AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸತ್ತ ಬಳಿಕ ನನ್ನ ಆಸ್ತಿ ಯಾರಿಗೆ ಸೇರಬೇಕೆಂದರೆ..’; ವಿಲ್ ಬರೆದು ಮಾಹಿತಿ ನೀಡಿದ ಅಮಿತಾಭ್

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ವಿಚ್ಛೇದನ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಿರುವ ವಿಚಾರ. ಇವರು ದೂರ ಆಗದೇ ಇರಲಿ ಎಂದು ಅವರ ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಅಮಿತಾಭ್ ಬಚ್ಚನ್ ಅವರು ಈ ಮೊದಲು ನೀಡಿದ್ದ ಆಸ್ತಿ ಹಂಚಿಕೆ ವಿಚಾರ ಈಗ ಚರ್ಚೆ ಆಗಿದೆ.

‘ಸತ್ತ ಬಳಿಕ ನನ್ನ ಆಸ್ತಿ ಯಾರಿಗೆ ಸೇರಬೇಕೆಂದರೆ..’; ವಿಲ್ ಬರೆದು ಮಾಹಿತಿ ನೀಡಿದ ಅಮಿತಾಭ್
‘ಸತ್ತ ಬಳಿಕ ನನ್ನ ಆಸ್ತಿ ಯಾರಿಗೆ ಸೇರಬೇಕೆಂದರೆ..’; ವಿಲ್ ಬರೆದು ಮಾಹಿತಿ ನೀಡಿದ ಅಮಿತಾಭ್
ರಾಜೇಶ್ ದುಗ್ಗುಮನೆ
|

Updated on:Sep 05, 2024 | 6:59 AM

Share

ಅಮಿತಾಭ್ ಬಚ್ಚನ್ ಅವರಿಗೆ ಈಗ 81 ವರ್ಷ ವಯಸ್ಸು. ಅಕ್ಟೋಬರ್​ನಲ್ಲಿ ಅವರಿಗೆ 82 ವರ್ಷ ತುಂಬಲಿದೆ. ಅವರಿಗೆ ಅನೇಕ ಕಾಯಿಲೆಗಳು ಇವೆ. ಆದರೆ, ಅವರು ಸಿನಿಮಾ ಕೃಷಿ ನಿಲ್ಲಿಸಿಲ್ಲ. ಮೃತಪಟ್ಟ ಬಳಿಕ ತಮ್ಮ ಆಸ್ತಿ ಯಾರಿಗೆ ಸೇರಬೇಕು ಎನ್ನವು ಬಗ್ಗೆ ಅವರು ವಿಲ್ ಕೂಡ ಬರೆದಿಟ್ಟಿದ್ದಾರೆ. ಈ ಮೊದಲು ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು. ಇಬ್ಬರು ಮಕ್ಕಳಿಗೆ ಸರಿಯಾಗಿ ಆಸ್ತಿ ಹಂಚಿಕೆ ಮಾಡೋದಾಗಿ ಅವರು ಹೇಳಿದ್ದರು.

ಅಮಿತಾಭ್ ಹಾಗೂ ಜಯಾ ಬಚ್ಚನ್ ದಂಪತಿ​ಗೆ ಶ್ವೇತಾ ಹಾಗೂ ಅಭಿಷೇಕ್ ಹೆಸರಿನ ಮಕ್ಕಳಿದ್ದಾರೆ. ಮಗಳು ಮದುವೆ ಆಗಿ ಬೇರೆ ಕುಟುಂಬಕ್ಕೆ ಹೋಗುತ್ತಾರೆ ಎನ್ನುವ ಕಾರಣಕ್ಕೆ ಆಸ್ತಿಯನ್ನು ಮಗನ ಹೆಸರಿಗೆ ಬರೆಯೋ ಪದ್ಧತಿ ಇದೆ. ಆದರೆ, ಅಮಿತಾಭ್ ಅವರಿಗೆ ಈ ಆಲೋಚನೆ ಇಲ್ಲ. ‘ನಾನು ಒಂದು ವಿಚಾರ ನಿರ್ಧರಿಸಿದ್ದೇನೆ. ಮಕ್ಕಳ ಮಧ್ಯೆ ನಾನು ವ್ಯತ್ಯಾಸ ಮಾಡುವುದಿಲ್ಲ’ ಎಂದು ಅಮಿತಾಭ್ ಬಚ್ಚನ್ ಅವರು ಹೇಳಿದ್ದರು. ಈ ಸಂಬಂಧ ಅವರು ವಿಲ್ ಕೂಡ ಬರೆದಿದ್ದಾರೆ ಎನ್ನಲಾಗಿದೆ.

‘ನಾನು ಮೃತಪಟ್ಟ ಬಳಿಕ ನಾನು ಏನೇ ಹೊಂದಿದ್ದರೂ ಅದನ್ನು ನನ್ನ ಮಗಳು ಹಾಗೂ ಮಗನಿಗೆ ಸರಿಯಾಗಿ ಹಂಚುತ್ತೇನೆ. ಅದರಲ್ಲಿ ಯಾವುದೇ ವ್ಯತ್ಯಾಸ ಮಾಡುವುದಿಲ್ಲ. ಇದನ್ನು ನಾನು ಹಾಗೂ ಜಯಾ ಈ ಮೊದಲೇ ನಿರ್ಧಾರ ಮಾಡಿದ್ದೆವು. ಮದುವೆ ಆದ ಬಳಿಕ ಮಗಳು ಬೇರೆಯವರ ಮನೆಗೆ ಹೋಗುತ್ತಾರೆ. ಆದರೆ, ನಮ್ಮ ದೃಷ್ಟಿಯಲ್ಲಿ ಅವರು ಮಗಳೇ. ಅಭಿಷೇಕ್​ಗೆ ಇರುವಷ್ಟೇ ಹಕ್ಕು ಶ್ವೇತಾಗೂ ಇದೆ’ ಎಂದಿದ್ದರು ಅವರು.

ಇದನ್ನೂ ಓದಿ: ದುಬೈನಲ್ಲಿ ಒಟ್ಟಾಗಿ ಸುತ್ತಾಡಿದ್ರಾ ಐಶ್ವರ್ಯಾ-ಅಭಿಷೇಕ್? ವೈರಲ್ ಆಯ್ತು ವಿಡಿಯೋ 

ಕಳೆದ ವರ್ಷ ಅಭಿಷೇಕ್ ಬಚ್ಚನ್ ಅವರು ತಮ್ಮ ಬಂಗಲೆಯನ್ನು ಶ್ವೇತಾಗೆ ಗಿಫ್ಟ್ ಮಾಡಿದ್ದರು. 50 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿ ಇದಾಗಿತ್ತು. ಆ ಸಂದರ್ಭದಲ್ಲಿ ಬಚ್ಚನ್ ಹಾಗೂ ಐಶ್ವರ್ಯಾ ಮಧ್ಯೆ ಎಲ್ಲವೂ ಸರಿಯೇ ಇತ್ತು. ಆದಾಗ್ಯೂ ಅವರು ಸೊಸೆಗೆ ಏನನ್ನಾದರೂ ನೀಡುವ ಬಗ್ಗೆ ಮಾತನಾಡಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:55 am, Thu, 5 September 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ