AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನುಭವ ಪಡೆಯೋಕೆ ಬಂದಿದೀನಿ’; ಶಮಿತಾ ಶೆಟ್ಟಿ ಎದುರು ಸತ್ಯ ಒಪ್ಪಿಕೊಂಡ ರಾಕೇಶ್​ ಬಾಪಟ್​

ಶಮಿತಾ ಶೆಟ್ಟಿಗೆ 42ರ ಪ್ರಾಯ. ರಾಕೇಶ್​ ಬಾಪಟ್​ ವಯಸ್ಸು 43. ಒಂದೇ ವಯೋಮಾನದವರಾದ ಈ ಜೋಡಿ ನಡುವೆ ಬಹಳ ಬೇಗ ಹೊಂದಾಣಿಕೆ ಬೆಳೆದಿದೆ.

‘ಅನುಭವ ಪಡೆಯೋಕೆ ಬಂದಿದೀನಿ’; ಶಮಿತಾ ಶೆಟ್ಟಿ ಎದುರು ಸತ್ಯ ಒಪ್ಪಿಕೊಂಡ ರಾಕೇಶ್​ ಬಾಪಟ್​
ಶಮಿತಾ ಶೆಟ್ಟಿ, ರಾಕೇಶ್​ ಬಾಪಟ್
TV9 Web
| Edited By: |

Updated on: Sep 05, 2021 | 12:11 PM

Share

ಬಿಗ್​ ಬಾಸ್​ ಓಟಿಟಿ ಶೋನಲ್ಲಿ ದಿನಕ್ಕೊಂದು ಡ್ರಾಮಾ ನಡೆಯುತ್ತಿದೆ. ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಅವರು ಈ ಆಟದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಟಾಸ್ಕ್​ಗಳ ವಿಚಾರದಲ್ಲಿ ಅವರು ಹಿಂದೇಟು ಹಾಕುತ್ತಿಲ್ಲ. ಜಗಳ, ಕಿರಿಕ್​ಗಳ ಜೊತೆಗೆ ಅವರು ಪ್ರೀತಿ-ಪ್ರೇಮದ ಕಾರಣದಿಂದಲೂ ಹೈಲೈಟ್​ ಆಗುತ್ತಿದ್ದಾರೆ. ನಟ ರಾಕೇಶ್​ ಬಾಪಟ್​ ಜೊತೆ ಅವರ ಆತ್ಮೀಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಬ್ಬರ ನಡುವಿನ ಸಂಬಂಧವನ್ನು ಕಂಡು ವೀಕ್ಷಕರು ಅಚ್ಚರಿ ಪಡುತ್ತಿದ್ದಾರೆ. ಅಷ್ಟರಮಟ್ಟಿಗೆ ಶಮಿತಾ ಮತ್ತು ರಾಕೇಶ್​ ಕ್ಲೋಸ್​ ಆಗಿದ್ದಾರೆ.

ಶಮಿತಾ ಶೆಟ್ಟಿಗೆ 42ರ ಪ್ರಾಯ. ರಾಕೇಶ್​ ಬಾಪಟ್​ ವಯಸ್ಸು 43. ಒಂದೇ ವಯೋಮಾನದವರಾದ ಈ ಜೋಡಿ ನಡುವೆ ಬಹಳ ಬೇಗ ಹೊಂದಾಣಿಕೆ ಬೆಳೆದಿದೆ. ಶಮಿತಾಗೆ ಹಲವು ಬಾರಿ ಮುತ್ತು ಕೊಡುವ ಮಟ್ಟಕ್ಕೆ ರಾಕೇಶ್​ ಸಲುಗೆ ಬೆಳೆಸಿಕೊಂಡಿದ್ದಾರೆ. ಆದರೆ ಟಾಸ್ಕ್​ ವಿಚಾರದಲ್ಲಿ ರಾಕೇಶ್ ಹಿಂದೇಟು ಹಾಕುತ್ತಿದ್ದಾರೆ. ಅದರ ಬಗ್ಗೆ ಇತ್ತೀಚೆಗೆ ಬಿಗ್​ ಬಾಸ್​ ಮನೆಯಲ್ಲಿ ಚರ್ಚೆ ನಡೆದಿದೆ. ಈ ವೇಳೆ ರಾಕೇಶ್​ ಅವರು ತಮ್ಮ ಉದ್ದೇಶ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

‘ಇದೊಂದು ಸ್ಪರ್ಧೆ ಡಾರ್ಲಿಂಗ್​’ ಎಂದು ಬಹಳ ಪ್ರೀತಿಯಿಂದ ರಾಕೇಶ್​ಗೆ ಬುದ್ಧಿ ಹೇಳಿದ್ದಾರೆ ಶಮಿತಾ. ಆದರೆ ಆ ಮಾತನ್ನು ರಾಕೇಶ್​ ಸ್ವೀಕರಿಸಿಲ್ಲ. ‘ನಿನಗೆ ಒಳ್ಳೆಯದಾಗಲಿ. ನೀನು ಬೇಕಿದ್ದರೆ ಸ್ಪರ್ಧೆ ಮಾಡು. ನಾನು ಇಲ್ಲಿ ಅನುಭವ ಪಡೆಯಲು ಬಂದಿದ್ದೇನೆ. ಒಂದು ಬಾರಿ ನನ್ನ ಮಾತನ್ನು ಸರಿಯಾಗಿ ಎಲ್ಲರೂ ಕೇಳಿ’ ಎಂದು ಅವರು ಗಟ್ಟಿಧ್ವನಿಯಲ್ಲಿ ಹೇಳಿದ್ದಾರೆ.

ಈ ಮಾತನ್ನು ಒಪ್ಪಿಕೊಳ್ಳಲು ಶಮಿತಾ ಸಿದ್ಧರಿರಲಿಲ್ಲ. ‘ನೀನು ಕಂಫರ್ಟ್​ ಝೋನ್​ನಲ್ಲಿ ಇದ್ದೀಯ. ಅದರಿಂದ ಹೊರಗೆ ಬಾ’ ಎಂದು ಅವರು ಹೇಳಿದರು. ‘ಇದೆಲ್ಲ ನನಗೆ ಸಾಕಾಗಿದೆ’ ಎಂದು ರಾಕೇಶ್​ ಕೈ ಮುಗಿದರು. ‘ಇದೆಲ್ಲ ಸಾಕಾಗಿದೆ ಎಂದರೆ ಏನರ್ಥ? ನಿನಗೇನು 70 ವರ್ಷ ಆಗಿದ್ಯಾ? ನಿನಗೆ ಇನ್ನೂ 43 ವರ್ಷ ಮಾತ್ರ’ ಎಂದು ಶಮಿತಾ ಕಿವಿಮಾತು ಹೇಳಲು ಪ್ರಯತ್ನಿಸಿದ್ದಾರೆ.

ವೂಟ್​ ಮೂಲಕ ‘ಬಿಗ್​ ಬಾಸ್​ ಓಟಿಟಿ’ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಇದೇ ಮೊದಲ ಬಾರಿಗೆ ಖ್ಯಾತ ನಿರ್ಮಾಪಕ ಕರಣ್​ ಜೋಹರ್​ ಅವರು ನಿರೂಪಣೆ ಮಾಡುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಟಿವಿಯಲ್ಲಿ ಬಿಗ್​ ಬಾಸ್​ ಶುರುವಾಗಲಿದೆ. ಅದಕ್ಕೆ ಎಂದಿನಂತೆ ಸಲ್ಮಾನ್​ ಖಾನ್​ ನಿರೂಪಣೆ ಇರಲಿದೆ.

ಇದನ್ನೂ ಓದಿ:

‘ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ, ಅದಕ್ಕೆ ಕಿಸ್​ ಮಾಡೋಕೆ ಬಿಟ್ಟೆ’; ರಾಕೇಶ್​ ಎದುರು ಎಲ್ಲವನ್ನೂ ಹೇಳಿಕೊಂಡ ಶಮಿತಾ ಶೆಟ್ಟಿ

ಸೆನ್ಸಾರ್​ ಇಲ್ಲದೆ ನಾಚಿಕೆ ಆಗುವಂತಹ ಟಾಸ್ಕ್​ ನೀಡಿದ ಸನ್ನಿ ಲಿಯೋನ್​; ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​

KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ
ಭೂಸ್ವಾಧೀನ ಮಾಡಿ ವರ್ಷ ಕಳೆದರೂ ಪರಿಹಾರ ನೀಡದ KBJNL ಕಚೇರಿ ಜಪ್ತಿ
ಭೂಸ್ವಾಧೀನ ಮಾಡಿ ವರ್ಷ ಕಳೆದರೂ ಪರಿಹಾರ ನೀಡದ KBJNL ಕಚೇರಿ ಜಪ್ತಿ
ಇದೆಂತಹ ಅವಮಾನ... ಪಾಕಿಸ್ತಾನ್ ತಂಡಕ್ಕೆ 'ಬಾಬರ್' ಭಯ
ಇದೆಂತಹ ಅವಮಾನ... ಪಾಕಿಸ್ತಾನ್ ತಂಡಕ್ಕೆ 'ಬಾಬರ್' ಭಯ