AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತೋಬಾ ತೋಬಾ..’ ಗಾಯಕನ ಇಂಡಿಯಾ ಟೂರ್​; 16 ಕೋಟಿ ರೂಪಾಯಿ ಸಂಭಾವನೆ

ವಿಕ್ಕಿ ಕೌಶಲ್​ ಅಭಿನಯದ ‘ಬ್ಯಾಡ್​ ನ್ಯೂಸ್​’ ಸಿನಿಮಾದ ‘ತೋಬಾ ತೋಬಾ..’ ಸಾಂಗ್​ ಸೂಪರ್​ ಹಿಟ್​ ಆಗಿದೆ. ಈ ಹಾಡಿನ ಗಾಯಕ ಕರಣ್​ ಔಜ್ಲಾ ಸಿಕ್ಕಾಪಟ್ಟೆ ಸೆನ್ಸೇಷನ್​ ಸೃಷ್ಟಿ ಮಾಡಿದ್ದಾರೆ. ಪಂಜಾಬ್​ ಮೂಲದ ಕರಣ್​ ಅವರು ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಈಗ ಅವರು ಭಾರತದಲ್ಲಿ ತಮ್ಮ ಮೊದಲ ಸಂಗೀತ ಕಾರ್ಯಕ್ರಮ ನೀಡಲು ಸಜ್ಜಾಗಿದ್ದಾರೆ.

‘ತೋಬಾ ತೋಬಾ..’ ಗಾಯಕನ ಇಂಡಿಯಾ ಟೂರ್​; 16 ಕೋಟಿ ರೂಪಾಯಿ ಸಂಭಾವನೆ
ವಿಕ್ಕಿ ಕೌಶಲ್​, ಕರಣ್​ ಔಜ್ಲಾ
ಮದನ್​ ಕುಮಾರ್​
|

Updated on: Jul 25, 2024 | 6:20 PM

Share

ಸೋಶಿಯಲ್​ ಮೀಡಿಯಾದಲ್ಲಿ ‘ತೋಬಾ ತೋಬಾ..’ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಹಾಡಿನಿಂದ ವಿಕ್ಕಿ ಕೌಶಲ್​ ಅವರಿಗೆ ಹೊಸ ಇಮೇಜ್​ ಬಂದಿದೆ. ‘ತೋಬಾ ತೋಬಾ..’ ಹಾಡಿಗೆ ಧ್ವನಿ ನೀಡಿದ ಪಂಜಾಬಿ ಸಿಂಗರ್​ ಕರಣ್​ ಔಜ್ಲಾ ಅವರು ಸಖತ್​ ಮಿಂಚುತ್ತಿದ್ದಾರೆ. ಈಗ ಅವರು ಬಾಲಿವುಡ್ ಮಂದಿಯ ಫೇವರಿಟ್​ ಸಿಂಗರ್​ ಆಗಿದ್ದಾರೆ. ಕೆನಡಾದಲ್ಲಿ ನೆಲೆಸಿರುವ ಕರಣ್​ ಜೌಜ್ಲಾ ಅವರು ಇದೇ ಮೊದಲ ಬಾರಿಗೆ ಭಾರತದಲ್ಲಿ ಲೈವ್​ ಮ್ಯೂಸಿಕ್​ ಕಾರ್ಯಕ್ರಮ ನೀಡಲು ಬರುತ್ತಿದ್ದಾರೆ. ದಾಖಲೆ ಮೊತ್ತದಲ್ಲಿ ಇದರ ಟಿಕೆಟ್​ಗಳು ಮಾರಾಟ ಆಗುತ್ತಿವೆ.

ಛಂಡಿಗಡ, ಬೆಂಗಳೂರು, ದೆಹಲಿ, ಮುಂಬೈನಲ್ಲಿ ಕರಣ್​ ಔಜ್ಲಾ ಅವರ ಲೈವ್​ ಕಾರ್ಯಕ್ರಮ ನಡೆಯಲಿದೆ. ಇದರ ಟಿಕೆಟ್​ಗಳು ಬುಕ್​ ಮೈ ಶೋನಲ್ಲಿ ಲಭ್ಯವಾಗಿವೆ. ಡಿಸೆಂಬರ್​ 7ರಂದು ಛಂಡಿಗಡದಲ್ಲಿ, ಡಿಸೆಂಬರ್​ 13ರಂದು ಬೆಂಗಳೂರಿನಲ್ಲಿ, ಡಿಸೆಂಬರ್​ 15ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್​ 21ರಂದು ಮುಂಬೈನಲ್ಲಿ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: 200 ರೂಪಾಯಿಗಾಗಿ ಅವಕಾಶ ಕೇಳುತ್ತಿದ್ದ ವಿಕ್ಕಿ ಕೌಶಲ್; ಬದುಕು ಬದಲಿಸಿತು ಬಣ್ಣದ ಲೋಕ

ಇಂಡಿಯಾ ಟೂರ್​ಗಾಗಿ ಕರಣ್​ ಔಜ್ಲಾ ಅವರು ಬರೋಬ್ಬರಿ 16 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ! ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸೃಷ್ಟಿ ಆಗಿದೆ. ಪಂಜಾಬಿ ಹಾಡುಗಳ ಮೂಲಕ ಅವರು ಜನಮನ ಗೆದ್ದಿದ್ದಾರೆ. ದೆಹಲಿ ಕಾರ್ಯಕ್ರಮದ 20,000 ಟಿಕೆಟ್​ಗಳು ಕೆಲವೇ ಗಂಟೆಗಳಲ್ಲಿ ಸೋಲ್ಡ್​ಔಟ್​ ಆಗಿವೆ! ಬೇಡಿಕೆ ಹೆಚ್ಚಿರುವುದರಿಂದ ದೆಹಲಿಯಲ್ಲಿ ಇನ್ನೊಂದು ಶೋ ಆಯೋಜನೆ ಮಾಡಲು ಪ್ಲ್ಯಾನ್​ ಮಾಡಲಾಗುತ್ತಿದೆ.

View this post on Instagram

A post shared by Karan Aujla (@karanaujla)

ಕರಣ್​ ಔಜ್ಲಾ ಅವರ ಮ್ಯೂಸಿಕ್​ ಕಾರ್ಯಕ್ರಮದ ಟಿಕೆಟ್​ಗಳು ದುಬಾರಿ ಆಗಿವೆ. ಒಂದೂವರೆ ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಟಿಕೆಟ್​ ಬೆಲೆ ಇದೆ. ಹಾಗಿದ್ದರೂ ಕೂಡ ಅಭಿಮಾನಿಗಳು ಈ ಟಿಕೆಟ್​ಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಒಟ್ಟು 70 ಸಾವಿರ ಜನರು ಈ ಶೋನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಂಜಾಬಿ ಸಿಂಗರ್​ಗೆ ಭಾರತದಲ್ಲಿ ಇಷ್ಟು ದೊಡ್ಡ ಶೋ ನಡೆಯಲಿರುವುದು ಇದೇ ಮೊದಲು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು