AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Golden Globe Awards: ‘RRR​’ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಜತೆ ‘ಗೋಲ್ಡನ್​ ಗ್ಲೋಬ್​’ ಪಡೆದವರ ಪೂರ್ತಿ ಲಿಸ್ಟ್​ ಇಲ್ಲಿದೆ

Golden Globe Awards Winners List: ಪ್ರತಿಷ್ಠಿತ ‘ಗೋಲ್ಡನ್​ ಗ್ಲೋಬ್​ 2023’ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಟಾಲಿವುಡ್​ ಮ್ಯೂಸಿಕ್​ ಡೈರೆಕ್ಟರ್​ ಎಂಎಂ ಕೀರವಾಣಿ, ಹಾಲಿವುಡ್​ ನಿರ್ದೇಶಕ ಸ್ಟೀವನ್​ ಸ್ಪೀಲ್​ಬರ್ಗ್​ ಸೇರಿದಂತೆ ಅನೇಕರು ಈ ಪ್ರಶಸ್ತಿ ಪಡೆದಿದ್ದಾರೆ.

Golden Globe Awards: ‘RRR​’ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಜತೆ ‘ಗೋಲ್ಡನ್​ ಗ್ಲೋಬ್​’ ಪಡೆದವರ ಪೂರ್ತಿ ಲಿಸ್ಟ್​ ಇಲ್ಲಿದೆ
ಗೋಲ್ಡನ್ ಗ್ಲೋಬ್ ಅವಾರ್ಡ್ ಪಡೆದ ಸ್ಟೀವನ್ ಸ್ಪೀಲ್​ಬರ್ಗ್​, ಎಂಎಂ ಕೀರವಾಣಿ
TV9 Web
| Edited By: |

Updated on: Jan 11, 2023 | 1:22 PM

Share

2023ರ ಆರಂಭದಲ್ಲೇ ಭಾರತೀಯ ಚಿತ್ರರಂಗಕ್ಕೆ ಗುಡ್​ ನ್ಯೂಸ್​ ಸಿಕ್ಕಿದೆ. ‘ಆರ್​ಆರ್​ಆರ್​’ (RRR Movie) ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಈ ಚಿತ್ರದ ‘ನಾಟು ನಾಟು..’ ಹಾಡಿಗೆ ಪ್ರತಿಷ್ಠಿತ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ (Golden Globe Award) ಸಿಕ್ಕಿದೆ. ಅತ್ಯುತ್ತಮ ಒರಿಜಿನಲ್​ ಸಾಂಗ್​ ಕೆಟಗರಿಯಲ್ಲಿ ಈ ಹಾಡು ಪ್ರಶಸ್ತಿ ಪಡೆದಿದೆ. ಲಾಸ್​ ಏಂಜಲಿಸ್​ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರು ಪ್ರತಿಷ್ಠಿತ ಟ್ರೋಫಿ ಪಡೆದಿದ್ದಾರೆ. ನಿರ್ದೇಶಕ ಎಸ್​.ಎಸ್. ರಾಜಮೌಳಿ, ನಟರಾದ ರಾಮ್​ ಚರಣ್​, ಜೂನಿಯರ್​ ಎನ್​ಟಿಆರ್​​ ಮುಂತಾದವರು ಈ ವೇಳೆ ಹಾಜರಿದ್ದರು. ಎಂಎಂ ಕೀರವಾಣಿ ಮಾತ್ರವಲ್ಲದೇ ಈ ಬಾರಿ ‘ಗೋಲ್ಡನ್​ ಗ್ಲೋಬ್’ ಪ್ರಶಸ್ತಿ ಪಡೆದವರ ಪೂರ್ತಿ ಲಿಸ್ಟ್​ ಇಲ್ಲಿದೆ. ಕಾರಣಾಂತರಗಳಿಂದ ಕೆಲವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಿಲ್ಲ.

ಹಾಲಿವುಡ್​ನ ದಿಗ್ಗಜ ನಿರ್ದೇಶಕ ಸ್ಟೀವನ್​ ಸ್ಪೀಲ್​ಬರ್ಗ್​ ಅವರು ‘ದಿ ಫೇಬಲ್​ಮ್ಯಾನ್ಸ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಬಾರಿಯ ಗೋಲ್ಡನ್​ ಗ್ಲೋಬ್ಸ್​ನಲ್ಲಿ ಈ ಚಿತ್ರಕ್ಕೆ ಎರಡು ಪ್ರಶಸ್ತಿ ಸಿಕ್ಕಿವೆ. ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ಈ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು

ಇದನ್ನೂ ಓದಿ
Image
MM Keeravani: ಗೋಲ್ಡನ್​ ಗ್ಲೋಬ್ ಪ್ರಶಸ್ತಿ ಪಡೆದ ‘ಆ​ರ್​ಆರ್​ಆರ್​’ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
Image
Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು
Image
RRR ಆಸ್ಕರ್​ ಆಸೆ ಇನ್ನೂ ಜೀವಂತ; ಬೇರೆ ಮಾರ್ಗದಲ್ಲಿ ಸ್ಪರ್ಧೆಗೆ ಇಳಿದ ರಾಜಮೌಳಿ ಸಿನಿಮಾ
Image
‘RRR ಸಿನಿಮಾ ನನಗೆ ಇಷ್ಟ ಆಗಿಲ್ಲ’: ನೇರವಾಗಿ ಹೇಳಿ ಟ್ರೋಲ್​ ಕಾಟಕ್ಕೆ ಸಿಲುಕಿದ ನಿಕೇಶಾ ಪಟೇಲ್​

‘ಗೋಲ್ಡನ್​ ಗ್ಲೋಬ್ 2023’ ಪ್ರಶಸ್ತಿ ಪಡೆದವರ ಲಿಸ್ಟ್:

ಅತ್ಯುತ್ತಮ ಸಿನಿಮಾ (ಡ್ರಾಮಾ): ದಿ ಫೇಬಲ್​ಮ್ಯಾನ್ಸ್​

ಅತ್ಯುತ್ತಮ ಸಿನಿಮಾ (ಮ್ಯೂಸಿಕಲ್​/ಕಾಮಿಡಿ): ದಿ ಬಾನ್ಶೀಸ್​ ಆಫ್​ ಇನ್​ಶಿರೆನ್​

ಅತ್ಯುತ್ತಮ ನಿರ್ದೇಶಕ: ಸ್ಟೀವಲ್​ ಸ್ಪೀಲ್​ಬರ್ಗ್​

ಅತ್ಯುತ್ತಮ ನಟಿ (ಡ್ರಾಮಾ): ಕೇಟ್​ ಬ್ಲಾಂಚೆಟ್​

ಅತ್ಯುತ್ತಮ ನಟ (ಡ್ರಾಮಾ): ಆಸ್ಟಿನ್​ ಬಟ್ಲರ್​

ಅತ್ಯುತ್ತಮ ನಟಿ (ಮ್ಯೂಸಿಕಲ್​/ಕಾಮಿಡಿ): ಮಿಶಾಲ್​ ಯೋ

ಅತ್ಯುತ್ತಮ ನಟ (ಮ್ಯೂಸಿಕಲ್​/ಕಾಮಿಡಿ): ಕಾಲಿನ್​ ಫೆರಲ್​

ಅತ್ಯುತ್ತಮ ಪೋಷಕ ನಟಿ: ಆಂಜೆಲಾ ಬ್ಯಾಸೆಟ್​

ಅತ್ಯುತ್ತಮ ಪೋಷಕ ನಟ: ಕಿ ಹ್ಯು ಕ್ವಾನ್​

ಅತ್ಯುತ್ತಮ ಚಿತ್ರಕಥೆ: ಮಾರ್ಟಿನ್​ ಮೆಕ್​ಡೊನಾಗ್​

ಇದನ್ನೂ ಓದಿ: MM Keeravani: ಗೋಲ್ಡನ್​ ಗ್ಲೋಬ್ ಪ್ರಶಸ್ತಿ ಪಡೆದ ‘ಆ​ರ್​ಆರ್​ಆರ್​’ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ

ಇಂಗ್ಲಿಷ್​ ಹೊರತಾದ ಅತ್ಯುತ್ತಮ ಸಿನಿಮಾ: ಅರ್ಜೆಂಟೀನಾ, 1985

ಅತ್ಯುತ್ತಮ ಒರಿಜಿನಲ್​ ಸಾಂಗ್​: ನಾಟು ನಾಟು

ಬೆಸ್ಟ್​ ಸೀರಿಸ್​ (ಡ್ರಾಮಾ): ಹೌಸ್​ ಆಫ್​ ಡ್ರಾಗನ್​

ಬೆಸ್ಟ್​ ಸೀರಿಸ್​ (ಮ್ಯೂಸಿಕಲ್​/ಕಾಮಿಡಿ): ಅಬಾಟ್​ ಎಲಿಮೆಂಟರಿ

ಅತ್ಯುತ್ತಮ ಕಿರುತೆರೆ ನಟಿ (ಡ್ರಾಮಾ): ಝೆಂಡೆಯಾ

ಅತ್ಯುತ್ತಮ ಕಿರುತೆರೆ ನಟ (ಡ್ರಾಮಾ): ಕೆವಿನ್​ ಕಾಸ್ಟನರ್​

ಅತ್ಯುತ್ತಮ ಕಿರುತೆರೆ ನಟಿ (ಮ್ಯೂಸಿಕಲ್​/ಕಾಮಿಡಿ): ಕಿಂಟಾ ಬ್ರಾನ್ಸನ್​

ಅತ್ಯುತ್ತಮ ಕಿರುತೆರೆ ನಟ (ಮ್ಯೂಸಿಕಲ್​/ಕಾಮಿಡಿ): ಜೆರೆಮಿ ಅಲೆನ್​ ವೈಟ್​

ಅತ್ಯುತ್ತಮ ಪೋಷಕ ನಟಿ (ಕಿರುತೆರೆ): ಜೂಲಿಯಾ ಗಾರ್ನರ್​

ಅತ್ಯುತ್ತಮ ಪೋಷಕ ನಟ (ಕಿರುತೆರೆ): ಟೈಲರ್​ ಜೇಮ್ಸ್​ ವಿಲಿಯಮ್ಸ್​

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ