AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಇನ್ಮುಂದೆ ಮಾತಾಡಲ್ಲ’; ಸಾನ್ಯಾ-ರೂಪೇಶ್ ಮಧ್ಯೆ ಹೆಚ್ಚುತ್ತಿದೆ ಮನಸ್ತಾಪ

ರೂಪೇಶ್ ಅವರು ಸಣ್ಣ ಸಣ್ಣ ವಿಚಾರಕ್ಕೆ ಸಾನ್ಯಾ ಜತೆ ಜಗಳ ಆಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ‘ಇನ್ಮುಂದೆ ನಾನು ನಿನ್ನ ಜತೆ ಮಾತನಾಡಲ್ಲ’ ಎಂದು ರೂಪೇಶ್ ಹೇಳಿದರು. ಇದನ್ನು ಕೇಳಿ ಸಾನ್ಯಾ ಬೇಸರ ಹೊರಹಾಕಿದ್ದಾರೆ.

‘ನಾನು ಇನ್ಮುಂದೆ ಮಾತಾಡಲ್ಲ’; ಸಾನ್ಯಾ-ರೂಪೇಶ್ ಮಧ್ಯೆ ಹೆಚ್ಚುತ್ತಿದೆ ಮನಸ್ತಾಪ
ರೂಪೇಶ್​-ಸಾನ್ಯಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Sep 15, 2022 | 6:30 AM

Share

ರೂಪೇಶ್ ಶೆಟ್ಟಿ (Roopesh Shetty) ಹಾಗೂ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಇಬ್ಬರೂ ಸಾಕಷ್ಟು ಸಮಯವನ್ನು ಒಟ್ಟಾಗಿ ಕಳೆಯುತ್ತಿದ್ದಾರೆ. ಆರಂಭದಿಂದಲೂ ಇವರ ಮಧ್ಯೆ ಒಳ್ಳೆಯ ಕನೆಕ್ಷನ್ ಬೆಳೆದಿದೆ. ಇಬ್ಬರೂ ಕ್ಲೋಸ್ ಆಗಿದ್ದಾರೆ. ಆದರೆ, ಕೊನೆಯ ವಾರ ಸಮೀಪಿಸುತ್ತಿದ್ದಂತೆ ಇವರ ಮಧ್ಯೆ ಮನಸ್ತಾಪ ಹೆಚ್ಚಾಗಿದೆ. ಹೀಗಾಗಿ, ಪದೇಪದೇ ಜಗಳ ಆಗುತ್ತಿದೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ಇದು ಸಾನ್ಯಾ-ರೂಪೇಶ್​ ಪರ್ಫಾರ್ಮೆನ್ಸ್ ಮೇಲೆ ನೇರ ಪರಿಣಾಮ ಬೀರುವ ಸೂಚನೆ ಸಿಕ್ಕಿದೆ.

ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ ಮನೆಯಲ್ಲಿ ಪರಿಚಯ ಬೆಳೆಯಿತು. ಸಾನ್ಯಾಗೆ ಕಿರುತೆರೆ ಹಿನ್ನೆಲೆ ಇದೆ. ರೂಪೇಶ್ ತುಳು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದವರು. ಆರ್​ಜೆ ಆಗಿಯೂ ಅವರು ಕೆಲಸ ಮಾಡುತ್ತಿದ್ದರು. ಇಬ್ಬರೂ ಕೆಲಸ ಮಾಡುವ ಇಂಡಸ್ಟ್ರಿಗೆ ಸಾಮ್ಯತೆ ಇದ್ದಿದ್ದರಿಂದ ಹಾಗೂ ಆಲೋಚನೆಗಳು ಹೊಂದಾಣಿಕೆ ಆದ ಕಾರಣ ಇಬ್ಬರ ಮಧ್ಯೆ ಬಾಂಧವ್ಯ ಬೆಳೆದಿದೆ.

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಒಟ್ಟಿಗೆ ಇರುವ ಬಗ್ಗೆ ಮನೆಯಲ್ಲಿ ಅನೇಕರು ಕೊಂಕು ತೆಗೆದಿದ್ದು ಇದೆ. ಸೋಮಣ್ಣ ಮಾಚಿಮಾಡ ಅವರು ಅನೇಕ ಬಾರಿ ರೂಪೇಶ್ ಹಾಗೂ ಸಾನ್ಯಾ ಜತೆ ಇದೇ ವಿಚಾರಕ್ಕೆ ಜಗಳ ಮಾಡಿದ್ದರು. ಆದರೆ, ಇವರು ಬೇರೆ ಆಗಿಲ್ಲ. ನಮ್ಮ ಮಧ್ಯೆ ಇರೋದು ಫ್ರೆಂಡ್​ಶಿಪ್ ಎಂದು ಹೇಳಿಕೊಳ್ಳುತ್ತಾ ಬರುತ್ತಿದ್ದಾರೆ. ಆದರೆ, ಇತ್ತೀಚೆಗೆ ರೂಪೇಶ್​ ಬೇರೆಯದೇ ರೀತಿಯಲ್ಲಿ ವರ್ತಿಸುತ್ತಿದ್ದಾರೆ.

ಇದನ್ನೂ ಓದಿ
Image
ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
Image
BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​
Image
ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
Image
‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

ರೂಪೇಶ್ ಅವರು ಸಣ್ಣ ಸಣ್ಣ ವಿಚಾರಕ್ಕೆ ಸಾನ್ಯಾ ಜತೆ ಜಗಳ ಆಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ‘ಇನ್ಮುಂದೆ ನಾನು ನಿನ್ನ ಜತೆ ಮಾತನಾಡಲ್ಲ’ ಎಂದು ರೂಪೇಶ್ ಹೇಳಿದರು. ಇದನ್ನು ಕೇಳಿ ಸಾನ್ಯಾ ಬೇಸರ ಹೊರಹಾಕಿದ್ದಾರೆ. ಇಬ್ಬರ ನಡುವೆ ಮನಸ್ತಾಪ ಮುಂದುವರಿದೇ ಇದೆ.

ಒಂದು ಹಂತದಲ್ಲಿ ‘ನೀನು ಉದಯ್ ರೀತಿಯಲ್ಲಿ ಆಡ್ತಾ ಇದ್ದೀಯಾ’ ಎಂದು ರೂಪೇಶ್​ಗೆ ಸಾನ್ಯಾ ಹೇಳಿದರು. ಇದನ್ನು ಕೇಳಿ ರೂಪೇಶ್ ಮತ್ತೆ ಸಿಟ್ಟಾದರು. ‘ಯಾರ್ಯಾರನ್ನೋ ನನಗೆ ಹೋಲಿಕೆ ಮಾಡಬೇಡ. ಸಿಟ್ಟು ಬಂದಿದೆ ಎಂದು ಅವನಿಗೆಲ್ಲ ನನ್ನನ್ನು ಹೋಲಿಕೆ ಮಾಡಿದರೆ? ಇದು ನಿಜಕ್ಕೂ ಬೇಸರ ಮೂಡಿಸಿತು’ ಎಂದು ರೂಪೇಶ್ ಬೇಸರ ಹೊರಹಾಕಿದರು.

ಇದನ್ನೂ ಓದಿ: ಪ್ರೇಯಸಿ ನಂದಿನಿ ಔಟ್​ ಆದ್ಮೇಲೆ ಸಾನ್ಯಾ ಜತೆ ಹೆಚ್ಚಿತು ಜಶ್ವಂತ್​ ಸಲುಗೆ; ರೂಪೇಶ್​ಗೆ ಟೆನ್ಷನ್​ ಶುರು

ಇಬ್ಬರ ಮಧ್ಯೆ ಈ ರೀತಿ ವಿಚಾರ, ಕಿತ್ತಾಟ ನಡೆದೇ ಇತ್ತು. ಇದರಿಂದ ಅವರ ಪರ್ಫಾರ್ಮೆನ್ಸ್ ಮೇಲೆ ಪ್ರಭಾವ ಬೀರುತ್ತಿದೆ. ಒಟಿಟಿ ಫಿನಾಲೆಗೆ ಕೆಲವೇ ದಿನ ಮಾತ್ರ ಬಾಕಿ ಇದೆ. ಈ ಹಂತದಲ್ಲಿ ಇಬ್ಬರು ಈ ರೀತಿ ಕಿತ್ತಾಟ ಮಾಡಿಕೊಳ್ಳುವುದು ಮುಂದಿನ ಆಟದ ಮೇಲೆ ಪ್ರಭಾವ ಬೀರಬಹುದು.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!