AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೈಲರ್ 2’ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ? ದಸರಾ ಅಖಾಡಕ್ಕೆ ಧನುಷ್ ಹಾಗೂ ನಿಖಿಲ್ ಎಂಟ್ರಿ

ರಜನಿಕಾಂತ್ ಅಭಿನಯದ ಜೈಲರ್ 2 ಪೋಸ್ಟ್ ಪ್ರೊಡಕ್ಷನ್ ತಡವಾಗುವ ಸಾಧ್ಯತೆಯಿದ್ದು ರಿಲೀಸ್ ದಿನಾಂಕ ದೀಪಾವಳಿಗೆ ಮುಂದೂಡಲ್ಪಡುವ ಲಕ್ಷಣಗಳಿವೆ. ಹೀಗಾಗಿ ಅಕ್ಟೋಬರ್ 15 ರ ದಸರಾ ರೇಸ್‌ಗೆ ಧನುಷ್ ಅವರ'ಓಮ್: ಚಾಪ್ಟರ್ 1 ಉಧಿರಾಮ್: ದಿ ಬ್ಲಡ್ ವುಡ್' ಮತ್ತು ನಿಖಿಲ್ ಅವರ ಸ್ವಯಂಭೂ ಸಿನಿಮಾಗಳು ಧುಮುಕಲು ಸಿದ್ಧವಾಗಿವೆ.

‘ಜೈಲರ್ 2’ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ? ದಸರಾ ಅಖಾಡಕ್ಕೆ ಧನುಷ್ ಹಾಗೂ ನಿಖಿಲ್ ಎಂಟ್ರಿ
ರಜಿನಿಕಾಂತ್
ರಾಜೇಶ್ ದುಗ್ಗುಮನೆ
|

Updated on:Aug 31, 2026 | 3:01 PM

Share

ಮುಖ್ಯಾಂಶಗಳು

  • ಅಕ್ಟೋಬರ್ 15ಕ್ಕೆ ಬರೋದಿಲ್ವಾ ಜೈಲರ್ 2?
  • ದೀಪಾವಳಿಗೆ ಮುಂದೂಡಿಕೆ ಸಾಧ್ಯತೆ
  • ರಜನಿಕಾಂತ್ ಜಾಗಕ್ಕೆ ಧನುಷ್ ಹಾಗೂ ನಿಖಿಲ್ ಫೈಟ್

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾದ (Jailer 2) ರಿಲೀಸ್ ದಿನಾಂಕದ ಬಗ್ಗೆ ಈಗ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಬಹುನಿರೀಕ್ಷಿತ ಚಿತ್ರವು ಅಕ್ಟೋಬರ್ 15ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮೊದಲು ಅಧಿಕೃತವಾಗಿ ಘೋಷಿಸಲಾಗಿತ್ತು. ಆದರೆ ಪ್ರಸ್ತುತ ಸಿಕ್ಕಿರುವ ಮಾಹಿತಿಯ ಪ್ರಕಾರ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಇನ್ನು ಹೆಚ್ಚಿನ ಸಮಯ ಬೇಕಾಗಬಹುದು ಎನ್ನಲಾಗಿದೆ. ಹೀಗಾಗಿ ನಿಗದಿತ ದಿನಾಂಕದಂದೇ ಸಿನಿಮಾ ತೆರೆಗೆ ಬರುವುದು ಅನುಮಾನವಾಗಿದೆ.

ನಿರ್ದೇಶಕ ನೆಲ್ಸನ್ ಅವರು ತಮ್ಮ ಸಿನಿಮಾಗಳ ಕೊನೆಯ ಹಂತದ ಎಡಿಟಿಂಗ್ ಹಾಗೂ ಗ್ರಾಫಿಕ್ಸ್ ಕೆಲಸಗಳಲ್ಲಿ ತುಂಬಾ ಜಾಗ್ರತೆ ವಹಿಸುತ್ತಿದ್ದಾರೆ. ಇದರ ಜೊತೆಗೆ ಸಂಗೀತ ನಿರ್ದೇಶಕ ಅನಿರುದ್ಧ್ ಅವರ ಹಿನ್ನೆಲೆ ಸಂಗೀತ ಈ ಚಿತ್ರದ ಮುಖ್ಯ ಆಕರ್ಷಣೆಯಾಗಲಿದೆ. ಯಾವುದೇ ಕಾರಣಕ್ಕೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಅವಸರದಿಂದ ಮುಗಿಸಲು ನಿರ್ದೇಶಕರು ಸಿದ್ಧರಿಲ್ಲ. ಆದ್ದರಿಂದ ಚಿತ್ರವನ್ನು ದೀಪಾವಳಿ ಹಬ್ಬದ ವಾರಕ್ಕೆ ಮುಂದೂಡುವ ಆಲೋಚನೆ ನಿರ್ಮಾಣ ಸಂಸ್ಥೆಯಲ್ಲಿದೆ. ಬಿಡುಗಡೆಯ ದಿನಾಂಕದ ಅಧಿಕೃತ ಮಾಹಿತಿಯು ಮುಂಬರುವ ಎರಡು ವಾರಗಳಲ್ಲಿ ಹೊರಬೀಳಲಿದೆ.

ಒಂದು ವೇಳೆ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15 ರ ರಿಲೀಸ್ ದಿನಾಂಕದಿಂದ ಹಿಂದೆ ಸರಿಯುವುದು ಖಚಿತವಾದರೆ ಇತರ ಎರಡು ಸಿನಿಮಾಗಳು ಆ ದಿನಾಂಕವನ್ನು ಬಳಸಿಕೊಳ್ಳಲು ಕಾಯುತ್ತಿವೆ. ಪ್ರಸಿದ್ಧ ನಟ ಧನುಷ್ ಅವರ ‘’ಓಮ್: ಚಾಪ್ಟರ್ 1 ಉಧಿರಾಮ್: ದಿ ಬ್ಲಡ್ ವುಡ್’ ಮತ್ತು ನಿಖಿಲ್ ಅವರ ‘ಸ್ವಯಂಭೂ’ ಚಿತ್ರಗಳು ಈ ಖಾಲಿ ಜಾಗವನ್ನು ತುಂಬಲು ಸಜ್ಜಾಗಿವೆ. ಈ ಎರಡೂ ಚಿತ್ರತಂಡಗಳು ದಸರಾ ಹಬ್ಬದ ರಜಾದಿನಗಳ ಲಾಭ ಪಡೆಯಲು ಯೋಜಿಸುತ್ತಿವೆ.

ನಿಖಿಲ್ ನಟನೆಯ ‘ಸ್ವಯಂಭೂ’ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಪ್ರಸ್ತುತ ಈ ಚಿತ್ರಕ್ಕೆ ಭಾರಿ ಪ್ರಮಾಣದ ವಿಎಫ್‌ಎಕ್ಸ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರವನ್ನು ದಸರಾ ಸಮಯದಲ್ಲಿ ತೆರೆಗೆ ತರಲು ನಿರ್ಮಾಪಕರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಧನುಷ್ ಅಭಿನಯದ ‘ಓಮ್: ಚಾಪ್ಟರ್ 1 ಉಧಿರಾಮ್: ದಿ ಬ್ಲಡ್ ವುಡ್’ ಚಿತ್ರದ ಶೂಟಿಂಗ್ ಕೂಡ ಪೂರ್ಣಗೊಂಡಿದ್ದು, ಆ ತಂಡವು ಕೂಡ ದಸರಾ ರೇಸ್‌ನಲ್ಲಿ ಧುಮುಕಲು ಸಿದ್ಧವಾಗಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ಮೆಗಾ ಫೈಟ್; ರಜನಿಕಾಂತ್ ಜೈಲರ್  ಜೊತೆ ಚಿರಂಜೀವಿ ವಿಶ್ವಂಭರ ಕ್ಲ್ಯಾಶ್?

ಎರಡೂ ಸಿನಿಮಾಗಳು ಒಂದೇ ರಿಲೀಸ್ ವಿಂಡೋ ಮೇಲೆ ಕಣ್ಣಿಟ್ಟಿರುವುದರಿಂದ ಅಂತಿಮ ನಿರ್ಧಾರವು ‘ಜೈಲರ್ 2’ ಚಿತ್ರದ ನಿರ್ಧಾರವನ್ನು ಅವಲಂಬಿಸಿದೆ. ರಜನಿಕಾಂತ್ ಸಿನಿಮಾ ಅಕ್ಟೋಬರ್ 15ಕ್ಕೆ ಬರುತ್ತದೆಯೋ ಅಥವಾ ಮುಂದೂಡಲ್ಪಡುತ್ತದೆಯೋ ಎಂಬುದರ ಆಧಾರದ ಮೇಲೆ ದಸರಾ ರೇಸ್ ನಿರ್ಧಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:41 pm, Mon, 31 August 26

Follow Us
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!
ಕೈದಿಗಳಿಗೆ ರಾಜಾತಿಥ್ಯ: ಮಂಡ್ಯ ಜೈಲು ಅಧೀಕ್ಷಕಿ ಶಾಂತಮ್ಮ ಬಳ್ಳಾರಿಗೆ ವರ್ಗ
ಕೈದಿಗಳಿಗೆ ರಾಜಾತಿಥ್ಯ: ಮಂಡ್ಯ ಜೈಲು ಅಧೀಕ್ಷಕಿ ಶಾಂತಮ್ಮ ಬಳ್ಳಾರಿಗೆ ವರ್ಗ
ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ
ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ