ಫ್ಯಾಷನ್, ಕಿರುತೆರೆ​ ಲೋಕದ ಪ್ರತಿಭಾವಂತ ಕನ್ನಡತಿ ಡಾ. ಪೂಜಾ ರಮೇಶ್​ಗೆ ಗೋವಾದಲ್ಲಿ ​ಸನ್ಮಾನ

ಗೋವಾ ಕಲಾ ಉತ್ಸವದಲ್ಲಿ ನಟಿ/ಮಾಡೆಲ್​ ಡಾ. ಪೂಜಾ ರಮೇಶ್​ ಅವರಿಗೆ ‘ಭಾರತ ಗೌರವ ಪ್ರಶಸ್ತಿ’ ನೀಡಲಾಯಿತು. ಇದು ಅವರ ಉತ್ಸಾಹವನ್ನು ಹೆಚ್ಚಿಸಿದೆ.

ಫ್ಯಾಷನ್, ಕಿರುತೆರೆ​ ಲೋಕದ ಪ್ರತಿಭಾವಂತ ಕನ್ನಡತಿ ಡಾ. ಪೂಜಾ ರಮೇಶ್​ಗೆ ಗೋವಾದಲ್ಲಿ ​ಸನ್ಮಾನ
ಡಾ. ಪೂಜಾ ರಮೇಶ್​ಗೆ ಗೋವಾದಲ್ಲಿ ​ಸನ್ಮಾನ
Follow us
| Updated By: ಮದನ್​ ಕುಮಾರ್​

Updated on: Mar 30, 2022 | 8:29 PM

ಕನ್ನಡದ ಪ್ರತಿಭೆಗಳು ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಫ್ಯಾಷನ್​, ಸಿನಿಮಾ, ಕಿರುತೆರೆಯಲ್ಲಿ ಖ್ಯಾತಿ ಪಡೆದ ಸೆಲೆಬ್ರಿಟಿಗಳು ಸಾಮಾಜಿಕ ಕಳಕಳಿ ತೋರಿಸಿದರೆ ಜನರಿಂದ ಸಿಗುವ ಗೌರವ ಹೆಚ್ಚುತ್ತದೆ. ಅಂಥ ಗೌರವಕ್ಕೆ ಪಾತ್ರರಾದವರಲ್ಲಿ ಕನ್ನಡತಿ ಡಾ. ಪೂಜಾ ರಮೇಶ್​ (Dr Pooja Ramesh) ಕೂಡ ಒಬ್ಬರು. ಅವರ ಸಾಧನೆಯನ್ನು ಗುರುತಿಸಿ ಹೊರ ರಾಜ್ಯಗಳಲ್ಲಿ ಸನ್ಮಾನ ಮಾಡಲಾಗಿದೆ. ಸಿನಿಮಾ, ಸೀರಿಯಲ್​, ಸಾಮಾಜಿಕ ಕಳಕಳಿ, ಮಾಡೆಲಿಂಗ್​ (Modelling) ಸೇರಿದಂತೆ ಹಲವು ಕ್ಷೇತ್ರದಲ್ಲಿ ಪೂಜಾ ರಮೇಶ್​ ಅವರು ತಮ್ಮನ್ನು ತೊಡಗಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಕಾರಣಾಂತರಗಳಿಂದ ಅವರು ನಟನೆಯಿಂದ ಒಂದಷ್ಟು ವರ್ಷಗಳ ಕಾಲ ಅಂತರ ಕಾಯ್ದುಕೊಂಡಿದ್ದರು. ಈಗ ಮತ್ತೆ ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ಪೂಜಾ ರಮೇಶ್​ ಅವರ ಕಾರ್ಯಗಳನ್ನು ಗುರುತಿಸಿ ಏಷ್ಯಾ ವೇದಿಕ್​ ಕಲ್ಚರ್​ ಅಕಾಡೆಮಿಯಿಂದ ಗೌರವ ಡಾಕ್ಟರೇಟ್​ ನೀಡಲಾಗಿತ್ತು. ಈಗ ಅಖಿಲ ಗೋವಾ ಕನ್ನಡಿಗರ ಮಹಾಸಂಘ ಮತ್ತು ಸ್ನೇಹ ಯುವ ಸಾಂಸ್ಕೃತಿಕ ಸಂಘ ಸೇರಿ ಗೋವಾ (Goa) ಕಲಾ ಉತ್ಸವದಲ್ಲಿ ಡಾ. ಪೂಜಾ ರಮೇಶ್​ ಅವರಿಗೆ ‘ಭಾರತ ಗೌರವ ಪ್ರಶಸ್ತಿ’ ನೀಡಲಾಗಿದೆ. ಇದು ಅವರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ. ಮಾಡಿದ ಕೆಲಸಗಳಿಗೆ ಮನ್ನಣೆ ಸಿಕ್ಕಿರುವುದು ಅವರಿಗೆ ಖುಷಿ ನೀಡಿದೆ.

ಫ್ಯಾಷನ್​ ಡಿಸೈನರ್​ ಆಗಿ ಕೆಲಸ ಮಾಡಬೇಕು ಎಂಬುದು ಪೂಜಾ ರಮೇಶ್​ ಅವರ ಉದ್ದೇಶ ಆಗಿತ್ತು. ವಿದ್ಯಾಭ್ಯಾಸಕ್ಕಾಗಿ ಅವರು 2007ರಲ್ಲಿ ಬೆಂಗಳೂರಿಗೆ ಬಂದರು. 2008ರಲ್ಲಿ ಆ್ಯಂಕರ್​ ಆಗಿ ವಾಹಿನಿಯೊಂದರಲ್ಲಿ ಕೆಲಸ ಆರಂಭಿಸಿದರು. ಅದಾಗಿ ಕೆಲವೇ ತಿಂಗಳು ಕಳೆಯುವುದರಲ್ಲಿ ಅವರಿಗೆ ಚಿತ್ರರಂಗದಿಂದ ಅವಕಾಶಗಳು ಬರಲು ಆರಂಭಿಸಿದವು. ನಿರುದ್ಯೋಗಿ, ಪೇಪರ್ ದೋಣಿ, ಲಹರಿ, ತಾಂಡವ, ಮಹಾಕಾಳಿ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದರು.

ಮೊದಲ ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ಪೂಜಾ ರಮೇಶ್​ ಅವರನ್ನು ಧಾರಾವಾಹಿ ಲೋಕವೂ ಕೈಬೀಸಿ ಕರೆಯಿತು. ಉದಯ ವಾಹಿನಿಯ ‘ಕಾಮಧೇನು’ ಸೀರಿಯಲ್​ನಲ್ಲಿ ಅವರು ಪ್ರಮುಖ ಪಾತ್ರ ಮಾಡಿದರು. ಎರಡು ವರ್ಷ ಸತತವಾಗಿ ಅವರು ಅದರಲ್ಲಿ ತೊಡಗಿಕೊಂಡರು. ನಂತರ ಧಾರಾವಾಹಿಗಳಲ್ಲೇ ಪೂಜಾ ರಮೇಶ್​ ಹೆಚ್ಚು ಬ್ಯುಸಿ ಆದರು. ಕಾಮಧೇನು, ಜಾನವಿ, ಸಂಭವಾಮಿ ಯುಗೇಯುಗೇ, ಗ್ರಹಣ, ಎಲ್ಲಿ ಜಾರಿತೋ ಮನವು, ಪಾಂಡು ರಂಗ ವಿಠ್ಠಲ, ಪಾರ್ವತಿ, ಎಸೆಸೆಲ್ಸಿ ನನ್ ಮಕ್ಕಳು, ಪರಮೇಶ್ವರ, ಅಶ್ವಿನಿ ನಕ್ಷತ್ರ ಮತ್ತು ತೆಲುಗಿನ 2 ಧಾರಾವಾಹಿಗಳಲ್ಲಿ ಪೂಜಾ ರಮೇಶ್​ ಅಭಿನಯಿಸಿದರು.

ಈ ಎಲ್ಲ ಕಾರ್ಯಗಳ ಜೊತೆಗೆ ಪೂಜಾ ಅವರು ಮಾಡೆಲಿಂಗ್​ನಲ್ಲಿಯೂ ಸಕ್ರಿಯರಾಗಿದ್ದರು. ಹಲವು ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡರು. 2015ರ ಬಳಿಕ ಅವರು ಬ್ರೇಕ್​ ತೆಗೆದುಕೊಂಡರು. ‘2015ರೊಳಗೆ ನನ್ನ ದೇಹದ ತೂಕ ಸ್ವಲ್ಪ ಜಾಸ್ತಿ ಆಯಿತು. ಮತ್ತೆ ನಾನು ಫಿಟ್​ ಆಗಿ ಇಂಡಸ್ಟ್ರಿಗೆ ಕಮ್​ಬ್ಯಾಕ್​ ಮಾಡಬೇಕು ಎನಿಸಿತು. 69 ಕೆಜಿ ಇಂದ 52 ಕೆಜಿಗೆ ತೂಕ ಇಳಿಸಿಕೊಂಡಿದ್ದೇನೆ. ಇಷ್ಟು ವರ್ಷ ಬ್ರೇಕ್ ತೆಗೆದುಕೊಂಡರೂ ಕೂಡ ಬಣ್ಣದ ಲೋಕ ನನ್ನನ್ನು ಮರೆತಿಲ್ಲ.   ಮತ್ತೆ ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಿಂದ ಅವಕಾಶಗಳು ಬರುತ್ತಿವೆ’ ಎಂದಿದ್ದಾರೆ ಪೂಜಾ ರಮೇಶ್​.

ಕೊವಿಡ್​ ಸಂದರ್ಭದಲ್ಲಿ ಅನೇಕ ಹಿರಿಯ ಕಲಾವಿದರಿಗೆ ಪೂಜಾ ರಮೇಶ್​ ಅವರು ಸಹಾಯ ಹಸ್ತ ಚಾಚಿದರು. ಇಂಥ ಕಾರ್ಯಕ್ಕಾಗಿ ಅವರಿಗೆ ಜನ್ಮಭೂಮಿ ಫೌಂಡೇಶನ್​ನಿಂದ ಮಹಿಳಾ ಸಾಧಕಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊಡಗಿನ ಕಾಫಿ ತೋಟದ ಕೂಲಿ ಕಾರ್ಮಿಕರ ಮಕ್ಕಳಿಗೆ ಕೈಲಾದ ಸಹಾಯ ಮಾಡಿ, ಸಮವಸ್ತ್ರವನ್ನೂ ಪೂಜಾ ರಮೇಶ್​ ವಿತರಿಸಿದರು. ಅದಕ್ಕಾಗಿ ಅವರಿಗೆ ‘ಕಾವೇರಿ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸೌಂದರ್ಯ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಮಿಸ್​ ಇಂಡಿಯಾ, ಬೆಸ್ಟ್​ ಬ್ಯೂಟಿಫುಲ್​ ಹೇರ್​ ಟೈಟಲ್​ ಗೆದ್ದರು.

ಇದನ್ನೂ ಓದಿ:

‘ಅವಕಾಶ ಇದ್ದಿದ್ರೆ ನಾನು ಒಂದು ಝೂ ಮಾಡ್ತಿದ್ದೆ’; ‘ಕನ್ನಡತಿ’ ನಟ ಕಿರಣ್​ ರಾಜ್​

‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್​ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ

ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್
ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್
ಕಾಂಗ್ರೆಸ್ ಕುತಂತ್ರದಿಂದ ನಿಖಿಲ್ ಎರಡು ಬಾರಿ ಸೋಲಬೇಕಾಯಿತು: ಕುಮಾರಸ್ವಾಮಿ
ಕಾಂಗ್ರೆಸ್ ಕುತಂತ್ರದಿಂದ ನಿಖಿಲ್ ಎರಡು ಬಾರಿ ಸೋಲಬೇಕಾಯಿತು: ಕುಮಾರಸ್ವಾಮಿ