AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

76ನೇ ವಾರ್ಷಿಕ ಪ್ರೈಮ್ ಟೈಮ್​ ಎಮಿ ಅವಾರ್ಡ್​: ಪ್ರಮುಖ ಪ್ರಶಸ್ತಿ ಪಡೆದವರು ಯಾರು? ಇಲ್ಲಿದೆ ವಿವರ..

ಕಲರ್​ಫುಲ್​ ವೇದಿಕೆಯಲ್ಲಿ ‘76ನೇ ವಾರ್ಷಿಕ ಪ್ರೈಮ್ ಟೈಮ್​ ಎಮಿ ಅವಾರ್ಡ್​’ ಸಮಾರಂಭ ನಡೆದಿದೆ. ‘ಶೋಗನ್’ ಹಾಗೂ ‘ದಿ ಬೇರ್’ ಸಿರೀಸ್​ಗಳಿಗೆ ಹಲವು ಪ್ರಶಸ್ತಿಗಳು ಸಿಕ್ಕಿವೆ. ಹಿರೋಯುಕಿ ಸನಾಡ, ಆ್ಯನಾ ಸವಾಯಿ, ಜೆರೆಮಿ ಅಲೆನ್ ವೈಟ್​, ಜೀನ್ ಸ್ಮಾರ್ಟ್​, ಲೈಝಾ ಕೊಲೊನ್ ಝಯಾಸ್​, ಬಿಲ್ಲಿ ಕ್ರಡಪ್, ಎಲಿಝಬೆತ್ ಡೆಮಿಕಿ ಮುಂತಾದವರು ಪ್ರಶಸ್ತಿ ಪಡೆದು ಮಿಂಚಿದ್ದಾರೆ.

76ನೇ ವಾರ್ಷಿಕ ಪ್ರೈಮ್ ಟೈಮ್​ ಎಮಿ ಅವಾರ್ಡ್​: ಪ್ರಮುಖ ಪ್ರಶಸ್ತಿ ಪಡೆದವರು ಯಾರು? ಇಲ್ಲಿದೆ ವಿವರ..
ಎಮಿ ಅವಾರ್ಡ್ಸ್​ 2024
ಮದನ್​ ಕುಮಾರ್​
|

Updated on: Sep 16, 2024 | 10:58 AM

Share

ಅಮೆರಿಕದ ಕಿರುತೆರೆಯ ಪ್ರತಿಷ್ಠಿತ ‘ಎಮಿ ಅವಾರ್ಡ್ಸ್​’​ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. 76ನೇ ವಾರ್ಷಿಕ ಪ್ರೈಮ್ ಟೈಮ್​ ಎಮಿ ಅವಾರ್ಡ್​ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿ ಆಗಿದ್ದಾರೆ. ‘ಶೋಗನ್’ ಮತ್ತು ‘ದಿ ಬೇರ್’ ಸೀರಿಸ್​ಗಳು ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಲಾಸ್​ ಏಂಜಲಿಸ್​ನಲ್ಲಿ ಈ ಸಮಾರಂಭ ನಡೆದಿದ್ದು ರೆಡ್​ ಕಾರ್ಪೆಟ್​ನಲ್ಲಿ ಅನೇಕ ತಾರೆಯರು ಹೆಜ್ಜೆ ಹಾಕಿದ್ದಾರೆ. ಪ್ರಶಸ್ತಿ ಬಾಚಿಕೊಂಡ ಸೆಲೆಬ್ರಿಟಿಗಳಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಯಾರಿಗೆಲ್ಲ ಈ ಬಾರಿ ​‘ಎಮಿ ಅವಾರ್ಡ್ಸ್​’ ಸಿಕ್ಕಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..

25 ವಿಭಾಗಗಳಲ್ಲಿ ‘ಶೋಗನ್’ ನಾಮಿನೇಟ್​ ಆಗಿತ್ತು. ‘ದಿ ಬೇರ್​’ 23 ವಿಭಾಗಗಳಲ್ಲಿ ನಾಮಿನೇಟ್​ ಆಗಿತ್ತು. ಅತ್ಯುತ್ತಮ ಡ್ರಾಮಾ ಸೀರಿಸ್​ ಪ್ರಶಸ್ತಿಯನ್ನು ಶೋಗನ್​ ಪಡೆದುಕೊಂಡಿದೆ. ‘ಹ್ಯಾಕ್ಸ್​’ಗೆ ಅತ್ಯುತ್ತಮ ಕಾಮಿಡಿ ಸೀರಿಸ್​ ಪ್ರಶಸ್ತಿ ಸಿಕ್ಕಿದೆ. ಡ್ರಾಮಾ ಸೀರಿಸ್​ನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಿರೋಯುಕಿ ಸನಾಡ (ಶೋಗನ್) ಪಡೆದುಕೊಂಡಿದ್ದಾರೆ. ಡ್ರಾಮಾ ಸೀರಿಸ್ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯು ಆ್ಯನಾ ಸವಾಯಿ (ಶೋಗನ್) ಅವರ ಪಾಲಾಗಿದೆ.

ಕಾಮಿಡಿ ಸಿರೀಸ್​ ವಿಭಾಗದಲ್ಲಿ ‘ದಿ ಬೇರ್​’ನಲ್ಲಿನ ಅಭಿನಯಕ್ಕಾಗಿ ಜೆರೆಮಿ ಅಲೆನ್ ವೈಟ್​ ಅವರು ಅತ್ಯುತ್ತ,ಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ‘ಹ್ಯಾಕ್ಸ್’ ನಟಿ ಜೀನ್ ಸ್ಮಾರ್ಟ್​ ಅವರಿಗೆ ಕಾಮಿಡಿ ಸಿರೀಸ್​ ವಿಭಾಗದ ಅತ್ಯುತ್ತಮ ನಟಿ ಅವಾರ್ಡ್​​ ನೀಡಲಾಗಿದೆ. ಡ್ರಾಮಾ ಸೀರಿಸ್​ ವಿಭಾಗದಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯು ‘ದಿ ಮಾರ್ನಿಂಗ್​ ಶೋ’ ಸಿರೀಸ್​ಗಾಗಿ ಬಿಲ್ಲಿ ಕ್ರಡಪ್ ಅವರಿಗೆ ಸಿಕ್ಕಿದೆ. ಇದೇ ವಿಭಾಗದಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ‘ದಿ ಕ್ರೌನ್​’ ಸಿರೀಸ್​ನ ಎಲಿಝಬೆತ್ ಡೆಮಿಕಿ ಅವರು ಪಡೆದುಕೊಂಡಿದ್ದಾರೆ.

ನಟ ಎಬಾನ್ ಮಾಸ್​ ಬ್ಯಾಕಾರ್ಕ್​ ಅವರು ‘ದಿ ಬೇರ್​’ನಲ್ಲಿನ ಅಭಿನಯಕ್ಕಾಗಿ ಕಾಮಿಡಿ ಸಿರೀಸ್​ನ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೇ ಸಿರೀಸ್​ನಲ್ಲಿ ಅಭಿನಯಿಸಿದ ಲೈಝಾ ಕೊಲೊನ್ ಝಯಾಸ್​ ಅವರು ಈ ವಿಭಾಗದ ಅತ್ಯುತ್ತಮ ಫೋಷಕ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಲಿಮಿಡೆಟ್​ ಸಿರೀಸ್​ ವಿಭಾಗದಲ್ಲಿ ‘ಬೇಬಿ ರೇಂಡರ್​’ ನಟ ರಿಚರ್ಡ್​ ಗ್ಯಾಡ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಇದೇ ವಿಭಾಗದಲ್ಲಿ ‘ಟ್ರೂ ಡಿಟೆಕ್ಟಿವ್​: ನೈಟ್​ ಕಂಟ್ರಿ’ ಸಿರೀಸ್​ನ ನಟಿ ಜೂಡಿ ಫಾಸ್ಟರ್​ ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಸೈಮಾನಲ್ಲಿ ಪ್ರಶಸ್ತಿಗಳ ಬಾಚಿದ ‘ಸಪ್ತ ಸಾಗರದಾಚೆ ಎಲ್ಲೋ’, ಇಲ್ಲಿದೆ ಪಟ್ಟಿ

ಲಮೋರ್ನ್ ಮೋರಿಸ್​ ಅವರು ‘ಫಾರ್ಗೋ’ ಸಿರೀಸ್​ನಲ್ಲಿನ ನಟನೆಗಾಗಿ ಮಿಲಿಡೆಟ್​ ಸಿರೀಸ್​ ವಿಭಾಗದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವಿಭಾಗದಲ್ಲಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿಯು ‘ಬೇಬಿ ರೇಂಡರ್​’ ನಟಿ ಜೆಸ್ಸಿಕಾ ಗನ್ನಿಂಗ್​ ಅವರ ಪಾಲಾಗಿದೆ. ‘ಮಿಸ್ಟರ್​ ಮಾಂಕ್ಸ್​ ಲಾಸ್ಟ್​ ಕೇಸ್​’ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ‘ದ ಡೈಲಿ ಶೋ’ ಅತ್ಯುತ್ತಮ ಟಾಕ್​ ಸಿರೀಸ್​ ಪ್ರಶಸ್ತಿ ಪಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಆ.13ರಂದು ಕರ್ನಾಟಕ ಬಂದ್​​ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?
ಆ.13ರಂದು ಕರ್ನಾಟಕ ಬಂದ್​​ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?
ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆಶಿ, ಕಾರಣ?
ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆಶಿ, ಕಾರಣ?
ಕಾವೇರಿ ನೀರು ವಿವಾದ: ಡಿಕೆಶಿ ಸರ್ಕಾರಕ್ಕೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?
ಕಾವೇರಿ ನೀರು ವಿವಾದ: ಡಿಕೆಶಿ ಸರ್ಕಾರಕ್ಕೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?