ಗೊತ್ತಿಲ್ಲದ ಹುಡುಗಿಯರ ಜೊತೆ ಪಾರ್ಟಿ ಮಾಡಿ 38 ಲಕ್ಷ ರೂ. ಖಾಲಿ ಮಾಡಿದ್ದ ಹನಿ ಸಿಂಗ್  

ಹನಿ ಸಿಂಗ್ ಅವರು ಸಾಕಷ್ಟು ಹಾಡುಗಳು ಮೂಲಕ ಹೆಸರು ಮಾಡಿದವರು. ಅವರ ಜನಪ್ರಿಯತೆ ಹೆಚ್ಚಿದೆ. ಅವರಿಗೆ ಹಣದ ಬಗ್ಗೆ ಯಾವುದೇ ಕೇರ್ ಇರಲಿಲ್ಲ. ಹಣಕ್ಕೆ ನಾನಾ ಮೂಲಗಳು ಸಿಕ್ಕಿದ್ದವು. ಅವರು ಈಗ ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದರು.

ಗೊತ್ತಿಲ್ಲದ ಹುಡುಗಿಯರ ಜೊತೆ ಪಾರ್ಟಿ ಮಾಡಿ 38 ಲಕ್ಷ ರೂ. ಖಾಲಿ ಮಾಡಿದ್ದ ಹನಿ ಸಿಂಗ್  
ಹನಿ ಸಿಂಗ್
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 15, 2024 | 8:42 AM

ಬಾಲಿವುಡ್​ನ ಖ್ಯಾತ ಗಾಯಕ ಯೋಯೋ ಹನಿ ಸಿಂಗ್ ಬಗ್ಗೆ ಹೊಸದಾಗಿ ಹೇಳುವುದು ಏನೂ ಉಳಿದಿಲ್ಲ. ಅವರು ಸದಾ ಪಾರ್ಟಿಮೂಡ್​ನಲ್ಲಿ ಇರುತ್ತಾರೆ. ಅವರು ಪಾರ್ಟಿ ಮಾಡೋದನ್ನು ಯಾವಾಗಲೂ ನಿಲ್ಲಿಸಿದವರಲ್ಲ. ಆದರೆ, ಇತ್ತೀಚೆಗೆ ಅವರು ಕೊಂಚ ಬದಲಾಗಿದ್ದಾರೆ. ಪಾರ್ಟಿ ಮಾಡೋದನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ. ಮತ್ತೆ ಮರಳಿ ಕೆಲಸದತ್ತ ಗಮನ ಹರಿಸುತ್ತಿದ್ದಾರೆ. ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದರು. ಈ ಮೊದಲು ಹೇಗಿದ್ದೆ ಎಂಬುದನ್ನು ಅವರು ಹೇಳಿದ್ದಾರೆ.

ಹನಿ ಸಿಂಗ್ ಅವರು ಸಾಕಷ್ಟು ಹಾಡುಗಳು ಮೂಲಕ ಹೆಸರು ಮಾಡಿದವರು. ಅವರ ಜನಪ್ರಿಯತೆ ಹೆಚ್ಚಿದೆ. ಅವರಿಗೆ ಹಣದ ಬಗ್ಗೆ ಯಾವುದೇ ಕೇರ್ ಇರಲಿಲ್ಲ. ಹಣಕ್ಕೆ ನಾನಾ ಮೂಲಗಳು ಸಿಕ್ಕಿದ್ದವು. ಅವರು ಈಗ ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದರು. ಅವರು ಹೇಳುವ ಪ್ರಕಾರ ಒಂದು ರಾತ್ರಿಗೆ ಅವರು ಖರ್ಚು ಮಾಡಿದ್ದು ಬರೋಬ್ಬರಿ 38 ಲಕ್ಷ ರೂಪಾಯಿ. ಈ ವಿಚಾರ ಶಾಕಿಂಗ್ ಎನಿಸಿದೆ.

‘ಪಾರ್ಟಿ ಮೇಲೆ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ಕೈ ಖಾಲಿ ಆಗಿ ಬಿಡುತ್ತಿತ್ತು. ನಾವು 8 ಜನರು ಪಾರ್ಟಿ ಮಾಡಲು ದುಬೈ ಹೋದೆವು. ಬಾಟಲಿಗಳು ಬಂತು. ಅದೇ ರೀತಿ ಯಾವುದೋ ಹುಡುಗಿಯರು ನಮ್ಮ ಜೊತೆ ಸೇರಿದರು. ಒಟ್ಟು 38 ಲಕ್ಷ ರೂಪಾಯಿ ಬಿಲ್ ಆಯಿತು. ಮೂರು ಕ್ರೆಡಿಟ್ ಕಾರ್ಡ್​ ಮೂಲಕ ಹಣ ಪಾವತಿಸಿದೆವು. ಆದರೆ, ರಾತ್ರಿ ನಾನು ಒಬ್ಬಂಟಿಯಾಗಿ ಮಲಗಿದ್ದೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ‘ಚಾರ್ ಬೋಟಲ್ ವೋಡ್ಕಾ‘ ಹಾಡು ಬರೆದಾಗ ಹನಿ ಸಿಂಗ್‌ಗೆ ಎಚ್ಚರಿಕೆ ನೀಡಿದ್ದ ಶಾರುಖ್ ಖಾನ್

ಹನಿ ಸಿಂಗ್ ಅವರಿಗೆ ಸಣ್ಣ ವಯಸ್ಸಲ್ಲಿ ಜನಪ್ರಿಯತೆ ಸಿಕ್ಕಿತ್ತು. ಯಶಸ್ಸು ಅವರ ನೆತ್ತಿಗೆ ಏರಿತ್ತು. ಈ ಕಾರಣಕ್ಕೆ ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಅವರು ಕುಟುಂಬಕ್ಕೆ ಸಮಯ ನೀಡಲಿಲ್ಲ. ಹೀಗಾಗಿ, ಅವರ ಪತ್ನಿ ತೊರೆದು ಹೋದರು. ಆ ಬಳಿಕ ಅವರು ಡ್ರಗ್ಸ್​ಗೆ ಅಡಿಕ್ಟ್ ಆದರು. ಇದರಿಂದ ಹೊರಬರಲು ಸಾಧ್ಯವೇ ಆಗಿರಲಿಲ್ಲ. ಹಲವು ವರ್ಷಗಳ ಕಾಲ ಅವರು ಇಂಡಸ್ಟ್ರಿಯಿಂದ ದೂರವೇ ಉಳಿದರು. ಈಗ ಅವರು ಮತ್ತೆ ಇಂಡಸ್ಟ್ರಿಗೆ ಮರಳಿದ್ದಾರೆ. ‘ಮಿಲಿಯನೇರ್..’ ಹೆಸರಿನ ಹಾಡನ್ನು ರಿಲೀಸ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:59 am, Tue, 15 October 24

ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಹುಂಡಿ‌ ಎಣಿಕೆ ಕಾರ್ಯ, ಕಾಣಿಕೆಹಣ ಎಷ್ಟಿದೆ?
ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಹುಂಡಿ‌ ಎಣಿಕೆ ಕಾರ್ಯ, ಕಾಣಿಕೆಹಣ ಎಷ್ಟಿದೆ?
Daily Devotional: ಕನಸಿನಲ್ಲಿ ಹಾವುಗಳು ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
Daily Devotional: ಕನಸಿನಲ್ಲಿ ಹಾವುಗಳು ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
Nithya Bhavishya: ಶುಭ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಶುಭ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ
ರೋಹಿತ್​ ಪಡೆಗೆ ಗಂಭೀರ ಎಚ್ಚರಿಕೆ ನೀಡಿದ ಕೋಚ್ ಗೌತಮ್
ರೋಹಿತ್​ ಪಡೆಗೆ ಗಂಭೀರ ಎಚ್ಚರಿಕೆ ನೀಡಿದ ಕೋಚ್ ಗೌತಮ್
ದರ್ಶನ್ ಜಾಮೀನು ಅರ್ಜಿ ವಜಾ: ರೇಣುಕಾಸ್ವಾಮಿ ತಂದೆಯ ಮೊದಲ ಪ್ರತಿಕ್ರಿಯೆ
ದರ್ಶನ್ ಜಾಮೀನು ಅರ್ಜಿ ವಜಾ: ರೇಣುಕಾಸ್ವಾಮಿ ತಂದೆಯ ಮೊದಲ ಪ್ರತಿಕ್ರಿಯೆ