AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nayanthara: ಸಮಂತಾ ಎದುರು ನಯನತಾರಾಗೆ ಅವಮಾನ ಮಾಡಿದ ಕರಣ್​ ಜೋಹರ್​; ಸಿಡಿದೆದ್ದ ಫ್ಯಾನ್ಸ್​

Koffee with Karan Season 7: ‘ಕಾಫಿ ವಿತ್​ ಕರಣ್​’ ಕಾರ್ಯಕ್ರಮ ಎಂದರೆ ವಿವಾದಗಳು ಸಹಜ. ಈ ಶೋನಲ್ಲಿ ಸೆಲೆಬ್ರಿಟಿಗಳು ನೀಡುವ ಪ್ರತಿ ಹೇಳಿಕೆ ಕೂಡ ಚರ್ಚೆ ಹುಟ್ಟುಹಾಕುತ್ತದೆ. ಈಗ ನಯನತಾರಾ ವಿಚಾರವನ್ನು ಎಳೆದು ತರಲಾಗಿದೆ.

Nayanthara: ಸಮಂತಾ ಎದುರು ನಯನತಾರಾಗೆ ಅವಮಾನ ಮಾಡಿದ ಕರಣ್​ ಜೋಹರ್​; ಸಿಡಿದೆದ್ದ ಫ್ಯಾನ್ಸ್​
ಕರಣ್ ಜೋಹರ್, ನಯನತಾರಾ
TV9 Web
| Edited By: |

Updated on:Jul 25, 2022 | 7:25 AM

Share

ಕರಣ್​ ಜೋಹರ್​ ಅವರು ಹತ್ತು ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ನಡೆಸಿಕೊಡುವ ಜನಪ್ರಿಯ ‘ಕಾಫಿ ವಿತ್​ ಕರಣ್​’ (Koffee with Karan) ಶೋನ 7ನೇ ಸೀಸನ್​ ಪ್ರಸಾರ ಆಗುತ್ತಿದೆ. ಆ ಕಾರಣದಿಂದ ಅವರು ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದಾರೆ. ಅನೇಕ ಅತಿಥಿಗಳನ್ನು ಆಹ್ವಾನಿಸುವ ಮೂಲಕ ಕರಣ್​ ಜೋಹರ್​ (Karan Johar) ಅವರು ಈ ಕಾರ್ಯಕ್ರಮದ ರಂಗು ಹೆಚ್ಚಿಸುತ್ತಿದ್ದಾರೆ. ಕಳೆದ ಎಪಿಸೋಡ್​ನಲ್ಲಿ ಅಕ್ಷಯ್​ ಕುಮಾರ್​ ಮತ್ತು ಸಮಂತಾ ರುತ್​ ಪ್ರಭು ಅವರು ಆಗಮಿಸಿದ್ದರು. ಈ ವೇಳೆ ಸಮಂತಾ ಹೇಳಿದ ಅನೇಕ ಮಾತುಗಳು ಗಮನ ಸೆಳೆದಿವೆ. ಇದೇ ಎಪಿಸೋಡ್​ನಲ್ಲಿ ನಟಿ ನಯನತಾರಾಗೆ ಅವಮಾನ ಆಗಿದೆ ಎಂಬ ಆರೋಪ ಎದುರಾಗಿದೆ. ಹಾಗಾಗಿ ನಯನತಾರಾ (Nayanthara) ಅಭಿಮಾನಿಗಳು ಕರಣ್​ ಜೋಹರ್​ ವಿರುದ್ಧ ಸಿಡಿದೆದ್ದಿದ್ದಾರೆ.

‘ಕಾಫಿ ವಿತ್​ ಕರಣ್​’ ಕಾರ್ಯಕ್ರಮ ಎಂದರೆ ವಿವಾದಗಳು ಸಹಜ. ಈ ಶೋನಲ್ಲಿ ಸೆಲೆಬ್ರಿಟಿಗಳು ನೀಡುವ ಪ್ರತಿ ಹೇಳಿಕೆ ಕೂಡ ಚರ್ಚೆ ಹುಟ್ಟುಹಾಕುತ್ತದೆ. ಈಗ ನಯನತಾರಾ ವಿಚಾರವನ್ನು ಎಳೆದು ತರಲಾಗಿದೆ. ಇತ್ತೀಚೆಗಿನ ಸಂಚಿಕೆಯಲ್ಲಿ ಸಮಂತಾಗೆ ಕರಣ್​ ಜೋಹರ್​ ಒಂದು ಪ್ರಶ್ನೆ ಕೇಳಿದರು. ‘ದಕ್ಷಿಣ ಭಾರತದಲ್ಲಿ ಈಗ ಟಾಪ್​ ನಟಿ ಯಾರು’ ಎಂದು ಕೇಳಿದ್ದಕ್ಕೆ ನಯನತಾರಾ ಹೆಸರನ್ನು ಸಮಂತಾ ಹೇಳಿದ್ದಾರೆ.

‘ಆದರೆ ನಯನತಾರಾ ಹೆಸರು ನನ್ನ ಪಟ್ಟಿಯಲ್ಲಿ ಇಲ್ಲ’ ಎಂದು ಹೇಳುವ ಮೂಲಕ ಕರಣ್​ ಜೋಹರ್​ ಅವರು ಅಚ್ಚರಿಯ ಪ್ರತಿಕ್ರಿಯೆ ನೀಡಿದರು. ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ವರದಿಯನ್ನು ಆಧರಿಸಿ ಕರಣ್​ ಜೋಹರ್​ ಆ ಪ್ರಶ್ನೆ ಕೇಳಿದ್ದರು. ಹಾಗಾಗಿ ಆ ಪಟ್ಟಿಯಲ್ಲಿ ನಯನತಾರಾ ಹೆಸರು ಇರಲಿಲ್ಲ. ಆ ಸಮೀಕ್ಷೆ ಪ್ರಕಾರ ಸಮಂತಾ ಅವರೇ ನಂಬರ್​ ಒನ್​ ನಟಿ.

ಇದನ್ನೂ ಓದಿ
Image
Nayanthara Wedding Video: ನಯನತಾರಾ ಮದುವೆ ವಿಡಿಯೋ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಆಗೋದು ಖಚಿತ; ಇಲ್ಲಿದೆ ಅಪ್​ಡೇಟ್​
Image
Malaika Arora: ನವ ದಂಪತಿ ನಯನತಾರಾ-ವಿಘ್ನೇಶ್​ ಶಿವನ್​ ನಡುವೆ ಮಲೈಕಾ ಅರೋರಾಗೆ ಏನು ಕೆಲಸ? ಫೋಟೋ ವೈರಲ್​
Image
Nayanthara: ಹನಿಮೂನ್​ ಮುಗಿಸಿ ಬಂದ ನಯನತಾರಾ; ಶಾರುಖ್​ ಖಾನ್​ ಜೊತೆ ತಕ್ಷಣ ಶೂಟಿಂಗ್​ ಶುರು
Image
ಹನಿಮೂನ್ ಫೋಟೋ ಹಂಚಿಕೊಂಡ ನಯನತಾರಾ-ವಿಘ್ನೇಶ್; ನವ ದಂಪತಿ ತೆರಳಿದ್ದೆಲ್ಲಿಗೆ?

ಬೇಕಂತಲೇ ಈ ರೀತಿ ನಯನತಾರಾಗೆ ಅವಮಾನ ಮಾಡಲಾಗಿದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಕರಣ್​ ಜೋಹರ್​ ಹಾಗೂ ಕಾಫಿ ವಿತ್​ ಕರಣ್​ ಶೋ ವಿರುದ್ಧ ನಯನತಾರಾ ಫ್ಯಾನ್ಸ್​ ಕಟು ಟೀಕೆ ಮಾಡುತ್ತಿದ್ದಾರೆ. ಜೂನ್​ 9ರಂದು ವಿಘ್ನೇಶ್​ ಶಿವನ್​ ಜೊತೆ ನಯನತಾರಾ ಮದುವೆ ನೆರವೇರಿತು. ಮದುವೆ ಬಳಿಕವೂ ಅವರು ಅನೇಕ ಸ್ಟಾರ್​ ನಟರ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಶಾರುಖ್​ ಖಾನ್​ ನಟನೆಯ ‘ಜವಾನ್​’ ಚಿತ್ರಕ್ಕೆ ಅವರೇ ನಾಯಕಿ ಆಗಿದ್ದಾರೆ.

Published On - 7:25 am, Mon, 25 July 22

Follow Us
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು