AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

14 ಜನ ಸತ್ತ ದಿನವೇ ಕುಣಿದು ಕುಪ್ಪಳಿಸಿದ ನಟಿ; ಉಗಿಯುತ್ತಿದ್ದಾರೆ ನೆಟ್ಟಿಗರು

ದಯವಿಟ್ಟು ಈ ವಿಡಿಯೋ ಡಿಲೀಟ್​ ಮಾಡಿ ಎಂದು ಅನೇಕರು ಮನ್ನಾರಾ ಚೋಪ್ರಾಗೆ ಕಿವಿಮಾತು ಹೇಳಿದ್ದಾರೆ. ಆದರೆ ಅದಕ್ಕೆ ನಟಿ ಪ್ರತಿಕ್ರಿಯೆ ನೀಡಿಲ್ಲ. ಮುಂಬೈನ ಮಳೆಯಲ್ಲಿ ಅವರು ನಲಿದಾಡಿದ್ದಾರೆ. ಅದೇ ದಿನ ಹಲವರ ಪ್ರಾಣ ಹೋಗಿದೆ. ಮನ್ನಾರಾ ಚೋಪ್ರಾ ಹಂಚಿಕೊಂಡ ರೀಲ್ಸ್​ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.

14 ಜನ ಸತ್ತ ದಿನವೇ ಕುಣಿದು ಕುಪ್ಪಳಿಸಿದ ನಟಿ; ಉಗಿಯುತ್ತಿದ್ದಾರೆ ನೆಟ್ಟಿಗರು
ಮನ್ನಾರಾ ಚೋಪ್ರಾ
ಮದನ್​ ಕುಮಾರ್​
|

Updated on: May 14, 2024 | 4:03 PM

Share

ನಟಿ ಮನ್ನಾರಾ ಚೋಪ್ರಾ (Mannara Chopra) ಅವರು ಮಳೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಮಳೆ ಬಂದಿದೆ ಎಂಬ ಖುಷಿಗೆ ಅವರು ಡ್ಯಾನ್ಸ್​ ಮಾಡಿದ್ದಾರೆ. ಬಾಲ್ಕನಿಯಲ್ಲಿ ನೆನೆಯುತ್ತಾ ಅವರು ರೀಲ್ಸ್​ (Mannara Chopra Reels) ಮಾಡಿದ್ದು, ಅದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಇದನ್ನು ಇಷ್ಟಪಡಬಹುದು ಎಂದು ಮನ್ನಾರಾ ಚೋಪ್ರಾ ಊಹಿಸಿದ್ದರು. ಆದರೆ ಆಗಿರುವುದೇ ಬೇರೆ. ನಟಿಯ ರೀಲ್ಸ್​ ನೋಡಿದ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್​ (Troll) ಮಾಡಿದ್ದಾರೆ. ಕಮೆಂಟ್​ಗಳ ಮೂಲಕ ನಟಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಮುಂಬೈ ಜನರಿಗೆ ನಟಿಯ ಈ ರೀಲ್ಸ್​ನಿಂದ ತುಂಬ ಕೋಪ ಬಂದಿದೆ.

ಅಷ್ಟಕ್ಕೂ ಮನ್ನಾರಾ ಚೋಪ್ರಾ ಮಾಡಿದ ತಪ್ಪೇನು? ಮೇ 13ರಂದು ಮನ್ನಾರಾ ಚೋಪ್ರಾ ಅವರು ಚಿತ್ರೀಕರಣದ ನಡುವೆ ಖುಷಿ ಖುಷಿಯಾಗಿ ಡ್ಯಾನ್ಸ್​ ಮಾಡಿದರು. ಮುಂಬೈನಲ್ಲಿ ಈ ವರ್ಷದ ಮೊದಲ ಮಳೆ ಎಂಬ ಕಾರಣಕ್ಕೆ ಅವರು ಇಷ್ಟೆಲ್ಲ ಖುಷಿಯಾಗಿ ಕುಣಿದಾಡಿದ್ದಾರೆ. ಆದರೆ ಅದೇ ದಿನ ಬಿರುಗಾಳಿ ಮತ್ತು ಮಳೆಯ ಅವಾಂತರದಿಂದ ಹಲವರ ಪ್ರಾಣ ಹೋಗಿದೆ.

ಇದನ್ನೂ ಓದಿ: ತಲೆ ಬೋಳಿಸಿಕೊಂಡ್ರಾ ಉರ್ಫಿ ಜಾವೇದ್​? ಫೋಟೋ ನೋಡಿ ಹಿಗ್ಗಾಮುಗ್ಗ ಉಗಿದ ನೆಟ್ಟಿಗರು

ಮುಂಬೈನಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್​ ಬಿಲ್​ಬೋರ್ಡ್​ ನೆಲಕ್ಕೆ ಉರುಳಿದ್ದರಿಂದ 14 ಜನರ ಪ್ರಾಣ ಹೋಗಿದೆ. ಅನೇಕರಿಗೆ ಗಾಯಗಳು ಆಗಿವೆ. ರಕ್ಷಣಾ ಕಾರ್ಯ ನಡೆಯುತ್ತಿದೆ. ಸಾವಿರಾರು ಜನರ ಬದುಕು ಕಷ್ಟದಲ್ಲಿದೆ. ಎಲ್ಲರೂ ಶೋಕದಲ್ಲಿ ಇರುವಾಗ ಮನ್ನಾರಾ ಚೋಪ್ರಾ ಅವರು ಈ ರೀತಿ ಖುಷಿಯಾಗಿ ಮಳೆಯಲ್ಲಿ ಕುಣಿದಾಡಿ ರೀಲ್ಸ್​ ಮಾಡಿರುವುದು ಜನರ ಕೋಪಕ್ಕೆ ಕಾರಣ ಆಗಿದೆ.

View this post on Instagram

A post shared by Mannara Chopra (@memannara)

ಮನ್ನಾರಾ ಚೋಪ್ರಾ ಹಂಚಿಕೊಂಡ ವಿಡಿಯೋ ನೋಡಿದ ಬಹುತೇಕರು ನೆಗೆಟಿವ್​ ಆಗಿ ಕಮೆಂಟ್​ ಮಾಡಿದ್ದಾರೆ. ‘ನಾಚಿಕೆಗೇಡಿನ ನಟಿಗೆ ಇಂದು ಎಷ್ಟು ಜನ ಸತ್ತಿದ್ದಾರೆ ಎಂಬುದು ತಿಳಿದಿಲ್ಲ’ ಎಂದು ನೆಟ್ಟಿಗರೊಬ್ಬರು ಖಾರವಾಗಿ ಟೀಕಿಸಿದ್ದಾರೆ. ‘ಮಳೆಯಲ್ಲಿ ಇಂಥ ಶ್ರೀಮಂತರಿಗೆ ಡ್ಯಾನ್ಸ್​ ಮಾಡುವ ಬಯಕೆ. ಬಾಕಿ ಎಲ್ಲರೂ ಚಿಂತೆಯಲ್ಲಿದ್ದಾರೆ. 14 ಜನರು ಸತ್ತಿರುವಾಗ ಡ್ಯಾನ್ಸ್​ ಮಾಡುವ ಅವಶ್ಯಕತೆ ಏನಿದೆ? ಇಂಥವರಿಗೆ ಜನರ ಕಷ್ಟ ಆರ್ಥ ಆಗಲ್ಲ’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ
ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು