AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮಂತನ ಮುಗ್ಧತೆಗೆ ಎಲ್ಲರೂ ಫಿದಾ; ಒಂದೇ ಮಾತಿನಿಂದ ಎಲ್ಲರ ಮನ ಗೆದ್ದ ಬಿಗ್ ಬಾಸ್ ಸ್ಪರ್ಧಿ

ಹನುಮಂತ ಅವರ ಈ ಮುಗ್ಧತೆ ಹಾಗೂ ಒಳ್ಳೆಯತನ ಎಲ್ಲರಿಗೂ ಇಷ್ಟ ಆಗಿದೆ. ಐಸ್​ಕ್ರೀಮ್ ಕೊಟ್ಟ ಅವರಿಗೆ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ‘ಮನೆ ಬಿಟ್ಟು ಹೋಗುವವರೆಗೆ ಕೀ ನನ್ನ ಬಳಿಯೇ ಇರಲಿ’ ಎಂದು ಹನುಮಂತ್ ಹೇಳಿಕೊಂಡಿದ್ದಾರೆ.

ಹನುಮಂತನ ಮುಗ್ಧತೆಗೆ ಎಲ್ಲರೂ ಫಿದಾ; ಒಂದೇ ಮಾತಿನಿಂದ ಎಲ್ಲರ ಮನ ಗೆದ್ದ ಬಿಗ್ ಬಾಸ್ ಸ್ಪರ್ಧಿ
ಹನುಮಂತ್
ರಾಜೇಶ್ ದುಗ್ಗುಮನೆ
|

Updated on: Oct 23, 2024 | 11:52 AM

Share

‘ಬಿಗ್ ಬಾಸ್ ಕನ್ನಡ ಸೀಸನ್​ 11’ಕ್ಕೆ ಗಾಯಕ ಹನುಮಂತ ಅವರು ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಇದನ್ನು ಕೆಲವರು ಟೀಕೆ ಮಾಡಿದ್ದರು. ಅವರು ಬಿಗ್ ಬಾಸ್​ಗೆ ಸರಿಯಾದ ವ್ಯಕ್ತಿ ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಅವರು ದೊಡ್ಮನೆ ಸೇರಿದ ಕೆಲವೇ ದಿನಗಳಲ್ಲಿ ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ಹಾಡಿನ ಮೂಲಕ ಅವರು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಒಳ್ಳೆಯತನ, ಮುಗ್ಧತೆಗೆ ಎಲ್ಲರೂ ಫಿದಾ ಆಗಿದ್ದಾರೆ.

ಹನುಮಂತಗೆ ದೊಡ್ಮನೆಯ ಕನ್ಫೆಷನ್​ರೂಂಗೆ ಬರೋಕೆ ಹೇಳಲಾಯಿತು. ಒಳಗೆ ಹೋದ ಅವರಿಗೆ ಬಿಗ್ ಬಾಸ್​ ಐಸ್​ಕ್ರೀಂ ಬಾಕ್ಸ್​ನ ಕೀ ಕೊಟ್ಟರು. ಅಲ್ಲದೆ ಒಂದು ಷರತ್ತನ್ನು ಕೂಡ ಹಾಕಿದರು. ‘ಮನೆಯವರ ಬಳಿ ಎಂಟರ್​ಟೇನ್​ಮೆಂಟ್ ಮಾಡುವಂತೆ ನೀವು ಕೇಳಬಹುದು. ಅದರಿಂದ ನಿಮಗೆ ಖುಷಿ ಆದರೆ ಐಸ್​​ಕ್ರೀಂ ತೆಗೆದುಕೊಡಬಹುದು’ ಎಂದು ಬಿಗ್ ಬಾಸ್ ಹೇಳಿದರು.

ಅದರಂತೆ ಹನುಮಂತ ಅವರು ಎಲ್ಲರ ಬಳಿಯೂ ಮನರಂಜನೆ ನೀಡುವಂತೆ ಕೋರಿದರು. ಕೆಲವರು ಹನುಮಂತ ಅವರ ಆಸೆಯನ್ನು ಈಡೇರಿಸಿದರೆ, ಇನ್ನೂ ಕೆಲವರು ಅವರ ಮಾತಿಗೆ ಬೆಲೆ ಕೊಡಲೇ ಇಲ್ಲ. ಇದೇ ಕಾರಣ ಕೊಟ್ಟರು ಮನರಂಜನೆ ನೀಡದವರಿಗೆ ಐಸ್​ಕ್ರೀಂ ಕೊಡಲ್ಲ ಎಂದು ಹೇಳುವ ಅವಕಾಶ ಹನುಮಂತ್​ಗೆ ಇತ್ತು. ಆದರೆ, ಹನುಮಂತ ಹಾಗೆ ಮಾಡಲೇ ಇಲ್ಲ.

‘ನಮಗೆ ನೀವು ಐಸ್​ಕ್ರೀಂ ವಿಚಾರ ಹೇಳಿದ್ರಿ. ಒಂದೈದು ಜನ ಮಾಡಿಲ್ಲ. ಮಾಡಿದವರು ನಮ್ಮವರೇ, ಮಾಡದೇ ಇದ್ದವರೂ ನಮ್ಮವರೇ. ಬಿಗ್ ಬಾಸ್ ಮನೆಗೆ ಬಂದ ಖುಷಿಗೆ ಎಲ್ಲರಿಗೂ ಐಸ್​ಕ್ರೀಂ ಕೊಡ್ತೀನಿ. ನೀವು ಬೈದರೂ ಬೈಸಿಕೊಳ್ಳುತ್ತೇನೆ’ ಎಂದರು ಹನುಮಂತ.

ಇದನ್ನೂ ಓದಿ: ಜಗದೀಶ್ ಇದ್ದಾಗ ಜಗಳ, ಹನುಮಂತ ಬಂದ್ಮೇಲೆ ನಗು: ಬದಲಾಯ್ತು ಬಿಗ್ ಬಾಸ್ ಮನೆ

ಹನುಮಂತ ಅವರ ಈ ಮುಗ್ಧತೆ ಹಾಗೂ ಒಳ್ಳೆಯತನ ಎಲ್ಲರಿಗೂ ಇಷ್ಟ ಆಗಿದೆ. ಐಸ್​ಕ್ರೀಮ್ ಕೊಟ್ಟ ಅವರಿಗೆ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ‘ಮನೆ ಬಿಟ್ಟು ಹೋಗುವವರೆಗೆ ಕೀ ನನ್ನ ಬಳಿಯೇ ಇರಲಿ’ ಎಂದು ಹನುಮಂತ್ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ