AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ಬಾರಿ ನ್ಯಾಷನಲ್ ಫಿಲ್ಮ್​ ಅವಾರ್ಡ್​ಗೆ ಭಾಜನರಾದ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್​ ಶಾ ಆಸ್ಪತ್ರೆಗೆ ದಾಖಲು..

Naseeruddin Shah: ಮೂಲತಃ ಉತ್ತರಪ್ರದೇಶದ ಬಾರ್ಬಂಕಿಯವರಾದ ನಾಸಿರುದ್ದೀನ್​ ಶಾ ಪ್ರತಿಭಾವಂತ ನಟ. ತಮ್ಮ ಸಿನಿವೃತ್ತಿ ಜೀವನದಲ್ಲಿ ಮೂರು ನ್ಯಾಷನಲ್ ಫಿಲ್ಮ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಕೊನೇಬಾರಿಗೆ ಕಾಣಿಸಿಕೊಂಡಿದ್ದು 2020ರ ನಾಟಕ ‘ಮೀ ರಕ್ಸಮ್​’ನಲ್ಲಿ.

ಮೂರು ಬಾರಿ ನ್ಯಾಷನಲ್ ಫಿಲ್ಮ್​ ಅವಾರ್ಡ್​ಗೆ ಭಾಜನರಾದ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್​ ಶಾ ಆಸ್ಪತ್ರೆಗೆ ದಾಖಲು..
ನಾಸಿರುದ್ದೀನ್ ಶಾ (ಫೈಲ್ ಚಿತ್ರ)
TV9 Web
| Edited By: |

Updated on: Jun 30, 2021 | 2:36 PM

Share

ಮುಂಬೈ: ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್ ಶಾ (70) ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದ್ದು, ಸದ್ಯ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಪತ್ನಿ, ನಟಿ ರತ್ನಾ ಪಾಠಕ್​ ಶಾ ತಿಳಿಸಿದ್ದಾರೆ. ನಾಸಿರುದ್ದೀನ್​ ಶಾ ನ್ಯುಮೋನಿಯಾದಿಂದ ಬಳಲುತ್ತಿದ್ದು, ಭಯಪಡುವಂತಹ ಸನ್ನಿವೇಶ ಇಲ್ಲ. ವೈದ್ಯರು ನೀಡುತ್ತಿರುವ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸದ್ಯದಲ್ಲೇ ಡಿಸ್​ಚಾರ್ಜ್ ಆಗಲಿದ್ದಾರೆಂದು ರತ್ನಾ ಪಾಠಕ್​ ಹೇಳಿದ್ದಾರೆ.

ಮೂಲತಃ ಉತ್ತರಪ್ರದೇಶದ ಬಾರ್ಬಂಕಿಯವರಾದ ನಾಸಿರುದ್ದೀನ್​ ಶಾ ಪ್ರತಿಭಾವಂತ ನಟ. ತಮ್ಮ ಸಿನಿವೃತ್ತಿ ಜೀವನದಲ್ಲಿ ಮೂರು ನ್ಯಾಷನಲ್ ಫಿಲ್ಮ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಕೊನೇಬಾರಿಗೆ ಕಾಣಿಸಿಕೊಂಡಿದ್ದು 2020ರ ನಾಟಕ ‘ಮೀ ರಕ್ಸಮ್​’ನಲ್ಲಿ. ಅದಕ್ಕೂ ಮೊದಲು Bandish Bandits ಎಂಬ ವೆಬ್​ಸೀರಿಸ್​​ನಲ್ಲಿ ಅಭಿನಯಿಸಿ, ಸಿಕ್ಕಾಪಟೆ ಜನಮೆಚ್ಚುಗೆ ಗಳಿಸಿದ್ದರು. ಇದರಲ್ಲಿ ರಿತ್ವಿಕ್​ ಭೌಮಿಕ್​, ಶ್ರೇಯಾ ಚೌಧರಿ ಮತ್ತು ಇತ್ತೀಚೆಗಷ್ಟೇ ನಿಧನರಾದ ಅಮಿತ್​ ಮಿಸ್ಟ್ರಿ ಕೂಡ ಅಭಿನಯಸಿದ್ದಾರೆ.

ನಾಸಿರುದ್ದೀನ್ ಶಾ ಅವರ ಮಾಸೂಮ್​, ಸರ್ಫ್​ರೋಷ್​, ಇಕ್ಬಾಲ್​, ಮಾನ್ಸೂನ್​ ವೆಡ್ಡಿಂಗ್​, ಮಕ್ಬೂಲ್​​ ಸೇರಿ ಹಲವು ಸಿನಿಮಾಗಳು ಮೆಚ್ಚುಗೆಗಳಿಸಿದ್ದವು. ವಿಮರ್ಶಕರೂ ಸಹ ಈ ಸಿನಿಮಾಗಳನ್ನು ತುಂಬ ಪಾಸಿಟಿವ್​ ಆಗಿ ವಿಮರ್ಶಿಸಿದ್ದರು. ಇವರು ಮೊದಲ ನ್ಯಾಷನಲ್​ ಫಿಲ್ಮ್​ ಅವಾರ್ಡ್​​ನ್ನು 1979ರಲ್ಲಿ ಸ್ಪರ್ಶ್​ ಸಿನಿಮಾದ ಅಭಿನಯಕ್ಕಾಗಿ ಪಡೆದಿದ್ದಾರೆ. ಎರಡನೇ ನ್ಯಾಷನಲ್​ ಅವಾರ್ಡ್​ನ್ನು 1984ರಲ್ಲಿ ಪಾರ್​​ ಸಿನಿಮಾಕ್ಕಾಗಿ ಮತ್ತು ಮೂರನೇ ಬಾರಿಗೆ ಈ ಅವಾರ್ಡ್​ನ್ನು 2005ರಲ್ಲಿ ಇಕ್ಬಾಲ್​​ ಸಿನಿಮಾದ ಅಭಿನಯಕ್ಕಾಗಿ ಪಡೆದಿದ್ದಾರೆ.

ಇದನ್ನೂ ಓದಿ: Garuda Purana: ಮರಣಾನಂತರ ಸುಮಾರು 12 ಲಕ್ಷ ಕಿ.ಮೀ ದೂರ ಕ್ರಮಿಸುತ್ತವೆ ಆತ್ಮ; ಎದುರಾಗುವ ಕಷ್ಟಗಳು ಎಂಥವು ಗೊತ್ತಾ?

(Noted Actor Naseeruddin Shah Admitted In Mumbai Hospital With Pneumonia)

Follow Us
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ