AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಸಿರುದ್ದೀನ್​ ಶಾ ಜನ್ಮದಿನ: ಕನ್ನಡದಲ್ಲೂ ನಟಿಸಿದ ಈ ಕಲಾವಿದ ಮಾಡಿಕೊಂಡ ವಿವಾದಗಳು ಒಂದೆರೆಡಲ್ಲ

Naseeruddin Shah Birthday: ಬಾಲಿವುಡ್​ ನಟರ ಬಗ್ಗೆ ಮತ್ತು ಸಮಾಜದ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವಲ್ಲಿ ನಾಸಿರುದ್ದೀನ್​ ಶಾ ಎಂದಿಗೂ ಹಿಂಜರಿಕೆ ಮಾಡಿಕೊಂಡಿಲ್ಲ. ಅನೇಕರನ್ನು ಅವರು ಕಟು ಮಾತುಗಳಿಂದ ಟೀಕಿಸಿದ್ದುಂಟು.

ನಾಸಿರುದ್ದೀನ್​ ಶಾ ಜನ್ಮದಿನ: ಕನ್ನಡದಲ್ಲೂ ನಟಿಸಿದ ಈ ಕಲಾವಿದ ಮಾಡಿಕೊಂಡ ವಿವಾದಗಳು ಒಂದೆರೆಡಲ್ಲ
ನಾಸಿರುದ್ದೀನ್ ಶಾ
TV9 Web
| Updated By: ಮದನ್​ ಕುಮಾರ್​|

Updated on:Jul 20, 2022 | 8:14 AM

Share

ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರಲ್ಲಿ ನಾಸಿರುದ್ದೀನ್​ ಶಾ (Naseeruddin Shah) ಕೂಡ ಪ್ರಮುಖರು. ನಟನೆಯಲ್ಲಿ ಎಷ್ಟೋ ಮಂದಿಗೆ ಅವರೇ ಸ್ಫೂರ್ತಿ. ರಂಗಭೂಮಿ ಹಿನ್ನೆಲೆಯಿಂದ ಬಂದ ಅವರು ಅನೇಕ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ನೂರಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರ ನಟನೆ ಅನೇಕರಿಗೆ ಮಾದರಿ ಆಗಿದೆ. ನಾಸಿರುದ್ದೀನ್​ ಶಾ ಅವರಿಗೆ ಇಂದು (ಜುಲೈ 20) ಜನ್ಮದಿನದ ಸಂಭ್ರಮ. ಅವರ 72ನೇ ವರ್ಷದ ಹುಟ್ಟುಹಬ್ಬದ (Naseeruddin Shah Birthday) ಪ್ರಯುಕ್ತ ಅಭಿಮಾನಿಗಳು, ಸೆಲೆಬ್ರಿಟಿಗಳು, ಸ್ನೇಹಿತರು ಶುಭಾಶಯ ಕೋರುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೇ ಹಲವು ವಿವಾದದ (Controversy) ಮೂಲಕವೂ ನಾಸಿರುದ್ದೀನ್​ ಶಾ ಸುದ್ದಿ ಆಗಿದ್ದುಂಟು. ತಮ್ಮ ಮನದ ಮಾತನ್ನು ಅಭಿವ್ಯಕ್ತಿಸುವಾಗ ಅವರು ಯಾವುದೇ ಮುಚ್ಚುಮರೆ ಮಾಡಿಲ್ಲ. ನೇರ ನಡೆ-ನುಡಿಯ ಕಾರಣಕ್ಕೆ ಅವರು ಗಮನ ಸೆಳೆಯುತ್ತಾರೆ.

ಚಿತ್ರರಂಗದಲ್ಲಿ ನಾಸಿರುದ್ದೀನ್​ ಶಾ ಅವರ ಸಾಧನೆ ಅಪಾರ. ಕಲಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ ‘ಪದ್ಮ ಭೂಷಣ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಮೂರು ಬಾರಿ ರಾಷ್ಟ್ರ ಪ್ರಶಸ್ತಿ, ಮೂರು ಫಿಲ್ಮ್​ ಫೇರ್​ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ. ಕನ್ನಡದಲ್ಲೂ ಅವರು ನಟಿಸಿದ್ದಾರೆ. ಗಿರೀಶ್​ ಕಾಸರವಳ್ಳಿ ನಿರ್ದೇಶನದ ‘ಮನೆ’ ಹಾಗೂ ಗಿರೀಶ್​ ಕಾರ್ನಾಡ್-ಬಿವಿ ಕಾರಂತ್​​ ನಿರ್ದೇಶನದ ‘ತಬ್ಬಲಿಯು ನೀನಾದೆ ಮಗನೆ’ ಚಿತ್ರದಲ್ಲಿ ಅವರು ಅಭಿನಯಿಸಿದ್ದಾರೆ.

ಬಾಲಿವುಡ್​ ನಟರ ಬಗ್ಗೆ ಮತ್ತು ಸಮಾಜದ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವಲ್ಲಿ ನಾಸಿರುದ್ದೀನ್​ ಶಾ ಎಂದಿಗೂ ಹಿಂಜರಿಕೆ ಮಾಡಿಕೊಂಡಿಲ್ಲ. ಅನೇಕರನ್ನು ಅವರು ಕಟು ಮಾತುಗಳಿಂದ ಟೀಕಿಸಿದ್ದಾರೆ. ‘ಅನುಪಮ್​ ಖೇರ್ ಒಬ್ಬ ಜೋಕರ್​. ಅವರದ್ದು ಸೈಕೋಪಾತ್​ ವರ್ತನೆ’ ಎಂದು ನಾಸಿರುದ್ದೀನ್ ಶಾ ಆರೋಪಿಸಿದ್ದರು.

ಇದನ್ನೂ ಓದಿ
Image
‘ಗೆಹರಾಯಿಯಾ’ ರಿಲೀಸ್​ ಆದ ಬಳಿಕ ಹೊರಬಿತ್ತು ಸಿನಿಮಾ ತಂಡದ 100 ಕೋಟಿ ರೂಪಾಯಿ ಡೀಲ್​ ವಿಚಾರ
Image
ತಾಲಿಬಾನ್​ ಪರ ಇರುವ ಭಾರತದ ಮುಸ್ಲಿಮರಿಗೆ ನಟ ನಸೀರುದ್ದೀನ್​ ಷಾ ಛೀಮಾರಿ; ವಿಡಿಯೋ ವೈರಲ್​
Image
ನಾಸಿರುದ್ದೀನ್ ಶಾ ಜನ್ಮದಿನ: ಅವರ ಬದುಕಿನ ಕುರಿತು ನಿಮಗೆ ತಿಳಿಯದ ಹಲವು ಸಂಗತಿಗಳು
Image
ಮೂರು ಬಾರಿ ನ್ಯಾಷನಲ್ ಫಿಲ್ಮ್​ ಅವಾರ್ಡ್​ಗೆ ಭಾಜನರಾದ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್​ ಶಾ ಆಸ್ಪತ್ರೆಗೆ ದಾಖಲು..

‘ನಟನೆಯ ಹೊರತಾಗಿ ದಿಲೀಪ್​ ಕುಮಾರ್​ ಅವರು ಹೆಚ್ಚೇನೂ ಮಾಡಿಲ್ಲ. ಬೇರೆ ವಿಚಾರದಲ್ಲಿ ಬಾಲಿವುಡ್​ಗೆ ಅವರಿಂದ ಕೊಡುಗೆ ಸಿಕ್ಕಿಲ್ಲ’ ಎಂದು ನಾಸಿರುದ್ದೀನ್​ ಶಾ ಅಭಿಪ್ರಾಯಪಟ್ಟಿದ್ದರು. ಕ್ರಿಕೆಟಿಗ ವಿರಾಟ್​ ಕೊಯ್ಲಿ ಬಗ್ಗೆಯೂ ಅವರು ಕಟುವಾದ ಹೇಳಿಕೆ ನೀಡಿದ್ದರು. ‘ಕೊಯ್ಲಿ ಅವರು ಪ್ರಪಂಚದ ಬೆಸ್ಟ್​ ಆಟಗಾರ ಮಾತ್ರವಲ್ಲ, ಪ್ರಪಂಚದಲ್ಲಿ ಅತಿ ಕೆಟ್ಟದಾಗಿ ವರ್ತಿಸುವ ಆಟಗಾರ ಕೂಡ ಹೌದು’ ಎಂದು ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು. ಇಂಥ ಹಲವು ಕಾರಣಗಳಿಂದಾಗಿ ನಾಸಿರುದ್ದೀನ್​ ಶಾ ಅವರು ವಿವಾದ ಮಾಡಿಕೊಂಡಿದ್ದುಂಟು.

Published On - 8:14 am, Wed, 20 July 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ