AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸತ್ತ ಬಳಿಕ ನನ್ನ ಆಸ್ತಿ ಯಾರಿಗೆ ಸೇರಬೇಕೆಂದರೆ..’; ವಿಲ್ ಬರೆದು ಮಾಹಿತಿ ನೀಡಿದ ಅಮಿತಾಭ್

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ವಿಚ್ಛೇದನ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಿರುವ ವಿಚಾರ. ಇವರು ದೂರ ಆಗದೇ ಇರಲಿ ಎಂದು ಅವರ ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಅಮಿತಾಭ್ ಬಚ್ಚನ್ ಅವರು ಈ ಮೊದಲು ನೀಡಿದ್ದ ಆಸ್ತಿ ಹಂಚಿಕೆ ವಿಚಾರ ಈಗ ಚರ್ಚೆ ಆಗಿದೆ.

‘ಸತ್ತ ಬಳಿಕ ನನ್ನ ಆಸ್ತಿ ಯಾರಿಗೆ ಸೇರಬೇಕೆಂದರೆ..’; ವಿಲ್ ಬರೆದು ಮಾಹಿತಿ ನೀಡಿದ ಅಮಿತಾಭ್
‘ಸತ್ತ ಬಳಿಕ ನನ್ನ ಆಸ್ತಿ ಯಾರಿಗೆ ಸೇರಬೇಕೆಂದರೆ..’; ವಿಲ್ ಬರೆದು ಮಾಹಿತಿ ನೀಡಿದ ಅಮಿತಾಭ್
ರಾಜೇಶ್ ದುಗ್ಗುಮನೆ
|

Updated on:Sep 05, 2024 | 6:59 AM

Share

ಅಮಿತಾಭ್ ಬಚ್ಚನ್ ಅವರಿಗೆ ಈಗ 81 ವರ್ಷ ವಯಸ್ಸು. ಅಕ್ಟೋಬರ್​ನಲ್ಲಿ ಅವರಿಗೆ 82 ವರ್ಷ ತುಂಬಲಿದೆ. ಅವರಿಗೆ ಅನೇಕ ಕಾಯಿಲೆಗಳು ಇವೆ. ಆದರೆ, ಅವರು ಸಿನಿಮಾ ಕೃಷಿ ನಿಲ್ಲಿಸಿಲ್ಲ. ಮೃತಪಟ್ಟ ಬಳಿಕ ತಮ್ಮ ಆಸ್ತಿ ಯಾರಿಗೆ ಸೇರಬೇಕು ಎನ್ನವು ಬಗ್ಗೆ ಅವರು ವಿಲ್ ಕೂಡ ಬರೆದಿಟ್ಟಿದ್ದಾರೆ. ಈ ಮೊದಲು ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು. ಇಬ್ಬರು ಮಕ್ಕಳಿಗೆ ಸರಿಯಾಗಿ ಆಸ್ತಿ ಹಂಚಿಕೆ ಮಾಡೋದಾಗಿ ಅವರು ಹೇಳಿದ್ದರು.

ಅಮಿತಾಭ್ ಹಾಗೂ ಜಯಾ ಬಚ್ಚನ್ ದಂಪತಿ​ಗೆ ಶ್ವೇತಾ ಹಾಗೂ ಅಭಿಷೇಕ್ ಹೆಸರಿನ ಮಕ್ಕಳಿದ್ದಾರೆ. ಮಗಳು ಮದುವೆ ಆಗಿ ಬೇರೆ ಕುಟುಂಬಕ್ಕೆ ಹೋಗುತ್ತಾರೆ ಎನ್ನುವ ಕಾರಣಕ್ಕೆ ಆಸ್ತಿಯನ್ನು ಮಗನ ಹೆಸರಿಗೆ ಬರೆಯೋ ಪದ್ಧತಿ ಇದೆ. ಆದರೆ, ಅಮಿತಾಭ್ ಅವರಿಗೆ ಈ ಆಲೋಚನೆ ಇಲ್ಲ. ‘ನಾನು ಒಂದು ವಿಚಾರ ನಿರ್ಧರಿಸಿದ್ದೇನೆ. ಮಕ್ಕಳ ಮಧ್ಯೆ ನಾನು ವ್ಯತ್ಯಾಸ ಮಾಡುವುದಿಲ್ಲ’ ಎಂದು ಅಮಿತಾಭ್ ಬಚ್ಚನ್ ಅವರು ಹೇಳಿದ್ದರು. ಈ ಸಂಬಂಧ ಅವರು ವಿಲ್ ಕೂಡ ಬರೆದಿದ್ದಾರೆ ಎನ್ನಲಾಗಿದೆ.

‘ನಾನು ಮೃತಪಟ್ಟ ಬಳಿಕ ನಾನು ಏನೇ ಹೊಂದಿದ್ದರೂ ಅದನ್ನು ನನ್ನ ಮಗಳು ಹಾಗೂ ಮಗನಿಗೆ ಸರಿಯಾಗಿ ಹಂಚುತ್ತೇನೆ. ಅದರಲ್ಲಿ ಯಾವುದೇ ವ್ಯತ್ಯಾಸ ಮಾಡುವುದಿಲ್ಲ. ಇದನ್ನು ನಾನು ಹಾಗೂ ಜಯಾ ಈ ಮೊದಲೇ ನಿರ್ಧಾರ ಮಾಡಿದ್ದೆವು. ಮದುವೆ ಆದ ಬಳಿಕ ಮಗಳು ಬೇರೆಯವರ ಮನೆಗೆ ಹೋಗುತ್ತಾರೆ. ಆದರೆ, ನಮ್ಮ ದೃಷ್ಟಿಯಲ್ಲಿ ಅವರು ಮಗಳೇ. ಅಭಿಷೇಕ್​ಗೆ ಇರುವಷ್ಟೇ ಹಕ್ಕು ಶ್ವೇತಾಗೂ ಇದೆ’ ಎಂದಿದ್ದರು ಅವರು.

ಇದನ್ನೂ ಓದಿ: ದುಬೈನಲ್ಲಿ ಒಟ್ಟಾಗಿ ಸುತ್ತಾಡಿದ್ರಾ ಐಶ್ವರ್ಯಾ-ಅಭಿಷೇಕ್? ವೈರಲ್ ಆಯ್ತು ವಿಡಿಯೋ 

ಕಳೆದ ವರ್ಷ ಅಭಿಷೇಕ್ ಬಚ್ಚನ್ ಅವರು ತಮ್ಮ ಬಂಗಲೆಯನ್ನು ಶ್ವೇತಾಗೆ ಗಿಫ್ಟ್ ಮಾಡಿದ್ದರು. 50 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿ ಇದಾಗಿತ್ತು. ಆ ಸಂದರ್ಭದಲ್ಲಿ ಬಚ್ಚನ್ ಹಾಗೂ ಐಶ್ವರ್ಯಾ ಮಧ್ಯೆ ಎಲ್ಲವೂ ಸರಿಯೇ ಇತ್ತು. ಆದಾಗ್ಯೂ ಅವರು ಸೊಸೆಗೆ ಏನನ್ನಾದರೂ ನೀಡುವ ಬಗ್ಗೆ ಮಾತನಾಡಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:55 am, Thu, 5 September 24

Follow Us
ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಟೈಟಲ್ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್
ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಟೈಟಲ್ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ
ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ
ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ