AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Malavika Sreenath: ಆಡಿಷನ್​ಗೆ ಕರೆದು ರಾಜಿ ಆಗುವಂತೆ ಒತ್ತಾಯ ಹೇರಿದ್ದ ಕಾಮುಕ; ಮಾಳವಿಕಾ ಶ್ರೀನಾಥ್​ ತೆರೆದಿಟ್ಟ ಕರಾಳ ಘಟನೆ

Casting Couch: ಕಾಸ್ಟಿಂಗ್​ ಕೌಚ್​ ಬಗ್ಗೆ ಮಾಳವಿಕಾ ಶ್ರೀನಾಥ್​ ಮಾತನಾಡಿದ್ದಾರೆ. ‘ನಾನು ಡ್ರೆಸಿಂಗ್​ ರೂಮ್​ನಲ್ಲಿ ಇದ್ದಾಗ ಆತ ಹಿಂದಿನಿಂದ ಬಂದು ತಬ್ಬಿಕೊಂಡ’ ಎಂದು ಕೆಟ್ಟ ದಿನವನ್ನು ನೆನಪಿಸಿಕೊಂಡಿದ್ದಾರೆ.

Malavika Sreenath: ಆಡಿಷನ್​ಗೆ ಕರೆದು ರಾಜಿ ಆಗುವಂತೆ ಒತ್ತಾಯ ಹೇರಿದ್ದ ಕಾಮುಕ; ಮಾಳವಿಕಾ ಶ್ರೀನಾಥ್​ ತೆರೆದಿಟ್ಟ ಕರಾಳ ಘಟನೆ
ಮಾಳವಿಕಾ ಶ್ರೀನಾಥ್
ಮದನ್​ ಕುಮಾರ್​
|

Updated on: Apr 11, 2023 | 2:27 PM

Share

ಹೊರಗಿನಿಂದ ನೋಡುವವರಿಗೆ ಚಿತ್ರರಂಗ ತುಂಬಾ ಕಲರ್​ಫುಲ್​ ಆಗಿ ಕಾಣುತ್ತದೆ. ಆದರೆ ಅಸಲಿ ವಿಷಯ ಹಾಗೆ ಇರುವುದಿಲ್ಲ. ಬಣ್ಣದ ಲೋಕದಲ್ಲೂ ಕಾಮುಕರ ಹಾವಳಿ ಇರುತ್ತದೆ. ಅನೇಕ ನಟಿಯರು ಕಾಸ್ಟಿಂಗ್​ ಕೌಚ್​ (Casting Couch) ಪಿಡುಗಿನಿಂದ ಬೇಸತ್ತಿದ್ದಾರೆ. ಈ ಹಿಂದೆ ಭಾರತದಲ್ಲಿ ಮೀಟೂ (Me Too) ಆಂದೋಲನ ಜೋರಾಗಿದ್ದಾಗ ಹಲವು ನಟಿಯರು ಈ ಕುರಿತು ಮಾತನಾಡಿದ್ದರು. ಶ್ರುತಿ ಹರಿಹರನ್​, ತನುಶ್ರೀ ದತ್ತ ಮುಂತಾದ ಜನಪ್ರಿಯ ಹೀರೋಯಿನ್​ಗಳು ಧೈರ್ಯವಾಗಿ ತಮ್ಮ ಅನುಭವ ಹಂಚಿಕೊಂಡಿದ್ದರು. ಆ ನಂತರವೂ ಕಾಸ್ಟಿಂಗ್​ ಕೌಚ್​ ಹಾವಳಿ ನಿಂತಿಲ್ಲ. ಈಗ ನಟಿ ಮಾಳವಿಕಾ ಶ್ರೀನಾಥ್​ (Malavika Sreenath) ಅವರು ಒಂದು ಕಹಿ ಘಟನೆಯ ಬಗ್ಗೆ ವಿವರ ನೀಡಿದ್ದಾರೆ. ಆಡಿಷನ್​ಗೆ ಕರೆದು ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡ ವ್ಯಕ್ತಿಯ ಬಗ್ಗೆ ಅವರು ಮಾತನಾಡಿದ್ದಾರೆ. ಆದರೆ ಆತನ ಹೆಸರನ್ನು ಅವರು ಬಹಿರಂಗಪಡಿಸಿಲ್ಲ.

ಮಾಳವಿಕಾ ಶ್ರೀನಾಥ್​ ಅವರು ಫಿಲ್ಮಿ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ‘ಮಧುರಂ’, ‘ಸ್ಯಾಟರ್ಡೇ ನೈಟ್​’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘24’ ವಾಹಿನಿಯ ‘ಹ್ಯಾಪಿ ಟು ಮೀಟ್​ ಯೂ’ ಸಂದರ್ಶನದಲ್ಲಿ ಅವರು ಮೀಟೂ ವಿಚಾರದ ಬಗ್ಗೆ ಬಾಯಿಬಿಟ್ಟಿದ್ದಾರೆ. ಮೂರು ವರ್ಷದ ಹಿಂದೆ ಅವರೊಂದು ಆಡಿಷನ್​ ನೀಡಿದ್ದರು. ಮಂಜು ವಾರಿಯರ್​ ಮಗಳ ಪಾತ್ರಕ್ಕಾಗಿ ಆಡಿಷನ್​ ಕರೆಯಲಾಗಿತ್ತು. ಆಗ ಅವರಿಗೆ ಕಾಸ್ಟಿಂಗ್​ ಕೌಚ್​ ಅನುಭವ ಆಗಿತ್ತು. ಇದೇ ಮೊದಲ ಬಾರಿಗೆ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಕಾಸ್ಟಿಂಗ್​ ಕೌಚ್​ ವಿಚಾರದಲ್ಲಿ ಸ್ಯಾಂಡಲ್​​ವುಡ್​ನ​ ಎಳೆದು ತಂದ ಬಗ್ಗೆ ಸ್ಪಷ್ಟನೆ ನೀಡಿದ ತೆಲುಗು ನಿರ್ದೇಶಕ

ಇದನ್ನೂ ಓದಿ
Image
Ashitha First Reaction: ಆಶಿತಾ ಮೀಟೂ ವಿವಾದ: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ‘ಬಾ ಬಾರೋ ರಸಿಕ’ ಚಿತ್ರದ ನಟಿ
Image
Ashitha: ಕನ್ನಡ ಚಿತ್ರರಂಗದ ಕಹಿ ಸತ್ಯ ಅನಾವರಣ; ಮತ್ತೆ ಮೀಟೂ ಬಿರುಗಾಳಿ ಎಬ್ಬಿಸಿದ ನಟಿ ಆಶಿತಾ
Image
ಕಾಸ್ಟಿಂಗ್​ ಕೌಚ್​ ವಿಚಾರದಲ್ಲಿ ಸ್ಯಾಂಡಲ್​​ವುಡ್​ನ​ ಎಳೆದು ತಂದ ಬಗ್ಗೆ ಸ್ಪಷ್ಟನೆ ನೀಡಿದ ತೆಲುಗು ನಿರ್ದೇಶಕ
Image
ನಟನ ಮಗಳಿಗೂ ತಪ್ಪಿಲ್ಲ ಕಾಸ್ಟಿಂಗ್ ಕೌಚ್​; ಭಯಾನಕ ಸತ್ಯ ಬಿಚ್ಚಿಟ್ಟ ನಟಿ

‘ಕೌಸ್ಟಿಂಗ್​ ಕೌಚ್​ ಎಂಬುದು ರಿಯಾಲಿಟಿ. ನಾನು ಅದರ ಸಂತ್ರಸ್ತೆ. ಈ ಬಗ್ಗೆ ನಾನು ಬಹಿರಂಗವಾಗಿ ಎಲ್ಲಿಯೂ ಹೇಳಿರಲಿಲ್ಲ. ಈಗ ನನಗೆ ಚಿತ್ರರಂಗದಲ್ಲಿ ಒಂದು ಸ್ಥಾನ ಸಿಕ್ಕಿದೆ. ಹಾಗಾಗಿ ಇದನ್ನು ಹೇಳಲು ಧೈರ್ಯ ತೋರಿಸುತ್ತೇನೆ’ ಎಂದು ಮಾಳವಿಕಾ ಶ್ರೀನಾಥ್​ ಹೇಳಿದ್ದಾರೆ. ‘ಮಂಜು ವಾರಿಯರ್​ ಮಗಳ ಪಾತ್ರ ಎಂದಾಗ ಎಂಥವರೂ ಆಕರ್ಷಣೆಗೆ ಒಳಗಾಗುತ್ತಾರೆ. ಚಿತ್ರರಂಗದಲ್ಲಿ ನನಗೆ ಯಾರ ಸಂಪರ್ಕವೂ ಇರಲಿಲ್ಲ. ನಾನು ಕೂಡ ಆಡಿಷನ್​ಗೆ ಹೋದೆ. ಅದು ನಿಜವಾದ ಆಡಿಷನ್​ ಹೌದೋ ಅಲ್ಲವೋ ಎಂಬುದು ನನಗೆ ತಿಳಿದಿರಲಿಲ್ಲ’ ಎಂದಿದ್ದಾರೆ ಮಾಳವಿಕಾ.

ಇದನ್ನೂ ಓದಿ: ‘ಪರಮೇಶ ಪಾನ್​ವಾಲ’ ನಟಿ ಸುರ್ವೀನ್​ ಚಾವ್ಲಾಗೆ ಹಲವು ಬಾರಿ ಕಾಸ್ಟಿಂಗ್​ ಕೌಚ್​ ಕಾಟ; ಕೆಟ್ಟ ಅನುಭವ ತೆರೆದಿಟ್ಟಿದ್ದ ನಟಿ

‘ತ್ರಿಶುರ್​ನಲ್ಲಿ ಆಡಿಷನ್​ ಇತ್ತು. ತಾಯಿ ಮತ್ತು ಸಹೋದರಿ ಜೊತೆ ನಾನು ಅಲ್ಲಿಗೆ ಹೋದೆ. ಆಡಿಷನ್​ ಬಳಿಕ ನನ್ನ ಕೂದಲು ಕೆದರಿದ್ದರಿಂದ ಡ್ರೆಸಿಂಗ್​ ರೂಮ್​ಗೆ ತೆರಳಿ ಸರಿಮಾಡಿಕೊಳ್ಳುವಂತೆ ಆತ ಸೂಚಿಸಿದ. ನಾನು ಡ್ರೆಸಿಂಗ್​ ರೂಮ್​ನಲ್ಲಿ ಇದ್ದಾಗ ಆತ ಹಿಂದಿನಿಂದ ಬಂದು ತಬ್ಬಿಕೊಂಡ’ ಎಂದು ಆ ಕರಾಳ ದಿನವನ್ನು ಮಾಳವಿಕಾ ನೆನಪು ಮಾಡಿಕೊಂಡಿದ್ದಾರೆ.

‘ನಾನು ಆಗ ಚಿಕ್ಕವಳಾಗಿದ್ದೆ. ಭಯದಿಂದ ನಡುಗಿಹೋದೆ. ಆತನನ್ನು ದೂರ ತಳ್ಳಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ಅಳಲು ಆರಂಭಿಸಿದೆ. ಆತನ ಕ್ಯಾಮೆರಾವನ್ನು ಕೆಡಗಲು ಯತ್ನಿಸಿದೆ. ಅವನ ಗಮನವನ್ನು ಬೇರೆ ಕಡೆಗೆ ಸೆಳೆದು ಅಲ್ಲಿಂದ ತಪ್ಪಿಸಿಕೊಂಡು ಬಂದೆ’ ಎಂದು ಮಾಳವಿಕಾ ಶ್ರೀನಾಥ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.