AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲಿಬಾನಿಗಳ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಲ್ಮಾನ್​ ಖಾನ್​ ನಾಯಕಿ; 20 ವರ್ಷ ಹಿಂದಕ್ಕೆ ಹೋದ ಆಪ್ಘನ್​

‘ಲವ್​ ರಾತ್ರಿ’ ಸಿನಿಮಾವನ್ನು ಸಲ್ಮಾನ್​ ಖಾನ್​ ನಿರ್ಮಾಣ ಮಾಡಿದ್ದರು. ಸಲ್ಲು ಭಾವ ಆಯುಷ್​ ಶರ್ಮಾ ಈ ಚಿತ್ರದ ಹೀರೋ. ಈ ಚಿತ್ರದ ಮೂಲಕ ವರಿನಾ ಬಾಲಿವುಡ್​ಗೆ ಕಾಲಿಟ್ಟರು.

ತಾಲಿಬಾನಿಗಳ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಲ್ಮಾನ್​ ಖಾನ್​ ನಾಯಕಿ; 20 ವರ್ಷ ಹಿಂದಕ್ಕೆ ಹೋದ ಆಪ್ಘನ್​
ತಾಲಿಬಾನಿಗಳ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಲ್ಮಾನ್​ ಖಾನ್​ ನಾಯಕಿ; 20 ವರ್ಷ ಹಿಂದಕ್ಕೆ ಹೋದ ಆಪ್ಘನ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Aug 22, 2021 | 12:52 PM

Share

ತಾಲಿಬಾನಿಗಳ ಕ್ರೌರ್ಯಕ್ಕೆ ಇಡೀ ಅಪ್ಘಾನಿಸ್ತಾನ ತತ್ತರಿಸಿದೆ. ಸಾಕಷ್ಟು ಜನರು ದೇಶ ಬಿಟ್ಟು ಹೊರ ಬರೋಕೆ ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಅನೇಕರು ಮೃತಪಟ್ಟಿದ್ದಾರೆ. ಇನ್ನು ಮಹಿಳೆಯರ ಮೇಲೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಈ ಮೂಲಕ ಆಪ್ಘನ್​​ ಮತ್ತೆ 20 ವರ್ಷ ಹಿಂದೆ ಹೋಗಿದೆ.  ಆಪ್ಘನ್ ಎರಡು ದಶಕಗಳ ಹಿಂದೆ​ ಹೇಗಿತ್ತು ಎಂದು ಬಾಲಿವುಡ್​ ನಟಿ ವರಿನಾ ಹುಸೇನ್​ ವಿವರಿಸಿದ್ದಾರೆ.  

‘ಲವ್​ ರಾತ್ರಿ’ ಸಿನಿಮಾವನ್ನು ಸಲ್ಮಾನ್​ ಖಾನ್​ ನಿರ್ಮಾಣ ಮಾಡಿದ್ದರು. ಸಲ್ಲು ಭಾವ ಆಯುಷ್​ ಶರ್ಮಾ ಈ ಚಿತ್ರದ ಹೀರೋ. ಈ ಚಿತ್ರದ ಮೂಲಕ ವರಿನಾ ಬಾಲಿವುಡ್​ಗೆ ಕಾಲಿಟ್ಟರು. 20 ವರ್ಷದ ಹಿಂದೆ ಅವರು ಎದುರಿಸಿದ ಕಷ್ಟದ ಬಗ್ಗೆ ಈಗ ಹೇಳಿಕೊಂಡಿದ್ದಾರೆ

‘20 ವರ್ಷಗಳ ಹಿಂದಿನ ಮಾತು. ನಾನು ಮತ್ತು ನನ್ನ ಕುಟುಂಬ ತಾಲಿಬಾನಿಗಳ ಹಿಡಿತಕ್ಕೆ ಸಿಲುಕಿದ್ದೆವು. ಅಲ್ಲಿಂದ ತೆರಳುವಂತೆ ತಾಲಿಬಾನಿಗಳು ಒತ್ತಾಯ ಹೇರಿದ್ದರು. ಈಗ ಅಲ್ಲಿರುವವರು ನಮ್ಮಂತೆ ಕುಟುಂಬವನ್ನು ಕಳೆದುಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಬಾಲ್ಯದಲ್ಲಿ ಅಫ್ಘಾನಿಸ್ತಾನವನ್ನು ತೊರೆದ ನಂತರ ಅವರು ಭಾರತಕ್ಕೆ ಬಂದರು. ಇಲ್ಲಿ 10 ವರ್ಷಗಳ ಕಾಲ ವಾಸ ಮಾಡಿದ್ದಾರೆ. ಆದರೆ ಅವರು ಯಾವಾಗಲೂ ತಮ್ಮ ದೇಶವನ್ನು ನೆನಪಿಸಿಕೊಳ್ಳುತ್ತಾರೆ. ‘ಯಾವಾಗಲೂ ನನ್ನ ಕುಟುಂಬ, ಅಲ್ಲಿನ ಆಹಾರ ಮತ್ತು ಕಾಬೂಲ್​ನ ಸುಂದರ ವಸಂತದ ನೆನಪೂ ಇಂದಿಗೂ ಕಾಡುತ್ತದೆ. ಹೊಸ ಜೀವನ ಕಟ್ಟಿಕೊಳ್ಳಲು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತೆರಳೋದು ತುಂಬಾನೇ ಕಷ್ಟ’ ಎಂದಿದ್ದಾರೆ ವರಿನಾ.

‘ಭಾರತ ನನ್ನನ್ನು ಒಪ್ಪಿಕೊಂಡು ನನಗೆ ಜಾಗ ಕಲ್ಪಿಸಿದೆ. ಇದು ನನ್ನ ಮನೆ ಆಗಿದೆ. ನಿಜಕ್ಕೂ ನಾನು ಅದೃಷ್ಟವಂತ. ಆದರೆ, ಎಲ್ಲರಿಗೂ ಪರಿಸ್ಥಿತಿ ಹೀಗೆಯೇ ಇರುವುದಿಲ್ಲ. ಇಷ್ಟು ವರ್ಷ ಅಪ್ಘಾನಿಸ್ತಾನ ಮಾಡಿದ ಅಭಿವೃದ್ಧಿ ಕೆಲಸಗಳು ವ್ಯರ್ಥವಾಗಿದೆ. ಮಹಿಳೆಯರು ಮಕ್ಕಳು ಹೆರುವ ಯಂತ್ರವಾಗಿ ಬದಲಾಗಬೇಕಿದೆ. ಯುವಕರು ದ್ವೇಷ ಜ್ವಾಲೆಯನ್ನು ತುಂಬಿಕೊಂಡು ಹೋರಾಡಬೇಕಿದೆ’ ಎಂದು ಅಲ್ಲಿನ ಪರಿಸ್ಥಿತಿ ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ ಅವರು.

‘ಲವ್​ ರಾತ್ರಿ’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ವರಿನಾ ‘ದಬಾಂಗ್​ 3’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್​  

Published On - 12:38 pm, Sun, 22 August 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!