AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಕ್ಯಾರೆಕ್ಟರ್​ನ ಹಾಳು ಮಾಡಿದ್ದೀರಿ’; ಅರ್ಜುನ್​-ರೂಪೇಶ್ ನಡುವೆ ನಡೆಯಿತು ದೊಡ್ಡ ಜಗಳ

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ನೀಡುವ ದಿನಸಿಗಳಿಗೆ ಮಿತಿ ಇದೆ. ಹೀಗಾಗಿ, ಯಾರಾದರೂ ಆಹಾರವನ್ನು ವೇಸ್ಟ್ ಮಾಡಿದರೆ ದೊಡ್ಡದೊಡ್ಡ ಜಗಳಗಳೇ ಏರ್ಪಡುತ್ತವೆ. ರೂಪೇಶ್ ಹಾಗೂ ಅರ್ಜುನ್ ಮಧ್ಯೆ ಜಗಳ ಆಗೋಕೂ ಇದೇ ವಿಚಾರ ಕಾರಣ ಆಗಿದೆ.

‘ನನ್ನ ಕ್ಯಾರೆಕ್ಟರ್​ನ ಹಾಳು ಮಾಡಿದ್ದೀರಿ’; ಅರ್ಜುನ್​-ರೂಪೇಶ್ ನಡುವೆ ನಡೆಯಿತು ದೊಡ್ಡ ಜಗಳ
ರೂಪೇಶ್​-ಅರ್ಜುನ್
TV9 Web
| Edited By: |

Updated on:Aug 16, 2022 | 6:54 PM

Share

‘ಬಿಗ್ ಬಾಸ್​ ಒಟಿಟಿ’ (Bigg Boss OTT) ರಂಗು ದಿನ ಕಳೆದಂತೆ ಹೆಚ್ಚುತ್ತಿದೆ. ಎಲ್ಲಾ ಸ್ಪರ್ಧಿಗಳ ವಿವಿಧ ಮುಖ ಅನಾವರಣಗೊಳ್ಳುತ್ತಿದೆ. ಹಲವು ಕಾರಣದಿಂದ ಎರಡು ಸ್ಪರ್ಧಿಗಳ ಮಧ್ಯೆ ಜಗಳಗಳು ಏರ್ಪಡುತ್ತಿವೆ. ಯಾರು ಯಾರ ವಿರುದ್ಧ ಯಾವಾಗ ತಿರುಗಿ ಬೀಳುತ್ತಾರೆ ಎಂಬುದನ್ನು ಊಹಿಸಲು ಪ್ರೇಕ್ಷಕರಿಗೆ ಸಾಧ್ಯವಾಗುತ್ತಿಲ್ಲ. ಈಗ ರೂಪೇಶ್ ಶೆಟ್ಟಿ (Roopesh Shetty) ಹಾಗೂ ಮನೆಯ ಕ್ಯಾಪ್ಟನ್ ಅರ್ಜುನ್ ಮಧ್ಯೆ ಜಟಾಪಟಿ ಏರ್ಪಟ್ಟಿದೆ. ‘ಅರ್ಜುನ್ ಅವರು ನನ್ನ ಕ್ಯಾರೆಕ್ಟರ್ ಹಾಳು ಮಾಡಿದ್ದಾರೆ’ ಎಂಬ ಆರೋಪವನ್ನು ರೂಪೇಶ್ ಶೆಟ್ಟಿ ಮಾಡಿದ್ದಾರೆ. ಇಬ್ಬರ ಜಗಳ ತಾರಕಕ್ಕೇರಿದೆ. ಹೊಸ ಪ್ರೋಮೋವನ್ನು ಕಲರ್ಸ್ ಸೂಪರ್​ ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಬಿಗ್ ಬಾಸ್ ಮನೆಯಲ್ಲಿ ಊಟದ ವಿಚಾರಕ್ಕೆ ಸಾಕಷ್ಟು ಜಗಳಗಳು ಏರ್ಪಟ್ಟಿವೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ನೀಡುವ ದಿನಸಿಗಳಿಗೆ ಮಿತಿ ಇದೆ. ಹೀಗಾಗಿ, ಯಾರಾದರೂ ಆಹಾರವನ್ನು ವೇಸ್ಟ್ ಮಾಡಿದರೆ ದೊಡ್ಡದೊಡ್ಡ ಜಗಳಗಳೇ ಏರ್ಪಡುತ್ತವೆ. ರೂಪೇಶ್ ಹಾಗೂ ಅರ್ಜುನ್ ಮಧ್ಯೆ ಜಗಳ ಆಗೋಕೂ ಇದೇ ವಿಚಾರ ಕಾರಣ ಆಗಿದೆ. ಇಬ್ಬರೂ ಮಿತಿಮೀರಿ ಕಿತ್ತಾಡಿಕೊಂಡಿದ್ದಾರೆ.

ರೂಪೇಶ್ ಅವರು ತಾವು ಹಾಕಿಕೊಂಡಿದ್ದ ಚಪಾತಿಯನ್ನು ಕಸದಬುಟ್ಟಿಗೆ ಎಸೆದಿದ್ದರು. ಇದನ್ನು ನೋಡಿದ ಅರ್ಜುನ್ ಅವರು ‘ಚಪಾತಿಯನ್ನು ಕಸದ ಬುಟ್ಟಿಗೆ ಎಸೆದವರು ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ರೂಪೇಶ್​ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ‘ಅದನ್ನು ತಿನ್ನೋಕೆ ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ನಾನೇ ಅದನ್ನು ಎಸೆದೆ’ ಎಂದಿದ್ದಾರೆ. ಈ ಮಾತನ್ನು ಕೇಳಿ ಅರ್ಜುನ್ ಕೋಪಗೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೇಲಿ ಯಾರಾದ್ರು ಸಿಕ್ಕಿದ್ರೆ ಬಿಡಲ್ಲ: ಕಿಚ್ಚ ಕಾಲೆಳೆದಿದ್ದಕ್ಕೆ ನೇರ ಉತ್ತರ ಕೊಟ್ಟ ರೂಪೇಶ್

‘ಜಗತ್ತಿನಲ್ಲಿ ಎಷ್ಟೋ ಜನಕ್ಕೆ ತಿನ್ನೋಕೆ ಇಲ್ಲ. ಹೀಗಿರುವಾಗ ನೀವು ಸಿಕ್ಕ ಆಹಾರವನ್ನು ವೇಸ್ಟ್​ ಮಾಡಿದ್ದೀರಲ್ಲ’ ಎಂದು ಅರ್ಜುನ್ ಕೂಗಾಡಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರಿದಿದೆ. ಕೆಲ ಸ್ಪರ್ಧಿಗಳು ರೂಪೇಶ್ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ರೂಪೇಶ್ ಸಮಾಧಾನಗೊಳ್ಳಲೇ ಇಲ್ಲ. ‘ಕ್ಯಾರೆಕ್ಟರ್ ಹಾಳು ಮಾಡಿ, ನಂತರ ಸುಮ್ಮನಿರು ಅಂದರೆ ಹೇಗೆ ಇರೋದು’ ಎಂದು ರೂಪೇಶ್ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಇವರಿಬ್ಬರ ಜಗಳ ಹೇಗೆ ಕೊನೆ ಆಯಿತು ಎಂಬುದನ್ನು ನೋಡಲು ಪೂರ್ತಿ ಎಪಿಸೋಡ್ ವೀಕ್ಷಿಸಬೇಕು.

Published On - 4:40 pm, Tue, 16 August 22

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು