AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣವಲ್ಲ, ಶಾರುಖ್ ಖಾನ್ ಈ ಸೂತ್ರ ನಿಮ್ಮ ಜೀವನದಲ್ಲೂ ಅಳವಡಿಸಿಕೊಂಡರೆ ಲೈಫ್ ಖುಷ್

ಶಾರುಖ್ ಖಾನ್ ಜೀವನದ ಕಷ್ಟಗಳ ನಡುವೆಯೂ ಸಂತೋಷದಿಂದ ಇರಲು ಒಂದು ವಿಶಿಷ್ಟ ಸೂತ್ರವನ್ನು ಹಂಚಿಕೊಂಡಿದ್ದಾರೆ. 99.999% ಜನರ ಬಗ್ಗೆ ಯೋಚಿಸದೆ, ಕೇವಲ ಕುಟುಂಬ ಮತ್ತು ಆತ್ಮೀಯ ಗೆಳೆಯರ ಮೇಲೆ ಗಮನ ಹರಿಸುವುದು ಅವರ ಮಂತ್ರ. ಈ ಸರಳ ತಂತ್ರವನ್ನು ಅಳವಡಿಸಿಕೊಂಡರೆ ಯಾರಾದರೂ ಖುಷಿಯಿಂದ ಇರಬಹುದು ಎಂದು SRK ಹೇಳುತ್ತಾರೆ.

ಹಣವಲ್ಲ, ಶಾರುಖ್ ಖಾನ್ ಈ ಸೂತ್ರ ನಿಮ್ಮ ಜೀವನದಲ್ಲೂ ಅಳವಡಿಸಿಕೊಂಡರೆ ಲೈಫ್ ಖುಷ್
ಶಾರುಖ್ ಖಾನ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Oct 04, 2025 | 11:39 AM

Share

ಶಾರುಖ್ ಖಾನ್ (Shah Rukh Khan) ಅವರು ಹಲವು ಏರುಪೇರುಗಳನ್ನು ಕಂಡವರು. ಅವರು ಈಗ ದೊಡ್ಡ ಹಂತಕ್ಕೆ ಬಂದು ತಲುಪಿದ್ದಾರೆ. ಅವರು ಜೀವನದಲ್ಲಿ ಕಷ್ಟಗಳನ್ನು ನೋಡಿದ್ದಾರೆ. ಅವರು ತಮ್ಮ ಅನುಭವದಲ್ಲಿ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡಿದ್ದಾರೆ. ಇದನ್ನು ಅನೇಕ ಬಾರಿ ಹೇಳಿದ್ದಾರೆ. ಈ ಪೈಕಿ ಹೆಚ್ಚು ಗಮನ ಸೆಳೆದು ವಿಡಿಯೋ ಒಂದಿದೆ. ಅವರು ತಮ್ಮ ಜೀವನ ಖುಷಿಯಿಂದ ಇರಲು ಒಂದು ಕಾರಣ ವಿವರಿಸಿದ್ದರು. ಅದನ್ನು ಎಲ್ಲರೂ ಅಳವಡಿಸಿಕೊಂಡರೆ ಜೀವನ ಸಖತ್ ಖುಷಿಯಿಂದ ಇರಲಿದೆ.

ಶಾರುಖ್ ಖಾನ್ ಬಳಿ ಹಣ ಇದೆ. ಹಾಗಂತ ಹಣ ಇದ್ದವರೆಲ್ಲ ಖುಷಿಯಾಗಿ ಇರೋಕೆ ಸಾಧ್ಯವಿಲ್ಲ. ಎಷ್ಟೋ ಮಂದಿ ಹಣ ಇದ್ದ ಹೊರತಾಗಿಯೂ ಖುಷಿಯಿಂದ ಇರಲು ಸಾಧ್ಯವಾಗಿಲ್ಲ. ಇದಕ್ಕೆ ಶಾರುಖ್ ಖಾನ್ ಅವರು ಒಂದು ಸುಲಭ ಟೆಕ್ನಿಕ್ ಹೇಳಿಕೊಟ್ಟಿದ್ದಾರೆ. ಹಳೆಯ ವಿಡಿಯೋ ಒಂದರಲ್ಲಿ ಈ ವಿಚಾರ ರಿವೀಲ್ ಮಾಡಿದ್ದರು.

‘ನನ್ನ ಫ್ರೆಂಡ್ ಒಬ್ಬರು ಇದ್ದಾರೆ, ದೊಡ್ಡ ನಿರ್ದೇಶಕ ಹಾಗೂ ನಿರ್ಮಾಪಕ. ನಾನು ಅವರ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಅವರು ಕರೆ ಮಾಡಿ, ನಿಮ್ಮ ಸಿನಿಮಾ ಬಂದರೆ ನನ್ನ ಸಿನಿಮಾ ಬರ್ಬಾದ್ ಆಗುತ್ತದೆ ಎಂದರು. ಏನು ಬೇಕು ಎಂದು ಕೇಳಿದೆ. ನನ್ನ ಸಿನಿಮಾ ರಿಲೀಸ್ ಟೈಮ್​ಗೆ ನಿನ್ನ ಸಿನಿಮಾ ರಿಲೀಸ್ ಮಾಡಬೇಡ ಎಂದರು. ನಾನು ಓಕೆ ಎಂದೆ. ಇದನ್ನು ಹೇಳಲು ಏಕೆ ಇಷ್ಟು ವಿಚಲಿತಗೊಂಡಿದ್ದೀರಿ ಎಂದು ಕೇಳಿದೆ’ ಎಂದಿದ್ದರು ಶಾರುಖ್.

ಇದನ್ನೂ ಓದಿ
Image
‘ನೀವು ತೋರಿದ ದ್ವೇಷ ನೋಡಿ ಬೇಸರವಾಯಿತು’; ನೋವು ಹೊರ ಹಾಕಿದ ನಮ್ರತಾ ಗೌಡ
Image
‘ನೀವು ಆಂಟಿ ಲವರ್ ಅನಿಸುತ್ತೆ’; ಅಭಿಷೇಕ್​ಗೆ ನೇರವಾಗಿ ಹೇಳಿದ ಜಾನ್ವಿ
Image
ಬಾಕ್ಸ್ ಆಫೀಸ್​ನಲ್ಲಿ ‘ಕಾಂತಾರ: ಚಾಪ್ಟರ್ 1’ ಅಬ್ಬರ; 100 ಕೋಟಿ ಕಲೆಕ್ಷನ್
Image
ಗುಟ್ಟಾಗಿ ನಡೆಯಿತು ರಶ್ಮಿಕಾ-ವಿಜಯ್ ನಿಶ್ಚಿತಾರ್ಥ? ಫೆಬ್ರವರಿಯಲ್ಲಿ ಮದುವೆ

‘ನೀನು ನನ್ನ ಹೇಟ್ ಮಾಡ್ತೀಯಾ ಎಂದರು. ನಾನು ಅವರಿಗೆ ನೇರವಾಗಿ ಹೇಳಿದೆ. ನಿಮಗೆ ನಾನು ಒಳ್ಳೆಯದನ್ನೂ ಯೋಚನೆ ಮಾಡಲ್ಲ, ಕೆಟ್ಟದನ್ನೂ ಯೋಚಿಸಲ್ಲ. ನಾನು ನಿಮ್ಮ ಬಗ್ಗೆ ಯೋಚಿಸೋದೇ ಇಲ್ಲ. 99.999 ಪರ್ಸೆಂಟ್ ಜನರ ಬಗ್ಗೆ ನಾನು ಯೋಚಿಸೋದಿಲ್ಲ. ನನ್ನ ಕುಟುಂಬ, ಗೆಳೆಯರ ಬಗ್ಗೆ ಮಾತ್ರ ಯೋಚಿಸೋದು. ಎಲ್ಲರೂ ಹೀಗೆ ಮಾಡಿದರೆ ಜೀವನ ಚೆನ್ನಾಗಿರುತ್ತದೆ’ ಎಂದಿದ್ದರು ಶಾರುಖ್ ಖಾನ್. ಈ ಸೂತ್ರ ಅನೇಕರಿಗೆ ಹೌದು ಎನಿಸಿದೆ.

ಇದನ್ನೂ ಓದಿ: ಎಲ್ಲವೂ ಶಾರುಖ್ ಖಾನ್ ಅವರಂತೆ; ಆರ್ಯನ್​ಗೆ ತಂದೆಯ ಎಷ್ಟೆಲ್ಲ ವಿಚಾರ ಹೋಲುತ್ತೆ ನೋಡಿ

ಶಾರುಖ್ ಖಾನ್ ಅವರು ಸದ್ಯ ‘ಕಿಂಗ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅವರ ಮಗ ಆರ್ಯನ್ ಖಾನ್ ಅವರು ‘ಬ್ಯಾಡ್ ಆಫ್ ಬಾಲಿವುಡ್’ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದಿದ್ದು, ಗೆಲುವು ಕಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:38 am, Sat, 4 October 25

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್