AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಣಕ್ಕಾಗಿ ಆ ರೀತಿಯ ಪಾತ್ರಗಳನ್ನು ಮಾಡಬೇಕಾಯಿತು’; ಅಸಹ್ಯಪಟ್ಟುಕೊಂಡ ನೀನಾ ಗುಪ್ತಾ

‘ನಾನು ದೆಹಲಿಯಿಂದ ಬಂದವಳು. ನನಗೆ ಆರಂಭದಲ್ಲಿ ಮುಂಬೈ ಹೊಂದಾಣಿಕೆ ಆಗಲಿಲ್ಲ. ನಾನು ಮರಳಿ ದೆಹಲಿಗೆ ಹೋಗಿ ಪಿಚ್​ಡಿ ಪೂರ್ಣಗೊಳಸಬೇಕು ಎಂದುಕೊಂಡೆ. ಆದರೆ, ಈ ನಗರ ನನ್ನನ್ನು ಬಿಡಲಿಲ್ಲ. ಅನೇಕ ಬಾರಿ ಈ ರೀತಿ ಆಗಿದೆ’ ಎಂದಿದ್ದಾರೆ ಅವರು.

‘ಹಣಕ್ಕಾಗಿ ಆ ರೀತಿಯ ಪಾತ್ರಗಳನ್ನು ಮಾಡಬೇಕಾಯಿತು’; ಅಸಹ್ಯಪಟ್ಟುಕೊಂಡ ನೀನಾ ಗುಪ್ತಾ
ನೀನಾ
ರಾಜೇಶ್ ದುಗ್ಗುಮನೆ
|

Updated on: May 25, 2024 | 8:16 AM

Share

ನೀನಾ ಗುಪ್ತಾ (Neena Gupta) ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಅವರು ‘ಪಂಚಾಯತ್​’ ಸೀರಿಸ್​ನಲ್ಲಿ ಮಂಜು ದೇವಿ ಹೆಸರಿನ ಪಾತ್ರ ಮಾಡಿದ್ದಾರೆ. ಈ ವೆಬ್ ಸೀರಿಸ್​ಗೆ ಮೂರನೇ ಸೀಸನ್ ಬರುತ್ತಿದೆ. ಮೇ 28ರಂದು ‘ಪಂಚಾಯತ್ 3’ ರಿಲೀಸ್ ಆಗಲಿದೆ. ಈ ಮಧ್ಯೆ ಅವರು ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಈ ಮೊದಲು ನೀನಾ ಅವರು ಹಲವು ರೀತಿಯ ಪಾತ್ರಗಳನ್ನು ಮಾಡಿದ್ದಾತೆ. ಇದರಲ್ಲಿ ಕೆಲವು ಕೆಟ್ಟ ಪಾತ್ರಗಳೂ ಇವೆ. ಆ ರೀತಿಯ ಪಾತ್ರಗಳ ಆಯ್ಕೆಗೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

1982ರಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ನೀನಾ ಗುಪ್ತಾ ಆ್ಯಕ್ಟೀವ್ ಆಗಿದ್ದಾರೆ. ಮೊದಲು ನಟಿಯಾಗಿ ಮಿಂಚಿದ್ದ ಅವರು ಈಗ ಪೋಷಕ ಪಾತ್ರಗಳನ್ನು ಮಾಡುತ್ತಿದ್ದಾರೆ. ‘ನಾನು ದೆಹಲಿಯಿಂದ ಬಂದವಳು. ನನಗೆ ಆರಂಭದಲ್ಲಿ ಮುಂಬೈ ಹೊಂದಾಣಿಕೆ ಆಗಲಿಲ್ಲ. ನಾನು ಮರಳಿ ದೆಹಲಿಗೆ ಹೋಗಿ ಪಿಚ್​ಡಿ ಪೂರ್ಣಗೊಳಸಬೇಕು ಎಂದುಕೊಂಡೆ. ಆದರೆ, ಈ ನಗರ ನನ್ನನ್ನು ಬಿಡಲಿಲ್ಲ. ಅನೇಕ ಬಾರಿ ಈ ರೀತಿ ಆಗಿದೆ’ ಎಂದಿದ್ದಾರೆ ಅವರು.

‘ಮೊದಲು ಹಣದ ಅವಶ್ಯಕತೆ ತುಂಬಾನೇ ಇತ್ತು. ಕೆಟ್ಟ ಪಾತ್ರ, ಸಿನಿಮಾಗಳನ್ನು ಮಾಡಬೇಕಾಯಿತು. ಈ ಸಿನಿಮಾ ರಿಲೀಸ್ ಆಗದೇ ಇರಲಿ ಎಂದು ದೇವರ ಬಳಿ ಕೋರಿಕೊಳ್ಳುತ್ತಿದ್ದೆ. ನಾನು ಈಗ ಸಿನಿಮಾ ಆಫರ್​ನ ತಿರಸ್ಕರಿಸಬಹುದು. ನನಗೆ ಇಷ್ಟವಾದ ಸಿನಿಮಾಗಳನ್ನು ಮಾತ್ರ ಮಾಡುತ್ತೇನೆ’ ಎಂದಿದ್ದಾರೆ ನೀನಾ ಗುಪ್ತಾ.

ಇದನ್ನೂ ಓದಿ:  ‘ನಿನಗೆಂದೂ ನಾಯಕಿ ಪಾತ್ರ ಸಿಗುವುದಿಲ್ಲ’ ಗಿರೀಶ್ ಕಾರ್ನಾಡ್ ಹೇಳಿದ್ದ ಮಾತು ನೆನಪಿಸಿಕೊಂಡ ನೀನಾ ಗುಪ್ತಾ

‘ಎಲ್ಲರೂ ನನ್ನನ್ನು ರೆಬೆಲ್ ಎಂದು ಏಕೆ ಕರೆಯುತ್ತಾರೆ ಗೊತ್ತಿಲ್ಲ. ನಾನು ಮುಗ್ಧ ಪಾತ್ರಗಳನ್ನು ಮಾಡಿದ್ದೇನೆ. ನಾನು ಸ್ಟ್ರಾಂಗ್ ಅಥವಾ ಗ್ಲಾಮರ್ ಪಾತ್ರ ಮಾಡಿಲ್ಲ. ನಾನು ಗಂಡನಿಲ್ಲದ ಮಹಿಳೆ ಎಂದು ಮಾಧ್ಯಮದವರು ಬಿಂಬಿಸಿದರು. ಆ ರೀತಿಯ ಇಮೇಜ್ ಕ್ರಿಯೇಟ್ ಆಯಿತು ಹೀಗಾಗಿ ಆ ರೀತಿಯ ಪಾಯ್ರ ಸಿಕ್ಕಿಲ್ಲ. ನಾನು ಸತ್ತ ಬಳಿಕವೂ ಅವರು ಬಿಡಲ್ಲ. ಬೋಲ್ಡ್ ನೀನಾ ಗುಪ್ತಾ ಇನ್ನಿಲ್ಲ ಎಂದೇ ಬರೆಯುತ್ತಾರೆ’ ಎಂದು ಬೇಸರ ಹೊರಹಾಕಿದ್ದಾರೆ ಅವರು. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ‘ಪಂಚಾಯತ್ 3’ ಸೀರಿಸ್ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ