AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯ ರಾತ್ರಿ ಕ್ಯಾಬ್​ ಚಾಲಕನ ವರ್ತನೆಗೆ ಶಾಕ್​ ಆದ 21 ವರ್ಷದ ಯುವತಿ; ಇದು ಭಯಾನಕ ಎಂದ ನಟಿ

‘21ರ ಪ್ರಾಯದ ನನ್ನ ಸಂಬಂಧಿಗೆ ಆದ ಈ ಘಟನೆ ನಿಜಕ್ಕೂ ಭಯಾನಕ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಶಬಾನಾ ಆಜ್ಮಿ ಅವರು ಟ್ವೀಟ್​ ಮಾಡಿದ್ದಾರೆ.

ಮಧ್ಯ ರಾತ್ರಿ ಕ್ಯಾಬ್​ ಚಾಲಕನ ವರ್ತನೆಗೆ ಶಾಕ್​ ಆದ 21 ವರ್ಷದ ಯುವತಿ; ಇದು ಭಯಾನಕ ಎಂದ ನಟಿ
ಮೇಘನಾ, ಶಬಾನಾ ಆಜ್ಮಿ
TV9 Web
| Edited By: |

Updated on:Feb 27, 2022 | 12:16 PM

Share

ಮಧ್ಯ ರಾತ್ರಿ ಪ್ರಯಾಣ ಮಾಡುವುದು ಕಷ್ಟಕರ. ಸದಾ ಜಾಗೃತವಾಗಿರುವ ಮಹಾನಗರಗಳಲ್ಲಿ ಕೂಡ ರಾತ್ರಿ ಸಮಯ ಭಯ ಹುಟ್ಟಿಸುತ್ತದೆ. ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ತೆರಳಲು ಸರಿಯಾಗಿ ವಾಹನಗಳು ಸಿಗುವುದಿಲ್ಲ. ಕೆಲವು ರಸ್ತೆಗಳಲ್ಲಿ ಜನರೇ ಇರುವುದಿಲ್ಲ. ಅಂಥ ಕಡೆಗಳಲ್ಲಿ ಬೀದಿ ದೀಪಗಳು ಕೆಟ್ಟು ಹೋಗಿದ್ದರೆ ಅಲ್ಲಿ ಸಂಚರಿಸುವಾಗ ಎದೆಯಲ್ಲಿ ಢವ ಢವ ಎನ್ನುತ್ತದೆ. ಇಂಥ ಪರಿಸ್ಥಿತಿಯಲ್ಲಿ ಜನರು ಹೆಚ್ಚಾಗಿ ಅವಲಂಬಿಸುವುದು ಕ್ಯಾಬ್​ಗಳನ್ನು. ಕ್ಯಾಬ್​ ಚಾಲಕರು (Cab Driver) ಪ್ರಯಾಣಿಕರನ್ನು ಸೇಫ್​ ಮನೆ ಬಾಗಿಲಿನವರೆಗೆ ತಲುಪಿಸುತ್ತಾರೆ ಎಂಬ ಧೈರ್ಯ ಇರುತ್ತದೆ. ಆದರೆ ಕ್ಯಾಬ್​ ಚಾಲಕರೇ ನಡುರಸ್ತೆಯಲ್ಲಿ ಕೈ ಕೊಟ್ಟರೆ? ಅಂಥ ಒಂದು ಘಟನೆ ಮುಂಬೈನಲ್ಲಿ (Mumbai) ನಡೆದಿದೆ. ಆ ಬಗ್ಗೆ ಬಾಲಿವುಡ್​ನ ಹಿರಿಯ ನಟಿ ಶಬಾನಾ ಆಜ್ಮಿ (Shabana Azmi) ಅವರು ಟ್ವೀಟ್​ ಮಾಡಿದ್ದಾರೆ. ಶಬಾನಾ ಅವರ ಸಂಬಂಧಿಯೊಬ್ಬರಿಗೆ ಇಂಥ ಕೆಟ್ಟ ಅನುಭವ ಆಗಿದೆ. 21ರ ಪ್ರಾಯದ ಯುವತಿಗೆ ಕ್ಯಾಬ್​ ಚಾಲಕನಿಂದ ಎದುರಾದ ಕಷ್ಟದ ಪರಿಸ್ಥಿತಿಯನ್ನು ‘ಭಯಾನಕ’ ಎಂದು ಶಬಾನಾ ಹೇಳಿದ್ದಾರೆ. ಆ ರೀತಿ ನಡೆದುಕೊಂಡ ಕ್ಯಾಬ್​ ಕಂಪನಿಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಶಬಾನಾ ಆಜ್ಮಿ ಅವರ ಸಂಬಂಧಿ ಮೇಘನಾ ವಿಶ್ವಕರ್ಮ ಅವರು ಇತ್ತೀಚೆಗೆ ಮುಂಬೈನಲ್ಲಿ ಮಧ್ಯರಾತ್ರಿ ಪ್ರಯಾಣ ಮಾಡುತ್ತಿದ್ದರು. ಅದಕ್ಕಾಗಿ ಅವರು ಕ್ಯಾಬ್​ ಬುಕ್​ ಮಾಡಿದ್ದರು. ರೈಡ್​ ಅಕ್ಸೆಪ್ಟ್​ ಮಾಡಿದ ಆ ಕ್ಯಾಬ್​ ಚಾಲಕ 5 ನಿಮಿಷದ ಬಳಿಕ ಮನಸ್ಸು ಬದಲಾಯಿಸಿದ. ಮುಂದಿನ ದಾರಿಯಲ್ಲಿ ಟ್ರಾಫಿಕ್​ ಇರೋದರಿಂದ ತಾನು ಮನೆ ಸೇರುವುದು ಲೇಟ್​ ಆಗಬಹುದು ಅಂತ ಆತನಿಗೆ ಅನಿಸಿತು. ಕೂಡಲೇ ಮೇಘನಾ ಅವರನ್ನು ಕ್ಯಾಬ್​ನಿಂದ ಕೆಳಗೆ ಇಳಿಯುವಂತೆ ಆತ ಸೂಚಿಸಿದ. ಆ ಘಟನೆಯನ್ನು ಮೇಘನಾ ವಿವರಿಸಿದ್ದಾರೆ.

‘ದಾದರ್​ ಬ್ರಿಡ್ಜ್​ ಸಮೀಪ ಆತ ನನ್ನನ್ನು ಕೆಳಗೆ ಇಳಿಸಿದ. ಆಗ ಮಧ್ಯ ರಾತ್ರಿ ಆಗಿತ್ತು. ಆ ಸಮಯದಲ್ಲಿ ಇನ್ನೊಂದು ಕ್ಯಾಬ್​ ಸಿಗುವುದು ಕೂಡ ಕಷ್ಟ. ನಂತರ ಬ್ರಿಡ್ಜ್​ ಮೇಲಿಂದ ನಾನು ದಾದರ್​ ಮಾರ್ಕೆಟ್​ ತನಕ ನಡೆದುಕೊಂಡು ಹೋದೆ. ನಾನು ತಲುಪಬೇಕಾಗಿದ್ದ ಸ್ಥಳಕ್ಕೆ ರೀಚ್​ ಆಗಲು 2 ಗಂಟೆ ಬೇಕಾಯಿತು’ ಎಂದು ವಿವರಿಸಿರುವ ಮೇಘನಾ ಅವರು ಚಾಲಕನ ವಿವರವನ್ನೂ ಪೋಸ್ಟ್​ ಮಾಡಿದ್ದಾರೆ.

ಮೇಘನಾ ಎದುರಾದ ಪರಿಸ್ಥಿತಿಯನ್ನು ‘ಭಯಾನಕ’ ಎಂದು ಶಬಾನಾ ಆಜ್ಮಿ ಹೇಳಿದ್ದಾರೆ. ‘21ರ ಪ್ರಾಯದ ನನ್ನ ಸಂಬಂಧಿಗೆ ಆದ ಈ ಘಟನೆ ನಿಜಕ್ಕೂ ಭಯಾನಕ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಟ್ವೀಟ್​ ಮಾಡಿದ್ದಾರೆ. ಈ ವಿಷಯದ ಕುರಿತು ನೆಟ್ಟಿಗರು ಪರ-ವಿರೋಧ ಅಭಿಪ್ರಾಯ ತಿಳಿಸುತ್ತಿದ್ದಾರೆ. ಕಮೆಂಟ್​ಗಳ ಮೂಲಕ ಚರ್ಚೆ ಮಾಡುತ್ತಿದ್ದಾರೆ.

ಶಬಾನಾ ಆಜ್ಮಿ ಮನೆಯಲ್ಲಿ ಮದುವೆ ಸಡಗರ:

ಜಾವೇದ್​ ಅಖ್ತರ್​ ಮತ್ತು ಶಬಾನಾ ಆಜ್ಮಿ ದಂಪತಿಯ ಪುತ್ರ ಫರ್ಹಾನ್​ ಅಖ್ತರ್​ ಅವರು ಬಹುಕಾಲದ ಗೆಳತಿ ಶಿಬಾನಿ ದಂಡೇಕರ್​ ಜೊತೆಗೆ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶಬಾನಾ ಆಜ್ಮಿ-ಜಾವೇದ್​ ಅಖ್ತರ್​ ಅವರ ಖಂಡಾಲದ ಮನೆಯಲ್ಲಿ ಮದುವೆ ನೆರವೇರಿತು. ಈ ಸಮಾರಂಭಕ್ಕೆ ಕೆಲವೇ ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಬಳಿಕ ಮುಂಬೈನಲ್ಲಿ ಅದ್ದೂರಿಯಾಗಿ ಪಾರ್ಟಿ ನೀಡಲಾಗಿದ್ದು, ಅದರಲ್ಲಿ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದರು.

ಇದನ್ನೂ ಓದಿ:

Shabana Azmi: ಆಲ್ಕೋಹಾಲ್​ ಆರ್ಡರ್​ ಮಾಡಿದ ಶಬಾನಾ ಆಜ್ಮಿಗೆ ಮೋಸ; ಪೊಲೀಸರ ಮೊರೆ ಹೋದ ಖ್ಯಾತ ನಟಿ

ಎರಡನೇ ಮದುವೆ ಮಾಡಿಕೊಂಡ ಫರ್ಹಾನ್​ ಅಖ್ತರ್​; ಪ್ರೇಯಸಿ ಶಿಬಾನಿ​ ಜತೆ ಸಿಂಪಲ್​ ವಿವಾಹ

Published On - 11:59 am, Sun, 27 February 22

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ