AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್​​ಆರ್​ಆರ್​’ನಲ್ಲಿ ಮಲ್ಲಿ ಪಾತ್ರ ಮಾಡಿದ ಈ ಬಾಲಕಿ ಯಾರು ಗೊತ್ತಾ? ಇಲ್ಲಿದೆ ಅಚ್ಚರಿಯ ವಿಚಾರ

ರಾಜಮೌಳಿ ಎಲ್ಲದರಲ್ಲೂ ಪರ್ಫೆಕ್ಷನ್​ ತೋರುತ್ತಾರೆ. ಪಾತ್ರಗಳ ಆಯ್ಕೆಯಲ್ಲಿ ಅವರು ಎಂದೂ ಎಡವಿಲ್ಲ. ಅದೇ ರೀತಿ ಮಲ್ಲಿ ಪಾತ್ರದ ಆಯ್ಕೆಗೆ ಅವರು ಸಾಕಷ್ಟು ಹುಡುಕಾಟ ನಡೆಸಿದ್ದರು.

‘ಆರ್​​ಆರ್​ಆರ್​’ನಲ್ಲಿ ಮಲ್ಲಿ ಪಾತ್ರ ಮಾಡಿದ ಈ ಬಾಲಕಿ ಯಾರು ಗೊತ್ತಾ? ಇಲ್ಲಿದೆ ಅಚ್ಚರಿಯ ವಿಚಾರ
ಟ್ವಿಂಕಲ್ ಶರ್ಮ
TV9 Web
| Edited By: |

Updated on: Mar 30, 2022 | 6:32 PM

Share

ಎಸ್​.ಎಸ್​. ರಾಜಮೌಳಿ (SS Rajamouli) ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ (RRR Movie) ಬಾಕ್ಸ್ ಆಫೀಸ್​ನಲ್ಲಿ ಕಮಾಲ್​ ಮಾಡಿದೆ. ಈ ಚಿತ್ರ ಈಗಾಗಲೇ ವಿಶ್ವ ಮಟ್ಟದಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಬಾಲಿವುಡ್​ ಒಂದರಲ್ಲೇ ಈ ಚಿತ್ರದ ಗಳಿಕೆ 100 ಕೋಟಿ ದಾಟಿದೆ. ಈ ಚಿತ್ರದಲ್ಲಿ ಬುಡಗಕಟ್ಟು ಜನಾಂಗದ ಹುಡುಗಿ ಮಲ್ಲಿ (Malli) ಎಲ್ಲರ ಗಮನ ಸೆಳೆದಿದ್ದಳು. ಒಂದರ್ಥದಲ್ಲಿ ಈ ಪಾತ್ರ ಸಿನಿಮಾದ ಜೀವಾಳ. ಸಿನಿಮಾದ ಕಥೆ ಆರಂಭವಾಗುವುದೇ ಇಲ್ಲಿಂದ. ಸಿನಿಮಾದಲ್ಲಿ ಮಲ್ಲಿ ಪಾತ್ರ ಸಾಕಷ್ಟು ಗಮನಸೆಳೆದಿದ್ದಂತೂ ಸುಳ್ಳಲ್ಲ. ಹಾಗಿದ್ದರೆ ಮಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡ ಹುಡುಗಿ ಯಾರು? ಅವಳ ಹೆಸರು ಏನು? ಅವಳು ಎಲ್ಲಿಯವಳು? ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿದೆ ಉತ್ತರ.

ಕೋಮರಮ್ ಭೀಮ್ (ಜ್ಯೂ.ಎನ್​ಟಿಆರ್​)​ ಬುಡಗಕಟ್ಟು ಜನಾಂಗದವನು. ಅದೇ ಜನಾಂಗದ ಹುಡುಗಿ ಮಲ್ಲಿ. ಅವಳನ್ನು ಬ್ರಿಟಿಷರು ಅಪಹರಣ ಮಾಡಿಕೊಂಡು ಹೋಗುತ್ತಾರೆ. ಅವಳನ್ನು ಕರೆದುಕೊಂಡು ಬರೋಕೆ ಭೀಮ್​ ಹೋಗುತ್ತಾನೆ. ಅಲ್ಲಿಂದ ನಿಜವಾದ ಕಥೆ ಶುರುವಾಗುತ್ತದೆ. ಮಲ್ಲಿ ಪಾತ್ರ ಪ್ರೇಕ್ಷಕರಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಿತ್ತು. ಇವಳ ಹೆಸರು ಟ್ವಿಂಕಲ್ ಶರ್ಮಾ. ಇವಳು ಚಂಡೀಗಢದವಳು.

ರಾಜಮೌಳಿ ಎಲ್ಲದರಲ್ಲೂ ಪರ್ಫೆಕ್ಷನ್​ ತೋರುತ್ತಾರೆ. ಪಾತ್ರಗಳ ಆಯ್ಕೆಯಲ್ಲಿ ಅವರು ಎಂದೂ ಎಡವಿಲ್ಲ. ಅದೇ ರೀತಿ ಮಲ್ಲಿ ಪಾತ್ರದ ಆಯ್ಕೆಗೆ ಅವರು ಸಾಕಷ್ಟು ಹುಡುಕಾಟ ನಡೆಸಿದ್ದರು. ಈ ಪಾತ್ರಕ್ಕಾಗಿ 160 ಮಕ್ಕಳನ್ನು ಆಡಿಷನ್ ಮಾಡಲಾಗಿತ್ತು. ಈ ಪೈಕಿ ಟ್ವಿಂಕಲ್​ ಶರ್ಮಾ ಅಂತಿಮವಾಗಿ ಆಯ್ಕೆ ಆದರು. ಈ ಪಾತ್ರಕ್ಕೆ ಆಯ್ಕೆ ಆಗುವಾಗ ಆಕೆ 8ನೇ ಕ್ಲಾಸ್​ನಲ್ಲಿದ್ದಳು. ಈಗ ಅವಳು 10ನೇ ತರಗತಿಯಲ್ಲಿ ಓದುತ್ತಿದ್ದಾಳೆ.

‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್​’ ಸೇರಿ ಹಲವು ಟಿವಿ ಶೋಗಳಲ್ಲಿ ಆಕೆ ಸ್ಪರ್ಧಿಸಿದ್ದಾಳೆ. ಫ್ಲಿಪ್​ಕಾರ್ಟ್​ನಲ್ಲಿ ಮಕ್ಕಳನ್ನು ಒಳಗೊಂಡ ಜಾಹೀರಾತೊಂದು ಬಂದಿತ್ತು. ಅದರಲ್ಲಿ ಟ್ವಿಂಕಲ್ ಆ್ಯಕ್ಟ್ ಮಾಡಿದ್ದರು. ರಾಜಮೌಳಿ ಫ್ಲಿಪ್​ಕಾರ್ಟ್​ ಜಾಹೀರಾತನ್ನು ನೋಡಿದ್ದರು. ಮಲ್ಲಿ ಪಾತ್ರಕ್ಕೆ ಟ್ವಿಂಕಲ್​ ಸರಿಹೊಂದಬಹುದು ಅನಿಸಿತು. ಆ ಬಳಿಕ ಟ್ವಿಂಕಲ್​ಗೆ ಆಡಿಷನ್​ಗೆ ಆಹ್ವಾನ ನೀಡಿದರು ರಾಜಮೌಳಿ. 160 ಮಂದಿಯಲ್ಲಿ ಅವಳನ್ನು ಅಂತಿಮವಾಗಿ ಆಯ್ಕೆ ಮಾಡಿದರು. ಟ್ವಿಂಕಲ್​ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ‘ಆರ್​ಆರ್​ಆರ್​’ನಿಂದ ರಾಮ್​ ಚರಣ್​ಗೆ ಹೆಚ್ಚಿತು ಬೇಡಿಕೆ; ಬಾಲಿವುಡ್​ನಿಂದ ಬಂತು ಎರಡೆರಡು ಆಫರ್​

ಸೋಲಿಲ್ಲದ ಸರದಾರ ರಾಜಮೌಳಿ ಗೆಲುವಿನ ಗುಟ್ಟೇನು? ಇಲ್ಲಿವೆ ‘ಆರ್​ಆರ್​ಆರ್​’ ನಿರ್ದೇಶಕನ 5 ಸೂತ್ರಗಳು

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?