AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನ ನಾಯಗನ್’ ಸಿನಿಮಾ ಲೀಕ್: ತನಿಖೆ ಹೇಗಿತ್ತು? ಆರೋಪಿಗಳು ಸಿಕ್ಕಿದ್ದು ಹೇಗೆ?

Jana Nayagan: ‘ಜನ ನಾಯಗನ್’ ಸಿನಿಮಾ ಆನ್​​ಲೈನ್​​ನಲ್ಲಿ ಲೀಕ್ ಆಗಿತ್ತು. ಕೋಟ್ಯಂತರ ಜನ ಅನಧಿಕೃತವಾಗಿ ಡೌನ್​​ಲೋಡ್ ಮಾಡಿಕೊಂಡು ಸಿನಿಮಾ ನೋಡಿದರು. ದೂರುಗಳು ಸಹ ದಾಖಲಾದವು. ಕೆಲವರು ಚಿತ್ರತಂಡದವರೇ ಲೀಕ್ ಮಾಡಿದ್ದಾರೆ ಎಂದು ಸಹ ಆರೋಪಿಸಿದರು. ಇದೀಗ ಸಿನಿಮಾ ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವಾಗ ‘ಜನ ನಾಯಗನ್’ ಲೀಕ್ ಬಗ್ಗೆ ನಿರ್ದೇಶಕ ವಿನೋದ್ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.

‘ಜನ ನಾಯಗನ್’ ಸಿನಿಮಾ ಲೀಕ್: ತನಿಖೆ ಹೇಗಿತ್ತು? ಆರೋಪಿಗಳು ಸಿಕ್ಕಿದ್ದು ಹೇಗೆ?
Jana Nayagan
ಮಂಜುನಾಥ ಸಿ.
| Edited By: |

Updated on:Jul 22, 2026 | 12:09 PM

Share

ದಳಪತಿ ವಿಜಯ್ (Thalapathy Vijay) ನಟಿಸಿರುವ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಹಲವು ತಿಂಗಳ ವಿಳಂಬದ ಬಳಿಕ ನಾಳೆ (ಜುಲೈ 23) ಬಿಡುಗಡೆ ಆಗಲಿದೆ. ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿದ್ದ ಸಿನಿಮಾ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಿದೆ. ಮೊದಲಿಗೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಬಳಿಕ ನ್ಯಾಯಾಲಯದಲ್ಲೂ ತ್ವರಿತ ನ್ಯಾಯ ಸಿಗಲಿಲ್ಲ. ಇದೆಲ್ಲ ಆಗುತ್ತಿರುವಾಗ ಇದ್ದಕ್ಕಿಂದ್ದಂತೆ ಸಿನಿಮಾ ಆನ್​​ಲೈನ್​​ನಲ್ಲಿ ಲೀಕ್ ಆಯ್ತು. ಕೋಟ್ಯಂತರ ಜನ ಅನಧಿಕೃತವಾಗಿ ಡೌನ್​​ಲೋಡ್ ಮಾಡಿಕೊಂಡು ಸಿನಿಮಾ ನೋಡಿದರು. ದೂರುಗಳು ಸಹ ದಾಖಲಾದವು. ಕೆಲವರು ಚಿತ್ರತಂಡದವರೇ ಲೀಕ್ ಮಾಡಿದ್ದಾರೆ ಎಂದು ಸಹ ಆರೋಪಿಸಿದರು. ಇದೀಗ ಸಿನಿಮಾ ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವಾಗ ‘ಜನ ನಾಯಗನ್’ ಲೀಕ್ ಬಗ್ಗೆ ನಿರ್ದೇಶಕ ವಿನೋದ್ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.

‘ಜನ ನಾಯಗನ್’ ಸಿನಿಮಾ ಲೀಕ್ ಆದಾಗ ನನಗೆ ಆಘಾತವಾಯ್ತು. ಅದೊಂದು ಕೆಟ್ಟ ಘಟನೆ, ಅದರಿಂದ ಆದ ನಷ್ಟವನ್ನು, ಹಾನಿಯನ್ನು ತುಂಬಲು ಸಾಧ್ಯವೇ ಇಲ್ಲ. ಆದರೆ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿ ಇರಲಿಲ್ಲ’ ಎಂದಿದ್ದಾರೆ. ಸಿನಿಮಾ ಲೀಕ್ ಅನ್ನು ವಿಜಯ್ ಅವರೇ ಮಾಡಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ವಿನೋದ್, ‘ಈ ಸಿನಿಮಾ ಲೀಕ್ ಆಗದಿದ್ದರೂ ವಿಜಯ್ ಯಶಸ್ವಿ ಆಗುತ್ತಿದ್ದರು. ಅವರಿಗೆ ಸಿನಿಮಾದ ಬೆಂಬಲ ಬೇಕಿರಲಿಲ್ಲ’ ಎಂದಿದ್ದಾರೆ.

‘ಲೀಕ್ ಆದ ಸಿನಿಮಾ ದೃಶ್ಯಗಳಲ್ಲಿ ಎಡಿಟಿಂಗ್ ಮಾರ್ಕ್​​ಗಳು ಸ್ಪಷ್ಟವಾಗಿತ್ತು. ಆಗಲೇ ನಮಗೆ ಗೊತ್ತಾಯ್ತು, ಈ ಸಿನಿಮಾ ಎಡಿಟಿಂಗ್ ಟೇಬಲ್​​ನಿಂದ ಲೀಕ್ ಆಗಿದೆ ಎಂದು. ಸಿನಿಮಾದ ಎಡಿಟಿಂಗ್ ತಂಡದಲ್ಲಿದ್ದ ಪ್ರತಿಯೊಬ್ಬರನ್ನೂ ವಿಚಾರಣೆ ಮಾಡಲಾಯ್ತು. ಗೂಗಲ್​​ ಸಂಸ್ಥೆಯನ್ನು ಸಹ ಸಂಪರ್ಕಿಸಿ, ಸಿನಿಮಾ ಗೂಗಲ್ ಡ್ರೈವ್ ಮೂಲಕ ಏನಾದರೂ ಟ್ರಾನ್ಸ್​​ಫರ್ ಆಗಿದೆಯೇ ಎಂಬ ತನಿಖೆಯನ್ನು ಸಹ ಮಾಡಲಾಯ್ತು’ ಎಂದಿದ್ದಾರೆ.

ಇದನ್ನೂ ಓದಿ:ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ

ತನಿಖೆಯ ಬಳಿಕ ಗೊತ್ತಾಗಿದ್ದು ಏನೆಂದರೆ ಫ್ಲೀಲ್ಯಾನ್ಸ್ ನೌಕರನೊಬ್ಬ ಎಡಿಟಿಂಗ್ ರೂಂನಲ್ಲಿದ್ದ ಸೀನ್​​ಗಳನ್ನು ಕಾಪಿ ಮಾಡಿಕೊಂಡು ತೆಗೆದುಕೊಂಡು ಹೋಗಿದ್ದ. ಸೀನ್​​ಗಳನ್ನು ತಾನೇ ಜೋಡಿಸಿ, ತನ್ನ ಕೆಲವು ಗೆಳೆಯರನ್ನು ಕರೆಸಿಕೊಂಡು ಒಟ್ಟಿಗೆ ಸಿನಿಮಾ ನೋಡಿದ್ದರು. ಆದರೆ ಸಿನಿಮಾ ಒಬ್ಬರ ಮೂಲಕ ಇನ್ನೊಬ್ಬರಿಗೆ ಹರಿದಾಡಿ ಕೊನೆಗೆ ಆನ್​​ಲೈನ್​​​ಗೆ ಸಹ ಅಪ್​​ಲೋಡ್ ಮಾಡಲ್ಪಟ್ಟಿತ್ತು. ಅಲ್ಲಿಂದ ಸಿನಿಮಾ ದೊಡ್ಡ ಮಟ್ಟದಲ್ಲಿ ಲೀಕ್ ಆಯ್ತು’ ಎಂದಿದ್ದಾರೆ.

ಪೊಲೀಸರು ಆ ಯುವಕನನ್ನು ಪ್ರಶ್ನೆ ಮಾಡಿದಾಗಲೂ ಸಹ ಆತ ಹೆಚ್ಚಿಗೆ ಏನೂ ಹೇಳಿರಲಿಲ್ಲ. ಬಳಿಕ ನಾನು ಆತನನ್ನು ಭೇಟಿ ಆದಾಗ ಆತ ಅಳುತ್ತಾ ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ಆತನೇ ಈ ಕೃತ್ಯ ಮಾಡಿದನಾ ಅಥವಾ ಯಾರಾದರೂ ಆತನ ಹಿಂದೆ ಇದ್ದಾರಾ ಎಂಬುದು ನಮಗೆ ಈಗಲೂ ಗೊತ್ತಿಲ್ಲ’ ಎಂದಿದ್ದಾರೆ ವಿನೋದ್. ‘ಜನ ನಾಯಗನ್’ ಸಿನಿಮಾ ನಾಳೆ (ಜುಲೈ 23) ಬಿಡುಗಡೆ ಆಗುತ್ತಿದೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ ಮತ್ತು ಮಮಿತಾ ಬಿಜು ನಾಯಕಿಯರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:58 am, Wed, 22 July 26

Follow Us
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ