Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್ ಈಗ ಒಟಿಟಿಯಲ್ಲಿ; ಕೊನೆವರೆಗೂ ಗೆಸ್ ಮಾಡ್ತಾನೇ ಇರ್ಬೇಕು

ಕೊವಿಡ್ ನಂತರ ಭಾರತದಲ್ಲಿ ವೆಬ್ ಸರಣಿಗಳ ಜನಪ್ರಿಯತೆ ಹೆಚ್ಚಿದೆ. ತಮಿಳಿನ ವೆಬ್ ಸೀರಿಸ್​​ಗೆ ಎರಡನೇ ಪಾರ್ಟ್​ ಅಮೇಜಾನ್ ಪ್ರೈಮ್​ಗೆ ಬಂದಿದೆ. ಕಥಿರ್ ಮತ್ತು ಐಶ್ವರ್ಯಾ ರಾಜೇಶ್ ನಟಿಸಿರುವ ಈ ಸರಣಿಯು ಒಂದು ಕೊಲೆ ಪ್ರಕರಣವನ್ನು ಕೇಂದ್ರೀಕರಿಸಿದೆ. ಮೊದಲ ಸೀಸನ್ ನೋಡಿದವರಿಗೆ ಎರಡನೇ ಸೀಸನ್ ಅರ್ಥ ಮಾಡಿಕೊಳ್ಳಲು ಸುಲಭ.

ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ವೆಬ್ ಸೀರಿಸ್ ಈಗ ಒಟಿಟಿಯಲ್ಲಿ; ಕೊನೆವರೆಗೂ ಗೆಸ್ ಮಾಡ್ತಾನೇ ಇರ್ಬೇಕು
ವೆಬ್ ಸರಣಿ
Follow us
ರಾಜೇಶ್ ದುಗ್ಗುಮನೆ
|

Updated on:Mar 07, 2025 | 2:30 PM

ಕೊವಿಡ್ ಕಾಣಿಸಿಕೊಂಡ ಬಳಿಕ ಭಾರತದಲ್ಲಿ ವೆಬ್ ಸೀರಿಸ್​​ಗಳ ನಿರ್ಮಾಣ ಹೆಚ್ಚಾಗಿದೆ. ಕೊರೊನಾ ಸಮಯದಲ್ಲಿ ಒಟಿಟಿ ವ್ಯಾಪ್ತಿ ಹೆಚ್ಚಿದ್ದರಿಂದ ಸಿನಿಮಾ ನಿರ್ಮಾಪಕರು ವೆಬ್​ ಸೀರಿಸ್​ಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟರು. ಸದ್ಯದ ಮಾರುಕಟ್ಟೆಯಲ್ಲಿ ಕ್ರೈಮ್ ಥ್ರಿಲ್ಲರ್ (Crime Thriller) ವೆಬ್​ ಸೀರಿಸ್​ಗೆ ಸಖತ್ ಬೇಡಿಕೆ ಇದೆ. ಈಗ ತಮಿಳಿನ ಸೂಪರ್ ಹಿಟ್ ವೆಬ್ ಸರಣಿ ಒಂದು ಒಟಿಟಿಯಲ್ಲಿ ಲಭ್ಯವಾಗಿದೆ. ಇದನ್ನು ನೀವು ಮಿಸ್ ಮಾಡದೇ ನೋಡಬೇಕು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಸದ್ಯ ರಿಲೀಸ್ ಆಗಿರೋ ತಮಿಳಿನ ವೆಬ್ ಸರಣಿಯ ಹೆಸರು ‘ಸುಳಲ್ 2’. ‘ಸುಳಲ್’ ವೆಬ್ ಸರಣಿ 2022ರ ಜೂನ್ 17ರಂದು ಪ್ರಸಾರ ಆರಂಭಿಸಿತು. ಇದು ಎಂಟು ಎಪಿಸೋಡ್​ಗಳನ್ನು ಒಳಗೊಂಡಿತ್ತು. ಕಧಿರ್, ಐಶ್ವರ್ಯಾ ರಾಜೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಕ್ಕರೆ (ಕಧಿರ್) ಪೊಲೀಸ್ ಟ್ರೇನಿಂಗ್ ಮುಗಿಸಿ ತನ್ನ ಹುಟ್ಟೂರಿನಲ್ಲೇ ಪೋಸ್ಟಿಂಗ್ ಹಾಕಿಸಿಕೊಳ್ಳುತ್ತಾನೆ. ಈ ರೀತಿ ಪೋಸ್ಟ್​ ಹಾಕಿಸಿಕೊಂಡಾಗ ಒಂದು ಪ್ರಕರಣದಲ್ಲಿ ಅವನು ವಿಚಾರಣೆ ನಡೆಸಬೇಕಾಗುತ್ತದೆ. ನಂತರ ಈ ಪ್ರಕರಣ ಹೇಗೆ ಭೇದಿಸುತ್ತಾನೆ ಎಂಬುದು ಚಿತ್ರದ ಕಥೆ.

ಇದನ್ನೂ ಓದಿ: ಮಲಯಾಳಂನ ಈ ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಒಟಿಟಿಗೆ; ಕನ್ನಡದಲ್ಲೂ ಲಭ್ಯ

ಇದನ್ನೂ ಓದಿ
Image
ಪತಿ ನಾಗ ಚೈತನ್ಯ ಜೊತೆ ಹನಿಮೂನ್ ತೆರೆಳಿದ ಶೋಭಿತಾ ಧುಲಿಪಾಲ್
Image
ಸಿನಿಮಾ ಕೈಬಿಟ್ಟು ಸಲ್ಮಾನ್ ಖಾನ್​ಗೆ ಕ್ಷಮೆ ಕೇಳಿದ ಅಟ್ಲಿ; ರಾಂಗ್ ಆದ ನಟ?
Image
ಮಲಯಾಳಂನ ಈ ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಒಟಿಟಿಗೆ

ಎರಡನೇ ಸರಣಿ ಇತ್ತೀಚೆಗೆ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆರಂಭಿಸಿದೆ. ಈ ಸರಣಿ ಕೂಡ ಒಂದು ಕೊಲೆ ಸುತ್ತ ಸಾಗುತ್ತದೆ. ಮೊದಲ ಸೀಸನ್​ ರೀತಿಯೇ ಈ ಸೀಸನ್​ನಲ್ಲೂ ಅನುಮಾನಗಳು ಎಲ್ಲರ ಮೇಲೂ ಸಾಗುತ್ತವೆ. ಕೊನೆಯಲ್ಲಿ ಕೊಲೆ ಮಾಡಿದ ವ್ಯಕ್ತಿ ಯಾರು? ಕೊಲೆ ಹಿಂದೆ ಯಾರಿದ್ದಾರೆ ಎಂಬುದು ತಿಳಿಯುತ್ತದೆ.

ಮೊದಲ ಸೀಸನ್ ನೋಡಲೇಬೇಕೆ?

‘ಸುಳಲ್’ ಮೊದಲ ಸೀಸನ್ ಹಾಗೂ ಎರಡನೇ ಸೀಸನ್​ಗೆ ಆರಂಭದಲ್ಲಿ ಕೆಲವು ಲಿಂಕ್​ಗಳು ಇವೆ. ಹೀಗಾಗಿ, ಮೊದಲ ಸೀಸನ್​ ವೀಕ್ಷಣೆ ಮಾಡಿದ್ದರೆ ಎರಡನೇ ಸೀಸನ್ ಅರ್ಥ ಮಾಡಿಕೊಳ್ಳೋದು, ಕಥಾ ನಾಯಕ ಯಾವ ರೀತಿಯಲ್ಲಿ ಆಲೋಚನೆ ಮಾಡುತ್ತಾನೆ ಎಂಬುದು ಸುಲಭದವಾಗಿ ಅರ್ಥವಾಗುತ್ತದೆ. ತಮಿಳಿನ ಜೊತೆಗೆ ಕನ್ನಡದಲ್ಲೂ ಈ ಸೀರಿಸ್ ವೀಕ್ಷಣೆಗೆ ಲಭ್ಯವಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:27 pm, Fri, 7 March 25

ಯಾರ ದಯೆಯಿಂದಲೂ ನಾನಿಲ್ಲಿ ಬಂದಿಲ್ಲ; ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ
ಯಾರ ದಯೆಯಿಂದಲೂ ನಾನಿಲ್ಲಿ ಬಂದಿಲ್ಲ; ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಯುವಕನ ಕತ್ತು ಹಿಸುಕಿ ಕೊಲೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್‌ನಲ್ಲಿ ಸಂಭ್ರಮಾಚರಣೆ
ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್‌ನಲ್ಲಿ ಸಂಭ್ರಮಾಚರಣೆ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
ಲೋಡ್‌ ಶೆಡ್ಡಿಂಗ್‌: ವಿದ್ಯುತ್​ ಇಲ್ಲದೇ ರೈತರು, ವಿದ್ಯಾರ್ಥಿಗಳು ಪರದಾಟ!
ಲೋಡ್‌ ಶೆಡ್ಡಿಂಗ್‌: ವಿದ್ಯುತ್​ ಇಲ್ಲದೇ ರೈತರು, ವಿದ್ಯಾರ್ಥಿಗಳು ಪರದಾಟ!