AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಐಷಾರಾಮಿ ಕಾರು ಕೇಳುವ ನಟರಿಗೆ ಈ ವಿಡಿಯೋ ತೋರಿಸಿ’: ಸಖತ್​ ಟ್ರೋಲ್​

ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ಪ್ರೀ-ವೆಡ್ಡಿಂಗ್​ ಸಮಾರಂಭಕ್ಕೆ ಬಂದ ಕೆಲವು ಸೆಲೆಬ್ರಿಟಿಗಳಿಗೆ ಮಾತ್ರ ಐಷಾರಾಮಿ ಕಾರ್​ ಕಳಿಸಲಾಗಿತ್ತು. ಇನ್ನುಳಿದವರು ಬಸ್​ನಲ್ಲಿ ಪ್ರಯಾಣ ಮಾಡಿದ್ದರು! ಸೋಶಿಯಲ್​ ಮೀಡಿಯಾದಲ್ಲಿ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಬೇರೆ ಸಂದರ್ಭದಲ್ಲಿ ನಿರ್ಮಾಪಕರ ಮುಂದೆ ಭಾರಿ ಬೇಡಿಕೆಗಳನ್ನು ಇಡುವ ನಟ-ನಟಿಯರನ್ನು ಟ್ರೋಲ್​ ಮಾಡಲಾಗುತ್ತಿದೆ.

‘ಐಷಾರಾಮಿ ಕಾರು ಕೇಳುವ ನಟರಿಗೆ ಈ ವಿಡಿಯೋ ತೋರಿಸಿ’: ಸಖತ್​ ಟ್ರೋಲ್​
ಒಂದೇ ಬಸ್​ನಲ್ಲಿ ಪ್ರಯಾಣ ಮಾಡಿದ ನಟ-ನಟಿಯರು
Follow us
ಮದನ್​ ಕುಮಾರ್​
|

Updated on:Mar 05, 2024 | 9:38 PM

ಅಂಬಾನಿ ಕುಟುಂಬದ ಜೊತೆ ಬಾಲಿವುಡ್​ (Bollywood) ಸೆಲೆಬ್ರಿಟಿಗಳು ಒಡನಾಟ ಹೊಂದಿದ್ದಾರೆ. ಮುಖೇಶ್​ ಅಂಬಾನಿ (Mukesh Ambani) ಹಾಗೂ ನೀತಾ ಅಂಬಾನಿ ದಂಪತಿಯ ಪುತ್ರ ಅನಂತ್​ ಅಂಬಾನಿಯ ಪ್ರೀ-ವೆಡ್ಡಿಂಗ್​ (Anant Ambani pre wedding) ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಈ ಸಮಾರಂಭಕ್ಕೆ ಹಿಂದಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಈ ವೇಳೆ ಹಲವು ನಟ-ನಟಿಯರು ಒಂದೇ ಬಸ್​ನಲ್ಲಿ ಪ್ರಯಾಣ ಮಾಡಿದ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋ ನೋಡಿ ಅನೇಕರು ಟ್ರೋಲ್​ ಮಾಡುತ್ತಿದ್ದಾರೆ. ಖ್ಯಾತ ಲೇಖಕ, ಚಿತ್ರಕಥೆ ಬರಹಗಾರ ಮುಶ್ತಾಖ್​ ಶೇಖ್​ ಅವರು ಕೂಡ ಈ ವಿಡಿಯೋ ನೋಡಿ ಲೇವಡಿ ಮಾಡಿದ್ದಾರೆ.

ಸಾಮಾನ್ಯವಾಗಿ ಬಾಲಿವುಡ್​ನ ಎಲ್ಲ ಸೆಲೆಬ್ರಿಟಿಗಳು ಐಷಾರಾಮಿ ಜೀವನ ನಡೆಸುತ್ತಾರೆ. ಶೂಟಿಂಗ್​ಗೆ ತೆರಳುವಾಗಿ ಐಷಾರಾಮಿ ಕಾರು ಬೇಕು ಎಂದು ಬೇಡಿಕೆ ಇಡುತ್ತಾರೆ. ಶೂಟಿಂಗ್​ ಸ್ಥಳದಲ್ಲಿ ಹಲವು ಸೌಕರ್ಯಗಳು ಇರುವ ಕ್ಯಾರವಾನ್​ ಬೇಕು ಎನ್ನುತ್ತಾರೆ. ಆದರೆ ಅಂಬಾನಿ ಕುಟುಂಬದವರು ಕರೆದಾಗಿ ಜನಸಾಮಾನ್ಯರಂತೆ ಎಲ್ಲರೂ ಒಂದೇ ಬಸ್​ನಲ್ಲಿ ಪ್ರಯಾಣ ಮಾಡಿದ್ದು ಟ್ರೋಲ್​ಗೆ ಕಾರಣ ಆಗಿದೆ.

ಇದನ್ನೂ ಓದಿ: ರಿಯಾನಾಗೂ ಇಷ್ಟವಾಯ್ತು ಒರಿ ಅವತಾರ; ಕಿವಿಯೋಲೆಗೆ ಖ್ಯಾತ ಗಾಯಕಿ ಫಿದಾ

ಅಂಬಾನಿ ಅವರು ಕರೆದರೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಸೇವಕರಂತೆ ಹೋಗುತ್ತಾರೆ ಎಂದು ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ಕಮೆಂಟ್​ ಮಾಡಲಾಗುತ್ತಿದೆ. ಲೇಖಕ, ಚಿತ್ರಕಥೆ ಬರಹಗಾರ ಮುಶ್ತಾಖ್​ ಶೇಖ್​ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್​ ವಿಡಿಯೋ:

‘ನಲ್ಮೆಯ ಬಾಲಿವುಡ್​ ನಿರ್ಮಾಪಕರೇ.. ಇನ್ಮುಂದೆ ಯಾವುದೇ ಸ್ಟಾರ್​ಗಳು ನಿಮ್ಮ ಪರ್ಸನಲ್​ ವ್ಯಾನಿಟಿ ವ್ಯಾನ್​ ಮತ್ತು ಐಷಾರಾಮಿ ಕಾರು ಕೇಳಿದರೆ ಈ ವಿಡಿಯೋ ತೋರಿಸಿ’ ಎಂದು ಅವರು ಪೋಸ್ಟ್​ ಮಾಡಿದ್ದಾರೆ. ಕೆಲವು ಬಾಲಿವುಡ್​ ನಟ-ನಟಿಯರು ಕೂಡ ಈ ಪೋಸ್ಟ್​ನ ಲೈಕ್​ ಮಾಡಿದ್ದಾರೆ!

ಇದನ್ನೂ ಓದಿ: ಅಂಬಾನಿ ಪುತ್ರನ ಪ್ರೀ-ವೆಡ್ಡಿಂಗ್​ ಸಮಾರಂಭದಲ್ಲಿ ಐಶ್ವರ್ಯಾ ರೈ ಮಸ್ತ್​ ಡ್ಯಾನ್ಸ್​

ಮಾರ್ಚ್​ 1ರಿಂದ ಮಾರ್ಚ್​​ 3ರ ತನಕ ಬಹಳ ಅದ್ದೂರಿಯಾಗಿ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ಪ್ರೀ-ವೆಡ್ಡಿಂಗ್​ ಸಮಾರಂಭ ನಡೆಯಿತು. ರಾಮ್​ ಚರಣ್​, ಶಾರುಖ್​ ಖಾನ್​, ಆಮಿರ್​ ಖಾನ್​, ಅಮಿತಾಭ್​ ಬಚ್ಚನ್​, ಜಾನ್ವಿ ಕಪೂರ್​, ಸಲ್ಮಾನ್​ ಖಾನ್, ಸೈಫ್​ ಅಲಿ ಖಾನ್​, ಕರೀನಾ ಕಪೂರ್​ ಖಾನ್​, ಜಾನ್ವಿ ಕಪೂರ್​, ಸುಹಾನಾ ಖಾನ್​, ಅಭಿಷೇಕ್​ ಬಚ್ಚನ್​, ಅಮಿತಾಭ್​ ಬಚ್ಚನ್​, ಐಶ್ವರ್ಯಾ ರೈ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಸಲ್ಮಾನ್​ ಖಾನ್​, ಶಾರುಖ್​ ಖಾನ್​ ಮುಂತಾದವರು ಹಿನ್ನೆಲೆ ಡ್ಯಾನ್ಸರ್​ ಆಗಿ ಕುಣಿದಿರುವ ವಿಡಿಯೋವನ್ನು ಕೂಡ ಟ್ರೋಲ್​ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:37 pm, Tue, 5 March 24

ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ