AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Game Changer Review: ಪ್ರೇಕ್ಷಕರಿಗೆ ಪಾಠ ಮಾಡಿ, ರಾಜಕೀಯಕ್ಕೆ ಚಾಟಿ ಬೀಸಿದ ಗೇಮ್ ಚೇಂಜರ್​

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಗೇಮ್ ಚೇಂಜರ್​’ ಇಂದು (ಜ.10) ರಿಲೀಸ್​ ಆಗಿದೆ. ರಾಮ್ ಚರಣ್​ ಅವರಿಗೆ ಇದು ಬಹಳ ಮುಖ್ಯವಾದ ಸಿನಿಮಾ. ಯಾಕೆಂದರೆ, ‘ಆರ್​ಆರ್​ಆರ್​’ ನಂತರ ಅವರು ಈ ಚಿತ್ರದಲ್ಲಿ ನಟಿಸಿದ್ದು, ನಿರೀಕ್ಷೆ ಜಾಸ್ತಿ ಇತ್ತು. ಹಾಗಾದರೆ ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬಂದಿದೆಯಾ? ಈ ವಿಮರ್ಶೆಯಲ್ಲಿದೆ ಉತ್ತರ..

Game Changer Review: ಪ್ರೇಕ್ಷಕರಿಗೆ ಪಾಠ ಮಾಡಿ, ರಾಜಕೀಯಕ್ಕೆ ಚಾಟಿ ಬೀಸಿದ ಗೇಮ್ ಚೇಂಜರ್​
Game Changer
Follow us
ಮದನ್​ ಕುಮಾರ್​
|

Updated on: Jan 10, 2025 | 3:51 PM

​ಸಿನಿಮಾ: ಗೇಮ್ ಚೇಂಜರ್​. ನಿರ್ಮಾಣ: ದಿಲ್ ರಾಜು. ನಿರ್ದೇಶನ: ಶಂಕರ್​. ಪಾತ್ರವರ್ಗ: ರಾಮ್ ಚರಣ್​, ಕಿಯಾರಾ ಅಡ್ವಾಣಿ, ಎಸ್​ಜೆ ಸೂರ್ಯ, ಜಯರಾಮ್, ಸುನಿಲ್, ಅಂಜಲಿ ಮುಂತಾದವರು. ಸ್ಟಾರ್​: 3/5

ಒಮ್ಮೆ ರಾಜಮೌಳಿ ಜೊತೆ ಸಿನಿಮಾ ಮಾಡಿ ಸೂಪರ್​ ಸಕ್ಸಸ್ ಕಾಣುವ ಹೀರೋಗಳು ನಂತರದ ಸಿನಿಮಾದಲ್ಲಿ ಬೇರೆ ನಿರ್ದೇಶಕರ ಜೊತೆ ಕೈ ಜೋಡಿಸಿದರೆ ಸೋಲು ಖಚಿತ ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ ಅದನ್ನು ಸುಳ್ಳು ಮಾಡಬೇಕು ಎಂಬ ಪ್ರಯತ್ನ ಎಲ್ಲ ಹೀರೋಗಳಿಂದಲೂ ಆಗುತ್ತದೆ. ರಾಮ್ ಚರಣ್​ ನಟಿಸಿದ್ದ ‘ಆರ್​ಆರ್​ಆರ್​’ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಚಿತ್ರದ ನಂತರ ರಾಮ್ ಚರಣ್ ಅವರ ಖಾತೆಯಿಂದ ಬಂದಿರುವ ಸಿನಿಮಾ ‘ಗೇಮ್​ ಚೇಂಜರ್​’. ಆದ್ದರಿಂದ ಈ ಸಿನಿಮಾ ಮಾಡುವಾಗ ಅವರ ಮೇಲೆ ಹೆಚ್ಚುವರಿ ನಿರೀಕ್ಷೆ ಮೂಡಿತ್ತು. ಈಗ ‘ಗೇಮ್​ ಚೇಂಜರ್​’ ಬಿಡುಗಡೆಯಾಗಿ ಪ್ರೇಕ್ಷಕರ ಎದುರು ಬಂದಿದೆ.

ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡ ನಿರ್ದೇಶಕ ಶಂಕರ್​ ಅವರು ‘ಗೇಮ್ ಚೇಂಜರ್​’ ಸಿನಿಮಾದಲ್ಲಿ ರಾಮ್ ಚರಣ್​ ಜೊತೆ ಕೈ ಜೋಡಿಸಿದ್ದಾರೆ. ಅವರಿಬ್ಬರ ಕಾಂಬಿನೇಷನ್​ಗೆ ನಿರ್ಮಾಪಕ ದಿಲ್ ರಾಜು ಅವರು ನೂರಾರು ಕೋಟಿ ರೂಪಾಯಿ ಬಂಡವಾಳ ಸುರಿದಿದ್ದಾರೆ. ಮೇಕಿಂಗ್ ಗುಣಮಟ್ಟದಲ್ಲಿ ಕಿಂಚಿತ್ತೂ ರಾಜಿ ಮಾಡಿಕೊಳ್ಳಲದೇ ಈ ಸಿನಿಮಾವನ್ನು ಮಾಡಲಾಗಿದೆ. ರಾಮ್ ಚರಣ್ ಅವರಿಗೆ ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರು ಇದ್ದಾರೆ. ಎರಡೂ ವರ್ಗಕ್ಕೆ ಇಷ್ಟ ಆಗುವಂತಹ ಸಿನಿಮಾವನ್ನು ಶಂಕರ್​ ಅವರು ಕಟ್ಟಿಕೊಟ್ಟಿದ್ದಾರೆ.

ರಾಮ್ ಚರಣ್ ಅವರಿಗೆ ‘ಗೇಮ್ ಚೇಂಜರ್​’ ಸಿನಿಮಾದಲ್ಲಿ ದ್ವಿಪಾತ್ರವಿದೆ. ತಂದೆಯಾಗಿ ಹಾಗೂ ಮಗನಾಗಿ ಅವರು ಕಾಣಿಸಿಕೊಂಡಿದ್ದಾರೆ. ಎರಡೂ ಪಾತ್ರಕ್ಕೂ ಅದರದ್ದೇ ಆದ ಶೇಡ್​ಗಳು ಇವೆ. ಒಂದು ಶೇಡ್​ನಲ್ಲಿ ಬಿಕ್ಕಳಿಸುತ್ತ ಮಾತನಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡ ರಾಮ್ ಚರಣ್​ ಅವರು ಇನ್ನೊಂದು ಪಾತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಮಿಂಚುತ್ತಾರೆ. ಪೊಲೀಸ್​ ಆಗಿಯೂ, ಜಿಲ್ಲಾಧಿಕಾರಿ ಆಗಿಯೂ ಗಮನ ಸೆಳೆಯುತ್ತಾರೆ.

ಅಷ್ಟೇ ಅಲ್ಲದೇ, ಲವರ್​ ಬಾಯ್ ಗೆಟಪ್​ನಲ್ಲಿ ಕೂಡ ಅಭಿಮಾನಿಗಳಿಗೆ ರಾಮ್ ಚರಣ್​ ಇಷ್ಟ ಆಗುತ್ತಾರೆ. ಅವರಿಗೆ ನಟಿ ಕಿಯಾರಾ ಅಡ್ವಾಣಿ ಜೋಡಿಯಾಗಿದ್ದಾರೆ. ಕಿಯಾರಾ ಅಡ್ವಾಣಿ ಪಾತ್ರಕ್ಕೆ ಹೆಚ್ಚು ಸ್ಕ್ರೀನ್ ಸ್ಪೇಸ್​ ಇಲ್ಲದಿದ್ದರೂ ಕಥೆಗೆ ಬಹಳ ಮಹತ್ವ ಎನಿಸುವಂತಹ ಪಾತ್ರ ಅವರದ್ದಾಗಿದೆ. ಶಂಕರ್​ ಅವರು ಎಂದಿನಂತೆ ಹಾಡುಗಳ ಮೂಲಕ ಅದ್ದೂರಿತನವನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ.

ಆ್ಯಕ್ಷನ್​ ದೃಶ್ಯಗಳಿಗೆ ಈ ಸಿನಿಮಾದಲ್ಲಿ ಯಾವುದೇ ಕೊರತೆ ಇಲ್ಲ. ಒಬ್ಬ ಜಿಲ್ಲಾಧಿಕಾರಿಗೆ ಇರುವ ಅಧಿಕಾರಗಳು ಏನು? ಆತ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು? ರಾಜಕೀಯದಲ್ಲಿ ಸರಿಯಾಗಬೇಕಿರುವ ವಿಷಯಗಳು ಏನು? ಮತದಾನ ಹೇಗೆ ನಡೆಯಬೇಕು ಎಂಬಿತ್ಯಾದಿ ಗಂಭೀರ ವಿಚಾರಗಳೇ ‘ಗೇಮ್​ ಚೇಂಜರ್​’ ಸಿನಿಮಾದ ಪ್ರಮುಖ ಟಾಪಿಕ್. ಅದನ್ನು ಸಾಧ್ಯವಾದಷ್ಟು ಮಾಸ್ ಶೈಲಿಯಲ್ಲಿ ಜನರಿಗೆ ತಲುಪಿಸಿ ಪಾಠ ಮಾಡಲು ನಿರ್ದೇಶಕ ಶಂಕರ್ ಪ್ರಯತ್ನಿಸಿದ್ದಾರೆ. ದುಡ್ಡಿಗಾಗಿ ಮತ ಮಾರಿಕೊಳ್ಳಬಾರದು ಎಂಬ ಸಂದೇಶವೂ ಈ ಚಿತ್ರದಲ್ಲಿದೆ.

ಇದನ್ನೂ ಓದಿ: ಗೇಮ್​ ಚೇಂಜರ್​ ಬಿಡುಗಡೆ: ಹೇಗಿದೆ ರಾಮ್ ಚರಣ್ ಸಿನಿಮಾದ ಫಸ್ಟ್​ ಹಾಫ್​?

​ತಿರು ಅವರ ಛಾಯಾಗ್ರಹಣ, ಎಸ್​. ಥಮನ್ ಅವರ ಸಂಗೀತದಿಂದ ‘ಗೇಮ್ ಚೇಂಜರ್​’ ಸಿನಿಮಾದ ತೂಕ ಹೆಚ್ಚಿದೆ. ಈ ಚಿತ್ರದ ಮೊದಲಾರ್ಧ ಸಾಗಿದ್ದೇ ತಿಳಿಯುವುದಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಕಥೆ ಇದ್ದಲ್ಲೇ ಗಿರಕಿ ಹೊಡೆಯುತ್ತದೆ. ನಾಯಕ ಮತ್ತು ಖಳನಾಯಕನ ನಡುವಿನ ಜಟಾಪಟಿಯಲ್ಲೇ ಸೆಕೆಂಡ್​ ಹಾಫ್ ಹೆಚ್ಚು ಮುಳುಗಿದೆ. ಕಥೆಯಲ್ಲಿ ಒಂದರಮೇಲೊಂದು ಟ್ವಿಸ್ಟ್​ಗಳು ಎದುರಾಗುತ್ತವೆಯಾದರೂ ಎಷ್ಟೋ ದೃಶ್ಯಗಳಲ್ಲಿ ಲಾಜಿಕ್ ಇಲ್ಲವೇ ಇಲ್ಲ. ಇಡೀ ಸಮಾಜವನ್ನು ಸರಿಪಡಿಸಲು ಹೊರಟ ನಾಯಕ ತನಗೆ ಎದುರಾದ ಎಲ್ಲ ಅಡೆತಡೆಗಳನ್ನು ಮ್ಯಾಜಿಕ್ ಮಾಡಿದ ರೀತಿಯಲ್ಲಿ ಸರಿಪಡಿಸಿಬಿಡುತ್ತಾನೆ. ಇಂಥ ದೃಶ್ಯಗಳಿಂದ ‘ಗೇಮ್ ಚೇಂಜರ್​’ ಸಾಧಾರಣ ಎನಿಸಿಕೊಳ್ಳುತ್ತದೆ. ಉಳಿದಂತೆ ಒಂದು ಕಮರ್ಷಿಯಲ್ ಚಿತ್ರವಾಗಿ ಎಂಜಾಯ್ ಮಾಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಸಾಲ್ಟ್ ಬ್ಯಾಟಿಂಗ್ ನೋಡಿದ ಯುವತಿಯರು ಉಪ್ಪಿಗಿಂತ ರುಚಿಯಿಲ್ಲ ಅಂದರು!
ಸಾಲ್ಟ್ ಬ್ಯಾಟಿಂಗ್ ನೋಡಿದ ಯುವತಿಯರು ಉಪ್ಪಿಗಿಂತ ರುಚಿಯಿಲ್ಲ ಅಂದರು!
ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ
ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿದ ನೀರು: ಬೈಕ್, ಕಾರು ಮುಳುಗಡೆ
ಏರ್​​ಪೋರ್ಟ್​ನಲ್ಲಿ ಯುವತಿಯ ಮೇಕಪ್​ ತೆಗೆಸಿದ ಏರ್​ಪೋರ್ಟ್​ ಸಿಬ್ಬಂದಿ
ಏರ್​​ಪೋರ್ಟ್​ನಲ್ಲಿ ಯುವತಿಯ ಮೇಕಪ್​ ತೆಗೆಸಿದ ಏರ್​ಪೋರ್ಟ್​ ಸಿಬ್ಬಂದಿ
VIDEO: ಇದೆಂಥ ಕೀಳುಮಟ್ಟದ ವರ್ತನೆ... ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ
VIDEO: ಇದೆಂಥ ಕೀಳುಮಟ್ಟದ ವರ್ತನೆ... ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ
ಪಂಜಾಬ್​ನಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ, 4 ಮಂದಿ ಸಾವು, 25 ಜನರಿಗೆ ಗಾಯ
ಪಂಜಾಬ್​ನಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ, 4 ಮಂದಿ ಸಾವು, 25 ಜನರಿಗೆ ಗಾಯ
ಈ ರೀತಿ ಕುತ್ತಿಗೆ ತೂಗು ಹಾಕುವ ವಿಧಾನದಿಂದ ಈ ಗಂಭೀರ ಕಾಯಿಲೆ ಮಾಯ
ಈ ರೀತಿ ಕುತ್ತಿಗೆ ತೂಗು ಹಾಕುವ ವಿಧಾನದಿಂದ ಈ ಗಂಭೀರ ಕಾಯಿಲೆ ಮಾಯ