AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶ್ವರ್ಯಾ ಜೊತೆ ಡೇಟಿಂಗ್; ವಿವೇಕ್ ಒಬೆರಾಯ್ ಕರಿಯರ್ ಮುಗಿಸಿದ್ದ ಸಲ್ಮಾನ್ ಖಾನ್  

ಐಶ್ವರ್ಯಾ ರೈ ಅವರ ಸುದ್ದಿಗೆ ಯಾರೇ ಹೋದರೂ ಸಲ್ಮಾನ್ ಖಾನ್ ಸುಮ್ಮನೆ ಇರುತ್ತಿರಲಿಲ್ಲ. ಅಷ್ಟೊಂದು ದ್ವೇಷವನ್ನು ಅವರು ಸಾಧಿಸುತ್ತಿದ್ದರು. ಐಶ್ವರ್ಯಾ ರೈ ಅವರ ಜೊತೆ ವಿವೆಕ್ ಒಬೆರಾಯ್ ಡೇಟಿಂಗ್ ಮಾಡುತ್ತಿದ್ದರು. ಇದರಿಂದ ಅವರ ವೃತ್ತಿ ಬದುಕು ಸಂಕಷ್ಟಕ್ಕೆ ಒಳಗಾಗಿತ್ತು.

ಐಶ್ವರ್ಯಾ ಜೊತೆ ಡೇಟಿಂಗ್; ವಿವೇಕ್ ಒಬೆರಾಯ್ ಕರಿಯರ್ ಮುಗಿಸಿದ್ದ ಸಲ್ಮಾನ್ ಖಾನ್  
ಐಶ್ವರ್ಯಾ ಜೊತೆ ಡೇಟಿಂಗ್; ವಿವೇಕ್ ಒಬೆರಾಯ್ ಕರಿಯರ್ ಮುಗಿಸಿದ್ದ ಸಲ್ಮಾನ್ ಖಾನ್  
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 03, 2024 | 7:45 AM

Share

ವಿವೇಕ್ ಒಬೆರಾಯ್ ಅವರು ಬಾಲಿವುಡ್​ನ ಬೇಡಿಕೆಯ ಹೀರೋ ಎನಿಸಿಕೊಂಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಎಲ್ಲವೂ ಊಹಿಸಿದಂತೆ ನಡೆಯಬೇಕಲ್ಲ ಅಲ್ಲವೇ? ವಿವೇಕ್ ಒಬೆರಾಯ್ ಅವರು ಕೆಲವೇ ವರ್ಷಗಳಲ್ಲಿ ಮೂಲೆಗುಂಪಾದರು. ಇದಕ್ಕೆ ಕಾರಣ ಸಲ್ಮಾನ್ ಖಾನ್ ಎಂಬುದು ಅನೇಕರಿಗೆ ತಿಳಿದಿಲ್ಲ. ವಿವೇಕ್ ಜೀವನದಲ್ಲಿ ಮಾಡಿದ ಒಂದು ತಪ್ಪಿನಿಂದಾಗಿ ಸಾಕಷ್ಟು ತೊಂದರೆ ಅನುಭವಿಸಬೇಕಾಗಿ ಬಂದಿತ್ತಂತೆ. ಇದನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದರು.

ವಿವೇಕ್ ಒಬೆರಾಯ್ ಅವರು ನಟಿಸಿದ ಮೊದಲ ಚಿತ್ರ ‘ಕಂಪನಿ’. ಈ ಸಿನಿಮಾನ ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿದ್ದರು. ಈ ಚಿತ್ರ ರಿಲೀಸ್ ಆಗಿದ್ದು 2002ರಲ್ಲಿ. ಈ ಸಿನಿಮಾದಿಂದ ಅವರು ದೊಡ್ಡ ಮಟ್ಟದ ಯಶಸ್ಸು ಕಂಡರು. ಆ ಬಳಿಕ ‘ಸಾತಿಯಾ’ ಸಿನಿಮಾ ಮೂಲಕ ಎಲ್ಲರ ಮನ ಸೆಳೆದರು. ಅಂದುಕೊಂಡಂತೆ ನಡೆದಿದ್ದರೆ ಅವರು ಅಕ್ಷಯ್, ಅಜಯ್ ದೇವಗನ್ ರೀತಿ ಮಿಂಚುತ್ತಿದ್ದರೇನೋ. ಆದರೆ, ಅವರ ಕರಿಯರ್ ಉಲ್ಟಾ ಆಯಿತು.

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಪರಸ್ಪರ ಪ್ರಿತಿಸುತ್ತಿದ್ದರು. ಆದರೆ, ಅವರ ಬ್ರೇಕಪ್ ಆಯಿತು. ಕೊನೆಗೆ ಐಶ್ವರ್ಯಾ ಅವರು ಆಕರ್ಷಿತಗೊಂಡಿದ್ದು ವಿವೇಕ್ ಅವರಿಂದ. ಇಬ್ಬರೂ ಡೇಟಿಂಗ್ ಆರಂಭಿಸಿದರು. ಈ ಸುದ್ದಿ ಸಲ್ಮಾನ್ ಖಾನ್ ಕಿವಿಗೆ ಬಿತ್ತು. ಸಲ್ಮಾನ್ ಖಾನ್ ಅವರು ಆಗಲೇ ಬಾಲಿವುಡ್​ನ ಪ್ರಭಾವಿ ವ್ಯಕ್ತಿ ಎನಿಸಿಕೊಂಡಿದ್ದರು. ಹೀಗಾಗಿ, ತಮ್ಮ ಪ್ರಭಾವ ಬಳಸಿ ವಿವೇಕ್ ಅವರ ವೃತ್ತಿ ಬದುಕನ್ನೇ ಮುಳುಗಿಸಿದ್ದರು.

ವಿವೇಕ್ ಅವರಿಗೆ ಅಂದುಕೊಂಡ ರೀತಿಯ ಆಫರ್​ಗಳು ಬರಲಿಲ್ಲ. ಈ ಬಗ್ಗೆ ಅವರು ಕೂಡ ಮಾತನಾಡಿದ್ದರು. ‘ಸಿನಿಮಾ ಸೋಲುತ್ತದೆ ಅನ್ನೋದು ಒಂದು ವಿಚಾರ. ಆದರೆ, ಮತ್ತೆ ಮತ್ತೆ ಅದೇ ಆಗುತ್ತದೆ ಎಂದಾಗ ನೀವು ಅಸಹಾಯಕರಾಗುತ್ತೀರಿ. ನಿಮ್ಮನ್ನು ಸಿನಿಮಾಗಳಿಂದ ತೆಗೆದು ಹಾಕಲಾಗುತ್ತದೆ. ಅದು ತುಂಬಾನೇ ಫ್ರಸ್ಟ್ರೇಟಿಂಗ್. ಏನೋ ಆಗುತ್ತಿದೆ ಅನ್ನೋದು ಗೊತ್ತಿರುತ್ತದೆ. ಆದರೆ, ಏನೂ ಮಾಡಲು ಸಾಧ್ಯವಾಗುವುದಿಲ್ಲ’ ಎಂದಿದ್ದರು ಅವರು.

ಹಾಗಾದರೆ ಇದರ ಹಿಂದಿನ ಕಾರಣ ಏನು? ಇದಕ್ಕೆ ವಿವೇಕ್ ಅವರು ಓಪನ್ ಆಗಿ ಉತ್ತರ ನೀಡಿದ್ದರು. ‘ಇದು ಸಣ್ಣ ಇಂಡಸ್ಟ್ರಿ. ಇದು ಓಪನ್ ಸೀಕ್ರೆಟ್’ ಎಂದಿದ್ದಾರೆ. ಈ ಮೂಲಕ ತಾವು ಸಿನಿಮಾ ಕಳೆದುಕೊಳ್ಳಲು ಸಲ್ಮಾನ್ ಖಾನ್ ನೇರ ಕಾರಣ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಿಜಕ್ಕೂ ಐಶ್ವರ್ಯಾ ರೈ ವಿರುದ್ಧ ದ್ವೇಷ ಸಾಧಿಸಿದ್ದರಾ ಸಲ್ಲು? ತಮ್ಮ ಕೊಟ್ಟಿದ್ದ ಸ್ಪಷ್ಟನೆಯಲ್ಲಿ ಏನಿತ್ತು?

ಐಶ್ವರ್ಯಾ ರೈಗೆ ಮದುವೆ ಆಗಿ ಹಲವು ವರ್ಷಗಳು ಕಳೆದಿವೆ. ಸಲ್ಮಾನ್ ಕೂಡ ಬ್ಯಾಚುಲರ್ ಆಗಿಯೇ ಮುಂದುವರಿದಿದ್ದಾರೆ. ವಿವೇಕ್ ಒಬೆರಾಯ್ ಕೂಡ ಎಲ್ಲವನ್ನೂ ಮರೆತಿದ್ದಾರೆ. ಅವರಿಗೆ ವೆಬ್ ಸೀರಿಸ್​ಗಳಲ್ಲಿ ನಟಿಸೋ ಚಾನ್ಸ್ ಸಿಗುತ್ತಿದೆ. 2022ರ ಬಳಿಕ ಯಾವುದೇ ಸಿನಿಮಾಗಳಲ್ಲಿ ಅವರು ನಟಿಸಿಲ್ಲ. 2024ರಲ್ಲಿ ರಿಲೀಸ್ ಆದ ‘ಇಂಡಿಯನ್ ಪೋಲಿಸ್ ಫೋರ್ಸ್’ ಸರಣಿಯಲ್ಲಿ ಅವರು ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು