AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೌಂದರ್ಯ’ ಸಿನಿಮಾ ಬಾಲನಟಿ ನೆನಪಿದ್ದಾರಾ? ಈಗ ಹೇಗಿದ್ದಾರೆ ನೋಡಿ?

Child Actress: ಕೆಲವು ಬಾಲನಟರಾಗಿ ಮಿಂಚಿ ಆ ನಂತರ ಚಿತ್ರರಂಗದಿಂದ ಮರೆ ಆಗಿದ್ದಾರೆ. ಅವರಲ್ಲಿ ಶ್ರಿಯಾ ಶರ್ಮಾ ಸಹ ಒಬ್ಬರು. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಾಲನಟಿಯಾಗಿ ನಟಿಸಿದ್ದ ಶ್ರಿಯಾ ಶರ್ಮಾ, ಈಗ ಚಿತ್ರರಂಗದಿಂದ ದೂರ ಉಳಿದಿದ್ದಾ. ಅಂದಹಾಗೆ ಅವರು ಈಗ ಏನು ಮಾಡುತ್ತಿದ್ದಾರೆ? ಈಗ ಹೇಗೆ ಕಾಣುತ್ತಾರೆ? ಇಲ್ಲಿದೆ ಮಾಹಿತಿ...

‘ಸೌಂದರ್ಯ’ ಸಿನಿಮಾ ಬಾಲನಟಿ ನೆನಪಿದ್ದಾರಾ? ಈಗ ಹೇಗಿದ್ದಾರೆ ನೋಡಿ?
Shriya Sharma
ಮಂಜುನಾಥ ಸಿ.
|

Updated on:Jun 11, 2026 | 5:45 PM

Share

ಬಾಲನಟ-ಬಾಲನಟಿಯಾಗಿ ಚಿತ್ರರಂಗಕ್ಕೆ (Movie) ಎಂಟ್ರಿ ಕೊಟ್ಟ ಹಲವರು ಆ ನಂತರ ನಾಯಕರಾಗಿಯೋ, ನಾಯಕಿಯರಾಗಿಯೋ ಚಿತ್ರರಂಗದಲ್ಲಿ ಉಳಿದುಕೊಳ್ಳುವುದು ಹೆಚ್ಚು. ಈಗ ಚಾಲ್ತಿಯಲ್ಲಿರುವ ಹಲವು ನಟ-ನಟಿಯರು ಖುದ್ದು ಬಾಲನಟ-ನಟಿಯಾಗಿ ಎಂಟ್ರಿ ಕೊಟ್ಟಿದ್ದವರೇ. ಆದರೆ ಕೆಲವರು ಮಾತ್ರ ಬಾಲನಟರಾಗಿ ಮಿಂಚಿ ಆ ನಂತರ ಮರೆ ಆಗಿದ್ದಾರೆ. ಅವರಲ್ಲಿ ಶ್ರಿಯಾ ಶರ್ಮಾ ಸಹ ಒಬ್ಬರು. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಾಲನಟಿಯಾಗಿ ನಟಿಸಿದ್ದ ಶ್ರಿಯಾ ಶರ್ಮಾ, ಈಗ ಚಿತ್ರರಂಗದಿಂದ ದೂರ ಉಳಿದಿದ್ದಾ. ಅಂದಹಾಗೆ ಅವರು ಈಗ ಏನು ಮಾಡುತ್ತಿದ್ದಾರೆ? ಈಗ ಹೇಗೆ ಕಾಣುತ್ತಾರೆ? ಇಲ್ಲಿದೆ ಮಾಹಿತಿ…

2005 ರಲ್ಲಿ ಬಿಡುಗಡೆ ಆದ ತೆಲುಗಿನ ಹಿಟ್ ಸಿನಿಮಾ ‘ಜೈ ಚಿರಂಜೀವ’ ನಲ್ಲಿ ಚಿರಂಜೀವಿ ಅವರ ಸಹೋದರಿಯ ಮಗಳ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ್ದ ಶ್ರಿಯಾ ಶರ್ಮಾ, ತಮ್ಮ ಮುದ್ದಾದ ಮುಖ ಹಾಗೂ ಚುರುಕು ನಟನೆಯಿಂದ ಬಲು ಬೇಗನೆ ದೊಡ್ಡ ಜನಪ್ರಿಯತೆ ಗಳಿಸಿದರು. ಆ ಸಮಯದಲ್ಲಿ ಬಿಡುಗಡೆ ಆದ ಹಲವಾರು ಸಿನಿಮಾಗಳಲ್ಲಿ ಶ್ರಿಯಾ ಬಾಲನಟಿಯಾಗಿ ನಟಿಸಿದರು. ಕನ್ನಡದಲ್ಲಿ ರಮೇಶ್ ಅರವಿಂದ್ ನಟಿಸಿದ್ದ 2007 ರಲ್ಲಿ ಬಿಡುಗಡೆ ಆದ ‘ಸೌಂದರ್ಯ’ ಸಿನಿಮಾನಲ್ಲಿ, ರಮೇಶ್ ಅವರ ಪುತ್ರಿಯ ಪಾತ್ರದಲ್ಲಿ ಶ್ರಿಯಾ ನಟಿಸಿದ್ದರು. ರಜನೀಕಾಂತ್ ನಟನೆಯ ‘ರೋಬೊ’, ‘ಮಗಧೀರ’, ‘ಊಸರವಳ್ಳಿ’ ಸೇರಿದಂತೆ ಹಲವು ಹಿಂದಿ ಸಿನಿಮಾಗಳು, ತೆಲುಗು, ತಮಿಳು ಸಿನಿಮಾಗಳಲ್ಲಿ ಬಾಲನಟಿಯಾಗಿ ಶ್ರಿಯಾ ಮಿಂಚಿದ್ದರು. ಸುಮಾರು 150ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಸಹ ನಟಿಸಿದ್ದರು.

ಆದರೆ ಈಗ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. 2012 ರ ವರೆಗೆ ಬಾಲನಟಿಯಾಗಿ ನಟಿಸಿದ ಶ್ರಿಯಾ, ಆ ಬಳಿಕ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿಯೂ ಎಂಟ್ರಿ ಕೊಟ್ಟರು. 2015 ರಲ್ಲಿ ‘ಗಾಯಕುಡು’ ಸಿನಿಮಾನಲ್ಲಿ ನಾಯಕಿಯಾದರು. ಬಳಿಕ ಹಿಂದಿಯ ‘ಬಿಲ್ಲು ಗೇಮರ್’ ಸಿನಿಮಾನಲ್ಲೂ ನಾಯಕಿ. 2016ರಲ್ಲಿ ಬಂದ ತೆಲುಗಿನ ‘ನಿರ್ಮಲಾ ಕಾನ್ವೆಂಟ್’ ಸಿನಿಮಾನಲ್ಲೂ ನಾಯಕಿ ಆದರು. ಆದರೆ ಅವರಿಗೆ ನಾಯಕಿಯಾಗಿ ಯಶಸ್ಸು ಸಿಗಲಿಲ್ಲ.

ಶ್ರಿಯಾ ಶರ್ಮಾ ಈಗ ವಕೀಲೆ ಆಗಿದ್ದಾರೆ. ಅದ್ಭುತ ಬಾಲನಟಿಯಾಗಿದ್ದ ಶ್ರಿಯಾ ಶರ್ಮಾ ಒಳ್ಳೆಯ ವಿದ್ಯಾರ್ಥಿ ಸಹ ಆಗಿದ್ದರು. ಕಾನೂನು ಪದವಿ ಪೂರೈಸಿ ವಕೀಲೆಯಾಗಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದಾರೆ. ಸದ್ಯ ಅವರು ಮುಂಬೈನಲ್ಲಿ ಅಡ್ವೊಕೇಟ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದು, ಕಾರ್ಪೊರೇಟ್ ಕಾನೂನು ಕ್ಷೇತ್ರದಲ್ಲಿ ಲಾಯರ್ ಆಗಿ ನೆಲೆಸಿದ್ದಾರೆ.

ಸಿನಿಮಾಗಳಿಂದ ದೂರವಾದರೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿದ್ದಾರೆ. ತಮ್ಮ ಸುಂದರ ಚಿತ್ರಗಳನ್ನು ಶ್ರಿಯಾ ಶರ್ಮಾ ಹಂಚಿಕೊಳ್ಳುತ್ತಲೇ ಇರುತ್ತಾರೆ. ಬಾಲನಟಿಯಾಗಿ ರಂಜಿಸಿದ್ದ ಆ ಪುಟ್ಟ ಬಾಲಕಿ, ಈಗ ಒಬ್ಬ ಜವಾಬ್ದಾರಿಯುತ ಲಾಯರ್ ಆಗಿ ಬದಲಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Thu, 11 June 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!