AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗಾಗಿ 24ರ ಪ್ರಾಯದ ಹುಡುಗನನ್ನು ಕಳಿಸು’: ಸೋನು ಶ್ರೀನಿವಾಸ್​ ಗೌಡ ವಿಶೇಷ ಮನವಿ

Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಈ ರೀತಿ ಬೇಡಿಕೊಂಡಿದ್ದಾರೆ. ‘24 ವರ್ಷದ ಹುಡುಗನೇ ಯಾಕೆ ಬೇಕು’ ಎಂದು ರಾಕೇಶ್​ ಅಡಿಗ ಪ್ರಶ್ನೆ ಮಾಡಿದ್ದಾರೆ.

‘ನನಗಾಗಿ 24ರ ಪ್ರಾಯದ ಹುಡುಗನನ್ನು ಕಳಿಸು’: ಸೋನು ಶ್ರೀನಿವಾಸ್​ ಗೌಡ ವಿಶೇಷ ಮನವಿ
ಸೋನು ಶ್ರೀನಿವಾಸ್ ಗೌಡ
TV9 Web
| Updated By: ಮದನ್​ ಕುಮಾರ್​|

Updated on: Sep 11, 2022 | 11:15 PM

Share

ಬಿಗ್​ ಬಾಸ್​ ಮನೆಯಲ್ಲಿ ಅನೇಕರು ಜೋಡಿಯಾದ ಉದಾಹರಣೆ ಇದೆ. ವೂಟ್​ ಸೆಲೆಕ್ಟ್​ನಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋನಲ್ಲಿ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಮತ್ತು ರಾಕೇಶ್​ ಅಡಿಗ ನಡುವೆ ಒಂದು ಬಗೆಯ ಒಡನಾಟ ಬೆಳೆದಿದೆ. ಆದರೆ ಐದನೇ ವಾರದ ಅಂತ್ಯದಲ್ಲಿ ಇವರಿಬ್ಬರ ನಡುವೆ ಸಣ್ಣ ಗ್ಯಾಪ್​ ಮೂಡಿದೆ. ಇಷ್ಟು ದಿನ ಏಕವಚನದಲ್ಲಿ ಅವರಿಬ್ಬರು ಮಾತನಾಡಿಕೊಳ್ಳುತ್ತಿದ್ದರು. ಈಗ ರಾಕೇಶ್​ ಅಡಿಗ (Rakesh Adiga) ವರಸೆ ಬದಲಿಸಿದ್ದಾರೆ. ‘ಇನ್ಮೇಲೆ ಹೋಗಿ ಬನ್ನಿ ಅಂತ ಕರೆಯಬೇಕು’ ಎಂದಿದ್ದಾರೆ. ‘ಈಗ ಒಂದು ಹುಡುಗಿಯ ಜತೆ ಕ್ಲೋಸ್​ ಆಗಿ ಗುರುತಿಸಿಕೊಂಡು, ನಂತರ ಟಿವಿ ಬಿಗ್​ ಬಾಸ್​ಗೆ ಹೋಗುವ ಚಾನ್ಸ್​ ಸಿಕ್ಕರೆ ಅಲ್ಲಿ ಬೇರೆ ಹುಡುಗಿ ಜತೆ ಕನೆಕ್ಷನ್​ ಬೆಳೆಯಲ್ಲ’ ಎಂದು ರಾಕೇಶ್​ ನೇರವಾಗಿ ಹೇಳಿದ್ದಾರೆ. ಈ ವಿಚಾರವಾಗಿ ಒಂದಷ್ಟು ಮಾತುಕಥೆ ನಡೆದಿದೆ.

ರಾಕೇಶ್​ ಅಡಿಗ ಅವರಲ್ಲಿ ಆದ ಈ ಸಡನ್​ ಬದಲಾವಣೆಯನ್ನು ಅಷ್ಟೇ ಕೂಲ್​ ಆಗಿ ಸೋನು ಶ್ರೀನಿವಾಸ್​ ಗೌಡ ಸ್ವೀಕರಿಸಿದ್ದಾರೆ. ‘ಫ್ಲರ್ಟ್​ ಯಾಕೆ ಮಾಡಬೇಕು? ಹಾಗೆ ಬೇಕೆಂದರೆ ಟೈಂ ಪಾಸ್​ ಮಾಡುವ ಹುಡುಗಿಯರೇ ಸಿಕ್ತಾರೆ’ ಎಂದು ಸೋನು ಹೇಳಿದ್ದಾರೆ. ಅಲ್ಲದೇ ಪ್ರೀತಿ, ಕಾಳಜಿ ವಿಚಾರದಲ್ಲಿ ತಮ್ಮ ನಿಲವು ಏನು ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ.

‘ಅಪ್ಪ ದೇವರೇ.. ನೀನು ಇರುವುದೇ ನಿಜವಾದರೆ.. ನನಗೆ ಈಗ 22 ವರ್ಷ, ಸಖತ್​ ಆಗಿ ಇರುವ 24 ವರ್ಷದ ಹುಡುಗನನ್ನು ಕಳಿಸಿಕೊಡು ದೇವರೇ’ ಎಂದು ಸೋನು ಗೌಡ ಅವರು ಬಿಗ್​ ಬಾಸ್​ ಮನೆಯಲ್ಲಿ ಬೇಡಿಕೊಂಡರು. ‘ಎದುರಲ್ಲೇ ಇದ್ದಾನಲ್ಲ’ ಎಂದು ಜಶ್ವಂತ್​ ಕಡೆಗೆ ರಾಕೇಶ್​ ಕೈ ತೋರಿಸಿದರು. ‘ಅವನು ಬೇಡ, ಅವನು ಯಂಗೇಜ್ ಆಗಿದ್ದಾನೆ’ ಅಂತ ಸೋನು ಹೇಳಿದರು. ‘ನಾನು ಯಂಗೇಜ್ಡ್​ ಅಲ್ಲ, ಕಮಿಟೆಡ್​’ ಎಂದರು ಜಶ್ವಂತ್​.

ಇದನ್ನೂ ಓದಿ
Image
Sonu Srinivas Gowda: ‘ಬಿಗ್ ಬಾಸ್’ ಮನೆಯಲ್ಲಿ ಕಳಪೆ ಆಟ ತೋರಿದ ಸೋನು ಶ್ರೀನಿವಾಸ್ ಗೌಡಗೆ ಶಿಕ್ಷೆ
Image
‘ಬಿಗ್ ಬಾಸ್​ಗೆ ಬಂದಿದ್ದು ಆಟ ಆಡೋಕೆ, ಶೋಕಿ ಮಾಡೋಕೆ’: ಸೋನು ಶ್ರೀನಿವಾಸ್ ಗೌಡ
Image
Sonu Srinivas Gowda: ಮೂಡ್ ಇಲ್ಲ ಅಂದ್ರೆ ಸೋನು ಶ್ರೀನಿವಾಸ್​ ಗೌಡ 3 ದಿನ ಸ್ನಾನ ಮಾಡಲ್ಲ; ಎಲ್ಲರ ಎದುರು ಸತ್ಯ ಬಯಲು
Image
Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಫೋನ್​ ನಂಬರ್​ ಏನು? ಅದ್ರಲ್ಲೂ ಚಾಲಕಿತನ ತೋರಿದ ರೀಲ್ಸ್​ ಬೆಡಗಿ

‘ನನಗೆ ಲವ್​ ಅಂದರೆ ಅಸಹ್ಯ. ಆದರೆ ಪಾರ್ಟ್ನರ್​ ಬೇಕು. ಇಬ್ಬರೂ ಪರಸ್ಪರ ಕೇರ್​ ಮಾಡುತ್ತೇವೆ. ಲವ್ವಲ್ಲಿ ಏನೂ ಸಿಗಲ್ಲ’ ಎಂದು ಸೋನು ಹೇಳಿದ್ದಾರೆ. ‘ಕಾಳಜಿ ತೋರಿಸಲು 24 ವರ್ಷದ ಹುಡುಗನೇ ಯಾಕೆ ಬೇಕು’ ಎಂದು ರಾಕೇಶ್​ ಅಡಿಗ ಪ್ರಶ್ನೆ ಮಾಡಿದ್ದಾರೆ.

ಬಿಗ್​ ಬಾಸ್​ ಒಟಿಟಿ ಮನೆಯಲ್ಲಿ ಈಗ ಕೇವಲ 8 ಜನರು ಉಳಿದುಕೊಂಡಿದ್ದಾರೆ. ಶೀಘ್ರದಲ್ಲೇ ಫಿನಾಲೆ ನಡೆಯಲಿದೆ. ನಂತರ ಟಿವಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಆರಂಭ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ