AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿ ನಂದಿನಿ ಔಟ್​ ಆದ್ಮೇಲೆ ಸಾನ್ಯಾ ಜತೆ ಹೆಚ್ಚಿತು ಜಶ್ವಂತ್​ ಸಲುಗೆ; ರೂಪೇಶ್​ಗೆ ಟೆನ್ಷನ್​ ಶುರು

Bigg Boss Kannada OTT: ಬಿಗ್​ ಬಾಸ್​ ಶೋನಿಂದ ನಂದಿನಿ ಎಲಿಮಿನೇಟ್​ ಆದ ಬಳಿಕ ಜಶ್ವಂತ್​ ಬೋಪಣ್ಣ ಅವರು ಸಾನ್ಯಾ ಅಯ್ಯರ್​ ಜೊತೆ ಹೆಚ್ಚು ಕ್ಲೋಸ್​ ಆಗಿದ್ದಾರೆ. ಇದು ಎಲ್ಲರ ಗಮನಕ್ಕೂ ಬಂದಿದೆ.

ಪ್ರೇಯಸಿ ನಂದಿನಿ ಔಟ್​ ಆದ್ಮೇಲೆ ಸಾನ್ಯಾ ಜತೆ ಹೆಚ್ಚಿತು ಜಶ್ವಂತ್​ ಸಲುಗೆ; ರೂಪೇಶ್​ಗೆ ಟೆನ್ಷನ್​ ಶುರು
ಜಶ್ವಂತ್​. ಸಾನ್ಯಾ, ರೂಪೇಶ್​
TV9 Web
| Updated By: ಮದನ್​ ಕುಮಾರ್​|

Updated on: Sep 11, 2022 | 6:28 PM

Share

ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ಹಲವು ಇಂಟರೆಸ್ಟಿಂಗ್​ ಘಟನೆಗಳು ನಡೆಯುತ್ತಿವೆ. ಇಷ್ಟು ದಿನ ನಂದಿನಿ ಮತ್ತು ಜಶ್ವಂತ್​ ಬೋಪಣ್ಣ (Jashwanth Bopanna) ಬಿಗ್​ ಬಾಸ್​ ಮನೆಯಲ್ಲಿ ಜೋಡಿಯಾಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಆದರೆ ಐದನೇ ವಾರದ ಎಲಿಮಿನೇಷನ್​ನಲ್ಲಿ (Bigg Boss Elimination) ನಂದಿನಿ ಔಟ್​ ಆದರು. ಆ ಬಳಿಕ ಜಶ್ವಂತ್​ ಅವರು ಸಾನ್ಯಾ ಅಯ್ಯರ್​ ಜತೆ ಹೆಚ್ಚು ಆಪ್ತತೆ ಬೆಳೆಸಿಕೊಂಡಿದ್ದಾರೆ. ಇದು ಮನೆಮಂದಿಯ ಗಮನಕ್ಕೆ ಬಂದಿದೆ. ವೀಕ್ಷಕರು ಕೂಡ ಇದನ್ನು ಗಮನಿಸಿದ್ದಾರೆ. ಅಷ್ಟೇ ಅಲ್ಲದೇ, ಬಿಗ್​ ಬಾಸ್​ ನಡೆಸಿಕೊಡುವ ಕಿಚ್ಚ ಸುದೀಪ್​ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ಸೂಪರ್​ ಸಂಡೇ ವಿತ್​ ಸುದೀಪ್​’ ಎಪಿಸೋಡ್​ನಲ್ಲಿ ಇದರ ಬಗ್ಗೆ ಮಾತುಕತೆ ಆಗಿದೆ. ಜಶ್ವಂತ್​ ಮತ್ತು ಸಾನ್ಯಾ (Sanya Iyer) ಹತ್ತಿರ ಆಗುತ್ತಿದ್ದಂತೆಯೇ ರೂಪೇಶ್​ ಅವರು ಯಾಕೋ ಟೆನ್ಷನ್​ ಮಾಡಿಕೊಂಡಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಜಶ್ವಂತ್​ ಬೋಪಣ್ಣ ಮತ್ತು ನಂದಿನಿ ಅವರು ರಿಯಲ್​ ಲೈಫ್​ನಲ್ಲಿಯೂ ಪ್ರೇಮಿಗಳು. ಅವರು ಜೋಡಿ ಸ್ಪರ್ಧಿಗಳಾಗಿಯೇ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋಗೆ ಕಾಲಿಟ್ಟಿದ್ದರು. ಆದರೆ ಎರಡನೇ ವಾರದಿಂದ ಅವರಿಬ್ಬರು ಪ್ರತ್ಯೇಕ ಸ್ಪರ್ಧಿಗಳಾಗಿ ಮುಂದುವರಿಯಬೇಕು ಎಂದು ಬಿಗ್​ ಬಾಸ್​ ಕಡೆಯಿಂದ ಆದೇಶ ಬಂತು. ಹಾಗಿದ್ದರೂ ಕೂಡ ಪ್ರೇಮಿಗಳು ಎಂಬ ಕಾರಣಕ್ಕೆ ಹೆಚ್ಚಾಗಿ ಅವರಿಬ್ಬರು ಜೊತೆಯಲ್ಲೇ ಇರುತ್ತಿದ್ದರು.

ಇದನ್ನೂ ಓದಿ
Image
ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
Image
BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​
Image
ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
Image
‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

ದಿನ ಕಳೆಯುತ್ತಿದ್ದಂತೆಯೇ ಜಶ್ವಂತ್​ ಅವರು ಸಾನ್ಯಾ ಅಯ್ಯರ್​ ಜೊತೆ ಹೆಚ್ಚು ಮಾತನಾಡಲು ಆರಂಭಿಸಿದರು. ಅದರಿಂದ ನಂದಿನಿಗೆ ಕಸಿವಿಸಿ ಆಗುತ್ತಿತ್ತು. ತಮಗೆ ಜಶ್ವಂತ್​ ಹೆಚ್ಚು ಸಮಯ ನೀಡುತ್ತಿಲ್ಲ ಎಂದು ನಂದಿನಿ ಆಗಾಗ ತಕರಾರು ತೆಗೆಯಲು ಶುರುಮಾಡಿದ್ದರು. ಇದರಿಂದ ಇಬ್ಬರ ನಡುವೆ ಯಾವಾಗಲೂ ಜಗಳ ಆಗುತ್ತಲೇ ಇತ್ತು. ಬಾಯ್​ಫ್ರೆಂಡ್​ ಜಶ್ವಂತ್​ ವಿಚಾರದಲ್ಲಿ ನಂದಿನಿ ಹೆಚ್ಚು ಪೊಸೆಸಿವ್​ ಎಂಬುದು ಇಡೀ ಮನೆಗೆ ಗೊತ್ತಾಯಿತು. ಈಗ ನಂದಿನಿ ಔಟ್​ ಆಗಿದ್ದು, ಜಶ್ವಂತ್​ ಅವರು ಸಾನ್ಯಾ ಜೊತೆ ಸಲುಗೆ ಹೆಚ್ಚಿಸಿಕೊಂಡಿದ್ದಾರೆ.

ನಂದಿನಿ ಮನೆಯಲ್ಲಿ ಇದ್ದಷ್ಟು ದಿನ ಸಾನ್ಯಾ ಅವರು ಜಶ್ವಂತ್​ಗಿಂತಲೂ ಹೆಚ್ಚಾಗಿ ರೂಪೇಶ್​ ಶೆಟ್ಟಿ ಜೊತೆ ಇರುತ್ತಿದ್ದರು. ಆದರೆ ನಂದಿನಿ ಹೋದ ಬಳಿಕ ರೂಪೇಶ್​ ಮತ್ತು ಸಾನ್ಯಾ ನಡುವೆ ಜಶ್ವಂತ್​ ಬಂದಿದ್ದಾರೆ. ಇದರಿಂದ ರೂಪೇಶ್​ಗೆ ಟೆನ್ಷನ್​ ಹೆಚ್ಚಾಗಿದೆ ಎನಿಸುತ್ತಿದೆ. ಇಂಥ ಹಲವು ಸಂಗತಿಗಳ ನಡುವೆ, ಅಂತಿಮವಾಗಿ ಯಾರು ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ