AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ಬಾರಿ ನ್ಯಾಷನಲ್ ಫಿಲ್ಮ್​ ಅವಾರ್ಡ್​ಗೆ ಭಾಜನರಾದ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್​ ಶಾ ಆಸ್ಪತ್ರೆಗೆ ದಾಖಲು..

Naseeruddin Shah: ಮೂಲತಃ ಉತ್ತರಪ್ರದೇಶದ ಬಾರ್ಬಂಕಿಯವರಾದ ನಾಸಿರುದ್ದೀನ್​ ಶಾ ಪ್ರತಿಭಾವಂತ ನಟ. ತಮ್ಮ ಸಿನಿವೃತ್ತಿ ಜೀವನದಲ್ಲಿ ಮೂರು ನ್ಯಾಷನಲ್ ಫಿಲ್ಮ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಕೊನೇಬಾರಿಗೆ ಕಾಣಿಸಿಕೊಂಡಿದ್ದು 2020ರ ನಾಟಕ ‘ಮೀ ರಕ್ಸಮ್​’ನಲ್ಲಿ.

ಮೂರು ಬಾರಿ ನ್ಯಾಷನಲ್ ಫಿಲ್ಮ್​ ಅವಾರ್ಡ್​ಗೆ ಭಾಜನರಾದ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್​ ಶಾ ಆಸ್ಪತ್ರೆಗೆ ದಾಖಲು..
ನಾಸಿರುದ್ದೀನ್ ಶಾ (ಫೈಲ್ ಚಿತ್ರ)
TV9 Web
| Edited By: |

Updated on: Jun 30, 2021 | 2:36 PM

Share

ಮುಂಬೈ: ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್ ಶಾ (70) ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದ್ದು, ಸದ್ಯ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಪತ್ನಿ, ನಟಿ ರತ್ನಾ ಪಾಠಕ್​ ಶಾ ತಿಳಿಸಿದ್ದಾರೆ. ನಾಸಿರುದ್ದೀನ್​ ಶಾ ನ್ಯುಮೋನಿಯಾದಿಂದ ಬಳಲುತ್ತಿದ್ದು, ಭಯಪಡುವಂತಹ ಸನ್ನಿವೇಶ ಇಲ್ಲ. ವೈದ್ಯರು ನೀಡುತ್ತಿರುವ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸದ್ಯದಲ್ಲೇ ಡಿಸ್​ಚಾರ್ಜ್ ಆಗಲಿದ್ದಾರೆಂದು ರತ್ನಾ ಪಾಠಕ್​ ಹೇಳಿದ್ದಾರೆ.

ಮೂಲತಃ ಉತ್ತರಪ್ರದೇಶದ ಬಾರ್ಬಂಕಿಯವರಾದ ನಾಸಿರುದ್ದೀನ್​ ಶಾ ಪ್ರತಿಭಾವಂತ ನಟ. ತಮ್ಮ ಸಿನಿವೃತ್ತಿ ಜೀವನದಲ್ಲಿ ಮೂರು ನ್ಯಾಷನಲ್ ಫಿಲ್ಮ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಕೊನೇಬಾರಿಗೆ ಕಾಣಿಸಿಕೊಂಡಿದ್ದು 2020ರ ನಾಟಕ ‘ಮೀ ರಕ್ಸಮ್​’ನಲ್ಲಿ. ಅದಕ್ಕೂ ಮೊದಲು Bandish Bandits ಎಂಬ ವೆಬ್​ಸೀರಿಸ್​​ನಲ್ಲಿ ಅಭಿನಯಿಸಿ, ಸಿಕ್ಕಾಪಟೆ ಜನಮೆಚ್ಚುಗೆ ಗಳಿಸಿದ್ದರು. ಇದರಲ್ಲಿ ರಿತ್ವಿಕ್​ ಭೌಮಿಕ್​, ಶ್ರೇಯಾ ಚೌಧರಿ ಮತ್ತು ಇತ್ತೀಚೆಗಷ್ಟೇ ನಿಧನರಾದ ಅಮಿತ್​ ಮಿಸ್ಟ್ರಿ ಕೂಡ ಅಭಿನಯಸಿದ್ದಾರೆ.

ನಾಸಿರುದ್ದೀನ್ ಶಾ ಅವರ ಮಾಸೂಮ್​, ಸರ್ಫ್​ರೋಷ್​, ಇಕ್ಬಾಲ್​, ಮಾನ್ಸೂನ್​ ವೆಡ್ಡಿಂಗ್​, ಮಕ್ಬೂಲ್​​ ಸೇರಿ ಹಲವು ಸಿನಿಮಾಗಳು ಮೆಚ್ಚುಗೆಗಳಿಸಿದ್ದವು. ವಿಮರ್ಶಕರೂ ಸಹ ಈ ಸಿನಿಮಾಗಳನ್ನು ತುಂಬ ಪಾಸಿಟಿವ್​ ಆಗಿ ವಿಮರ್ಶಿಸಿದ್ದರು. ಇವರು ಮೊದಲ ನ್ಯಾಷನಲ್​ ಫಿಲ್ಮ್​ ಅವಾರ್ಡ್​​ನ್ನು 1979ರಲ್ಲಿ ಸ್ಪರ್ಶ್​ ಸಿನಿಮಾದ ಅಭಿನಯಕ್ಕಾಗಿ ಪಡೆದಿದ್ದಾರೆ. ಎರಡನೇ ನ್ಯಾಷನಲ್​ ಅವಾರ್ಡ್​ನ್ನು 1984ರಲ್ಲಿ ಪಾರ್​​ ಸಿನಿಮಾಕ್ಕಾಗಿ ಮತ್ತು ಮೂರನೇ ಬಾರಿಗೆ ಈ ಅವಾರ್ಡ್​ನ್ನು 2005ರಲ್ಲಿ ಇಕ್ಬಾಲ್​​ ಸಿನಿಮಾದ ಅಭಿನಯಕ್ಕಾಗಿ ಪಡೆದಿದ್ದಾರೆ.

ಇದನ್ನೂ ಓದಿ: Garuda Purana: ಮರಣಾನಂತರ ಸುಮಾರು 12 ಲಕ್ಷ ಕಿ.ಮೀ ದೂರ ಕ್ರಮಿಸುತ್ತವೆ ಆತ್ಮ; ಎದುರಾಗುವ ಕಷ್ಟಗಳು ಎಂಥವು ಗೊತ್ತಾ?

(Noted Actor Naseeruddin Shah Admitted In Mumbai Hospital With Pneumonia)

Follow Us
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ
ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!
ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು