AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Blind Movie Review: ಚುಟುಕಾದ, ಚುರುಕಾದ ಕಳ್ಳ-ಪೊಲೀಸ್​ ಕಹಾನಿ; ‘ಬ್ಲೈಂಡ್​’ ಚಿತ್ರದ ಪ್ಲಸ್ ಏನು? ಮೈನಸ್ ಏನು?

Sonam Kapoor: ಒಂದು ಕಳ್ಳ-ಪೊಲೀಸ್ ಕಥೆಯ ಹಾಗೆ ‘ಬ್ಲೈಂಡ್​’ ಚಿತ್ರ ಇಷ್ಟವಾಗುತ್ತದೆ. ಆ್ಯಕ್ಷನ್​ ಬಯಸುವ ಪ್ರೇಕ್ಷಕರಿಗೂ ಇಲ್ಲಿ ಮನರಂಜನೆ ಸಿಗುತ್ತದೆ.

Blind Movie Review: ಚುಟುಕಾದ, ಚುರುಕಾದ ಕಳ್ಳ-ಪೊಲೀಸ್​ ಕಹಾನಿ; ‘ಬ್ಲೈಂಡ್​’ ಚಿತ್ರದ ಪ್ಲಸ್ ಏನು? ಮೈನಸ್ ಏನು?
ಸೋನಮ್​ ಕಪೂರ್​
ಮದನ್​ ಕುಮಾರ್​
| Edited By: |

Updated on:Jul 07, 2023 | 9:21 AM

Share

ಚಿತ್ರ: ಬ್ಲೈಂಡ್​

ನಿರ್ಮಾಣ: ಸುಜಯ್​ ಘೋಶ್​

ನಿರ್ದೇಶನ: ಶೋಮೆ ಮಖಿಜಾ

ಪಾತ್ರವರ್ಗ: ಸೋನಮ್ ಕಪೂರ್​, ಪೂರಬ್​ ಕೊಹ್ಲಿ, ವಿನಯ್​ ಪಾಠಕ್​, ಶುಭಂ ಸರಫ್​ ಮುಂತಾದವರು.

ಸ್ಟಾರ್​: 3/5

ನಟಿ ಸೋನಮ್​ ಕಪೂರ್​ (Sonam Kapoor) ಅವರು ಇತ್ತೀಚಿನ ವರ್ಷಗಳಲ್ಲಿ ಸಖತ್​ ಚ್ಯೂಸಿ ಆಗಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಅವರು ಅವಸರ ತೋರಿಸುತ್ತಿಲ್ಲ. ಅವರನ್ನು ಮಿಸ್​ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಈಗೊಂದು ಚಾನ್ಸ್​ ಸಿಕ್ಕಿದೆ. ‘ಬ್ಲೈಂಡ್​’ ಸಿನಿಮಾದಲ್ಲಿ ಸೋನಮ್​ ಕಪೂರ್​ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ‘ಜಿಯೋ ಸಿನಿಮಾ’ (Jio Cinema) ಮೂಲಕ ಜುಲೈ 7ರಂದು ಬಿಡುಗಡೆ ಆಗಿರುವ ಈ ಚಿತ್ರದಲ್ಲಿ ಅವರಿಗೆ ಚಾಲೆಂಜಿಂಗ್​ ಆದಂತಹ ಪಾತ್ರವಿದೆ. ಅಪಘಾತದಲ್ಲಿ ದೃಷ್ಟಿ ಕಳೆದುಕೊಂಡು ಕಷ್ಟಪಡುವ ಯುವತಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಸಸ್ಪೆನ್ಸ್​-ಥ್ರಿಲ್ಲರ್ ಮಾದರಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಒಟಿಟಿ ಪ್ರೇಕ್ಷಕರು ಇಷ್ಟಪಡುವಂತಹ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದೆ. ಸೋನಮ್ ಕಪೂರ್​ ಅವರ ವೃತ್ತಿಜೀವನದಲ್ಲಿ ‘ಬ್ಲೈಂಡ್​’ ಸಿನಿಮಾ (Blind Movie) ಒಂದು ಡಿಫರೆಂಟ್​ ಪ್ರಯತ್ನವಾಗಿದೆ.

ಸಿನಿಮಾದ ಆರಂಭದಲ್ಲಿ ಸೋನಮ್​ ಕಪೂರ್​ ಅವರು ಪೊಲೀಸ್​ ಆಫೀಸರ್​ ಆಗಿ ಕಾಣಿಸಿಕೊಳ್ಳುತ್ತಾರೆ. ಶಾರ್ಪ್​ ಶೂಟರ್​ ಆದ ಅವರು ನಂತರದ ದೃಶ್ಯಗಳಲ್ಲಿ ಕಣ್ಣಿಲ್ಲದ ಯುವತಿಯಾಗಿ ಪ್ರೇಕ್ಷಕರ ಎದುರು ಬರುತ್ತಾರೆ. ಈ ಬದಲಾವಣೆಗೆ ಕಾರಣ ಆಗುವುದು ಒಂದು ಅಪಘಾತ. ಆ ದುರಂತ ಸಂಭವಿಸಿದ ಬಳಿಕ ಕಥಾನಾಯಕಿ ತನ್ನ ಕೆಲಸ ಕಳೆದುಕೊಳ್ಳುತ್ತಾಳೆ. ಆದರೂ ಆಕೆಯಲ್ಲಿ ಹೋರಾಟದ ಛಲ ಕಡಿಮೆ ಆಗಿರುವುದಿಲ್ಲ. ಸೈಕೋ ಕಿಲ್ಲರ್​ ಒಬ್ಬನನ್ನು ಹಿಡಿಯಲು ಅವಳು ಪಣ ತೊಡುತ್ತಾಳೆ. ಆಕೆಯ ಹೋರಾಟದ ಕಥೆಯೇ ‘ಬ್ಲೈಂಡ್’ ಸಿನಿಮಾದ ಸಾರಾಂಶ.

ಇದನ್ನೂ ಓದಿ: Adipurush Review: ಗ್ರಾಫಿಕ್ಸ್​ ನಂಬಿಕೊಂಡು ಯುದ್ಧ ಮಾಡಿದ ರಾಮ-ರಾವಣ; ಇದು ಓಂ ರಾವತ್​ ರಾಮಾಯಣ

ಕಣ್ಣಿಲ್ಲದ ಯುವತಿಯ ಪಾತ್ರ ಮಾಡುವುದು ಅಷ್ಟು ಸುಲಭವಲ್ಲ. ಅಂಥ ಪಾತ್ರಕ್ಕೆ ಜೀವ ತುಂಬಲು ಸೋನಮ್​ ಕಪೂರ್ ಪ್ರಯತ್ನಿಸಿದ್ದಾರೆ. ಇಡೀ ಸಿನಿಮಾದ ಕಥೆ ವಿದೇಶದಲ್ಲಿ ಸಾಗುತ್ತದೆ. ಹಾಗಾಗಿ ಈ ಚಿತ್ರದಲ್ಲಿ ಬರುವ ಪೊಲೀಸ್​ ತನಿಖೆಯ ಸನ್ನಿವೇಶಗಳು ಭಾರತೀಯ ಸಿನಿಮಾಗಳಲ್ಲಿ ತೋರಿಸುವ ದೃಶ್ಯಗಳಿಗಿಂತ ಭಿನ್ನವೇ ಆಗಿದೆ. ಸೈಕೋ ಕಿಲ್ಲರ್​ ಪಾತ್ರದಲ್ಲಿ ಪೂರಬ್​ ಕೊಹ್ಲಿ ನಟಿಸಿದ್ದಾರೆ. ಅವರ ಅಭಿನಯ ಕೂಡ ಗಮನ ಸೆಳೆಯತ್ತದೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿನಯ್​ ಪಾಠಕ್​ ಅವರಿಗೂ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ. ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ಶುಭಂ ಸರಫ್ ಅವರು ಇಷ್ಟವಾಗುತ್ತಾರೆ.

ಇದನ್ನೂ ಓದಿ: Dhoomam Review: ಸಿಗರೇಟ್​ ಬಗ್ಗೆ ಸಂದೇಶ ನೀಡಲು ಎಷ್ಟೆಲ್ಲ ಸರ್ಕಸ್​; ಸರಳವಾಗಿಲ್ಲ ‘ಧೂಮಂ’

2011ರಲ್ಲಿ ತೆರೆಕಂಡ ಕೊರಿಯನ್​ ಭಾಷೆಯ ‘ಬ್ಲೈಂಡ್​’ ಸಿನಿಮಾವನ್ನು ಅದೇ ಶೀರ್ಷಿಕೆಯಡಿ ಹಿಂದಿಯಲ್ಲಿ ರಿಮೇಕ್​ ಮಾಡಲಾಗಿದೆ. ಸಸ್ಪೆನ್ಸ್​ ಮತ್ತು ಥ್ರಿಲ್ಲರ್​ ಅಂಶಗಳನ್ನು ಹೊಂದಿರುವ ಕಥೆಯೇ ಈ ಸಿನಿಮಾದ ಪ್ಲಸ್​ ಪಾಯಿಂಟ್​. ಚಿತ್ರದ ಅವಧಿ ಕೇವಲ 2 ಗಂಟೆ 4 ನಿಮಿಷ ಇದೆ. ಅನಗತ್ಯವಾದ ಹಾಡು, ಹಾಸ್ಯ ಇತ್ಯಾದಿಗಳಿಗೆ ಇಲ್ಲಿ ಜಾಗವಿಲ್ಲ. ಪಟಪಟನೆ ಸಾಗುವ ದೃಶ್ಯಗಳಿಂದಾಗಿ ನೋಡಿಸಿಕೊಂಡು ಹೋಗುವ ಗುಣ ಈ ಚಿತ್ರಕ್ಕಿದೆ. ಈ ದೃಷ್ಟಿಯಲ್ಲಿ ನೋಡಿದರೆ ಈ ಚಿತ್ರ ಚುಟುಕಾಗಿದೆ ಮತ್ತು ಚುರುಕಾಗಿದೆ. ಇನ್ನು, ಆ್ಯಕ್ಷನ್​ ಬಯಸುವ ಪ್ರೇಕ್ಷಕರಿಗೂ ಇಲ್ಲಿ ಮನರಂಜನೆ ಸಿಗುತ್ತದೆ. ಕಥಾನಾಯಕಿ ಕಣ್ಣು ಕಾಣದೆಯೂ ಫೈಟ್​ ಮಾಡುವ ದೃಶ್ಯಗಳು ರೋಚಕವಾಗಿವೆ.

ಇದನ್ನೂ ಓದಿ: Nanu Kusuma Review: ರಿಯಲಿಸ್ಟಿಕ್​ ಶೈಲಿಯಲ್ಲಿ ಮೂಡಿಬಂದ ‘ನಾನು ಕುಸುಮ’; ಅಸಹಾಯಕ ಹೆಣ್ಣಿನ ನೋವಿಗೆ ಹಿಡಿದ ಕನ್ನಡಿ

ಒಂದಷ್ಟು ದೃಶ್ಯಗಳು ಗೊಂದಲ ಮೂಡಿಸುತ್ತವೆ. ಇನ್ನೂ ಕೆಲವು ಕಡೆಗಳಲ್ಲಿ ಲಾಜಿಕ್​ನ ಕೊರತೆ ಎದ್ದು ಕಾಣುತ್ತದೆ. ಕಣ್ಣು ಕಳೆದುಕೊಂಡ ಕೆಲವೇ ದಿನಗಳಲ್ಲಿ ಕಥಾನಾಯಕಿಯು ಸೂಪರ್​ ಹೀರೋ ರೀತಿಯಲ್ಲಿ ವರ್ತಿಸುವುದು ಕೊಂಚ ಅಸಹಜ ಎನಿಸುತ್ತದೆ. ಅಂಥ ದೃಶ್ಯಗಳನ್ನು ಪ್ರೇಕ್ಷಕರು ನಂಬುವ ರೀತಿಯಲ್ಲಿ ಚಿತ್ರಿಸುವ ಅಗತ್ಯವಿತ್ತು ಎನಿಸುತ್ತದೆ. ಒಂದು ಕಳ್ಳ-ಪೊಲೀಸ್ ಕಥೆಯ ಹಾಗೆ ‘ಬ್ಲೈಂಡ್​’ ಚಿತ್ರವು ಮನರಂಜನೆ ನೀಡುತ್ತದೆ. ಅದರಾಚೆಗೆ ಹೆಚ್ಚೇನನ್ನೂ ನಿರೀಕ್ಷಿಸಲಾಗದು. ಒಮ್ಮೆ ನೋಡಿ ಎಂಜಾಯ್​ ಮಾಡಬಹುದಾದ ಚಿತ್ರಗಳ ಪಟ್ಟಿಗೆ ‘ಬ್ಲೈಂಡ್​’ ಕೂಡ ಸೇರುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:07 am, Fri, 7 July 23

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್