AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಶ್ ಬಾಬು ಬಳಿ ಕೀ ಕದಿಯಲು ಬಂದ ಕಂಟೆಂಟ್ ಕ್ರಿಯೇಟರ್ ನಿಹಾರಿಕಾ; ಮುಂದೇನಾಯ್ತು?

‘ಕೆಜಿಎಫ್​ ಚಾಪ್ಟರ್​ 2’ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾಗೆ ಒಳ್ಳೆಯ  ಪ್ರಚಾರ ನೀಡಲಾಗಿತ್ತು. ಮಹೇಶ್ ಬಾಬು ಹಲವು ವಾಹಿನಿಯವರಿಗೆ ಸಂದರ್ಶನ ನೀಡಿದ್ದರು. ಅದೇ ರೀತಿ ಮಹೇಶ್​ ಬಾಬು ಅವರನ್ನು ನಿಹಾರಿಕಾ ಭೇಟಿ ಮಾಡಿದ್ದಾರೆ.

ಮಹೇಶ್ ಬಾಬು ಬಳಿ ಕೀ ಕದಿಯಲು ಬಂದ ಕಂಟೆಂಟ್ ಕ್ರಿಯೇಟರ್ ನಿಹಾರಿಕಾ; ಮುಂದೇನಾಯ್ತು?
ನಿಹಾರಿಕಾ
TV9 Web
| Edited By: |

Updated on: May 15, 2022 | 4:46 PM

Share

ಸಿನಿಮಾ ಪ್ರಚಾರಕ್ಕೆ ಸೋಶಿಯಲ್ ಮೀಡಿಯಾ ಒಳ್ಳೆಯ ಮಾಧ್ಯಮವಾಗಿ ಮಾರ್ಪಟ್ಟಿದೆ. ಸಿನಿಮಾ ಮಂದಿ ಸಾಮಾಜಿಕ ಜಾಲತಾಣದ ಮೂಲಕ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಾರೆ. ಸೋಶಿಯಲ್ ಮೀಡಿಯಾ (Social Media) ಬಳಕೆ ಹೆಚ್ಚಿದಂತೆ ವಿಡಿಯೋ ಕಂಟೆಂಟರ್ ಕ್ರಿಯೇಟರ್​​ಗಳ ಸಂಖ್ಯೆ ಹೆಚ್ಚಾಗಿದೆ. ಅವರ ಸಹಾಯದಿಂದ ಸಿನಿಮಾಗೆ ಪ್ರಚಾರ ನೀಡಲಾಗುತ್ತದೆ. ದೊಡ್ಡ ಸ್ಟಾರ್ ನಟರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಪ್ರಚಾರ ಮಾಡಲು ಆದ್ಯತೆ ನೀಡುತ್ತಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ಸರ್ಕಾರು ವಾರಿ ಪಾಟ’ ಸಿನಿಮಾದವರು (Sarkaru Vaari Paata) ಕೂಡ ಇದೇ ಮಾರ್ಗ ಅನುಸರಿಸಿದ್ದಾರೆ. ಕಂಟೆಂಟ್ ಕ್ರಿಯೇಟರ್​ ನಿಹಾರಿಕಾ ಎನ್​.ಎಂ. (Niharika NM) ಜತೆ ನಟ ಮಹೇಶ್ ಬಾಬು ರೀಲ್ಸ್ ಮಾಡಿದ್ದಾರೆ.

‘ಕೆಜಿಎಫ್​ ಚಾಪ್ಟರ್​ 2’ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾಗೆ ಒಳ್ಳೆಯ  ಪ್ರಚಾರ ನೀಡಲಾಗಿತ್ತು. ಮಹೇಶ್ ಬಾಬು ಹಲವು ವಾಹಿನಿಯವರಿಗೆ ಸಂದರ್ಶನ ನೀಡಿದ್ದರು. ಅದೇ ರೀತಿ ಮಹೇಶ್​ ಬಾಬು ಅವರನ್ನು ನಿಹಾರಿಕಾ ಭೇಟಿ ಮಾಡಿದ್ದಾರೆ. ನಿಹಾರಿಕಾ ಒಂದು ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ
Image
ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಸರ್ಕಾರು ವಾರಿ ಪಾಟ’; ಮಹೇಶ್​ ಬಾಬು ಸಿನಿಮಾ ದಾಖಲೆ
Image
ಸಹ ನಟನ ಮೇಲೆ ಮಹೇಶ್ ಬಾಬು ಮೂತ್ರ ಮಾಡುವ ದೃಶ್ಯಕ್ಕೆ ಅಸಹ್ಯ ವ್ಯಕ್ತಪಡಿಸಿದ ಫ್ಯಾನ್ಸ್
Image
‘ಸರ್ಕಾರು ವಾರಿ ಪಾಟ’ ಬಾಕ್ಸ್​ ಆಫೀಸ್​ ಕಲೆಕ್ಷನ್​: ಮೊದಲ ದಿನ ಮಹೇಶ್​ ಬಾಬು ಸಿನಿಮಾ ಗಳಿಸಿದ್ದು ಎಷ್ಟು?
Image
ಕಂಟೆಂಟ್ ಕ್ರಿಯೇಟರ್ ನಿಹಾರಿಕಾಗೆ ಪಂಚ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್​; ವಿಡಿಯೋ ವೈರಲ್

‘ಸರ್ಕಾರು ವಾರಿ ಪಾಟ’ ಸಿನಿಮಾದ ಟ್ರೇಲರ್​​ನಲ್ಲಿ ಒಂದು ಕೀ ಬಂಚ್ ಹೈಲೈಟ್ ಆಗಿತ್ತು. ಮಹೇಶ್ ಬಾಬು ಅವರು ಬ್ಯಾಂಕ್​ನ ಕೀಗಳನ್ನು ಹಿಡಿದು ಕೂರುತ್ತಾರೆ. ಇದರ ಮೂಲಕವೇ ಅವರು ಫೈಟ್​ ಮಾಡುತ್ತಾರೆ. ಇದೇ ವಿಚಾರವನ್ನು ಇಟ್ಟುಕೊಂಡು ನಿಹಾರಿಕಾ ರೀಲ್ಸ್ ಮಾಡಿದ್ದಾರೆ.

ಮಹೇಶ್​ ಬಾಬುಗೆ ಸೇರಿದ ಕೀ ಬಂಚ್ ಟೇಬಲ್​ ಮೇಲೆ ಇಟ್ಟಿರಲಾಗುತ್ತದೆ. ಇದನ್ನು ಕದಿಯೋಕೆ ನಿಹಾರಿಕಾ ಬರುತ್ತಾರೆ. ಕದಿಯುವುದಕ್ಕೂ ಮೊದಲು ಸಾಕಷ್ಟು ಸರ್ಕಸ್​ ಮಾಡುತ್ತಾರೆ. ಆ ಬಳಿಕ ಅವರು ಕೀ ಬಂಚ್ ಕದಿಯೋಕೆ ಯಶಸ್ವಿ ಆಗುತ್ತಾರೆ. ಈ ವೇಳೆ ಬರುವ ಮಹೇಶ್ ಬಾಬು ಅವರು ‘ನೀವು ನನ್ನ ಪ್ರೀತಿಯನ್ನು ಕದಿಯಬಹುದು, ಫ್ರೆಂಡ್​ಶಿಪ್ ಕದಿಯಬಹುದು, ಆದರೆ ಹಣವನ್ನು ಮಾತ್ರ ಕದಿಯೋಕೆ ಆಗಲ್ಲ’ ಎಂದು ಹೇಳುತ್ತಾರೆ. ನಂತರ ಅಲ್ಲೇ ಇಟ್ಟ ಸ್ಯಾಂಡ್​ವಿಚ್ ತಿನ್ನುತ್ತಾರೆ ನಿಹಾರಿಕಾ. ಈ ವಿಡಿಯೋ ಸುಮಾರು 9 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

View this post on Instagram

A post shared by Niharika Nm (@niharika_nm)

ಯಶ್ ಜತೆ ರೀಲ್ಸ್ ಮಾಡಿದ್ದ ನಿಹಾರಿಕಾ

ಯಶ್ ಹಾಗೂ ನಿಹಾರಿಕಾ ಈ ಮೊದಲು ರೀಲ್ಸ್ ಮಾಡಿದ್ದರು. ‘ಕೆಜಿಎಫ್​ 2’ ಸಿನಿಮಾದ ‘ವಾಯ್ಲೆನ್ಸ್​.​​. ವಾಯ್ಲೆನ್ಸ್​​.​. ವಾಯ್ಲೆನ್ಸ್​..’ ಡೈಲಾಗ್ ಸಖತ್ ಫೇಮಸ್ ಆಗಿದೆ. ಇದೇ ಡೈಲಾಗ್​ಅನ್ನು ನಿಹಾರಿಕಾ ಹೇಳಿದ್ದರು. ಕೈನಲ್ಲಿ ಬಾಟಲ್ ಒಂದನ್ನು ಇಟ್ಟುಕೊಂಡ ನಿಹಾರಿಕಾ, ‘ವಾಯ್ಲೆನ್ಸ್​​.. ವಾಯ್ಲೆನ್ಸ್​​.. ವಾಯ್ಲೆನ್ಸ್​..​’ ಎಂದು ಹೇಳೋಕೆ ಶುರು ಮಾಡಿದ್ದಾರೆ. ಏನೇ ಮಾಡಿದರೂ ಆ ಬಾಟಲಿಯ ಮುಚ್ಚಳ ತೆಗೆಯಲು ಸಾಧ್ಯವಾಗಿಲ್ಲ. ‘ಯಾರು ಈ ಬಾಟಲಿ ಕೊಟ್ಟಿದ್ದು. ಬೇರೆ ಬಾಟಲಿ ಕೊಡಿ’ ಎಂದು ಮತ್ತೊಂದು ಬಾಟಲಿ ತೆಗೆದುಕೊಳ್ಳುತ್ತಾರೆ ನಿಹಾರಿಕಾ. ಆಗ ಯಶ್ ಎಂಟ್ರಿ ಆಗುತ್ತದೆ. ಈ ವಿಡಿಯೋ ಸಖತ್ ವೈರಲ್ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ