ರ ಬಂದಿದ್ದು 26 ವರ್ಷಗಳ ಹಿಂದೆ. ಈಗ ಶಾರುಖ್ ಖಾನ್ ಅವರು ಸೂಪರ್​ಸ್ಟಾರ್​. ಮಣಿರತ್ನಂ ಕೂಡ ದೊಡ್ಡ ನಿರ್ದೇಶಕ. ಇಬ್ಬರೂ ಮತ್ತೆ ಕೆಲಸ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಶಾರುಖ್ ಖಾನ್ ಜೊತೆ ಕೆಲಸ ಮಾಡಲು ರೆಡಿ ಇದ್ದಾರೆ. ಆದರೆ, ಒಂದು ಷರತ್ತನ್ನು ಮಣಿರತ್ನಂ ಇಟ್ಟಿದ್ದಾರೆ. ಇದನ್ನು ಪೂರೈಸಲು ಶಾರುಖ್ ಕೂಡ ರೆಡಿ ಇದ್ದಾರೆ.

ಕಾರ್ಯಕ್ರಮ ಒಂದರಲ್ಲಿ ಶಾರುಖ್ ಖಾನ್ ಹಾಗೂ ಮಣಿರತ್ನಂ ಒಟ್ಟಿಗೆ ವೇದಿಕೆ ಹಂಚಿಕೊಂಡರು. ‘ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಬೇಕಿದ್ದರೆ ಬೇಡಿಕೊಳ್ಳುತ್ತೇನೆ. ದಯವಿಟ್ಟು ನನಗಾಗಿ ಒಂದು ಸಿನಿಮಾ ಮಾಡಿ. ನೀವು ಹೇಳಿದರೆ ವಿಮಾನದ ಮೇಲೆ ನಿಂತು ‘ಚಯ್ಯ ಚಯ್ಯ’ ಎಂದು ಡ್ಯಾನ್ಸ್ ಮಾಡುತ್ತೇನೆ’ ಎಂದು ಶಾರುಖ್ ಖಾನ್ ಹೇಳಿದರು.

ಆಗ ನೆರೆದಿದ್ದವರು ಶಾರುಖ್ ಖಾನ್ ಜೊತೆ ಸಿನಿಮಾ ಯಾವಾಗ ಎಂದು ಹೇಳಿ ಎಂದು ಮಣಿರತ್ನಂ ಬಳಿ ಕೇಳಿದರು. ‘ನಾನು ವಿಮಾನ ಖರೀದಿ ಮಾಡಿದಾಗ’ ಎಂದರು ಮಣಿರತ್ನಂ. ಇದಕ್ಕೆ ಶಾರುಖ್ ತಕ್ಷಣಕ್ಕೆ ಉತ್ತರಿಸಿದರು. ‘ನಾನು ನಿಮಗಾಗಿ ವಿಮಾನ ಖರೀದಿಸಲೇ’ ಎಂದು ಕೇಳಿದರು ಶಾರುಖ್. ಇದಕ್ಕೆ ಮಣಿರತ್ನಂ ಒಪ್ಪಿಗೆ ಸೂಚಿಸಿದರು. ‘ನೀವು ನನಗಾಗಿ ವಿಮಾನ ಖರೀದಿಸಿದರೆ ನಿಮ್ಮ ಸಿನಿಮಾ ಮಾಡುತ್ತೇನೆ’ ಎಂದರು ಮಣಿರತ್ನಂ. ‘ನನ್ನ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ಈಗ ವಿಮಾನ ದೊಡ್ಡ ವಿಚಾರ ಅಲ್ಲ. ನಾನು ಬರುತ್ತಿದ್ದೇನೆ’ ಎಂದರು. ಈ ಮೂಲಕ ವಿಮಾನ ಖರೀದಿಸುವುದಾಗಿ ಹೇಳಿದರು. ಅಲ್ಲಿದ್ದವರು ನಕ್ಕರು. ಇಬ್ಬರೂ ಮತ್ತೆ ಒಂದಾಗೋದು ಯಾವಾಗ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ಹೊಸ ಚಿತ್ರಕ್ಕೆ ಸಹಿ ಹಾಕಿದ ಶಾರುಖ್ ಖಾನ್? ಈ ಬಾರಿ ಮತ್ತೊಂದು ಪ್ರಯೋಗ

ಶಾರುಖ್ ಖಾನ್ ಅವರು ಫ್ಲೈಟ್ ಮೇಲೆ ‘ಚಯ್ಯ ಚಯ್ಯ’ ಹಾಡಿಗೆ ಡ್ಯಾನ್ಸ್ ಮಾಡುತ್ತೇನೆ ಎಂದು ಹೇಳೋಕೂ ಒಂದು ಕಾರಣವಿದೆ. ‘ದಿಲ್​ ಸೇ’ ಚಿತ್ರದ ‘ಚಯ್ಯ ಚಯ್ಯ..’ ಹಾಡು ಸೂಪರ್ ಹಿಟ್ ಆಗಿತ್ತು. ಚಲಿಸುತ್ತಿರುವ ಟ್ರೇನ್​ ಮೇಲೆ ವಿಶೇಷ ಹಾಡನ್ನು ಶೂಟ್ ಮಾಡಲಾಗಿತ್ತು. ಈಗಲೂ ಹಾಡಿಗೆ ಮಾರುಕಟ್ಟೆ ಇದೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯವರೆಗೆ ಎಲ್ಲರಿಗೂ ಈ ಹಾಡು ಇಷ್ಟ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ