AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಇನ್ಮುಂದೆ ಮಾತಾಡಲ್ಲ’; ಸಾನ್ಯಾ-ರೂಪೇಶ್ ಮಧ್ಯೆ ಹೆಚ್ಚುತ್ತಿದೆ ಮನಸ್ತಾಪ

ರೂಪೇಶ್ ಅವರು ಸಣ್ಣ ಸಣ್ಣ ವಿಚಾರಕ್ಕೆ ಸಾನ್ಯಾ ಜತೆ ಜಗಳ ಆಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ‘ಇನ್ಮುಂದೆ ನಾನು ನಿನ್ನ ಜತೆ ಮಾತನಾಡಲ್ಲ’ ಎಂದು ರೂಪೇಶ್ ಹೇಳಿದರು. ಇದನ್ನು ಕೇಳಿ ಸಾನ್ಯಾ ಬೇಸರ ಹೊರಹಾಕಿದ್ದಾರೆ.

‘ನಾನು ಇನ್ಮುಂದೆ ಮಾತಾಡಲ್ಲ’; ಸಾನ್ಯಾ-ರೂಪೇಶ್ ಮಧ್ಯೆ ಹೆಚ್ಚುತ್ತಿದೆ ಮನಸ್ತಾಪ
ರೂಪೇಶ್​-ಸಾನ್ಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 15, 2022 | 6:30 AM

ರೂಪೇಶ್ ಶೆಟ್ಟಿ (Roopesh Shetty) ಹಾಗೂ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಇಬ್ಬರೂ ಸಾಕಷ್ಟು ಸಮಯವನ್ನು ಒಟ್ಟಾಗಿ ಕಳೆಯುತ್ತಿದ್ದಾರೆ. ಆರಂಭದಿಂದಲೂ ಇವರ ಮಧ್ಯೆ ಒಳ್ಳೆಯ ಕನೆಕ್ಷನ್ ಬೆಳೆದಿದೆ. ಇಬ್ಬರೂ ಕ್ಲೋಸ್ ಆಗಿದ್ದಾರೆ. ಆದರೆ, ಕೊನೆಯ ವಾರ ಸಮೀಪಿಸುತ್ತಿದ್ದಂತೆ ಇವರ ಮಧ್ಯೆ ಮನಸ್ತಾಪ ಹೆಚ್ಚಾಗಿದೆ. ಹೀಗಾಗಿ, ಪದೇಪದೇ ಜಗಳ ಆಗುತ್ತಿದೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ಇದು ಸಾನ್ಯಾ-ರೂಪೇಶ್​ ಪರ್ಫಾರ್ಮೆನ್ಸ್ ಮೇಲೆ ನೇರ ಪರಿಣಾಮ ಬೀರುವ ಸೂಚನೆ ಸಿಕ್ಕಿದೆ.

ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ ಮನೆಯಲ್ಲಿ ಪರಿಚಯ ಬೆಳೆಯಿತು. ಸಾನ್ಯಾಗೆ ಕಿರುತೆರೆ ಹಿನ್ನೆಲೆ ಇದೆ. ರೂಪೇಶ್ ತುಳು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದವರು. ಆರ್​ಜೆ ಆಗಿಯೂ ಅವರು ಕೆಲಸ ಮಾಡುತ್ತಿದ್ದರು. ಇಬ್ಬರೂ ಕೆಲಸ ಮಾಡುವ ಇಂಡಸ್ಟ್ರಿಗೆ ಸಾಮ್ಯತೆ ಇದ್ದಿದ್ದರಿಂದ ಹಾಗೂ ಆಲೋಚನೆಗಳು ಹೊಂದಾಣಿಕೆ ಆದ ಕಾರಣ ಇಬ್ಬರ ಮಧ್ಯೆ ಬಾಂಧವ್ಯ ಬೆಳೆದಿದೆ.

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಒಟ್ಟಿಗೆ ಇರುವ ಬಗ್ಗೆ ಮನೆಯಲ್ಲಿ ಅನೇಕರು ಕೊಂಕು ತೆಗೆದಿದ್ದು ಇದೆ. ಸೋಮಣ್ಣ ಮಾಚಿಮಾಡ ಅವರು ಅನೇಕ ಬಾರಿ ರೂಪೇಶ್ ಹಾಗೂ ಸಾನ್ಯಾ ಜತೆ ಇದೇ ವಿಚಾರಕ್ಕೆ ಜಗಳ ಮಾಡಿದ್ದರು. ಆದರೆ, ಇವರು ಬೇರೆ ಆಗಿಲ್ಲ. ನಮ್ಮ ಮಧ್ಯೆ ಇರೋದು ಫ್ರೆಂಡ್​ಶಿಪ್ ಎಂದು ಹೇಳಿಕೊಳ್ಳುತ್ತಾ ಬರುತ್ತಿದ್ದಾರೆ. ಆದರೆ, ಇತ್ತೀಚೆಗೆ ರೂಪೇಶ್​ ಬೇರೆಯದೇ ರೀತಿಯಲ್ಲಿ ವರ್ತಿಸುತ್ತಿದ್ದಾರೆ.

ಇದನ್ನೂ ಓದಿ
Image
ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
Image
BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​
Image
ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
Image
‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

ರೂಪೇಶ್ ಅವರು ಸಣ್ಣ ಸಣ್ಣ ವಿಚಾರಕ್ಕೆ ಸಾನ್ಯಾ ಜತೆ ಜಗಳ ಆಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ‘ಇನ್ಮುಂದೆ ನಾನು ನಿನ್ನ ಜತೆ ಮಾತನಾಡಲ್ಲ’ ಎಂದು ರೂಪೇಶ್ ಹೇಳಿದರು. ಇದನ್ನು ಕೇಳಿ ಸಾನ್ಯಾ ಬೇಸರ ಹೊರಹಾಕಿದ್ದಾರೆ. ಇಬ್ಬರ ನಡುವೆ ಮನಸ್ತಾಪ ಮುಂದುವರಿದೇ ಇದೆ.

ಒಂದು ಹಂತದಲ್ಲಿ ‘ನೀನು ಉದಯ್ ರೀತಿಯಲ್ಲಿ ಆಡ್ತಾ ಇದ್ದೀಯಾ’ ಎಂದು ರೂಪೇಶ್​ಗೆ ಸಾನ್ಯಾ ಹೇಳಿದರು. ಇದನ್ನು ಕೇಳಿ ರೂಪೇಶ್ ಮತ್ತೆ ಸಿಟ್ಟಾದರು. ‘ಯಾರ್ಯಾರನ್ನೋ ನನಗೆ ಹೋಲಿಕೆ ಮಾಡಬೇಡ. ಸಿಟ್ಟು ಬಂದಿದೆ ಎಂದು ಅವನಿಗೆಲ್ಲ ನನ್ನನ್ನು ಹೋಲಿಕೆ ಮಾಡಿದರೆ? ಇದು ನಿಜಕ್ಕೂ ಬೇಸರ ಮೂಡಿಸಿತು’ ಎಂದು ರೂಪೇಶ್ ಬೇಸರ ಹೊರಹಾಕಿದರು.

ಇದನ್ನೂ ಓದಿ: ಪ್ರೇಯಸಿ ನಂದಿನಿ ಔಟ್​ ಆದ್ಮೇಲೆ ಸಾನ್ಯಾ ಜತೆ ಹೆಚ್ಚಿತು ಜಶ್ವಂತ್​ ಸಲುಗೆ; ರೂಪೇಶ್​ಗೆ ಟೆನ್ಷನ್​ ಶುರು

ಇಬ್ಬರ ಮಧ್ಯೆ ಈ ರೀತಿ ವಿಚಾರ, ಕಿತ್ತಾಟ ನಡೆದೇ ಇತ್ತು. ಇದರಿಂದ ಅವರ ಪರ್ಫಾರ್ಮೆನ್ಸ್ ಮೇಲೆ ಪ್ರಭಾವ ಬೀರುತ್ತಿದೆ. ಒಟಿಟಿ ಫಿನಾಲೆಗೆ ಕೆಲವೇ ದಿನ ಮಾತ್ರ ಬಾಕಿ ಇದೆ. ಈ ಹಂತದಲ್ಲಿ ಇಬ್ಬರು ಈ ರೀತಿ ಕಿತ್ತಾಟ ಮಾಡಿಕೊಳ್ಳುವುದು ಮುಂದಿನ ಆಟದ ಮೇಲೆ ಪ್ರಭಾವ ಬೀರಬಹುದು.

ಕೇರಳ ಮಾದರಿ ಹತ್ಯೆ ಕರ್ನಾಟಕದ ಕರಾವಳಿ ಪ್ರಾಂತ್ಯದಲ್ಲಿ ನಡೆಯುತ್ತಿವೆ: ಸಿಂಹ
ಕೇರಳ ಮಾದರಿ ಹತ್ಯೆ ಕರ್ನಾಟಕದ ಕರಾವಳಿ ಪ್ರಾಂತ್ಯದಲ್ಲಿ ನಡೆಯುತ್ತಿವೆ: ಸಿಂಹ
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್