AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

500 ಕೋಟಿ ರೂ. ಬಜೆಟ್​ನ ‘ಆದಿಪುರುಷ್’ ಚಿತ್ರಕ್ಕೆ ರೀಶೂಟ್; ಮತ್ತೆ ಹೆಚ್ಚಿತು ಪ್ರಭಾಸ್ ಸಿನಿಮಾ ಬಜೆಟ್

ಹೇಗಾದರೂ ಮಾಡಿ ಈ ಟ್ರೋಲ್​ಗಳಿಂದ ತಪ್ಪಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಚಿತ್ರತಂಡದವರು ಬಂದಂತೆ ಇದೆ. ಈ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿ ಕೆಲ ಭಾಗದ ಶೂಟ್ ಅನ್ನು ಮರು ಚಿತ್ರೀಕರಿಸಲು ನಿರ್ಧರಿಸಲಾಗಿದೆ.

500 ಕೋಟಿ ರೂ. ಬಜೆಟ್​ನ ‘ಆದಿಪುರುಷ್’ ಚಿತ್ರಕ್ಕೆ ರೀಶೂಟ್; ಮತ್ತೆ ಹೆಚ್ಚಿತು ಪ್ರಭಾಸ್ ಸಿನಿಮಾ ಬಜೆಟ್
ಪ್ರಭಾಸ್
TV9 Web
| Edited By: |

Updated on: Nov 04, 2022 | 2:54 PM

Share

‘ಆದಿಪುರುಷ್’ (Adipurush) ಚಿತ್ರ ತಂಡ ಊಹಿಸಿದ್ದೇ ಒಂದು ಆಗಿದ್ದೇ ಒಂದು ಎಂಬಂತಾಗಿದೆ. ಟೀಸರ್​​ಗೆ ಅನೇಕರಿಂದ ಟೀಕೆ ವ್ಯಕ್ತವಾಗಿತ್ತು. ಈ ಟೀಕೆಯನ್ನು ಎದುರಿಸಲು ಚಿತ್ರತಂಡದ ಬಳಿ ಸಾಧ್ಯವೇ ಆಗುತ್ತಿಲ್ಲ. ಈ ಕಾರಣಕ್ಕೆ ಚಿತ್ರತಂಡ ಈಗ ಹಿಂದೇಟು ಹಾಕುತ್ತಿದೆ. ಮೂಲಗಳ ಪ್ರಕಾರ ಜನವರಿ 12ರಂದು ಚಿತ್ರ ರಿಲೀಸ್ ಮಾಡಬೇಕು ಎಂಬ ಪ್ಲ್ಯಾನ್​ನಿಂದ ಚಿತ್ರತಂಡ ಈಗಾಗಲೇ ಹಿಂದೆ ಸರಿದಿದೆ. ಈಗ, ‘ಆದಿಪುರುಷ್’ ಚಿತ್ರತಂಡ ರೀಶೂಟ್ ಮಾಡುವ ಆಲೋಚನೆಯಲ್ಲಿದೆ ಎಂದು ವರದಿ ಆಗಿದೆ. ಇದರಿಂದ ಚಿತ್ರಕ್ಕೆ ಮತ್ತಷ್ಟು ಹೊರೆ ಆಗಲಿದೆ.

‘ಆದಿಪುರುಷ್’ ಚಿತ್ರತಂಡ ನವರಾತ್ರಿ ಸಂದರ್ಭದಲ್ಲಿ ಟೀಸರ್ ರಿಲೀಸ್ ಮಾಡಿತ್ತು. ತಂಡದವರ ಪ್ರಕಾರ ಚಿತ್ರಕ್ಕೆ ಒಳ್ಳೆಯ ರಿಯಾಕ್ಷನ್ ಸಿಗಬಹುದು ಎಂದು ಚಿತ್ರತಂಡದವರು ಭಾವಿಸಿದ್ದರು. ಆದರೆ, ಅದು ಆಗಿಲ್ಲ. ಟೀಸರ್​ಗೆ ನೆಗೆಟಿವ್ ವಿಮರ್ಶೆಗಳು ಹೆಚ್ಚು ಸಿಕ್ಕವು. ಚಿತ್ರ ವಿಚಿತ್ರ ಪ್ರಾಣಿಗಳು ‘ಆದಿಪುರುಷ್’ ಚಿತ್ರದಲ್ಲಿ ಬಳಕೆ ಆಗಿದೆ ಎಂದು ಕೆಲವರು ಹೇಳಿದರು. ಇನ್ನೂ ಕೆಲವರು ರಾವಣನ ಪಾತ್ರಕ್ಕೆ ಅಪಸ್ವರ ತೆಗೆದರು. ಖಿಲ್ಜಿ ರೀತಿಯಲ್ಲಿ ರಾವಣ ಕಾಣಿಸಿಕೊಂಡಿದ್ದಾನೆ ಎಂದು ಅನೇಕರು ಹೇಳಿದರು. ಈ ಎಲ್ಲಾ ಕಾರಣದಿಂದ ಟೀಸರ್ ಟ್ರೋಲ್ ಆಯಿತು. ಮೀಮ್ ಮಾಡುವವರಿಗೆ ಭರ್ಜರಿ ಕಂಟೆಂಟ್ ಸಿಕ್ಕಿತ್ತು.

ಇದು ಚಿತ್ರತಂಡದ ಆತಂಕವನ್ನು ಹೆಚ್ಚಿಸಿದೆ. ಹೇಗಾದರೂ ಮಾಡಿ ಈ ಟ್ರೋಲ್​ಗಳಿಂದ ತಪ್ಪಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಚಿತ್ರತಂಡದವರು ಬಂದಂತೆ ಇದೆ. ಈ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿ ಕೆಲ ಭಾಗದ ಶೂಟ್ ಅನ್ನು ಮರು ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಕೆಲ ದೃಶ್ಯಗಳಲ್ಲಿ ವಿಎಫ್​ಎಕ್ಸ್​ಗಳ ಮೇಲೆ ಮರು ಕೆಲಸ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದಕ್ಕಾಗಿ ಮತ್ತಷ್ಟು ಕೋಟಿ ಖರ್ಚು ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಸಿನಿಮಾದ ಬಜೆಟ್ ಮತ್ತಷ್ಟು ಹೆಚ್ಚಲಿದೆ.

ಇದನ್ನೂ ಓದಿ
Image
Adipurush: ಪ್ರಭಾಸ್​ ಫ್ಯಾನ್ಸ್​ ಮನ ಗೆದ್ದ ‘ಆದಿಪುರುಷ್​’ ಟೀಸರ್​; ಇಲ್ಲಿದೆ ರಾಮ-ರಾವಣರ ಮುಖಾಮುಖಿ
Image
Adipurush Teaser: ‘ಆದಿಪುರುಷ್​’ ಟೀಸರ್​ ಬಿಡುಗಡೆ; ಅಯೋಧ್ಯೆಯಲ್ಲಿ ರಾಮನಾಗಿ ದರ್ಶನ ನೀಡಿದ ಪ್ರಭಾಸ್​
Image
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​

ಇದನ್ನೂ ಓದಿ: ಸಂಕ್ರಾಂತಿ ರೇಸ್​ನಿಂದ ಹೊರಹೋದ ‘ಆದಿಪುರುಷ್’; ಬಿಗ್ ಬಜೆಟ್​ ಚಿತ್ರಗಳಿಗೆ ಹೆದರಿದ್ರಾ ಪ್ರಭಾಸ್?

ಸದ್ಯ ಪ್ರಭಾಸ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’, ‘ಪ್ರಾಜೆಕ್ಟ್​ ಕೆ’ ಮೊದಲಾದ ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ ಇದ್ದಾರೆ. ಹಲವು ಕಾರಣಗಳಿಂದ ಪ್ರಭಾಸ್ ಅವರು ಶೂಟಿಂಗ್​ಗೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ನಿರಂತರವಾಗಿ ಈ ಪ್ರಾಜೆಕ್ಟ್​ಗಳಿಗೆ ಪ್ರಭಾಸ್ ಕಾಲ್​ಶೀಟ್ ಕೊಡಬೇಕಿದೆ. ಇವುಗಳ ಮಧ್ಯೆ ರೀಶೂಟ್ ಮಾಡೋಕೆ ಪ್ರಭಾಸ್​ಗೆ ಸಮಯ ಇರುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಓಂರಾವತ್ ಅವರು ‘ಆದಿಪುರುಷ್​’ಗೆ ನಿರ್ದೇಶನ ಮಾಡಿದ್ದಾರೆ. ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್