AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mannat: ಅರೆಸ್ಟ್​ ಆಗುವ ಮುನ್ನ 8 ಗಂಟೆಗಳ ಕಾಲ ಶಾರುಖ್​ ಮನೆ ಒಳಗೆ ಅಡಗಿ ಕುಳಿತಿದ್ದ ಇಬ್ಬರು ಫ್ಯಾನ್ಸ್​

Shah Rukh Khan | Mannat: ರಾತ್ರಿ 3 ಗಂಟೆಗೆ ‘ಮನ್ನತ್​’ ಬಂಗಲೆಯ ಕಾಂಪೌಂಡ್​ ಹಾರಿ ಇಬ್ಬರು ಅಭಿಮಾನಿಗಳು ಒಳಗೆ ಬಂದರು. ಮರುದಿನ ಬೆಳಗ್ಗೆ 10.30ರ ಸುಮಾರಿಗೆ ಅವರಿಬ್ಬರನ್ನು ಮೇಕಪ್​ ರೂಮ್​ನಲ್ಲಿ ನೋಡಿ ಶಾರುಖ್​ ಖಾನ್​ಗೆ ಅಚ್ಚರಿ ಆಯಿತು.

Mannat: ಅರೆಸ್ಟ್​ ಆಗುವ ಮುನ್ನ 8 ಗಂಟೆಗಳ ಕಾಲ ಶಾರುಖ್​ ಮನೆ ಒಳಗೆ ಅಡಗಿ ಕುಳಿತಿದ್ದ ಇಬ್ಬರು ಫ್ಯಾನ್ಸ್​
ಶಾರುಖ್ ಖಾನ್
ಮದನ್​ ಕುಮಾರ್​
|

Updated on:Mar 08, 2023 | 5:20 PM

Share

ನಟ ಶಾರುಖ್​ ಖಾನ್​ (Shah Rukh Khan) ಅವರನ್ನು ಆರಾಧಿಸುವಂತಹ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಕೆಲವೊಮ್ಮೆ ಜನರ ಅಭಿಮಾನ ಮಿತಿ ಮೀರುತ್ತದೆ. ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು​ ಶಾರುಖ್​ ನಿವಾಸ ‘ಮನ್ನತ್​’ (Mannat) ಒಳಗೆ ನುಗ್ಗಿದ ಇಬ್ಬರು ಅಭಿಮಾನಿಗಳನ್ನು ಇತ್ತೀಚೆಗೆ ಅರೆಸ್ಟ್​ ಮಾಡಲಾದ ಸುದ್ದಿ ಪ್ರಸಾರ ಆಗಿತ್ತು. ಆ ಘಟನೆಯ ವಿವರಗಳು ಈಗ ಹೊರಬರುತ್ತಿವೆ. ಅಚ್ಚರಿ ಏನೆಂದರೆ ಆ ಫ್ಯಾನ್ಸ್​ (Shah Rukh Khan Fans) ಇಬ್ಬರು ಅರೆಸ್ಟ್​ ಆಗುವುದಕ್ಕೂ ಮುನ್ನ ಬರೋಬ್ಬರಿ 8 ಗಂಟೆಗಳ ಕಾಲ ಶಾರುಖ್​ ಖಾನ್​ರ ಮನೆಯೊಳಗೆ ಅಡಗಿ ಕುಳಿತಿದ್ದರು! ಈ ವಿಷಯ ಗೊತ್ತಾದಾಗ ಮನ್ನತ್​ ಸಿಬ್ಬಂದಿಗೆ ಶಾಕ್​ ಆಯಿತು. ಯಾಕೆಂದರೆ, ಆ ಅಭಿಮಾನಿಗಳಿಬ್ಬರು ಶಾರುಖ್​ ಮನೆಯೊಳಗೆ ನುಗ್ಗಿದ್ದು ನಡು ರಾತ್ರಿಯಲ್ಲಿ.

ಮೇಕಪ್​ ರೂಮ್​ನಲ್ಲಿ ಅಡಗಿ ಕುಳಿತ ಫ್ಯಾನ್ಸ್​:

ಶಾರುಖ್ ಖಾನ್​ ಅವರದ್ದು ಬರೀ ಮನೆಯಲ್ಲ.. ಅದು ಅರಮನೆ, ದೊಡ್ಡ ಬಂಗಲೆ. ಸಾಕಷ್ಟು ಕೊಠಡಿಗಳು ಈ ಬಂಗಲೆಯಲ್ಲಿವೆ. ಅನೇಕ ಸಂದರ್ಶನಗಳನ್ನು ಈ ಮನೆಯಲ್ಲೇ ಮಾಡಲಾಗುತ್ತದೆ. ಪ್ರಚಾರಕ್ಕೆ ಸಂಬಂಧಿಸಿದ ವಿಡಿಯೋಗಳ ಶೂಟಿಂಗ್ ಕೂಡ ಇಲ್ಲಿ ನಡೆಯುತ್ತದೆ. ಶಾರುಖ್​ ಖಾನ್​​ ಅವರಿಗಾಗಿ ಪ್ರತ್ಯೇಕ ಮೇಕಪ್​ ರೂಂ ಇದೆ. ಆ ಇಬ್ಬರು ಅಭಿಮಾನಿಗಳು ಇದೇ ಮೇಕಪ್​ ರೂಂ ಒಳಗೆ 8 ಗಂಟೆಗಳ ಕಾಲ ಅಡಗಿ ಕುಳಿತಿದ್ದರು.

ಇದನ್ನೂ ಓದಿ: Mannat: ಶಾರುಖ್​ ಖಾನ್​ ಮನೆಯ ಗೇಟಿಗೆ ವಜ್ರದ ಅಲಂಕಾರ; ಹೇಗಿದೆ ನೋಡಿ ‘ಮನ್ನತ್​’ ವೈಭೋಗ

ಇದನ್ನೂ ಓದಿ
Image
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Image
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Image
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
Image
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

ಗುಜರಾತ್​ನಿಂದ ಮುಂಬೈಗೆ ಬಂದ ಇಬ್ಬರು ಅಭಿಮಾನಿಗಳು ರಾತ್ರಿ 3 ಗಂಟೆಗೆ ಶಾರುಖ್​ ಮನೆಯ ಕಾಂಪೌಂಡ್​ ಹಾರಿ ಒಳಗೆ ಬಂದರು. ರಾತ್ರಿ ಆಗಿದ್ದರಿಂದ ಯಾರ ಕಣ್ಣಿಗೂ ಕಾಣದಂತೆ ಮನೆಯೊಳಗೆ ಎಂಟ್ರಿ ಪಡೆದರು. ಬಳಿಕ ಅವರು ಶಾರುಖ್​ ಖಾನ್​ರ ಮೇಕಪ್​ ರೂಂ ಒಳಗೆ ಅಡಗಿ ಕುಳಿತುಕೊಂಡರು. ಬೆಳಗ್ಗೆ 10.30ರ ಸುಮಾರಿಗೆ ಅವರಿಬ್ಬರನ್ನು ನೋಡಿ ಶಾರುಖ್​ ಖಾನ್​ಗೆ ಅಚ್ಚರಿ ಆಯಿತು. ಸದ್ಯ ಆ ಹುಚ್ಚು ಅಭಿಮಾನಿಗಳ ವಿರುದ್ಧ ಕೇಸ್​ ದಾಖಲಾಗಿದ್ದು, ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Shah Rukh Khan: ಶಾರುಖ್ ನಿವಾಸ ‘ಮನ್ನತ್​’ಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದವ ಈಗ ಪೊಲೀಸರ ಅತಿಥಿ

ಮತ್ತೆ ಟ್ರ್ಯಾಕ್​ಗೆ ಮರಳಿದ ಶಾರುಖ್​ ಖಾನ್​:

ಹಲವು ವರ್ಷಗಳ ಕಾಲ ಶಾರುಖ್​ ಖಾನ್ ಅವರು ಸತತ ಸೋಲು ಅನುಭವಿಸಿದರು. ಆದರೆ 2023ರ ಆರಂಭದಲ್ಲೇ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದರು. ‘ಪಠಾಣ್​’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿದೆ. ವಿಶ್ವಾದ್ಯಂತ 1000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ. ಆ ಗೆಲುವಿನಿಂದಾಗಿ ಶಾರುಖ್​ ಖಾನ್​ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಜಾಸ್ತಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:39 pm, Wed, 8 March 23

ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ