AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas: ಪ್ರಭಾಸ್​ ಅಭಿಮಾನಿಯ ಸೂಸೈಡ್​ ಲೆಟರ್​ ವೈರಲ್​; ‘ರಾಧೆ ಶ್ಯಾಮ್​’ ತಂಡಕ್ಕೆ ಹೊಸ ಕಿರಿಕಿರಿ

Radhe Shyam: ಸ್ಟಾರ್​ ನಟರಿಗೆ ಈ ರೀತಿಯ ಕೆಲವು ಹುಚ್ಚು ಅಭಿಮಾನಿಗಳು ಇರುತ್ತಾರೆ. ಈಗ ಪ್ರಭಾಸ್​ ಅಭಿಮಾನಿ ಈ ರೀತಿ ಸೂಸೈಡ್​ ಮಾಡಿಕೊಳ್ಳುವುದಾಗಿ ಹೇಳಿರುವುದು ತುಂಬ ಕ್ಷುಲ್ಲಕ ಕಾರಣಕ್ಕೆ.

Prabhas: ಪ್ರಭಾಸ್​ ಅಭಿಮಾನಿಯ ಸೂಸೈಡ್​ ಲೆಟರ್​ ವೈರಲ್​; ‘ರಾಧೆ ಶ್ಯಾಮ್​’ ತಂಡಕ್ಕೆ ಹೊಸ ಕಿರಿಕಿರಿ
‘ರಾಧೆ ಶ್ಯಾಮ್’​ ಸಿನಿಮಾದಲ್ಲಿ ಪೂಜಾ ಹೆಗ್ಡೆ, ಪ್ರಭಾಸ್​
TV9 Web
| Edited By: |

Updated on: Nov 13, 2021 | 8:13 AM

Share

ನಟ ಪ್ರಭಾಸ್​ (Prabhas) ಅವರು ‘ಬಾಹುಬಲಿ’ ಚಿತ್ರದ ಯಶಸ್ಸಿನ ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್ ಆಗಿ ಬೆಳೆದರು. ಆ ನಂತರ ಅವರು ಅಭಿನಯಿಸಿದ ‘ಸಾಹೋ’ ಸಿನಿಮಾ ಅಷ್ಟೇನೂ ಸದ್ದು ಮಾಡಲಿಲ್ಲ. ಹಾಗಾಂತ ಅವರ ಫ್ಯಾನ್​ ಬೇಸ್​ ಕಿಂಚಿತ್ತೂ ಕಡಿಮೆ ಆಗಲಿಲ್ಲ. ಈಗ ಪ್ರಭಾಸ್​ ಹಲವು ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಓಂ ರಾವುತ್​ ನಿರ್ದೇಶನದ ‘ಆದಿಪುರುಷ್​’, ಪ್ರಶಾಂತ್ ನೀಲ್​ ನಿರ್ದೇಶನದ ‘ಸಲಾರ್​’, ರಾಧಾ ಕೃಷ್ಣ ಕುಮಾರ್​ ನಿರ್ದೇಶನದ ‘ರಾಧೆಶ್ಯಾಮ್​’ (Radhe Shyam) ಸಿನಿಮಾಗಳು ಭಾರಿ ನಿರೀಕ್ಷೆ ಮೂಡಿಸಿವೆ. 2022ರ ಜ.14ರಂದು ‘ರಾಧೆ ಶ್ಯಾಮ್​’ ಬಿಡುಗಡೆ ಆಗಲಿದೆ. ಆದರೆ ಈಗ ಚಿತ್ರತಂಡಕ್ಕೆ ಕಿರಿಕಿರಿ ಆಗುವಂತಹ ಘಟನೆಯೊಂದು ನಡೆದಿದೆ. ಪ್ರಭಾಸ್​ ಅವರ ಹುಚ್ಚು ಅಭಿಮಾನಿಯೊಬ್ಬ ಆತ್ಮಹತ್ಯೆ (Suicide) ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಆತ ಬರೆದಿರುವ ಸೂಸೈಡ್​ ​ನೋಟ್ (Suicide Note)​ ಸಹ ವೈರಲ್​ ಆಗಿದೆ.

ಸ್ಟಾರ್​ ನಟರಿಗೆ ಈ ರೀತಿಯ ಕೆಲವು ಹುಚ್ಚು ಅಭಿಮಾನಿಗಳು ಇರುತ್ತಾರೆ. ವಿವೇಚನೆ ಇಲ್ಲದ ಕೆಲಸಕ್ಕೆ ಅಂಥವರು ಕೈ ಹಾಕುತ್ತಾರೆ. ಅಷ್ಟಕ್ಕೂ ಈಗ ಪ್ರಭಾಸ್​ ಅಭಿಮಾನಿ ಈ ರೀತಿ ಸೂಸೈಡ್​ ಮಾಡಿಕೊಳ್ಳುವುದಾಗಿ ಹೇಳಿರುವುದು ತುಂಬ ಕ್ಷುಲ್ಲಕ ಕಾರಣಕ್ಕೆ. ಪ್ರಭಾಸ್​ ನಟನೆಯ ‘ರಾಧೆಶ್ಯಾಮ್​’ ಚಿತ್ರತಂಡದಿಂದ ಯಾವುದೇ ಅಪ್​ಡೇಟ್​ ಸಿಗುತ್ತಿಲ್ಲ ಎಂಬ ಕಾರಣ ತಾನು ಸೂಸೈಡ್​ ಮಾಡಿಕೊಳ್ಳುವುದಾಗಿ ಆತ ಹೇಳಿದ್ದಾನೆ. ಈ ಚಿತ್ರಕ್ಕೆ ಪ್ರತಿಷ್ಠಿತ ‘ಯುವಿ ಕ್ರಿಯೇಷನ್ಸ್​’ ಸಂಸ್ಥೆ ಬಂಡವಾಳ ಹೂಡಿದೆ. ತನ್ನ ಈ ಆತ್ಮಹತ್ಯೆ ನಿರ್ಧಾರಕ್ಕೆ ‘ಯುವಿ ಕ್ರಿಯೇಷನ್ಸ್​’ ಮತ್ತು ನಿರ್ದೇಶಕ ರಾಧಾ ಕೃಷ್ಣ ಕುಮಾರ್​ ಅವರೇ ಕಾರಣ ಎಂದು ಆತ ಸೂಸೈಡ್​​ ನೋಟ್​ನಲ್ಲಿ ಬರೆದಿದ್ದಾನೆ.

‘ಈವರೆಗೆ ನಾನು ಯಾವುದೇ ಲೆಟರ್​ ಬರೆದಿಲ್ಲ. ಆದರೆ ಸೂಸೈಡ್​ ಲೆಟರ್​ ಬರೆಯುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಕೊನೇ ಪಕ್ಷ ನನ್ನ ಸಾವನ್ನು ನೋಡಿದ ಬಳಿಕವಾದರೂ ರಾಧೆ ಶ್ಯಾಮ್​ ತಂಡದವರು ಅಪ್​ಡೇಟ್​ ನೀಡುತ್ತಾರೆ ಎಂದುಕೊಂಡಿದ್ದೇನೆ. ಸಾಕಾಗಿ ಹೋಗಿದೆ. ಇನ್ಮೇಲೆ ಕೇಳುವುದಿಲ್ಲ’ ಎಂದು ಆತ ಈ ಪತ್ರದಲ್ಲಿ ಬರೆದಿದ್ದಾನೆ.

ಈಗಾಗಲೇ ಈ ಸಿನಿಮಾದ ಟೀಸರ್​ಗಳು ರಿಲೀಸ್​ ಆಗಿದ್ದು, ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸಿವೆ. ವಿಕ್ರಮಾದಿತ್ಯ ಎಂಬ ಪಾತ್ರವನ್ನು ಪ್ರಭಾಸ್​ ನಿಭಾಯಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಖ್ಯಾತ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ. ಪ್ರಭಾಸ್​ ಅವರ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತಲೂ ‘ರಾಧೆ ಶ್ಯಾಮ್​’ ಭಿನ್ನವಾಗಿ ಮೂಡಿಬಂದಿದೆ ಎಂಬುದಕ್ಕೆ ಟೀಸರ್​ಗಳೇ ಸಾಕ್ಷಿ ಒದಗಿಸುತ್ತಿವೆ. ಲವರ್​ ಬಾಯ್​ ಗೆಟಪ್​ನಲ್ಲಿ ಪ್ರಭಾಸ್​ ರಂಜಿಸಲಿದ್ದಾರೆ.

ಇದನ್ನೂ ಓದಿ:

ಪ್ರಭಾಸ್​ ಹುಟ್ಟುಹಬ್ಬದ ದಿನವೇ ಫ್ಯಾನ್ಸ್​ಗೆ ಬೇಸರ ಮೂಡಿಸಿದ ಪ್ರಶಾಂತ್​ ನೀಲ್​; ‘ಸಲಾರ್’​ ಟೀಮ್​ ಎಡವಿದ್ದೆಲ್ಲಿ?

Prabhas: ‘ಸಲಾರ್​’ ವಿಡಿಯೋ ಲೀಕ್​: ಕಿಡಿಗೇಡಿಗಳ ಕೆಲಸದಿಂದ ಪ್ರಭಾಸ್​ ಅಭಿಮಾನಿಗಳಿಗೆ ಪದೇಪದೇ ನಿರಾಸೆ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್