AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಲ್ಲಿ ಎಲ್ಲರೂ ಮೃಗಗಳೇ ಯಾರಿಗೂ ಸಾವಿನ ಬಗ್ಗೆ ಭಯವಿಲ್ಲ, ಆದರೆ..’: ಜೂ ಎನ್​ಟಿಆರ್ ಹೊಸ ಸಿನಿಮಾ ಕತೆ

Jr NTR: ಜೂ ಎನ್​ಟಿಆರ್ ನಟನೆಯ 'ದೇವರ' ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾದ ಒನ್​ಲೈನ್ ಕತೆ ಇದೀಗ ಹೊರಬಿದ್ದಿದೆ.

'ಅಲ್ಲಿ ಎಲ್ಲರೂ ಮೃಗಗಳೇ ಯಾರಿಗೂ ಸಾವಿನ ಬಗ್ಗೆ ಭಯವಿಲ್ಲ, ಆದರೆ..': ಜೂ ಎನ್​ಟಿಆರ್ ಹೊಸ ಸಿನಿಮಾ ಕತೆ
ದೇವರ ಸಿನಿಮಾ
Follow us
ಮಂಜುನಾಥ ಸಿ.
|

Updated on: Jul 30, 2023 | 8:04 PM

ಆರ್​ಆರ್​ಆರ್‘ (RRR) ಸಿನಿಮಾದ ಮೂಲಕ ಗ್ಲೋಬಲ್ ಹಿಟ್ ನೀಡಿರುವ ಜೂ ಎನ್​ಟಿಆರ್ (Jr NTR) ಮೇಲೆ ಈಗ ನಿರೀಕ್ಷೆಗಳು ದುಪ್ಪಟ್ಟಾಗಿದೆ. ‘ಆರ್​ಆರ್​ಆರ್’ ಗ್ಲೋಬಲ್ ಹಿಟ್ ಆಗುವ ಮುನ್ನವೇ ಜೂ ಎನ್​ಟಿಆರ್, ಕೊರಟಾಲ ಶಿವ ಜೊತೆಗಿನ ‘ದೇವರ’ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಆದರೆ ‘ಆರ್​ಆರ್​ಆರ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಬಳಿಕ ಕೊರಟಾಲ ಶಿವ (Koratala Shiva) ತಮ್ಮ ಸಿನಿಮಾದ ಚಿತ್ರಕತೆಯನ್ನು ತಿದ್ದಿದ ಜೊತೆಗೆ ಸಿನಿಮಾವನ್ನು ದೊಡ್ಡ ಸ್ಕೇಲ್​ನಲ್ಲಿ ನಿರ್ಮಿಸಲು ಮುಂದಾಗಿದ್ದಾರೆ.

‘ದೇವರ’ ಸಿನಿಮಾದ ಕತೆಯ ಎಳೆಯೊಂದು ಇದೀಗ ಬಹಿರಂಗಗೊಂಡಿದೆ. ‘ದೇವರ’ ಚಿತ್ರತಂಡವು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಪ್ರೋಮೋ ವಿಡಿಯೋದ ಹಿನ್ನೆಲೆಯಲ್ಲಿರುವ ಧ್ವನಿಯೊಂದು ‘ದೇವರ’ ಸಿನಿಮಾದ ಕತೆಯ ಎಳೆಯನ್ನು ಹೇಳಿದೆ. ”ಕತೆಯಲ್ಲಿ ಮನುಷ್ಯರಿಗಿಂತಲೂ ಹೆಚ್ಚು ಮೃಗಗಳೇ ಇರುತ್ತಾರೆ. ಸಾವೆಂದರೆ ಭಯ ಇರದ, ದೇವರೆಂದರೆ ಭಯ ಇರದ ಮೃಗಗಳು ಅವರು. ಆದರೆ ಅವರಿಗೆಲ್ಲ ಒಬ್ಬರೆಂದರೆ ಭಯ. ಅದು ಯಾರೆಂದು ವಿವರಿಸಿ ಹೇಳಬೇಕಿಲ್ಲ. ಭಯ ಇರಬೇಕು, ಭಯ ಅವಶ್ಯಕ, ಭಯ ಪಡಿಸಲು ಈ ಸಿನಿಮಾದಲ್ಲಿ ಆತ ಯಾವ ರೇಂಜಿಗೆ ಬೇಕಾದರು ಹೋಗುತ್ತಾನೆ. ಇದು ಬಹಳ ಎಮೋಷನಲ್ ಪಯಣ” ಎಂದಿದೆ.

‘ದೇವರ’ ಸಿನಿಮಾ ಪಕ್ಕಾ ಆಕ್ಷನ್ ಭರಿತ ಹೊಡಿ-ಬಡಿ ಕತೆಯನ್ನು ಒಳಗೊಂಡಿರುವುದು ಇದಾಗಲೇ ಖಾತ್ರಿಯಾಗಿದೆ. ಸಮುದ್ರ ತಟದಲ್ಲಿ ನಡೆವ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಮುದ್ರದ ಮೇಲೆ ಅಧಿಕಾರಕ್ಕಾಗಿ ಪರಸ್ಪರ ಕಾದಾಟದಲ್ಲಿರುವ ಮೃಗಗಳ ಮಧ್ಯೆ ಜೂ ಎನ್​ಟಿಆರ್ ಪಾತ್ರ ಸೆಣೆಸಲಿದೆ ಎನ್ನಲಾಗುತ್ತಿದೆ. ಅಲ್ಲದೆ ಸಿನಿಮಾದಲ್ಲಿ ಜೂ ಎನ್​ಟಿಆರ್ ಎರಡು ಷೇಡ್​ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಇದನ್ನೂ ಓದಿ:‘ಕೆಜಿಎಫ್ 2’ ನೋಡಿ ಕಲಿತುಕೊಳ್ಳಲು ಸ್ಟಾರ್​ ಡೈರೆಕ್ಟರ್​ಗೆ ಸೂಚನೆ ನೀಡಿದ ಜ್ಯೂ. ಎನ್​ಟಿಆರ್​?

‘ದೇವರ’ ಸಿನಿಮಾದಲ್ಲಿ ಜೂ ಎನ್​ಟಿಆರ್ ಜೊತೆಗೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಇದು ಜಾನ್ಹವಿಯ ಮೊದಲ ದಕ್ಷಿಣ ಭಾರತದ ಸಿನಿಮಾ. ಜಾನ್ಹವಿ ಜೊತೆಗೆ ಮತ್ತೊಬ್ಬ ನಟಿಯೂ ಈ ಸಿನಿಮಾದಲ್ಲಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಸಿನಿಮಾದ ಮುಖ್ಯ ವಿಲನ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಸಿನಿಮಾದ ಪ್ರಮುಖ ವಿಭಾಗಗಳಿಗೆ ನುರಿತ ತಂತ್ರಜ್ಞರನ್ನು ನೇಮಿಸಿಕೊಳ್ಳಲಾಗಿದೆ. ಸಿನಿಮಾದ ಸಾಹಸ ನಿರ್ದೇಶನಕ್ಕೆ ಹಾಲಿವುಡ್​ನ ಜನಪ್ರಿಯ ಸಾಹಸ ನಿರ್ದೇಶಕರನ್ನು ಕರೆತರಲಾಗಿದೆ.

ಜೂ ಎನ್​ಟಿಆರ್, ‘ದೇವರ’ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಕೊರಟಾಲ ಶಿವ ಸಹ, ಜೂ ಎನ್​ಟಿಆರ್ ಒತ್ತಾಯದ ಮೇರೆಗೆ ಸಿನಿಮಾದ ಚಿತ್ರಕತೆಯನ್ನು ಹಲವು ಬಾರಿ ತಿದ್ದಿರುವುದಲ್ಲದೆ ಭಾರಿ ಬಜೆಟ್​ನಲ್ಲಿ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಸಿನಿಮಾಕ್ಕಾಗಿ ಎರಡು ಹಾಲಿವುಡ್​ ರೇಂಜ್​ನ ಫೈಟ್ ಸೀಕ್ವೆನ್ಸ್​ಗಳನ್ನು ಸೃಷ್ಟಿಸಿದ್ದಾರಂತೆ. ಒಂದು ಫೈಟ್ ದೊಡ್ಡ ಹಡಗಿನಲ್ಲಿ ನಡೆದರೆ ಮತ್ತೊಂದು ಫೈಟ್ ಸಮುದ್ರದ ದಡದಲ್ಲಿ ನಡೆಯುತ್ತದೆ. ಎರಡಕ್ಕೂ ಹಾಲಿವುಡ್​ನ ಅನುಭವಿ ಫೈಟ್ ಕಂಪೋಸರ್​ ಅನ್ನು ಕರೆತರಲಾಗಿದೆ. ‘ದೇವರ’ ಸಿನಿಮಾ 2024 ರ ಏಪ್ರಿಲ್ 05ಕ್ಕೆ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ