Sign In

By signing in or creating an account, you agree with Associated Broadcasting Company's Terms & Conditions and Privacy Policy.

14 ಜನ ಸತ್ತ ದಿನವೇ ಕುಣಿದು ಕುಪ್ಪಳಿಸಿದ ನಟಿ; ಉಗಿಯುತ್ತಿದ್ದಾರೆ ನೆಟ್ಟಿಗರು

ದಯವಿಟ್ಟು ಈ ವಿಡಿಯೋ ಡಿಲೀಟ್​ ಮಾಡಿ ಎಂದು ಅನೇಕರು ಮನ್ನಾರಾ ಚೋಪ್ರಾಗೆ ಕಿವಿಮಾತು ಹೇಳಿದ್ದಾರೆ. ಆದರೆ ಅದಕ್ಕೆ ನಟಿ ಪ್ರತಿಕ್ರಿಯೆ ನೀಡಿಲ್ಲ. ಮುಂಬೈನ ಮಳೆಯಲ್ಲಿ ಅವರು ನಲಿದಾಡಿದ್ದಾರೆ. ಅದೇ ದಿನ ಹಲವರ ಪ್ರಾಣ ಹೋಗಿದೆ. ಮನ್ನಾರಾ ಚೋಪ್ರಾ ಹಂಚಿಕೊಂಡ ರೀಲ್ಸ್​ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.

14 ಜನ ಸತ್ತ ದಿನವೇ ಕುಣಿದು ಕುಪ್ಪಳಿಸಿದ ನಟಿ; ಉಗಿಯುತ್ತಿದ್ದಾರೆ ನೆಟ್ಟಿಗರು
ಮನ್ನಾರಾ ಚೋಪ್ರಾ
Follow us
ಮದನ್​ ಕುಮಾರ್​
|

Updated on: May 14, 2024 | 4:03 PM

ನಟಿ ಮನ್ನಾರಾ ಚೋಪ್ರಾ (Mannara Chopra) ಅವರು ಮಳೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಮಳೆ ಬಂದಿದೆ ಎಂಬ ಖುಷಿಗೆ ಅವರು ಡ್ಯಾನ್ಸ್​ ಮಾಡಿದ್ದಾರೆ. ಬಾಲ್ಕನಿಯಲ್ಲಿ ನೆನೆಯುತ್ತಾ ಅವರು ರೀಲ್ಸ್​ (Mannara Chopra Reels) ಮಾಡಿದ್ದು, ಅದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಇದನ್ನು ಇಷ್ಟಪಡಬಹುದು ಎಂದು ಮನ್ನಾರಾ ಚೋಪ್ರಾ ಊಹಿಸಿದ್ದರು. ಆದರೆ ಆಗಿರುವುದೇ ಬೇರೆ. ನಟಿಯ ರೀಲ್ಸ್​ ನೋಡಿದ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್​ (Troll) ಮಾಡಿದ್ದಾರೆ. ಕಮೆಂಟ್​ಗಳ ಮೂಲಕ ನಟಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಮುಂಬೈ ಜನರಿಗೆ ನಟಿಯ ಈ ರೀಲ್ಸ್​ನಿಂದ ತುಂಬ ಕೋಪ ಬಂದಿದೆ.

ಅಷ್ಟಕ್ಕೂ ಮನ್ನಾರಾ ಚೋಪ್ರಾ ಮಾಡಿದ ತಪ್ಪೇನು? ಮೇ 13ರಂದು ಮನ್ನಾರಾ ಚೋಪ್ರಾ ಅವರು ಚಿತ್ರೀಕರಣದ ನಡುವೆ ಖುಷಿ ಖುಷಿಯಾಗಿ ಡ್ಯಾನ್ಸ್​ ಮಾಡಿದರು. ಮುಂಬೈನಲ್ಲಿ ಈ ವರ್ಷದ ಮೊದಲ ಮಳೆ ಎಂಬ ಕಾರಣಕ್ಕೆ ಅವರು ಇಷ್ಟೆಲ್ಲ ಖುಷಿಯಾಗಿ ಕುಣಿದಾಡಿದ್ದಾರೆ. ಆದರೆ ಅದೇ ದಿನ ಬಿರುಗಾಳಿ ಮತ್ತು ಮಳೆಯ ಅವಾಂತರದಿಂದ ಹಲವರ ಪ್ರಾಣ ಹೋಗಿದೆ.

ಇದನ್ನೂ ಓದಿ: ತಲೆ ಬೋಳಿಸಿಕೊಂಡ್ರಾ ಉರ್ಫಿ ಜಾವೇದ್​? ಫೋಟೋ ನೋಡಿ ಹಿಗ್ಗಾಮುಗ್ಗ ಉಗಿದ ನೆಟ್ಟಿಗರು

ಮುಂಬೈನಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್​ ಬಿಲ್​ಬೋರ್ಡ್​ ನೆಲಕ್ಕೆ ಉರುಳಿದ್ದರಿಂದ 14 ಜನರ ಪ್ರಾಣ ಹೋಗಿದೆ. ಅನೇಕರಿಗೆ ಗಾಯಗಳು ಆಗಿವೆ. ರಕ್ಷಣಾ ಕಾರ್ಯ ನಡೆಯುತ್ತಿದೆ. ಸಾವಿರಾರು ಜನರ ಬದುಕು ಕಷ್ಟದಲ್ಲಿದೆ. ಎಲ್ಲರೂ ಶೋಕದಲ್ಲಿ ಇರುವಾಗ ಮನ್ನಾರಾ ಚೋಪ್ರಾ ಅವರು ಈ ರೀತಿ ಖುಷಿಯಾಗಿ ಮಳೆಯಲ್ಲಿ ಕುಣಿದಾಡಿ ರೀಲ್ಸ್​ ಮಾಡಿರುವುದು ಜನರ ಕೋಪಕ್ಕೆ ಕಾರಣ ಆಗಿದೆ.

View this post on Instagram

A post shared by Mannara Chopra (@memannara)

ಮನ್ನಾರಾ ಚೋಪ್ರಾ ಹಂಚಿಕೊಂಡ ವಿಡಿಯೋ ನೋಡಿದ ಬಹುತೇಕರು ನೆಗೆಟಿವ್​ ಆಗಿ ಕಮೆಂಟ್​ ಮಾಡಿದ್ದಾರೆ. ‘ನಾಚಿಕೆಗೇಡಿನ ನಟಿಗೆ ಇಂದು ಎಷ್ಟು ಜನ ಸತ್ತಿದ್ದಾರೆ ಎಂಬುದು ತಿಳಿದಿಲ್ಲ’ ಎಂದು ನೆಟ್ಟಿಗರೊಬ್ಬರು ಖಾರವಾಗಿ ಟೀಕಿಸಿದ್ದಾರೆ. ‘ಮಳೆಯಲ್ಲಿ ಇಂಥ ಶ್ರೀಮಂತರಿಗೆ ಡ್ಯಾನ್ಸ್​ ಮಾಡುವ ಬಯಕೆ. ಬಾಕಿ ಎಲ್ಲರೂ ಚಿಂತೆಯಲ್ಲಿದ್ದಾರೆ. 14 ಜನರು ಸತ್ತಿರುವಾಗ ಡ್ಯಾನ್ಸ್​ ಮಾಡುವ ಅವಶ್ಯಕತೆ ಏನಿದೆ? ಇಂಥವರಿಗೆ ಜನರ ಕಷ್ಟ ಆರ್ಥ ಆಗಲ್ಲ’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ