AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಪರಸ್ಪರ ಹೊಡೆದಾಡಿಕೊಂಡ ಜೂ ಎನ್​ಟಿಆರ್ ಹಾಗೂ ನಾರಾ ಲೋಕೇಶ್ ಅಭಿಮಾನಿಗಳು

Jr NTR: ಜೂ ಎನ್​ಟಿಆರ್ ಹಾಗೂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆ ನಡೆದಿರುವುದು ಅಮೆರಿಕದಲ್ಲಿ.

ಅಮೆರಿಕದಲ್ಲಿ ಪರಸ್ಪರ ಹೊಡೆದಾಡಿಕೊಂಡ ಜೂ ಎನ್​ಟಿಆರ್ ಹಾಗೂ ನಾರಾ ಲೋಕೇಶ್ ಅಭಿಮಾನಿಗಳು
ಜೂ ಎನ್​ಟಿಆರ್-ಲೋಕೇಶ್
ಮಂಜುನಾಥ ಸಿ.
|

Updated on: Jul 09, 2023 | 7:30 PM

Share

ತೆಲುಗಿನ ಪ್ರಮುಖ ರಾಜಕೀಯ ಹಾಗೂ ಸಿನಿಮಾ ಕುಟುಂಬವಾದ ಎನ್​ಟಿಆರ್ (NTR) ಅಥವಾ ನಂದಮೂರಿ ಕುಟುಂಬದಲ್ಲಿ (Nandamuri Family) ಎಲ್ಲವೂ ಸರಿಯಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ಚಂದ್ರಬಾಬು ನಾಯ್ಡು (Chandrababu Naidu) ಹಾಗೂ ಬಾಲಕೃಷ್ಣ (Balakrishna) ಅವರುಗಳು ಜೂ ಎನ್​ಟಿಆರ್ (Jr NTR) ಅನ್ನು ಕುಟುಂಬದಿಂದ, ಕುಟುಂಬದ ಕಾರ್ಯಕ್ರಮಗಳಿಂದ ಹೊರಗಿಟ್ಟಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಪೂರಕವಾಗಿ ಎನ್​ಟಿಆರ್ ಜನ್ಮಶತಮಾನೋತ್ಸವ ಕಾರ್ಯಕ್ರಮಗಳಿಗೆ ಜೂ ಎನ್​ಟಿಆರ್​ಗೆ ಆಹ್ವಾನ ನೀಡಿರಲಿಲ್ಲ. ಚಂದ್ರಬಾಬು ನಾಯ್ಡು, ತಮ್ಮ ಪುತ್ರ ನಾರಾ ಲೋಕೇಶ್ ಅನ್ನು ಟಿಡಿಪಿ ಪಕ್ಷದ ಪ್ರಮುಖನನ್ನಾಗಿಸಬೇಕು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಜೂ ಎನ್​ಟಿಆರ್ ಅನ್ನು ದೂರ ಇರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜೂ ಎನ್​ಟಿಆರ್ ಅನ್ನು ನಂದಮೂರಿ ಕುಟುಂಬಸ್ಥರು ಕಡೆಗಣಿಸಿರುವುದು ಅವರ ಅಭಿಮಾನಿಗಳಿಗೆ ಬೇಸರ, ಸಿಟ್ಟು ತರಿಸಿದೆ. ಅದರಲ್ಲಿಯೂ ನಾರಾ ಲೋಕೇಶ್​ ಲಾಭಕ್ಕಾಗಿ ಜೂ ಎನ್​ಟಿಆರ್ ಅನ್ನು ಕಡೆಗಣಿಸಿರುವುದರಿಂದ ಜೂ ಎನ್​ಟಿಆರ್ ಅಭಿಮಾನಿಗಳ ಸಿಟ್ಟು ನಾರಾ ಲೋಕೇಶ್ ಹಾಗೂ ಅವರ ಬೆಂಬಲಿಗರ ವಿರುದ್ಧ ತಿರುಗಿದೆ. ನಿನ್ನೆಯಷ್ಟೆ ಅಮೆರಿಕದ ತೆಲುಗು ಜನರ ಕಾರ್ಯಕ್ರಮದಲ್ಲಿ ಜೂ ಎನ್​ಟಿಆರ್ ಹಾಗೂ ನಾರಾ ಲೋಕೇಶ್ ಬೆಂಬಲಿಗರು ಪರಸ್ಪರ ಜಗಳವಾಡಿದ್ದು ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ರಾಜಕೀಯ ಚರ್ಚೆ ಎಬ್ಬಿಸಿದ ಜೂ ಎನ್​ಟಿಆರ್ ಅಭಿಮಾನಿಯ ಸಾವು: ಕೊಲೆಯಾ? ಆತ್ಮಹತ್ಯೆಯಾ?

ಉತ್ತರ ಅಮೆರಿಕದ ತೆಲುಗು ಜನರ ಸಂಸ್ಥೆ ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ (TANA) ವತಿಯಿಂದ ಅಮೆರಿಕದ ಫಿಲಿಡೆಲ್ಫಿಯಾ ನಗರದಲ್ಲಿನ ಪೆನ್ಸಿಲ್​ವೇನಿಯಾ ಕನ್​ವೆನ್ಷನ್ ಸೆಂಟರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೂ ಎನ್​ಟಿಆರ್ ಹಾಗೂ ನಾರಾ ಲೋಕೇಶ್ ಅಭಿಮಾನಿಗಳು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಈ ಗಲಾಟೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಜುಲೈ 8ರಂದು ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ ಸಂಸ್ಥೆಯ 25ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟಿಸಿದರು. ಆ ನಂತರ ನಡೆದ ಕಾರ್ಯಕ್ರಮಗಳಲ್ಲಿ ಹಲವು ಟಿಡಿಪಿ ಪ್ರಮುಖರು ಸಹ ಭಾಗವಹಿಸಿದ್ದರು. ಟಿಡಿಪಿ ಪಕ್ಷಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ ಕೆಲವು ಯುವಕರು ಜೂ ಎನ್​ಟಿಆರ್ ಪರವಾಗಿ ಘೋಷಣೆ ಕೂಗಿದರು. ಒಬ್ಬರಂತೂ ಎದ್ದು ನಾರಾ ಲೋಕೇಶ್ ಮುಂದಾಳತ್ವದಲ್ಲಿ 2024ರ ಚುನಾವಣೆಗೆ ಹೋದರೆ ಮತ್ತೆ ಸೋಲು ಗ್ಯಾರೆಂಟಿ ಮೊದಲು ಅವನನ್ನು ಪಕ್ಷದಿಂದ ತೆಗೆದು ಆ ಸ್ಥಾನಕ್ಕೆ ಜೂ ಎನ್​ಟಿಆರ್ ಅನ್ನು ಕರೆತನ್ನಿ, ಮುಳುಗುತ್ತಿರುವ ಟಿಡಿಪಿಯನ್ನು ಜೂ ಎನ್​ಟಿಆರ್ ಮಾತ್ರವೇ ಉಳಿಸಬಲ್ಲರು ಎಂದರು.

ಯುವಕನ ಈ ಮಾತುಗಳು ಸಭೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಮೂಡಿಸಿ ಸಭೆಯು ಎರಡು ಗುಂಪುಗಳಾಗಿ ವಿಭಜನೆಗೊಂಡಿತು. ಒಂದು ಗುಂಪನ್ನು ಸ್ಥಳೀಯ ಮುಖಂಡರಾದ ಸತೀಶ್ ವೇಮನ್ನ ಹಾಗೂ ಮತ್ತೊಂದು ತಾರಾನಿ ಪರಚೂರಿ ಅವರುಗಳು ಮುನ್ನಡೆಸಿ ವಾಗ್ವಾದ ಆರಂಭಿಸಿದರು. ವಾಗ್ವಾದ ಮಿತಿ ಮೀರಿ ಪರಸ್ಪರ ಗುಂಪುಗಳು ಕೈ-ಕೈ ಮಿಲಾಯಿಸಿದವು. ಎರಡೂ ಗುಂಪುಗಳು ಪರಸ್ಪರ ಕೋಲುಗಳಿಂದ ಬಡಿದಾಡಿಕೊಂಡಿದ್ದು ಹಲವರ ಬಟ್ಟೆಗಳನ್ನು ಸಹ ಹರಿದು ಹಾಕಿದ್ದಾರೆ. ಈ ಜಗಳವು ಟಿಡಿಪಿ ಪಕ್ಷದ ಎನ್​ಆರ್​ಐ ಸಂಘಟಕ ಕೋಮಾಟಿ ಜಯರಾಂ ಎದುರೇ ನಡೆದಿದೆ. ಅಮೆರಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ
ಚಲಿಸುತ್ತಿರುವ ರೈಲಿಂದ ಬಿದ್ದ ಮಹಿಳೆಯನ್ನು ದೇವರಂತೆ ಬಂದು ಕಾಪಾಡಿದ ಟಿಸಿ
ಮುಡಾ ಈಗ MDA ಆಗಿ ಬದಲಾದರೂ ಇನ್ನೂ ನಿಲ್ಲದ ಅಕ್ರಮ!
ಮುಡಾ ಈಗ MDA ಆಗಿ ಬದಲಾದರೂ ಇನ್ನೂ ನಿಲ್ಲದ ಅಕ್ರಮ!
ಸಿಎಂ ಕುರ್ಚಿ ಕದನ: ಡಿಕೆಶಿಗೆ ಇನ್ನೂ ಸಿಕ್ಕಿಲ್ವಾ ಸ್ವಷ್ಟ ಚಿತ್ರಣ?
ಸಿಎಂ ಕುರ್ಚಿ ಕದನ: ಡಿಕೆಶಿಗೆ ಇನ್ನೂ ಸಿಕ್ಕಿಲ್ವಾ ಸ್ವಷ್ಟ ಚಿತ್ರಣ?